HomeBANTWALವಿಟ್ಲ ಸುಳ್ಳು ಗಡಿಗುರುತು ಜೆಸಿಬಿ ಮೂಲಕ ಬೇಲಿ ನಾಶ:ಸರ್ವೇಯರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು:!

ವಿಟ್ಲ ಸುಳ್ಳು ಗಡಿಗುರುತು ಜೆಸಿಬಿ ಮೂಲಕ ಬೇಲಿ ನಾಶ:ಸರ್ವೇಯರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು:!

ವಿಟ್ಲ ಸುಳ್ಳು ಗಡಿಗುರುತು ಜೆಸಿಬಿ ಮೂಲಕ ಬೇಲಿ ನಾಶ:ಸರ್ವೇಯರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು:!

ಬಂಟ್ವಾಳ: ಬರಿಮಾರು ಗ್ರಾಮದಲ್ಲಿ ತನ್ನ ಸುಪರ್ದಿಗೆ ಸೇರಿದ ವ್ಯಾಪ್ತಿಯಲ್ಲಿ ಬೇರೊಂದು ವ್ಯಕ್ತಿಗೆ ಸೇರಿದ್ದ ಜಾಗದ ಬೇಲಿಯ ಆವರಣನಾಶಕ್ಕೆ ಸರ್ವೇಯರೊಬ್ಬರು ಕಾರಣರಾಗಿದ್ದಾರೆ.

.

ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಜಾಗದ ಮಾಲಕ ಎವರೆಸ್ಟ್ ಪಿಂಟೋ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಬಂಟ್ವಾಳ ತಹಶಿಲ್ದಾರ್ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಸರ್ವೇಯರ್ ಮಂಜೇಗೌಡ ಎಲ್.ಪಿ ಅವರು ತನಗೆ ಸಂಬಂಧಿಸಿದ ಸರ್ವೇ ನಂಬರ್ ನಮೂದಿಸಿ ಡಿಸೆಂಬರ್ 1ರಂದು ಸರ್ವೇ ಮಾಡುವುದಾಗಿ ಅರ್ಜಿದಾರರಿಂದ ಹಣ ಪಡೆದು ತನಗೆ ನೋಟೀಸ್ ನೀಡಿದ್ದರು.

ಬಳಿಕ ಸರ್ವೆ ಮಾಡದೆ ತನ್ನಜಾಗದಲ್ಲಿ ಅರ್ಜಿದಾರ ವಾಲ್ಟರ್ ಮಸ್ಕರೇನ್ಹಸ್ ರಿಗೆ ಜಾಗವಿದೆ ಎಂದು ಗಡಿಗುರುತು ಹಾಕಿದ್ದಾರೆ. ನಂತರ ತನ್ನ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಡಿಸೆಂಬರ್ ಒಂದರಂದು ಸರ್ವೇ ಮಾಡುವುದಾಗಿ ಅರ್ಜಿದಾರರಿಂದ ಹಣ ಪಡೆದು ತನ್ನ ಜಾಗದ ಬೇಲಿಯನ್ನು ನಾಶಪಡಿಸಿದ್ದಾರೆ.ಇದರಿಂದ ತನಗೆ ಸುಮಾರು 1ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ.  ಎವರೆಸ್ಟ್ ಪಿಂಟೋ ಸರ್ವೇಯರ್ ವಿರುದ್ದ ದೂರು ನೀಡಿದ್ದಾರೆ.

 

Latest articles

ಕೆಲಸ ಇಲ್ಲದವನು ಎಂದು ಬೈಯುತ್ತಿದ್ದ ಅಜ್ಜಿಯನ್ನು ಕೊಂದು ಸುಟ್ಟು ಹಾಕಿದ ಕಿರಾತಕ ಮೊಮ್ಮಗ

ಮೈಸೂರು: ದುಡಿಯುವ ವಯಸ್ಸಿನಲ್ಲಿ ಪುಂಡ ಪೋಕರಿಯಂತೆ ಅಲೆಯುತ್ತಿದ್ದುದಕ್ಕೆ ಬೈಯುತ್ತಿದ್ದ ಅಜ್ಜಿಯನ್ನು ಸ್ವಂತ ಮೊಮ್ಮಗನೇ ಕೊಂದು ಸುಟ್ಟು ಹಾಕಿ ಶವವನ್ನು...

ಚಿತ್ರದುರ್ಗ : ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಅಕ್ರಮ ಗೋಸಾಗಾಟ- ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ..!

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಕಳ್ಳರು ಬೀದಿ ಬದಿಯ ಗೋವುಗಳನ್ನು ಕಳ್ಳತನ ಮಾಡಿ ಟೆಂಪೋದಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ...

ಕೇರಳಕ್ಕೆಮುಂಗಾರು ಪ್ರವೇಶ- ಮಂಗಳೂರಿನಲ್ಲಿ ಸಂಜೆ ಬಿರುಸಿನ ಮಳೆ..!

ಕೇರಳದಲ್ಲಿ ಇಂದು ಮುಂಗಾರು ಪ್ರವೇಶಿಸಿದ್ದು ಈ ಹಿನ್ನೆಲೆಯಲ್ಲಿ ಕರಾವಳಿಯ ಬಂದರು ನಗರ ಮಂಗಳೂರಿನಲ್ಲಿ ಇಂದು ಸಂಜೆ ಬಿರುಸಿನ ಮಳೆಯಾಗಿದೆ.ಮಂಗಳೂರು...

ಬೆಂಗಳೂರು: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರನ್ನು ಭೇಟಿಯಾದ ಸ್ಪೀಕರ್ ಯು.ಟಿ.ಖಾದರ್

ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಮೊದಲ ಬಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು...