ಗಲ್ಫ್ ರಾಷ್ಟ್ರಗಳಲ್ಲಿದ್ದ ಕರಾವಳಿ ಕನ್ನಡಿಗರು ತವರಿಗೆ ಆಗಮಿಸಲು ದಿನಗಣನೆ ಆರಂಭ
ಗಲ್ಫ್ ರಾಷ್ಟ್ರಗಳಲ್ಲಿದ್ದ ಕರಾವಳಿ ಕನ್ನಡಿಗರು ತವರಿಗೆ ಆಗಮಿಸಲು ದಿನಗಣನೆ ಆರಂಭ
ಮಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿದ್ದ ಕರಾವಳಿ ಕನ್ನಡಿಗರು ತವರಿಗೆ ಆಗಮಿಸಲು ದಿನಗಣನೆ ಆರಂಭವಾಗಿದೆ.
ವಿದೇಶಗಳಿಂದ ದಕ್ಷಿಣಕನ್ನಡಕ್ಕೆ ಬರುವವರನ್ನು ಕ್ವಾರಂಟೈನ್ ನಲ್ಲಿ ಇರಿಸಲು ಸಕಲ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ಈ ಕುರಿತಂತೆ ನಮ್ಮಕುಡ್ಲ ವಾಹಿನಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ವಿದೇಶಗಳಲ್ಲಿರುವ ಕರಾವಳಿಯ ಜನರು ಮೇ 12 ರಿಂದ ಜಿಲ್ಲೆಗೆ ಆಗಮಿಸಲಿದ್ದಾರೆ.
ಜಿಲ್ಲೆಗೆ ಒಟ್ಟು 177 ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಷ್ಟು ಮಂದಿ ಇದ್ದಾರೆ ಹಾಗೂ ಇತರ ಜಿಲ್ಲೆಗಳ ಎಷ್ಟು ಜನ ಇದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಮೇ 12 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ಕೇಂದ್ರದ ಮಾರ್ಗಸೂಚಿ ಅನ್ವಯ ಸ್ಕ್ರೀನಿಂಗ್ ಮಾಡಲಾಗುವುದು.
ಈ ಸ್ಕ್ರೀನಿಂಗ್ ಸಂದರ್ಭ ಕೊರೊನಾ ಸೊಂಕಿನ ಲಕ್ಷಣಗಳು ಕಂಡು ಬಂದರೆ ಅವರನ್ನು ಕೂಡಲೇ ಕೊವಿಡ್ ಆಸ್ಪತ್ರೆಯಲ್ಲಿ ಹೆಚ್ಚಿನ ಪರಿಕ್ಷೆಗಳಿಗೆ ಆಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲಾಗುವುದು.
ಇನ್ನು ಯಾವುದೇ ರೀತಿಯ ಲಕ್ಷಣ ಕಂಡು ಬರದ ಪ್ರಯಾಣಿಕರನ್ನು 14 ದಿನಗಳ ಸರಕಾರಿ ಕ್ವಾರಂಟೈನ್ ಮಾಡಲಾಗುವುದು ಎಂದರು.
ಈಗಾಗಲೇ ಮಂಗಳೂರು ನಗರದಲ್ಲಿ ಕ್ವಾರಂಟೈನ್ ಗಾಗಿ ಹೊಟೇಲ್ ಮತ್ತು ಲಾಡ್ಜ್ ಗಳನ್ನು ಗುರುತಿಸಲಾಗಿದ್ದು, ಕೇಂದ್ರ ಸರಕಾರ ಆದೇಶ ಅನ್ವಯ ಇದು ಪೇಯ್ಡ್ ಕ್ವಾರಂಟೈನ್ ಆಗಿವೆ.
ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಜಿಲ್ಲಾಡಳಿತ ಗುರುತಿಸಿರುವ ಲಾಡ್ಜ್ ಅಥವಾ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆಗಬಹುದು ಎಂದು ತಿಳಿಸಿದರು.
ಇನ್ನು 14 ದಿನಗಳ ಕ್ವಾರಂಟೈನ್ ನಲ್ಲಿ ಪ್ರತಿದಿನ ಜಿಲ್ಲಾಡಳಿತದಿಂದ ಪ್ರತಿಯೊಬ್ಬ ಪ್ರಯಾಣಿಕನ ಆರೋಗ್ಯ ಮಾಹಿತಿಯನ್ನು ಪಡೆಯಲಾಗುತ್ತದೆ.
