FILM
‘ಆಂಟಿ’ ಎಂದಿದ್ದಕ್ಕೆ ನಟಿಯರ ಮಧ್ಯೆ ಗಲಾಟೆ: Social Mediaದಲ್ಲಿ ಹಾಟ್ ಟಾಪಿಕ್
ಮುಂಬೈ: ಹಿಂದಿ ಬಿಗ್ ಬಾಸ್ ಸೀಜನ್ನಲ್ಲಿ ‘ಆಂಟಿ’ ಎಂಬ ವಿಷಯಕ್ಕೆ ಭಾರಿ ಗಲಾಟೆ ನಡೆದಿದೆ.
ಹಿಂದಿ ಬಿಗ್ ಬಾಸ್ ಸೀಜನ್ 15 ಫಿನಾಲೆ ಹಂತಕ್ಕೆ ಬಂದು ತಲುಪಿದ್ದು, ಕೊನೆಯದಾಗಿ ಐದು ಮಂದಿ ಉಳಿದುಕೊಂಡಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿಯಾಗಿರುವ ನಟಿ ಶಮಿತಾ ಶೆಟ್ಟಿ ಹಾಗೂ ನಟಿಯೇ ಆಗಿರುವ ತೇಜಸ್ವಿ ಪ್ರಕಾಶ್ ಕೂಡ ಫಿನಾಲೆಯಲ್ಲಿ ಇದ್ದಾರೆ.
ಈಗ ಈ ನಟಿಯರಿಬ್ಬರ ನಡುವೆ ಭಾರಿ ಗಲಾಟೆ ನಡೆದಿದೆ. ಅದಕ್ಕೆ ಕಾರಣ, ತೇಜಸ್ವಿ ಅವರು ಶಮಿತಾ ಅವರನ್ನು ‘ಆಂಟಿ’ ಎಂದು ಕರೆದಿರುವುದು.
ಶಮಿತಾ ಅವರಿಗೆ 42 ವರ್ಷ ವಯಸ್ಸಾಗಿದ್ದು, ತೇಜಸ್ವಿಗೆ 28 ವರ್ಷ ವಯಸ್ಸು. ಆದ್ದರಿಂದ ಸಹಜವಾಗಿ ತೇಜಸ್ವಿ ಶಮಿತಾರನ್ನು ಆಂಟಿ ಎಂದಿದ್ದು, ಇದು ಶಮಿತಾ ಅವರನ್ನು ಕೆರಳಿಸಿದೆ.
ಇವರಿಬ್ಬರ ನಡುವೆ ಬಿಗ್ಬಾಸ್ ಮನೆಯೊಳಗೆ ಸಾಕಷ್ಟು ಬಾರಿ ಇದೇ ವಿಷಯವಾಗಿ ಜಗಳವೂ ಆಗಿದೆ.
ಇದು ಬಿಗ್ಬಾಸ್ ಮನೆಯಿಂದ ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿ ಮಾಡುತ್ತಿದೆ.
ಶಮಿತಾ ಅವರು ತೇಜಸ್ವಿಗಿಂತ ಸುಮಾರು 15 ವರ್ಷ ದೊಡ್ಡವರಾಗಿರುವ ಕಾರಣ, ಆಂಟಿ ಅಂದಿದ್ದರಲ್ಲಿ ತಪ್ಪೇನಿಲ್ಲ ಎಂದು ಒಂದಿಷ್ಟು ಮಂದಿ ಹೇಳಿದರೆ,
ಶಮಿತಾ ಅಭಿಮಾನಿಗಳು ಮಾತ್ರ ಇದನ್ನು ಸುತರಾಂ ಒಪ್ಪುತ್ತಿಲ್ಲ. ಇದು ಶಮಿತಾ ಅವರ ವಯಸ್ಸಿಗೆ ಅವಮಾನ ಮಾಡಿದಂತೆ ಆಗಿದೆ ಎಂದು ಅವರು ಹೇಳಿದ್ದಾರೆ.
ನಟಿ ಬಿಪಾಶಾ ಬಸು ಕೂಡ ತೇಜಸ್ವಿ ಪ್ರಕಾಶ್ ವಿರುದ್ಧ ಮಾತನಾಡಿದ್ದಾರೆ.
ಆಂಟಿ ಅಂತ ಕರೆಯೋದು ಯಾವಾಗಿನಿಂದ ಒಂದು ಕೆಟ್ಟ ಪದ ಆಯ್ತು? 45 ವರ್ಷ ವಯಸ್ಸಾದವರನ್ನು ಆಂಟಿ ಎನ್ನದೇ ಯುವತಿ ಎನ್ನಲು ಆಗುತ್ತದೆಯೇ ಎಂದು ಅನೇಕ ಮಂದಿ ಗರಂ ಕೂಡ ಆಗಿದ್ದಾರೆ.
