Connect with us

LATEST NEWS

ಈ ಬಾರಿ ವಿಶ್ವಕಪ್ ಗೆಲ್ಲೋದು ಈ ತಂಡ-ಇದುವರೆಗೂ ಸುಳ್ಳಾಗದ ಖ್ಯಾತ ಜ್ಯೋತಿಷಿವಾಣಿ

Published

on

ಕತಾರ್: ನಾಳೆ ಫುಟ್ಬಾಲ್ ವಿಶ್ವಕಪ್ ಫೈನಲ್ ಫೈಟ್​ ನಡೆಯಲಿದೆ. ಯಾವ ದೇಶ ಚಾಂಪಿಯನ್ ಆಗಲಿದೆ ಎಂಬ ಕುತೂಹಲದ ನಡುವೆ ಪ್ರಸಿದ್ಧ ಬ್ರೆಜಿಲಿಯನ್ ಜ್ಯೋತಿಷಿ ಅಥೋಸ್ ಸಲೋಮಿ ಚಾಂಪಿಯನ್​ ತಂಡದ ಹೆಸರನ್ನು ಹೇಳಿದ್ದಾರೆ.


ವಿಶ್ವಕಪ್ ಬಗ್ಗೆ ಅವರ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿವೆ. ರಾಣಿ ಎಲಿಜಬೆತ್ II ರ ಸಾವಿನಿಂದ ಹಿಡಿದು ಪ್ರಪಂಚದಲ್ಲಿ ಕೊರೋನಾ ಸಾಂಕ್ರಾಮಿಕ ರೋಗವು ಪ್ರಾರಂಭವಾಗುವವರೆಗೆ, ಬ್ರೆಜಿಲಿಯನ್ ವಿಶ್ವ ಪ್ರಸಿದ್ಧ ಭವಿಷ್ಯ ಹೇಳುವವರು ಮತ್ತು ಜ್ಯೋತಿಷಿ ಅಥೋಸ್ ಸಲೋಮಿ ಎಲ್ಲವನ್ನೂ ನಿಖರವಾಗಿ ಭವಿಷ್ಯ ನುಡಿದಿದ್ದಾರೆ.

ವಿಶ್ವಕಪ್ ಆರಂಭಕ್ಕೂ ಮುನ್ನ ಅಥೋಸ್ ಸಲೋಮಿ ಅವರು ಅರ್ಜೆಂಟೀನಾದ ವಿಶ್ವಕಪ್ ಅಭಿಯಾನ ಉತ್ತಮವಾಗಿ ಆರಂಭವಾಗದಿದ್ದರೂ ಮೆಸ್ಸಿ ತಂಡವೇ ಫೈನಲ್ ಆಡಲಿದೆ ಎಂದು ಹೇಳಿದ್ದರು.

ಜೊತೆಗೆ ಅವರು ಫ್ರಾನ್ಸ್ vs ಅರ್ಜೆಂಟೀನಾ ಫೈನಲ್ ಎಂದೂ ಸಹ ಮೊದಲೇ ಹೇಳಿದ್ದರು. ಬ್ರೆಜಿಲ್ ತಂಡವು ಗುಂಪು ಹಂತದಲ್ಲಿ ಉತ್ತಮವಾಗಿ ಆಡಿದರೂ, ನಾಕೌಟ್ ಹಂತದಲ್ಲಿ ಸೆಮಿಫೈನಲ್ ತಲುಪಲು ಸಾಧ್ಯವಿಲ್ಲ ಎಂದು ಸಲೋಮಿ ಹೇಳಿದ್ದರು. ಜತೆಗೆ ಬೆಲ್ಜಿಯಂ, ಕ್ರೊವೇಷಿಯಾ, ಜರ್ಮನಿ ಫಲಿತಾಂಶ ಚೆನ್ನಾಗಿರುವುದಿಲ್ಲ ಅಂತಾ ಸಲೋಮಿ ಹೇಳಿದ್ದರು.


ಆದರೆ, ವಿಶ್ವಕಪ್‌ನಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳು ಫೈನಲ್‌ಗೆ ಬರಲಿವೆ ಎಂದು ಮೊದಲೇ ಘೋಷಿಸಿದ್ದರೂ ಅಥೋಸ್ ಸಲೋಮಿ ಚಾಂಪಿಯನ್ ಯಾರು ಎಂದು ಘೋಷಿಸಿರಲಿಲ್ಲ. ಈಗ ಅವರು 2022 ರ ಕತಾರ್ ವಿಶ್ವಕಪ್ ಟ್ರೋಫಿಯನ್ನು ಯಾವ ದೇಶ ಗೆಲ್ಲಲಿದೆ ಎಂದು ಹೇಳಿದ್ದಾರೆ.

ಮೆಸ್ಸಿ ಕೊನೆಯ ವಿಶ್ವಕಪ್‌ನಲ್ಲಿ ಕಣ್ಣೀರಿನೊಂದಿಗೆ ನಿರ್ಗಮಿಸಲಿದ್ದಾರೆ. ತಾನು ಅರ್ಜೆಂಟೀನಾ ಬೆಂಬಲಿಗನಾಗಿದ್ದರೂ, ಫೈನಲ್‌ನಲ್ಲಿ ಫ್ರಾನ್ಸ್ ಗೆಲ್ಲುವ ಸಾಧ್ಯತೆ ತುಂಬಾ ಹೆಚ್ಚಾಗಿದೆ ಎಂದು ಸಲೋಮಿ ಹೇಳಿದ್ದಾರೆ.ಸಲೋಮಿ ಲೆಕ್ಕಾಚಾರದ ಪ್ರಕಾರ ವಿಶ್ವಕಪ್ ಫೈನಲ್ ನಲ್ಲಿ ಉಭಯ ತಂಡಗಳ ನಡುವೆ ಕಠಿಣ ಹೋರಾಟ ನಡೆಯಬಹುದು.

ಪಂದ್ಯದ ಹಣೆಬರಹವನ್ನು ಟೈ ಬ್ರೇಕರ್‌ನಲ್ಲಿ ನಿರ್ಧರಿಸಬಹುದು. ಆದರೆ ಫ್ರಾನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚು. ಫ್ರಾನ್ಸ್ ಸತತ ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲಲಿದೆ ಎಂದಿದ್ದಾರೆ.

ಹಾಗೆಯೇ ಅಂದು ತಿಥಿ-ನಕ್ಷತ್ರದ ಸ್ಥಾನ ಬದಲಾದರೆ ಅರ್ಜೆಂಟೀನಾ ಕೂಡ ಗೆಲ್ಲಬಹುದು. ಆದರೆ, ಅವಕಾಶ ಕಡಿಮೆ ಎಂದು ಸಲೋಮಿ ಹೇಳಿದ್ದಾರೆ

LATEST NEWS

ವರದಿ ಪಡೆಯದೆ ತಮಿಳು ನಾಡಿಗೆ ನೀರು ಬಿಟ್ಟದ್ದೇಕೆ..? – ಶೋಭಾ ಕರಂದ್ಲಾಜೆ

Published

on

ಉಡುಪಿ: ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆಯ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಬರಗಾಲ ಇದೆ.

ವಾಡಿಕೆಯ ಮಳೆಯಾಗಿಲ್ಲ. ನಮ್ಮ ಬೆಂಗಳೂರು ಕರ್ನಾಟಕದ ಹೃದಯ ಅಲ್ಲಿಗೆ ನೀರಿನ ಸಮಸ್ಯೆ ಎದುರಾಗಿದೆ.

ಕಾವೇರಿ ಕಬಿನಿ ಡ್ಯಾಮ್ ಗಳಲ್ಲಿ ನೀರಿಲ್ಲ. ಕಳೆದ ಬಾರಿಗೆ ಹೋಲಿಸಿದ್ರೆ ಅರ್ಧದಷ್ಟು ನೀರು ಇಲ್ಲ.

ನಮಗೆ ಕುಡಿಯಲು 35 ಟಿಎಂಸಿ ನೀರುಬೇಕು. ಇಂದಿನ ಬೆಂಗಳೂರಿನ ಜನಸಂಖ್ಯೆ ಗೆ ಆಧಾರಿತ ಲೆಕ್ಕಾಚಾರ ಮಾಡಿಲ್ಲ.

ವಿಪಕ್ಷ, ಸಂಘಟನೆ ಜೊತೆ ಚರ್ಚೆ ಮಾಡಿಲ್ಲ. ಅಧಿಕೃತ ವರದಿ ಪಡೆಯದೆ 15 ಸಾವಿರ ಕ್ಯೂ ಸೆಕ್ಸ್ ನೀರು ಯಾಕೆ ಬಿಟ್ರಿ….? ಎಂದು ರಾಜ್ಯ ಸರಕಾರವನ್ನು ಸಚಿವೆ ತರಾಟೆಗೆ ತೆಗೆದುಕೊಂಡರು.

Continue Reading

DAKSHINA KANNADA

Mangaluru: ಧಕ್ಕೆಯಲ್ಲಿ ಬ್ಯಾನರ್ ವಿವಾದ – ಮೀನುಗಾರರ ಸಂಘದಿಂದ ಸ್ಪಷ್ಟನೆ

Published

on

ಮಂಗಳೂರು: ಮೀನುಗಾರಿಕಾ ಧಕ್ಕೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಈದ್ ಮಿಲಾದ್ ಬ್ಯಾನರ್ ಕುರಿತು ಹಸಿ ಮೀನುಗಾರರ ಸಂಘ ಸ್ಪಷ್ಟನೆ ನೀಡಿದೆ.

ಹಸಿ ಮೀನು ವ್ಯಾಪಾರಸ್ಥರ ಸಂಘ, ಸದಸ್ಯರು ಅವರರವರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಬ್ಬ ದಿನಗಳಲ್ಲಿ ತಮ್ಮ ವ್ಯವಹಾರಕ್ಕೆ ಖಡ್ಡಾಯ ರಜೆ ಹೊಂದುವ ಪೂರ್ವ ನಿರ್ಧರಿತ ಪದ್ಧತಿಯಂತೆ ಈ ಬಾರಿ ಬರುವ ಸೆ. 28 ರಂದು ಮುಸ್ಲಿಮ್ ಭಾಂದವರ ಹಬ್ಬವಾದ ಈದ್ ಮಿಲಾದ್ ಪ್ರಯುಕ್ತ ಅವರು ಮತ್ತು ಇತರ ಧರ್ಮ ಭಾಂದವರು ಖಡ್ಡಾಯ ರಜೆ ಪಾಲಿಸುವ ಬಗ್ಗೆ ವಿವಿಧ ಸಂಘಗಳಲ್ಲಿ ನಿರ್ಣಯಿಸಿದಂತೆ ಪ್ರಕಟಣೆ ಫಲಕ ಅಳವಡಿಸಲಾಗಿರುತ್ತದೆ.

ಅದೇ ರೀತಿಯಲ್ಲಿ ವರ್ಷದ ಇತರ ದಿನಗಳಲ್ಲಿ ಇತರ ಹಬ್ಬಗಳಾದ ಬಾರ್ಕೂರು ಪೂಜೆ,ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್ ಉಲ್ ಫಿತರ್, ಬಕ್ರೀದ್, ಈದ್ ಮಿಲಾದ್, ಗುಡ್ ಫ್ರೈಡೇ ಮತ್ತು ಕ್ರಿಸ್ಮಸ್ ಎಂಬಿತ್ಯಾದಿ ಶುಭ ದಿನಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಖಡ್ಡಾಯ ರಜೆ ಹೊಂದಿ ಆ ದಿನದ ಮಟ್ಟಿಗೆ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತ ಗೊಳಿಸುವುದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದಿರುತ್ತದೆ.

ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಶಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಎಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಿದ್ದಾರೆ.

ಆದರೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಸಂಘದ ಮೀಲಾದ್ ರಜೆಯ ಪ್ರಕಟನಾ ಫಲಕ ( ಫ್ಲೆಕ್ಸ್ ) ದ ಬಗ್ಗೆ ಕೆಲವರು ತಪ್ಪು ಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ಖೇದಕರ.

ಇಂತಹ ತಪ್ಪು ಮಾಹಿತಿ ಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದು ಮಂಗಳೂರು ದಕ್ಕೆ ಹಸಿಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

DAKSHINA KANNADA

Ullala: ರೈಲಿನಡಿಗೆ ತಲೆಯಿಟ್ಟು ಅವಿವಾಹಿತ ವ್ಯಕ್ತಿ ಜೀವಾಂತ್ಯ..!

Published

on

ಉಳ್ಳಾಲ: ವ್ಯಕ್ತಿಯೊಬ್ಬರು ರೈಲಿನಡಿಗೆ ತಲೆಯಿಟ್ಟು ಜೀವಾಂತ್ಯ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ನಗರದ ಕೊಂಚಾಡಿಯ ನಿವಾಸಿಯಾಗಿರುವ  ಪ್ರಶಾಂತ್ (44)  ಎಂದು ಗುರುತಿಸಲಾಗಿದೆ.

ಸೆ.24 ರಂದು ಸಂಜೆ ಮನೆಯಿಂದ ಹೊರಟ ಪ್ರಶಾಂತ್ ಅವರು ಇಂದು ಬೆಳಗ್ಗೆ ರೈಲ್ವೇ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಆಕ್ಟಿವಾ ಸ್ಕೂಟರನ್ನು ಉಳ್ಳಾಲದ ರೈಲ್ವೇ ನಿಲ್ದಾಣದಲ್ಲಿರಿಸಿ, ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ಹೋಗಿ ರೈಲ್ವೇ ಹಳಿಯಲ್ಲಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವಿವಾಹಿತರಾಗಿದ್ದ ಪ್ರಶಾಂತ್ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ.

ಅವರು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ವೈದ್ಯಕೀಯ ವರದಿಯಿಂದ ಲಭ್ಯವಾಗಿದೆ.

ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಎಎಸ್ ಐ ಮಧುಚಂದ್ರ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

LATEST NEWS

Trending