ಅಲ್ಲದೆ 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಎರಡು ಭಾರಿ ಗಂಟಲು ದ್ರವ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
DAKSHINA KANNADA
ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ ಮಾಡುವುದು ಹೀಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ. ರಾತ್ರಿಯ ಹೊತ್ತು ಚಿಕ್ಕ ಮಕ್ಕಳು ಅಪ್ಪ ಅಮ್ಮನ ಒಟ್ಟಿಗೆ ಮಲಗುತ್ತಾರೆ. ಅದೇ ರೀತಿ ಗಂಡ ಹೆಂಡತಿಯರು ಒಟ್ಟಿಗೆ ಮಲಗುವುದು ಸರ್ವೇ ಸಾಮಾನ್ಯ.
ಮದುವೆಯ ನಂತರ ಸಾಮಾನ್ಯವಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗುತ್ತಾರೆ. ಇದು ಸಮಾಜದ ಸಾಮಾನ್ಯ ನಿಯಮ ಸಹ ಹೌದು ಎನ್ನಬಹುದು. ಮದುವೆಯ ನಂತರ ಪತಿ-ಪತ್ನಿಯರ ನಡುವಿನ ಚರ್ಚೆಗಳು, ಮಾತುಗಳು ಸಾಮಾನ್ಯವಾಗಿ ಮಲಗುವ ಸಮಯದಲ್ಲೇ ಆಗುತ್ತದೆ. ಇನ್ನು ಪತಿ-ಪತ್ನಿಯರು ಪ್ರತ್ಯೇಕವಾಗಿ ಮಲಗುವುದರಿಂದಲೂ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.
ಮೊದಲಿಗೆ, ಈ ವಿಷಯದ ಬಗ್ಗೆ ಮಾಡಿದ ಎಲ್ಲಾ ಸಂಶೋಧನೆಗಳು ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಮಲಗುವುದು ತಪ್ಪಲ್ಲ ಎಂದು ತೋರಿಸುತ್ತದೆ ಮತ್ತು ಪ್ರತಿ ದಂಪತಿಗಳು ತಮ್ಮದೇ ಆದ ನಿಯಮಗಳನ್ನು ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಆದರೆ ಅನೇಕ ಬಾರಿ ಜನರು ಇಂತಹ ಮಾತುಗಳನ್ನು ಕೇಳಲು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಈ ದಂಪತಿಗಳ ಜೀವನದಲ್ಲಿ ಏನೋ ಸರಿಯಾಗಿಲ್ಲ ಎಂದು ಭಾವಿಸುತ್ತಾರೆ.
ಆದರೆ ಅಷ್ಟೇ ಅಲ್ಲ, ಕೆಲವೊಮ್ಮೆ ಬೇರೆ ಬೇರೆ ಕೋಣೆಗಳಲ್ಲಿ ದಂಪತಿಗಳಿಗೆ ಮಲಗುವುದರಿಂದ ದಂಪತಿಗಳಿಗೆನೇ ಹೆಚ್ಚು ಅನುಕೂಲಕರವಾಗಿರುತ್ತದೆ. ಸಂಶೋಧನೆಯ ಪ್ರಕಾರ ನೀವು ಪ್ರತ್ಯೇಕವಾಗಿ ಏಕೆ ಮಲಗುವುದರಿಂದ ಯಾವುದೇ ನಿದ್ರಾ ಭಂಗವನ್ನು ಉಂಟುಮಾಡುವುದಿಲ್ಲ. ಇದರಿಂದ ಸುಖಕರವಾಗಿ ನಿದ್ರೆ ಮಾಡಬಹುದು.
ರಾತ್ರಿಯಲ್ಲಿ ಗೊರಕೆ ಹೊಡೆಯುವುದು, ಒದೆಯುವುದು, ದೇಹದ ಉಷ್ಣತೆಯ ಬದಲಾವಣೆ ವಿಭಿನ್ನವಾಗಿರುತ್ತದೆ. ನೀವು ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗಲು ಪ್ರಯತ್ನಿಸಿದರೆ ನಿಮ್ಮ ದೇಹವು ಅರಾಮವಾಗಲು ಸಹಾಯಕವಾಗುತ್ತದೆ. ಸ್ವಲ್ಪ ಸಮಯದ ಅಂತರವು ನಿಮ್ಮ ಸಂಬಂಧವನ್ನು ಹೆಚ್ಚು ಉತ್ತಮಗೊಳಿಸುತ್ತದೆ. ನಿಮಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ.
ಜೊತೆಗೆ ಕೆಲವೊಮ್ಮೆ ದಂಪತಿಗಳ ನಡುವೆ ