Connect with us

    LATEST NEWS

    ಉಡುಪಿ: ಕಾರು ಡಿಕ್ಕಿ ಹೊಡೆದು ಯುವಕ ಸಾವು…!!

    Published

    on

    ಉಡುಪಿ: ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದ್ರಾಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸಂಭವಿಸಿದೆ.
    ಮೃತ ಸವಾರನನ್ನು ಮಣಿಪಾಲದ ಉದ್ಯೋಗಿ ದೀಪೇಶ್ ದೇವಾಡಿಗ ಎಂದು ಗುರುತಿಸಲಾಗಿದೆ.


    ಇಂದ್ರಾಳಿ ದೇವಸ್ಥಾನದಿಂದ ಕೆಳಗೆ ಬರುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿದ್ದು, ಎರಡೂ ಬದಿಯಲ್ಲಿದ್ದ ವಾಹನಗಳು ಸಹಿತ ಜನರಿಗೆ ಕಾರು ಢಿಕ್ಕಿ ಹೊಡೆದಿದೆ.


    ಇದರಿಂದ ಗಂಭೀರವಾಗಿ ಗಾಯಗೊಂಡ ದೀಪೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೆಲವು ಮಂದಿ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

     

    ಇದನ್ನೂ ಓದಿ: ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಸಾಲು ಸಾಲು ಗುಡ್ಡ ಕುಸಿತ; ಫುಲ್‌ ಟ್ರಾಫಿಕ್ ಜಾಮ್ 

     

    ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    BIG BOSS

    ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರು ಸಿಗರೇಟ್ ಸೇದ್ತಾರೆ, ಆದರೆ ತೋರಿಸಲ್ಲ!

    Published

    on

    ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರು ಸಿಗರೇಟ್ ಸೇದ್ತಾರೆ, ಆದ್ರೆ ಅದನ್ನ ತೋರಿಸಲ್ಲ ಅಂತ ಎಲಿಮಿನೇಟ್ ಆದ ಸ್ಪರ್ಧಿಯೊಬ್ಬರು ಹೇಳಿದ್ದಾರೆ.

    ಒಬ್ಬ ಹುಡುಗಿ ಒತ್ತಡದಲ್ಲಿ ಸಿಗರೇಟ್ ಸೇದ್ತೀನಿ ಅಂದಾಗ, ಬೇಡ ಅಂತ ನಾನು ಹೇಳಿದ್ದೆ ಅಂತ ಸೋನಿಯಾ ಹೇಳಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಸಿಗರೇಟ್ ಸೇದ್ತಾ ಇರೋ ಹುಡುಗಿಯರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ 8ರ ಸ್ಪರ್ಧಿಗಳಲ್ಲಿ ಸೋನಿಯಾ ಆಕುಲ ಒಬ್ಬರು. ಮೊದಲ ವಾರ ಮನೆಗೆ ಕಾಲಿಟ್ಟಿದ್ರು. ಆದ್ರೆ ನಾಲ್ಕೇ ವಾರಗಳಲ್ಲಿ ಅವರ ಜರ್ನಿ ಮುಗಿದು ಹೋಯ್ತು. ಸೋನಿಯಾ ಆಕುಲ ತುಂಬಾ ನೆಗೆಟಿವಿಟಿ ಹೊತ್ತು ತಂದಿದ್ರು. ಸೋಶಿಯಲ್ ಮೀಡಿಯಾದಲ್ಲಿ ಸೋನಿಯಾ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿತ್ತು.

    ಇತ್ತೀಚೆಗೆ ಸೋನಿಯಾ ಹಲವಾರು ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಿರೂಪಕ ಶಿವ್, ಸೋನಿಯಾ ಅವರನ್ನು ಸಂದರ್ಶಿಸಿದ್ದಾರೆ. ನಾನು ನಿಖಿಲ್ ಗೆ ನೀನು ಸ್ಮೋಕಿಂಗ್ ಬಿಡ್ತಿಯಾ, ನೀನು ಏನು ಕೇಳಿದ್ರೂ ಕೊಡ್ತೀನಿ ಅಂದೆ. ನಿಜಕ್ಕೂ ಅವ್ರು ಸ್ಮೋಕ್ ಬಿಡೋಕೆ ಹೋಗಲಿಲ್ಲ. ಆದ್ರೆ ಸಂಖ್ಯೆ ಕಡಿಮೆ ಮಾಡಬೇಕು ಅಂತ ಅಂದುಕೊಂಡ್ರು. ನಿಖಿಲ್ ಜೊತೆ ನೈನಿಕ ಎಲ್ಲಾ ಹಂಚಿಕೊಳ್ತಿದ್ರು. ಅವ್ರು ನಿಖಿಲ್ ಗೆ ಸಿಗರೇಟ್ ತಂದು ಕೊಡ್ತಿದ್ರು, ಜಾಸ್ತಿ ಸೇದಬೇಡ ಅಂತ ನೋಡ್ಕೊಳ್ತಿದ್ರು. ಆದ್ರೆ ಇದ್ಯಾವುದನ್ನೂ ತೋರಿಸಲಿಲ್ಲ.

    ಇನ್ನು ಕೆಲವು ಹುಡುಗಿಯರು ಸ್ಮೋಕ್ ಮಾಡ್ತಾರೆ. ಆದ್ರೆ ಅದನ್ನ ತೋರಿಸಲ್ಲ. ಒಬ್ಬ ಹುಡುಗಿ ಒತ್ತಡದಲ್ಲಿ ಸಿಗರೇಟ್ ಸೇದೋಕೆ ಹೋದ್ರು. ಬೇಡ ಅನಾವಶ್ಯಕವಾಗಿ ಅಭ್ಯಾಸ ಮಾಡ್ಕೋಬೇಡ ಅಂತ ನಾನು ಹೇಳಿದೆ ಅಂತ ಸೋನಿಯಾ ಹೇಳಿದ್ದಾರೆ. ಸಿಗರೇಟ್ ಸೇದ್ತೀನಿ ಅಂದ ಹುಡುಗಿ ಯಾರು ಅಂತ ನಿರೂಪಕ ಕೇಳಿದಾಗ. ಸೋನಿಯಾ ಹೆಸರು ಹೇಳಲಿಲ್ಲ.

    ಸೋನಿಯಾಗೆ ಈಗಾಗಲೇ ಮದುವೆ ನಿಶ್ಚಯವಾಗಿದೆಯಂತೆ. ಡಿಸೆಂಬರ್‌ ನಲ್ಲಿ ಅವರ ಮದುವೆ ನಡೆಯಬೇಕಿತ್ತು. ಅತ್ತೆ ಮಾವ ಮತ್ತು ಗಂಡನ ಅನುಮತಿ ಪಡೆದು ಬಿಗ್ ಬಾಸ್ ಶೋಗೆ ಬಂದಿದ್ದಾಗಿ ಸೋನಿಯಾ ಪೋಷಕರು ಹೇಳಿದ್ದಾರೆ. ಬಿಗ್ ಬಾಸ್ ಶೋ ಹೇಗಿರುತ್ತೆ ಅಂತ ನಮಗೆ ಗೊತ್ತು. ಬಿಗ್ ಬಾಸ್ ಹೇಳಿದ ಹಾಗೆ ಸ್ಪರ್ಧಿಗಳು ಆಟ ಆಡಬೇಕು. ಸೋನಿಯಾ ವರ್ತನೆಯಿಂದ ನಮಗೆ ಯಾವುದೇ ತಕರಾರು ಇಲ್ಲ.

    ಆದ್ರೆ ನಮ್ಮ ಸುತ್ತಮುತ್ತಲಿನವರು ತಪ್ಪು ತಿಳಿದುಕೊಳ್ಳುತ್ತಿದ್ದಾರೆ. ಪೃಥ್ವಿ ಮತ್ತು ನಿಖಿಲ್ ಅವರನ್ನ ಸೋನಿಯಾ ಅಣ್ಣ ತಮ್ಮಂದಿರಂತೆ ಭಾವಿಸುತ್ತಾಳೆ. ಆದ್ರೆ ಅವರ ಸಂಬಂಧವನ್ನ ಕೆಟ್ಟದಾಗಿ ಬಿಂಬಿಸುತ್ತಾರೆ. ದಯವಿಟ್ಟು ಸೋನಿಯಾ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ ಅಂತ ಸೋನಿಯಾ ಪೋಷಕರು ಮೊದಲೇ ವಿನಂತಿ ಮಾಡಿದ್ದರು.

