ಎಟಿಎಂನಲ್ಲಿ ಬಾಕಿಯಾಗಿದ್ದ ಹಣವನ್ನು ಪೋಲೀಸ್ ಇಲಾಖೆಯ ಸಹಕಾರದಿಂದ ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿ ಮಾನವೀಯತೆಯನ್ನು ಬಂಟ್ವಾಳ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಸೀತಾರಾಮ ಮೆರೆದಿದ್ದಾರೆ.
ಬಂಟ್ವಾಳ : ಎಟಿಎಂನಲ್ಲಿ ಬಾಕಿಯಾಗಿದ್ದ ಹಣವನ್ನು ಪೋಲೀಸ್ ಇಲಾಖೆಯ ಸಹಕಾರದಿಂದ ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿ ಮಾನವೀಯತೆಯನ್ನು ಬಂಟ್ವಾಳ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಸೀತಾರಾಮ ಮೆರೆದಿದ್ದಾರೆ.
ಸೀತಾರಾಮರ ಪ್ರಮಾಣಿಕತೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಫೆಬ್ರವರಿ 27ರಂದು ಬಿ ಸಿ ರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ದೊರೆತ 9000 ರೂಪಾಯಿ ನಗದನ್ನು ಇಂದು ವಾರೀಸುದಾರರಿಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಲೀಸರ ಸಮಕ್ಷಮ ಹಸ್ತಾಂತರಿಸಲಾಯಿತು.
ಫೆಬ್ರವರಿ 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ಹಣ ಡ್ರಾ ಮಾಡಲೆಂದು ತೆರಳಿದ್ದ ತಾಲೂಕು ಕಚೇರಿ ಸಿಬ್ಬಂದಿ ಸೀತಾರಾಮ ಅವರು ಎಟಿಎಮ್ ನಲ್ಲೇ ಬಾಕಿಯಾಗಿದ್ದ 9000 ನಗದು ಹಣವನ್ನು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.
ಬಂಟ್ವಾಳ ಪೋಲೀಸರು ಕೆನರಾ ಬ್ಯಾಂಕ್ ಸಹಾಯ ಪಡೆದು ವಾರೀಸುದಾರನ್ನು ಪತ್ತೆ ಮಾಡಿದಾಗ ಹಣಕಳಕೊಂಡವರು ಮುಕ್ತಬಾಯಿ ಎಂದು ತಿಳಿದು ಅವರನ್ನು ಠಾಣೆಗೆ ಕರೆದು ಹಸ್ತಾಂತರ ಮಾಡಲಾಯಿತು.
ಸೀತಾರಾಮರ ಪ್ರಮಾಣಿಕತೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.