ಇತ್ತೀಚೆಗೆ ಅಗಲಿದ ಉಡುಪಿಯ ಮಾಜಿ ಶಾಸಕ ಯು ಆರ್. ಸಭಾಪತಿಯವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ನಗರದ ಮಾರುತಿ ವೀಥಿಕಾದಲ್ಲಿ ನಡೆಯಿತು.
ಉಡುಪಿ: ಇತ್ತೀಚೆಗೆ ಅಗಲಿದ ಉಡುಪಿಯ ಮಾಜಿ ಶಾಸಕ ಯು ಆರ್. ಸಭಾಪತಿಯವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ನಗರದ ಮಾರುತಿ ವೀಥಿಕಾದಲ್ಲಿ ನಡೆಯಿತು.
ಹಿರಿಯ ಮನೋವೈದ್ಯ ಡಾ.ಪಿ.ವಿ ಭಂಡಾರಿ, ಪ್ರೋ. ಮುರಳೀಧರ್ ಉಪಧ್ಯಾಯ, ಸಮಾಜಸೇವಕ ಕೆ.ಕೃಷ್ಣಮೂರ್ತಿ ಆಚಾರ್ಯ, ಮತ್ತು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರುಗಳು, ಸಜ್ಜನ ರಾಜಕಾರಿಣಿ ಯು. ಆರ್ ಸಭಾಪತಿಯವರು ಸಾಮಾಜಿಕ, ರಾಜಕೀಯ ಜೀವನದಲ್ಲಿ ನಡೆದು ಬಂದ ಹಾದಿಯ ಕುರಿತು ಸ್ಮರಿಸಿ ನುಡಿನಮನ ಸಲ್ಲಿಸಿದರು.
ಉಡುಪಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನಲ್ಡೋ ಪ್ರವೀಣ್, ಕೇರಳ ಕಲ್ಚರಲ್ ಎಂಡ್ ಸೊಸಿಯಲ್ ಸೆಂಟರಿನ ಸುಗುಣ ಕುಮಾರ್, ಬಿನೇಶ್, ಮಲಬಾರ್ ಗೊಲ್ಡ್ ಆಭರಣ ಮಳಿಗೆಯ ಗ್ರಾಹಕ ಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್, ಜೋಸ್ ಆಲೂಕಾಸ್ ಆಭರಣ ಮಳಿಗೆಯ ಸಹಾಯಕ ವ್ಯವಸ್ಥಾಪಕ ಗೋಪಾಲ್, ಕೋಟಕ್ ಬ್ಯಾಂಕಿನ ಸಿಬ್ಬಂದಿ ವರ್ಗ, ಉದ್ಯಮಿ ಉದಯ ಕುಮಾರ್, ಸಾಂಸ್ಕೃತಿಕ ಪ್ರತಿನಿಧಿ ಸುಧಾಕರ್ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಚರಣ್ ಬಂಗೇರ, ನಾಗರಿಕ ಸಮಿತಿಯ ಸದಸ್ಯರುಗಳಾದ ಕೆ.ಬಾಲಗಂಗಾಧರ ರಾವ್, ತಾರಾನಾಥ ಮೇಸ್ತ ಶಿರೂರು, ಪ್ರಸಾದ್ ಶೆಟ್ಟಿ, ಗುರುರಾಜ್ ಆಚಾರ್ಯ ಕಿನ್ನಿಮೂಲ್ಕಿ ಮೊದಲಾದವರು ಉಪಸ್ಥಿತರಿದ್ದರು.