LATEST NEWS
ಎಚ್ಚರ ಎಚ್ಚರ : ಕ್ಲಿಕ್ ಮಾಡದಿರಿ ಪಿಂಕ್ ವಾಟ್ಸಾಪ್ ಲಿಂಕ್ ..!
ಹೊಸದಿಲ್ಲಿ: ಮೊಬೈಲ್ ಗೆ ಬರುವ ಅನಧಿಕೃತ ಲಿಂಕ್ ಗಳನ್ನು ಕ್ಲಿಕ್ ಮಾಡುವ ಮೊದಲು ನಮ್ಮ-ನಮ್ಮ ವಿವೇಚನೆಗಳನ್ನ ಬಳಸಿಕೊಳ್ಳಬೇಕಾಗುತ್ತದೆ.
ಯಾಕೆಂದರೆ ಕೆಲವೊಂದು ಲಿಂಕ್ ಗಳನ್ನು ಕ್ಲಿಕ್ ಮಾಡಿದ ತಕ್ಷಣ ನಮ್ಮ ಖಾಸಗಿ ಮಾಹಿತಿಗಳು ಬಹಿರಂಗವಾಗಲೂಬಹುದು. ಇದೀಗ ವಾಟ್ಸಾಪ್ನಾದ್ಯಂತ ಹೊಸದೊಂದು ಮಾಲ್ ವೇರ್ ʼಪಿಂಕ್ ವಾಟ್ಸಾಪ್ʼ ಎಂಬ ಹೆಸರಿನಲ್ಲಿ ಲಿಂಕ್ ಹರಿದಾಡುತ್ತಿದ್ದು. ಹಲವು ಬಳಕೆದಾರರು ಫಜೀತಿಗೊಳಗಾಗಿದ್ದಾರೆ.
ಲಿಂಕ್ ಗಳ ಮೂಲಕ ಇಂಟರ್ನೆಟ್ ನಲ್ಲಿ ಪ್ರಭಾವ ಸೃಷ್ಟಿಸುವ ಸಲುವಾಗಿ ಹ್ಯಾಕರ್ ಗಳು ಇಂತಹಾ ಲಿಂಕ್ ಗಳನ್ನು ತಯಾರಿಸುತ್ತಾರೆ. ಮೂರು ವರ್ಷಗಳ ಹಿಂದೆ ಪಿಂಕ್ ಬದಲಿಗೆ ಗ್ರೀನ್ ಎಂದೂ ಈ ಮೆಸೇಜ್ ಹರಿದಾಡಿತ್ತು.
ಇದನ್ನು ಕ್ಲಿಕ್ ಮಾಡಿದ ತಕ್ಷಣವೇ ನಿಮಗರಿವಿಲ್ಲದಂತೆ ನಿಮ್ಮ ಹೆಸರಿನಲ್ಲಿ ನಿಮ್ಮಲ್ಲಿರುವ ಎಲ್ಲಾ ವಾಟ್ಸಾಪ್ ಗ್ರೂಪ್ ಗಳಿಗೆ ಈ ಮೆಸೇಜ್ ಫಾರ್ವರ್ಡ್ ಆಗುತ್ತದೆ.
ನೀವು ಕಳಿಸಿದ್ದನ್ನು ನೋಡಿ ಉಳಿದವರೂ ಕ್ಲಿಕ್ ಮಾಡಿದರೆ ಅವರಲ್ಲಿರುವ ಗ್ರೂಪ್ ಗಳಿಗೆ ಈ ಮೆಸೇಜ್ ಮತ್ತು ಲಿಂಕ್ ರವಾನೆಯಾಗುತ್ತದೆ. ವಾಟ್ಸಾಪ್ ಇದುವರೆಗೂ ಬಣ್ಣ ಬದಲಾಯಿಸುವ ಆಯ್ಕೆಗಳನ್ನು ನೀಡಿಲ್ಲ. ಮುಂದೆ ನೀಡಲೂಬಹುದು ಎಂದಷ್ಟೇ ಹೇಳಿಕೊಂಡಿದೆ.
ಇದೇ ಹೆಸರಿನಲ್ಲಿ ವಿಮಾನ ಟಿಕೆಟ್ ಗಳು, ಉಚಿತ ಟೀಶರ್ಟ್ ಗಳು, ಉಚಿತ ಪ್ರವಾಸ ಹೀಗೆ ಹಲವಾರು ಲಿಂಕ್ ಗಳು ಬರುತ್ತಿರುತ್ತವೆ. ಆದ್ದರಿಂದ ವಾಟ್ಸಾಪ್ ಆಗಲಿ ಇನ್ಯಾವ ಜಾಲತಾಣಗಳೇ ಆಗಲಿ, ಅಧಿಕೃತವಾದ ಲಿಂಕ್ ಗಳಾಗಿದ್ದಲ್ಲಿ ಮಾತ್ರ ವಿವೇಚನೆಯಿಂದ ಕ್ಲಿಕ್ ಮಾಡಿ.
ಇಲ್ಲವಾದಲ್ಲಿ ವೃಥಾ ತೊಂದರೆಗಳನ್ನು ಮೈಗೆಳೆದು ಕೊಂಡಂತಾಗಬಹುದು. ಇನ್ನೂ ಈ ರೀತಿಯ ಲಿಂಕ್ ಗಳು ನಿಮಗೇನಾದ್ರೂ ಬಂದಿದ್ದೇ ಆದಲ್ಲಿ ಮೊದಲಿಗೆ ಸೆಟ್ಟಿಂಗ್ ಆಪ್ ಗೆ ಹೋಗಿ ಹೊಸ ಹೆಸರಿರುವ ಆ್ಯಪ್ ಡೌನ್ ಲೋಡ್ ಆಗಿದ್ದನ್ನು ಹುಡುಕಿ ಅನ್ ಇನ್ಸ್ಟಾಲ್ ಮಾಡಿ . ಬಳಿಕ ಬ್ರೌಸರ್ ಟ್ಯಾಬ್ ನಲ್ಲಿ ಇರುವುದನ್ನು ರಿಮೂವ್ ಮಾಡಿ . ನಂತರ ಸೆರೆಯಾಗಿರುವ ಮೆಮೋರಿ ಡಿಲೀಟ್ ಮಾಡಿ . ಕೊನೆಯಲ್ಲಿ ರಿಸ್ಟಾರ್ಟ್ ಮಾಡಿದ್ರೆ ಒಳಿತು.
DAKSHINA KANNADA
ಹೊತ್ತಿ ಉರಿದು ಭಸ್ಮ*ವಾದ ಸ್ವೀಟ್ ಕಾರ್ನ್ ಸ್ಟಾಲ್..!! ಓಡಿ ಜೀವ ಉಳಿಸಿಕೊಂಡ ಸ್ಟಾಲ್ ಮಾಲೀಕ, ಗ್ರಾಹಕರು
ಉಳ್ಳಾಲ: ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಸ್ಟಾಲ್ ಒಂದರಲ್ಲಿ ಆಕಸ್ಮಿ*ಕ ಬೆಂಕಿಯಿಂದಾಗಿ ಸ್ಟಾಲ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಉಳ್ಳಾಲದ ದೇರಳಕಟ್ಟೆಯಲ್ಲಿ ನಡೆದಿದೆ.
ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯ ಬದಿಯಲ್ಲೇ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಅಂಗಡಿ ಮಾಲೀಕ ಕಾರ್ನ್ ತಯಾರಿಸುವಾಗ ಈ ಅವಘಡ ಸಂಭವಿಸಿದೆ. ತಕ್ಷಣ ಅಂಗಡಿ ಮಾಲೀಕ ಹಾಗೂ ಸ್ವೀಟ್ ಕಾರ್ನ ತಿನ್ನಲು ಬಂದಿದ್ದ ಗ್ರಾಹಕರು ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ಮರಳು ಹಾಗೂ ನೀರನ್ನ ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಸ್ಟಾಲ್ ಉರಿದು ಭಸ್ಮವಾಗಿ ಹೋಗಿದೆ.
Read More..; ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ
LATEST NEWS
ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ
ಬೆಳಗಾವಿ: 25 ರಿಂದ 30 ವರ್ಷದ ಯುವತಿಯೊಬ್ಬಳನ್ನು ಬರ್ಬರವಾಗಿ ಹ*ತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯ ಮಮದಾಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು ಕೊ*ಲೆ ಮಾಡಿದವರಾರು? ಹ*ತ್ಯೆ ಆದವಳು ಯಾರು? ಎಂಬುದಾಗಲಿ ಗೊತ್ತಾಗಿಲ್ಲ. ನಿನ್ನೆ(ಎ.18) ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುವೆ ಪಕ್ಕದಲ್ಲಿ ಹೊಗೆಯಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ಬಿಸಿಲಿನ ತಾಪಕ್ಕೆ ಹುಲ್ಲು ಇರುವ ಜಾಗಕ್ಕೆ ಬೆಂಕಿ ಬಿದ್ದಿರಬಹುದು ಎಂದು ಕೆಲವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಮೃತದೇಹ ಕಂಡು ಬಂದಿದೆ.
ಯುವತಿಯ ಕತ್ತು ಕೊಯ್ದು ಬಳಿಕ ಆಕೆಯ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರಬೇಕು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಯುವತಿಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕುವ ಪ್ರಯತ್ನ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಈ ಯುವತಿ ಯಾರು ಹಾಗೂ ಯಾರು ಕೊಲೆ ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಬೇಕಾಗಿದೆ.
Read More..: ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು
LATEST NEWS
ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು
ಉಡುಪಿ : ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವನ್ನಪ್ಪಿರುವ ಘಟನೆ ಉಡುಪಿಯ ಹೇರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕೃಷ್ಣ ಗಾಣಿಗ ಮೃ*ತ ದುರ್ದೈವಿ. ಉಡುಪಿ ನಗರ ಸಭೆಯಲ್ಲಿ ಎಲೆಕ್ಟ್ರಿಷನ್ ಆಗಿ ಕೃಷ್ಣ ಕೆಲಸ ಮಾಡುತ್ತಿದ್ದರು. ಸಂತೆಕಟ್ಟೆ ಮಾರ್ಗವಾಗಿ ಬ್ರಹ್ಮಾವರದ ಕಡೆಗೆ ಸಾಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.
ಲಾರಿ ಕೃಷ್ಣ ಅವನ್ನು ಕೆಲ ದೂರ ಎಳೆದೊಯ್ದಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು.
ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.