    Continue Reading

    LATEST NEWS

    WATCH VIDEO : ಅಬ್ಬಬ್ಬಾ! ಕಾಳಿಂಗ ಸರ್ಪಕ್ಕೆ ನೀರುಣಿಸಿದ ಭೂಪ! ದೈತ್ಯ ಹಾವು ಏನ್ಮಾಡಿತು ಗೊತ್ತಾ!?

    Published

    on

    ಮಂಗಳೂರು : ಸಾಮಾನ್ಯವಾಗಿ ಹಾವನ್ನು ಕಂಡ್ರೆ ಭಯ ಪಡೋರೆ ಅಧಿಕ. ಮನೆಯ ಬಳಿ ಹಾವು ಸುಳಿದಾಡಿದ್ರೆ ಸಾಕು ಓಡಿ ಹೋಗೋದು ಅಥವಾ ಹಾವು ಹಿಡಿಯುವರನ್ನು ಕರೆಸೋದು ಸಾಮಾನ್ಯ. ಆದ್ರೆ, ಇಲ್ಲೊಬ್ಬ ಭೂಪ ಹಾವಿಗೆ ನೀರುಣಿಸಿದ್ದಾನೆ. ಅದೂ ಸಾಮಾನ್ಯ ಹಾವಿಗಲ್ಲ. ಕಾಳಿಂಗ ಸರ್ಪಕ್ಕೆ.

    ವೀಡಿಯೋ ವೈರಲ್ :

    ಇತ್ತೀಚೆಗೆ ಸಾಧು ಪ್ರಾಣಿಗಳಿಗೆ  ನೀರುಣಿಸೋದೆ ಹೆಚ್ಚು. ಅಂತಹುದರಲ್ಲಿ ಹಾವಿಗೆ ನೀರುಣಿಸೋದಾ? ಅಬ್ಬಬ್ಬಾ! ಅಂದ್ರಾ? ಇಲ್ಲೊಬ್ಬ ಅಂತಹ ಸಾಹಸ ಮಾಡಿದ್ದಾನೆ ಬಿಡಿ.

    ಯುವಕನೊಬ್ಬ ಬಕೆಟ್ ನ ಮೂಲಕ ಹಾವಿಗೆ ನೀರುಣಿಸಿದ್ದಾನೆ. ಆತ ನೀರು ಸುರಿಯುತ್ತಿದ್ದರೆ, ಕಾಳಿಂಗ ಸರ್ಪ  ಆತನಿಗೆ ಏನೂ ಮಾಡದೆ ಶಾಂತವಾಗಿ ನೀರು ಕುಡಿದಿದೆ. ಜೊತೆಗೆ ಆತ ಆ ಹಾವನ್ನು ಮುಟ್ಟುವ ಧೈರ್ಯವನ್ನೂ ಮಾಡಿದ್ದಾನೆ. ಆಗಲೂ ಹಾವು ಆತನಿಗೆ ಏನೂ ಮಾಡುವುದಿಲ್ಲ.

    ಇದನ್ನೂ ಓದಿ : ALERT : ಚಹಾದೊಂದಿಗೆ ಈ ಆಹಾರಗಳನ್ನು ಸೇವಿಸ್ತೀರಾ? ಹಾಗಿದ್ರೆ ತಪ್ಪದೇ ಇದನ್ನೊಮ್ಮೆ ಓದಿ.!

    ಸದ್ಯ ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆ ಯುವಕನ ಸಾಹಸಕ್ಕೆ ಶಾಕ್ ಆಗಿದ್ದಾರೆ.

     

    Continue Reading

    BIG BOSS

    ಬಿಗ್ ಬಾಸ್​ ಮನೆಯಲ್ಲಿ ದೆವ್ವದ ಕಾಟ

    Published

    on

    ದೆವ್ವ ಇದೆ ಅಥವಾ ಇಲ್ಲ ಎನ್ನುವ ಬಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತವೆ. ಕೆಲವರು ದೆವ್ವಗಳು ಇವೆ ಎಂದು ನಂಬಿದರೆ ಇನ್ನೂ ಕೆಲವರು ದೆವ್ವ ಇಲ್ಲ ಎಂದು ವಾದಿಸುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗುವಂಥ ಘಟನೆಗಳು ಕೂಡ ನಡೆಯುತ್ತಿವೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಏನು? ಮನೆ ಮಂದಿಗೆ ಭಯ ಮೂಡಲು ಕಾರಣ ಏನು ಎಂಬ ಪ್ರಶ್ನೆ ಎದುರಾಗಿದೆ.

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಒಂದಷ್ಟು ವಿಚಿತ್ರ ಘಟನೆಗಳು ನಡೆದಿವೆ. ಇದು ಮನೆ ಮಂದಿಯ ಆತಂಕಕ್ಕೆ ಕಾರಣ ಆಗಿದೆ. ದೊಡ್ಮನೆಯಲ್ಲಿ ಇದ್ದಕ್ಕಿದ್ದಂತೆ ಕೆಲವು ಟೀ ಕಪ್​ಗಳು ಒಡೆದು ಹೋಗುತ್ತಿವೆ. ಮೇಲೆ ಇಟ್ಟಂಥ ಕಪ್​ಗಳು ಏಕಾಏಕಿ ನೆಲಕ್ಕೆ ಬೀಳುತ್ತಿವೆ.

    ಅಕ್ಟೋಬರ್ 9ರ ಎಪಿಸೋಡ್​ನಲ್ಲೂ ಇದೇ ರೀತಿ ಆಗಿದೆ. ಮೇಲೆ ಇಟ್ಟಂಥ ಕಪ್ ನೆಲಕ್ಕೆ ಬಿದ್ದು ಒಡೆದು ಹೋಗಿದೆ. ಇದರಿಂದ ಮನೆ ಮಂದಿ ಆತಂಕಗೊಂಡಿದ್ದಾರೆ. ‘ಮನೆಯಲ್ಲಿ ದೆವ್ವ ಇದೆಯೇನೋ ಅನಿಸುತ್ತಿದೆ’ ಎಂದು ಕೆಲವರು ಹೇಳಿದ್ದಾರೆ. ಇದನ್ನು ಕೇಳುತ್ತಿದ್ದಂತೆ ಹಂಸ ಅವರು ಆತಂಕಗೊಂಡರು. ‘ಹಾಗೆಲ್ಲ ಹೇಳಬೇಡಿ ಭಯ ಆಗುತ್ತದೆ’ ಎಂದರು.

    ಇದಾದ ಬಳಿಕ ಅಲ್ಲಿದ್ದವರು, ‘ವಾತಾವರಣದಲ್ಲಿ ಪ್ಲಸ್ ಹಾಗೂ ಮೈನಸ್ ಎರಡೂ ಇರುತ್ತದೆ’ ಎಂದರು. ಇದರಿಂದ ಹಂಸಾಗೆ ಮತ್ತಷ್ಟು ಭಯ ಆಯಿತು. ಇದನ್ನು ಕೇಳಿ ಮನೆಯಲ್ಲಿ ಆತಂಕದ ವಾತಾವರಣ ಮೂಡಿತು. ಅಲ್ಲಿಯೇ ಇದ್ದ ಮಂಜು ಅವರು ಆ ರೀತಿ ಏನೂ ಇಲ್ಲ ಎಂದು ಸಮಾಧಾನ ಮಾಡಿದರು. ಕಪ್ ಒಡೆಯಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕಟ್ಟೆಯ ಅಂಚಲ್ಲಿ ಇಟ್ಟ ಕಾರಣಕ್ಕೂ ಕಪ್ ಒಡೆದಿರಬಹುದು ಎಂದು ಕೆಲವರು ಊಹಿಸಿದ್ದಾರೆ.

    Continue Reading

    LATEST NEWS

    Trending