Connect with us

DAKSHINA KANNADA

ಮಂಗಳಮುಖಿಯರಲ್ಲಿದೆ ‘ರಂಡೆ ಹುಣ್ಣಿಮೆ’ ವಿಶೇಷ ಆಚರಣೆ-ಮಂಗಳೂರಲ್ಲೂ ಆಚರಿಸಿದ ಬಗೆ ಹೇಗಿತ್ತು ಗೊತ್ತಾ…

Published

on

ಮಂಗಳೂರು: ಮಂಗಳಮುಖಿ ಎಂದರೆ ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ವ್ಯಕ್ತಿಯ ಮನಃಸ್ಥಿತಿ. ಇವರನ್ನು ‘ತೃತೀಯ ಲಿಂಗಿ’ ಅಥವಾ ‘ಮಂಗಳಮುಖಿ’ ಎಂದೂ ಕರೆಯುತ್ತಾರೆ. ಅನ್ಯಧರ್ಮದಲ್ಲಿರುವಂತೆ ಇವರಲ್ಲೂ ಕೂಡಾ ವಿಶೇಷ ಆಚಾರ, ಸಂಪ್ರದಾಯಗಳಿವೆ. ಮಂಗಳಮುಖಿಯರು ‘ರಂಡೆ ಹುಣ್ಣಿಮೆ’ ಎನ್ನುವ ವಿಶೇಷ ಆಚರಣೆ ಮಂಗಳೂರಿನಲ್ಲೂ ಮಾಡಿದರು.

ಇವರ ಹಾಡು, ಪೂಜೆ ಮಾಡುವುದು ಕಂಡಾಗ ಇದೇನು ವಿಶೇಷ ಸಂಪ್ರದಾಯ ಎಂದು ನಿಮಗನ್ನಿಸಬಹುದು. ಇವರೆಲ್ಲರೂ ಮಂಗಳಮುಖಿಯರು.


ಮಂಗಳಮುಖಿಯರ ಸಮಾಜದಲ್ಲಿಯೂ ವಿಭಿನ್ನ, ವಿಶೇಷ ಸಂಪ್ರದಾಯವಿದೆ. ಅದರಲ್ಲಿ ಒಂದು ರಂಡೆ ಹುಣ್ಣಿಮೆ ಒಂದು. ಪ್ರಸಿದ್ಧವಾದ ರೇಣುಕಾದೇವಿಯ ಶಕ್ತಿಪೀಠ ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆಯನ್ನು `ರಂಡೆ ಹುಣ್ಣಿಮೆಯಾಗಿ ಆಚರಿಸುವ ಸಂದರ್ಭದಲ್ಲಿಯೇ ಮಂಗಳಮುಖಿಯರು ಈ ಸಂಪ್ರದಾಯ ಆಚರಿಸುತ್ತಿದ್ದು, ಮಂಗಳೂರಿನ ಕುಳಾಯಿಯ ಮಂಗಳಮುಖಿಯರು ಈ ಆಚರಣೆ ನಡೆಸಿದರು.


ಜಮದಗ್ನಿ ಋಷಿ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದ ಸಂದರ್ಭ ರೇಣುಕಾದೇವಿ 5 ಮಂದಿಗೆ ಜನ್ಮ ನೀಡುತ್ತಾರೆ. ಜಮದಗ್ನಿ ಋಷಿಯ ಬಳಿ ಕಾರ್ತವೀರ್ಯಾರ್ಜುನ ಕಾಮಧೇನು ಇರುತ್ತದೆ. ಅದು ಏನು ಬೇಡಿದರೂ ಈ ಭೂಮಿಯಲ್ಲಿ ಕೊಡುವಂತ ಒಂದು ತೆರನಾದ ವರ. ಅದಕ್ಕೆ ಇವರು ಆಸೆ ಬಿದ್ದು ಕಾರ್ತಿಕ ರಾಜನು ಬಿಲ್ಲಿನಲ್ಲಿ ಜಮದಗ್ನಿ ಮುನಿಗಳು ತಪೋನಿರತರಾಗಿದ್ದಾಗ ಅವರ ಶಿರಚ್ಛೇದನ ಮಾಡಿ ಅಪಹರಿಸುವನು.


ಕೊಂದಾಗ ಒಂದು ತಿಂಗಳು ಅವರಿಗೆ ಮರಣ ಬರುತ್ತೆ. ಆ ಸಂದರ್ಭ ರೇಣುಕಾದೇವಿ ಮಗ ಪರಶುರಾಮನನ್ನು ಕೂಗುತ್ತಾಳೆ. ಆಗ ಪರಶುರಾಮ ಬಂದು ಏನಾಯ್ತು ಕೇಳಿದಾಗ ಅವಳು ಎಲ್ಲವನ್ನು ವಿವರಿಸುತ್ತಾಳೆ. ಕೂಡಲೇ ತಂದೆಯನ್ನು ಉಳಿಸಿಕೊಳ್ಳಲು ಪರಶುರಾಮ ಕಾಡಿಗೆ ಹೋಗಿ ಸಂಜೀವಿನಿ ಬೇರು ತಂದು ನಂತರ ಜಮದಗ್ನಿ ಋಷಿಯನ್ನು ಕಾಪಾಡುತ್ತಾನೆ.


ಆದರೆ ರೇಣುಕಾದೇವಿ ವರ್ಷದಲ್ಲಿ ಒಂದು ತಿಂಗಳು ರೇಣುಕಾದೇವಿ ವಿಧವೆಯಾಗಿ ಉಳಿದ 11ತಿಂಗಳು ಮುತ್ತೈದೆಯಾಗಿ ಇರುತ್ತಾರೆ ಎಂಬ ನಂಬಿಕೆಯಿದೆ. ರೇಣುಕಾಮಾತೆ ಮುತ್ತೈದೆ ಭಾಗ್ಯ ಕಳೆದುಕೊಂಡು ವಿಧವೆಯಾದಳು ಎಂಬ ಕಾರಣಕ್ಕಾಗಿ ಮಂಗಳಮುಖಿಯರು ಕೂಡಾ ರಂಡೆ ಹುಣ್ಣಿಮೆ ಆಚರಿಸುತ್ತಾರೆ. 41ದಿನದವರೆಗೆ ಇವರು ಕೂಡಾ ವಿಧವೆಯರಂತೆ ಇದ್ದು ಸಂಸ್ಕೃತಿ ಆಚರಿಸುತ್ತಾರೆ.

ಈ ಬಗ್ಗೆ ವಿವರಿಸುವ ಮಂಗಳಮುಖಿ ಸಂಜನಾ ‘ಈ ದಿನ ನಮಗೆ ಏನೂ ಮಾಡುವಂತಿಲ್ಲ. ಇದು ಕರಾಳ ದಿನ. ದೊಡ್ಡವರೆಲ್ಲ ಮಾಡುತ್ತಿದ್ದ ಸಂಪ್ರದಾಯವನ್ನೇ ನಾವು ಮುಂದುವರೆಸಿಕೊಂಡು ಹೋಗ್ತಾ ಇದ್ದೇವೆ. ಮುಖ್ಯವಾಗಿ ಧಾರವಾಡದ ಸವದತ್ತ ಎಲ್ಲಮ್ಮನ ಗುಡಿಯಲ್ಲಿ ಕರ್ನಾಟಕದಲ್ಲಿ ನಡೆಯುತ್ತೆ.
ಆದ್ದರಿಂದ ಜೋಗತಿ ಅನ್ವಯ ರೀತಿಯಲ್ಲಿ ಇರುವ ನಾವು ಈ ಕ್ರಮವನ್ನು ಅನುಸರಿಸುತ್ತೇವೆ. ತಾಯಿ ವಿಧವೆಯಾದ ನಂತರ ನಾವು ಕೂಡಾ ಆಗುತ್ತೇವೆ ಎಂದು ನಮ್ಮ ಪೂರ್ವಜರು ಸಂಪ್ರದಾಯ ಅನುಸರಿಸಿಕೊಂಡು ಬರುತ್ತೇವೆ.


ದೇವಿಯ ಆರಾಧಕರಾದ ಜೋಗಪ್ಪ, ಜೋಗತಿಯರೂ ಸುಮಂಗಲೆಯ ಸಂಕೇತಗಳಾದ ಬಳೆ, ಅರಿಷಿಣ-ಕುಂಕುಮ, ಹೂವು, ಕಾಲುಂಗುರ ಮುಂತಾದಗಳನ್ನು ತೆಗೆಯುತ್ತಾರೆ. ಬಳಿಕ ಜೋಗತಿ ಹಾಡು ಹಾಡುತ್ತಾ ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ.

ಕಾಯಿ, ಕರ್ಪೂರ, ಹಣ್ಣುಗಳ ಜತೆಗೆ ಹರಕೆ ತೀರಿಸಿ ಪುನೀತರಾಗುತ್ತಾರೆ. ಈ ವರ್ಷವೂ ಇದನ್ನು ನಾವು ಮಾಡಿದ್ದೇವೆ. ಇಂದು ನಮಗೆ ತುಂಬಾ ಬೇಸರದ ದಿನ ಎನ್ನುತ್ತಾರೆ ಮಂಗಳಮುಖಿಯರು.

ವಿಶೇಷವಾಗಿ ಸವದತ್ತಿಯ ಎಲ್ಲಮ್ಮನ ಗುಡ್ಡದಲ್ಲಿ ನಡೆಯುವ ಉತ್ಸವದಲ್ಲಿ ಜೋಗಪ್ಪ ಮತ್ತು ಜೋಗತಿಯರು ಭಾಗವಹಿಸುತ್ತಾರೆ. ಇದನ್ನು ಆಚರಣೆ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎನ್ನುವುದು ಮಂಗಳಮುಖಿಯರು ನಂಬಿಕೊಂಡು ಬಂದಿರುವ ಒಂದು ಆರಾಧನೆ.

 

BANTWAL

ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Published

on

ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.

ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

DAKSHINA KANNADA

ಇಂದು ಕರ್ನಾಟಕ ಬಂದ್‌: ಕರಾವಳಿಗರಿಂದ ನೈತಿಕ ಬೆಂಬಲ-ಬಸ್‌, ಹೊಟೇಲ್‌, ಶಾಲೆಗಳು ಎಂದಿನಂತೆ

Published

on

ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿರುವ ಇಂದಿನ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ.

ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.

ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.

ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.

ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

Continue Reading

DAKSHINA KANNADA

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ‘ಸ್ಕಿಲ್ ಅಪ್’ ಕಾರ್ಯಕ್ರಮ

Published

on

ಮಂಗಳೂರು: ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವತಿಯಿಂದ ‘ಸ್ಕಿಲ್ ಅಪ್’ ಎಂಬ ಕಾರ್ಯಕ್ರಮ ಸೆ. 23 ರಂದು ನಡೆಯಿತು.

ಆರೋಗ್ಯ ಕ್ಷೇತ್ರದ ಕಾರ್ಯನಿರ್ವಾಹಕರಿಗೆ ಅಗತ್ಯವಾದ, ಆಡಳಿತ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು.

ಮಂಗಳೂರಿನ ಸುಶಾಂತ್ ಕನ್ಸಲ್ಟೆನ್ಸಿಯ ಎಚ್. ಪ್ರಶಾಂತ್ ಮಿರಾಂಡ, ಎಂಡಿಪಿ ನಿರ್ದೇಶಕ ಪ್ರೊ.ವೆಂಕಟೇಶ್ ಅಮೀನ್ ಮತ್ತು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಡೀನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಕಾರ್ಯಕ್ರಮವನ್ನು ಎಚ್‌. ಪ್ರಶಾಂತ್ ಮಿರಾಂಡ, ಪ್ರೊ. ವೆಂಕಟೇಶ್ ಶೇಖರ್ ಅಮಿನ್, ಪ್ರೊ. ಡಾ. ಅಮುತಾ ಪಿ. ಮಾರ್ಲಾ, ಡಾ. ಶಾಶ್ವತ್ ಎಸ್., ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ವಹಣೆಗಾರ ಪ್ರೊ. ವಿಜಯ ಪಿ., ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಾಧಿಕಾರಿ ಅವರು ಉದ್ಘಾಟಿಸಿದರು.

ಚೆನ್ನೈ ಅಪೋಲೊ ಪ್ರೋಟಾನ್ ಕ್ಯಾನ್ಸರ್ ಸೆಂಟರ್, ಆಥರ್ವ ಆರ್ಥೋ ಕೇರ್ ಮಂಗಳೂರು, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು(ಸಿಎಂಸಿ) ವೆಲ್ಲೂರು, ಡಾಕ್ಟರ್ ಟಿಎಂಎ ಪೈ ಆಸ್ಪತ್ರೆ, ಉಡುಪಿ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆ ದೇರೆಳಕಟ್ಟೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಅತ್ತಾವರ, ಮಣಿಪಾಲ್ ಹೆಲ್ತ್ ಎಂಟರ್ಪ್ರೈಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ರಾಜಗಿರಿ ಆಸ್ಪತ್ರೆ ಬೆಂಗಳೂರು, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರು, ರಾಮಯ್ಯ ಯೂನಿವರ್ಸಿಟಿ ಆಫ್ ಆಪ್ಲೈಡ್ ಸೈನ್ಸೆಸ್ ಬೆಂಗಳೂರು, ಶ್ರೀ ರೇಂಗ ಆಸ್ಪತ್ರೆ ತಮಿಳುನಾಡು, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ಸೈಂಟ್‌ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು, ಯೂನಿಟಿ ಆಸ್ಪತ್ರೆ ಮಂಗಳೂರು, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಮತ್ತಿತರ ಸಂಸ್ಥೆಗಳಿಂದ ಆಧಿಕಅರಿ ಮತ್ತು ಸಿಬಂದಿ ಭಾಗವಹಿಸಿದ್ದರು. ಎ. ಜೆ. ಹ್ಯೂಮನ್ ರಿಸೋರ್ಸಸ್ ನ ಮ್ಯಾನೇಜರ್ ಶಶಧರ ಆಚಾರ್ಯ ಪ್ರಸ್ತಾವನೆಗೈದರು.

ಎ..ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ನ ಸಹಾಯಕ ಪ್ರಾಧ್ಯಾಪಕಿ ಪ್ರೀಮ್ ರೋಸ್ ವಿಷ್ಣು ಸ್ವಾಗತಿಸಿದರು.

Continue Reading

LATEST NEWS

Trending