ಒಂದು ವೇಳೆ ಆಂಟಿ ಎಂಬ ಪದವನ್ನು ತಪ್ಪಾಗಿ ಅರ್ಥೈಸಿದರೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಅಗೌರವ ತೋರಿಸಿದಂತೆ ಆಗುತ್ತದೆ’ ಎಂದು ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ‘ಆಂಟಿ’ ಪದ ಜಾಲತಾಣದಲ್ಲಿ ಹಾಟ್ ವಿಷಯವಾಗಿದೆ.
https://www.dnaindia.com/television/report-bigg-boss-15-tejasswi-prakash-calls-shamita-shetty-aunty-says-lo-chadh-gayi-us-pe-bhi-2930282
FILM
ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತುಗಳು ಬಹಳ ಸಮಯದಿಂದ ಕೇಳಿ ಬರುತ್ತಿದೆ. ನಟಿಯರು ನಟರ ಬಗ್ಗೆ, ನಿರ್ಮಾಪಕರು, ನಿರ್ದೇಶಕರುಗಳ ಬಗ್ಗೆ ಆರೋಪಗಳನ್ನು ಮಾಡುವ ಸುದ್ದಿಗಳು ಹರಿದಾಡುತ್ತಿರುತ್ತಿವೆ. ಇದೀಗ ರಿಯಾಲಿಟಿ ಶೋ ಸರದಿ.
ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಆರೋಪ:
ಸಿನಿ ಇಂಡಸ್ಟ್ರಿಯಲ್ಲಿದ್ದ ಕಾಸ್ಟಿಂಗ್ ಕೌಚ್ ಈಗ ಟಿವಿ ರಿಯಾಲಿಟಿ ಶೋಗಳಲ್ಲೂ ನಡಿತಾ ಇದೆಯಾ ? ಇಂತಹ ಒಂದು ಆರೋಪವನ್ನು ಡ್ಯಾನ್ಸಿಂಗ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾಜಾ ‘ ಸೀಸನ್ 11 ಗೆದ್ದಿದ್ದ ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಅವರು ಆರೋಪಿಸಿದ್ದಾರೆ.
ತನ್ನ ಡ್ಯಾನ್ಸ್ ಮೂವ್ಸ್ ಮತ್ತು ಎಲ್ಲರೊಂದಿಗೆ ಬೆರೆಯುವ ಸ್ವಭಾವದಿಂದ ಮನೀಶಾ ರಾಣಿ ಜನರ ಮನ ಗೆದ್ದಿದ್ದರು. ಇತ್ತೀಚೆಗೆ ಬಿಗ್ ಬಾಸ್ ಒಟಿಟಿ ಸೀಸನ್ 2 ನಲ್ಲೂ ಕಾಣಿಸಿಕೊಂಡಿದ್ದ ಮನೀಶಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಒಂದು ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಮೋಸ ಮಾಡಿದ್ದಾಗಿ ಹೇಳಿದ್ದಾರೆ. ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಿದ್ದ ಎಂದು ಆರೋಪಿಸಿದ್ದಾರೆ.
ಬಿಗ್ ಬಾಸ್ ತಂಡದ ಸದಸ್ಯನಿಂದ ಕರೆ :
ಸಂದರ್ಶನದಲ್ಲಿ ಮಾತನಾಡಿದ ಮನೀಶಾ ರಾಣಿ, “ನಾನು ಮುಂಬೈನಲ್ಲೂ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ನಾನೂ ಸಂಪೂರ್ಣವಾಗಿ ಅದಕ್ಕೆ ಬಲಿಯಾಗದೇ ಇದ್ರೂ ಬಿಗ್ ಬಾಸ್ ತಂಡದ ಸದಸ್ಯ ಎಂದು ಹೇಳಿಕೊಂಡಿದ್ದ ವ್ಯಕ್ತಿ ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆಸಿಕೊಂಡಿದ್ದ” ಎಂದು ಹೇಳಿದ್ದಾರೆ.
“ಮನೆಗೆ ವಾಪಾಸಾಗಿದ್ದ ಸಮಯದಲ್ಲಿ ಅಡಿಷನ್ ಪ್ರಾರಂಭವಾಗಿದೆ ಎಂದು ಮುಂಬೈಗೆ ಕರೆಸಿಕೊಂಡಿದ್ದ. ಹೀಗಾಗಿ ತರಾತುರಿಯಲ್ಲಿ ನಾನು ಮುಂಬೈಗೆ ಬಂದಿದ್ದೆ. ಆದ್ರೆ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದೆ. ಅದಕ್ಕೆ ಆತನಿಗೆ ನನ್ನ ಮೇಲೆ ಕೋಪ ಬಂದಿತ್ತು” ಎಂದು ಹೇಳಿದ್ದಾರೆ.
‘ಝಲಕ್ ದಿಖ್ಲಾ ಜಾ’ ಕಾರ್ಯಕ್ರಮ ಮೂಲಕ ಸ್ಟಾರ್ ಪಟ್ಟ
ಮೂಲತಃ ಬಿಹಾರದ ನಿವಾಸಿ ಆಗಿರೋ ಮನೀಶಾ ರಾಣಿ ಅವರು ‘ಝಲಕ್ ದಿಖ್ಲಾಜಾ’ 11 ನೇ ಸೀಸನ್ ಗೆಲ್ಲುವ ಮೂಲಕ ಜನಮನ್ನಣೆ ಗಳಿಸಿದರು. ಮನೀಶಾ ರಾಣಿ ಈ ಪ್ರಶಸ್ತಿ ಗೆಲ್ಲುವುದಕ್ಕೂ ಮೊದಲು ಜೀವನದಲ್ಲಿ ಸಾಕಷ್ಟು ಸಂಘರ್ಷ ಅನುಭವಿಸಿದ್ದಾರೆ.
ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದ ಮನೀಶಾ ರಾಣಿ ಡ್ಯಾನ್ಸರ್ ಆಗಲು ಅಡ್ಡಿಯಾಗಿದ್ದೇ ಆಕೆಯ ತಂದೆ. ಹೀಗಾಗಿ 12 ನೇ ತರಗತಿಯಲ್ಲಿ ಮನೆ ಬಿಟ್ಟು ಕೊಲ್ಕತ್ತಾ ಸೇರಿದ ಮನಿಷಾ ಮದುವೆ ಸಮಾರಂಭದಲ್ಲಿ ಊಟ ಬಡಿಸುವ ಕೆಲಸ ಆರಂಭಿಸಿದ್ದರು. ಅಲ್ಲಿಂದ ಬಳಿಕ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಆರಂಭಿಸಿದ ಮನೀಶಾ ಬಳಿಕ ಅದನ್ನೂ ಬಿಟ್ಟು ಟಿಕ್ಟಾಕ್ ಮೂಲಕ ತನ್ನ ನೃತ್ಯವನ್ನು ಜನರಿಗೆ ತೋರಿಸಲು ಆರಂಭಿಸಿದರು.
ಇದನ್ನೂ ಓದಿ : ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?
ಇದು ಗುಡಿಯಾ ಹಮಾರಿ ಸಭಿ ಪೆ ಭಾರಿ ತಯಾರಕರ ಗಮನಕ್ಕೆ ಬಂದು ಆಕೆಗೆ ಅವಕಾಶ ನೀಡಿದ್ರು. ಅಲ್ಲಿಂದ ಆರಂಭವಾದ ಮನೀಷಾ ರಾಣಿ ಜರ್ನಿ ಇಂದು ಆಕೆಯನ್ನು ಟಿವಿ ಲೋಕದ ಸ್ಟಾರ್ ಆಗಿ ಮಾಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿರೋ ಮನಿಷಾ 12.5 ಮಿಲಿಯನ್ಗಿಂತಲೂ ಹೆಚ್ಚು ಜನ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
FILM
ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?
ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ವಿಚ್ಛೇದನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಓಡಾಡುತ್ತಿತ್ತು. ಸಮಂತಾ ಅಭಿಮಾನಿಗಳು ನಾಗಚೈತನ್ಯ ವಿರುದ್ಧ ಕಮೆಂಟ್ಗಳನ್ನೂ ಹಾಕ್ತಾ ಇದ್ರು. ಇದರ ಬೆನ್ನಲ್ಲೇ ನಾಗಚೈತನ್ಯ ಹಾಗೂ ಶೋಬಿತಾ ಡೇಟಿಂಗ್ ಮಾಡ್ತಿದ್ದಾರೆ ಅನ್ನೊ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ಇವರಿಬ್ಬರು ಇದನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಂತಿದ್ದಾರೆ ಶೋಭಿತಾ ಹಾಗೂ ನಾಗಚೈತನ್ಯ.
ಒಂದೇ ಕಡೆ ಫೊಟೋ ಶೂಟ್ ಮಾಡಿಕೊಂಡ್ರ ಶೋಬಿತಾ-ನಾಗಚೈತನ್ಯ!
ಇದೀಗ ಶೋಭಿತಾ ಅರಣ್ಯ ಸುತ್ತಾಟದ ಫೊಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದ್ರಲ್ಲೇನಿದೆ ವಿಶೇಷ ಅಂತ ನೀವು ಕೇಳ್ಬೋದು.. ನಾಗಚೈನ್ಯ ಕೂಡಾ ಇದೇ ರೀತಿಯ ಬ್ಯಾಕ್ಗ್ರೌಂಡ್ ಇರೋ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಇವರಿಬ್ಬರೂ ಒಂದೇ ಲೊಕೇಶನ್ನಿಂದ ಫೊಟೋ ಶೇರ್ ಮಾಡಿದ್ದಾರೆ. ಜೊತೆಯಾಗಿ ವನ್ಯ ಜೀವಿಧಾಮದಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಗಚೈತನ್ಯ ಹಾಗೂ ಶೋಭಿತಾ ಲಂಡನ್ನ ಹೋಟೆಲ್ವೊಂದರಲ್ಲಿ ಊಟಕ್ಕೆಂದು ತೆರಳಿದ್ದರು.
ಮುಂದೆ ಓದಿ..; ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
ಹೊಟೆಲ್ ಚೆಫ್ ನಾಗಚೈತನ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸೋಶೀಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಫೊಟೋ ಹಿಂದೆ ಶೋಬಿತಾ ಇರೋದು ಕಂಡು ಬಂದಿದೆ. ಇದರಿಂದ ಈಗಾಗಲೆ ಇವರಿಬ್ರು ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗೆ ಪುಷ್ಠಿನೀಡಿದಂತಾಗಿದೆ.
ಫ್ಯಾನ್ಸ್ ಏನಂದ್ರು..?
ಇನ್ನು ಇವರಿಬ್ಬರು ಜೊತೆಗಿರುವ ಫೊಟೋ ಎಲ್ಲೂ ಕಾಣ ಸಿಗಲಿಲ್ಲ. ಹಾಗಾಗಿ ಇಬ್ಬರೂ ಜೋಡಿ ಹೌದೋ ಇಲ್ಲವೋ ಅನ್ನೋದು ಇನ್ನೂ ಖಚಿತಗೊಂಡಿಲ್ಲ. ಸಮಂತಾ ಜೊತೆ ವಿಚ್ಛೇದನ ಬಳಿಕ ನಾಗಚೈನ್ಯ ಶೋಬಿತಾ ಜೊತೆ ಕ್ಲೋಸ್ ಆಗಿದ್ದಾರೆ. ಸಮಂತಾ ನಾಗಚೈತನ್ಯ ಬೇರೆ ಬೇರ ಆದರೂ ಕೂಡಾ ಫ್ಯಾನ್ಸ್ ಇವರಿಬ್ಬರನ್ನೂ ಜೋಡಿಯಾಗಿ ನೋಡಲು ಕಾಯ್ತಾ ಇದ್ದಾರೆ. ಒಂದು ವೇಳೆ ಶೋಬಿತಾ ಜೊತೆ ಚೈತನ್ಯ ಡೇಟಿಂಗ್ನಲ್ಲಿರೋದು ಪಕ್ಕಾ ಆದ್ರೆ ಫ್ಯಾನ್ಸ್ ಅಂತೂ ಸಿಟ್ಟಿಗೇಳೋದು ಗ್ಯಾರಂಟಿ.
FILM
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
ಬೆಂಗಳೂರು: ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಾಗಿಣಿ ದ್ವಿವೇದಿ ನಟನೆಯ ವೀರ ಮದಕರಿ ಸಿನೆಮಾ ಚಿತ್ರರಂಗದಲ್ಲೇ ಮೋಡಿ ಮಾಡಿತ್ತು. ಸಿನೆಮಾದ ಹೆಸರು ನೆನಪು ಮಾಡಿದ್ರೆ ಸುದೀಪ್, ರಾಗಿಣಿ ಜೊತೆ ಅವರ ಅವರ ಮಗಳ ಪಾತ್ರವನ್ನು ಮಾಡಿದ ಜೆರುಶಾ ಕೂಡಾ ನೆನಪಿಗೆ ಬರ್ತಾಳೆ.
ಮುದ್ದಾದ ಮುಖದ ಮುದ್ದು ಗೊಂಬೆ, ಗುಂಗುರು ಕೂದಲಿನ ಪುಟಾಣಿ ಸದಾ ಅಮ್ಮನ ಲಾಲಿ ಹಾಡನ್ನು ಟೇಪ್ರೆಕಾರ್ಡರ್ನಲ್ಲಿ ಕೇಳಿಕೊಂಡು ಅಪ್ಪನ ಹಿಂದೆನೆ ಸುತ್ತುತ್ತಿದ್ದ ಪುಟಾಣಿ ಈಗ ನಾಯಕಿ ನಟಿ.
READ MORE..; ‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
ನಾಯಕಿ ನಟಿಯಾಗಿ ಜೆರುಶಾ
ಈಗ ಪುಟಾಣಿ ಜೆರುಶಾ ಇದೀಗ ವೀರಮದಕರಿ ಸಿನೆಮಾದ ಬಳಿಕ ನಾಯಕಿ ನಟಿಯಾಗಿ ಬೆಳ್ಳಿತೆರೆಗೆ ಬರಲು ಸಿದ್ಧರಾಗಿದ್ದಾರೆ. ಹೌದು, ಮಹೇಶ್ ಬಾಬು ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಸಿನೆಮಾದಲ್ಲಿ ಮತ್ತೊಂದು ಯುವ ಪ್ರತಿಭೆಯನ್ನು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ. ಕಿರುತೆರೆ ನಟ ಸ್ಮೈಲ್ ಗುರು ರಕ್ಷಿತ್ ಹಾಗೂ ಜೆರುಶಾರವರನ್ನು ಕಾಣಿಸಲಿದ್ದಾರೆ. ಆಕಾಶ್, ಅರಸು, ಪರಮೇಶ ಪಾನ್ ವಾಲ ಸೇರಿದಂತೆ ಹಲವಾರು ಹಿಟ್ ಸಿನೆಮಾಗಳನ್ನು ನೀಡಿರುವ ಮಹೇಶ್ ಬಾಬು ಇದೀಗ ಹೊಸಮುಖಗಳೊಂದಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಿನೆಮಾ ಯಾವ ರೀತಿ ಇರಲಿದೆ ಅನ್ನೋದು ಕಾದು ನೋಡಬೇಕಿದೆ.
ಜೆರುಶಾ ಈಗಾಗಲೇ ಬಾಲ ನಟಿಯಾಗಿ ಮಿಂಚಿದ್ದಾರೆ. ಅಲ್ಲದೆ ರಂಗಭೂಮಿಯ ನಟನೆಯಲ್ಲೂ ಪಳಗಿದ್ದಾರೆ. ಇನ್ನು ಸ್ಮೈಲ್ ಗುರು ರಕ್ಷಿತ್ ಡ್ಯಾನ್ಸ್ ರಿಯಾಲಿಟಿ ಶೋ, ಕಿರುತೆರೆ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಪರಿಚತರಾಗಿದ್ದಾರೆ. ಈ ಸಿನೆಮಾಗೆ ಹೊಸ ಮುಖದ ಮತ್ತೊಂದು ನಾಯಕಿಗಾಗಿ ಹುಡುಕಾಟದಲ್ಲಿ ಇದ್ದಾರಂತೆ ನಿರ್ದೇಶಕರು.
ಸಿನೆಮಾಗೆ ಇನ್ನೂ ಟೈಟಲ್ ಫೈನಲ್ ಆಗದಿದ್ದರೂ ಮೇಲ್ನೋಟಕ್ಕೆ ಸಿನೆಮಾ ಯೂತ್ಫುಲ್ ಕಥೆಯನ್ನ ಹೊಂದಿದೆ ಎನ್ನಬಹುದು. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದು, ಚೇತನ್ ಹಾಗೂ ಅನುರಾಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಸತ್ಯ ಛಾಯಾಗ್ರಾಹಣವಿರಲಿದೆ. ಇದೇ ಮೇ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಈ ಹಿಂದೆ ನಟಿ ಜೆರುಶಾ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಕನ್ನಡ, ಮಲಯಾಳಂ ದ್ವಿಭಾಷಾ ಪ್ರಾಜೆಕ್ಟ್ ಧೂಮಮ್ನಲ್ಲಿ ನಟಿಸಿದ್ದರು. ಮಲಯಾಳಂ ನಟ ಫಹಾದ್ ಫಾಸಿಲ್ ನಟನೆಯ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು.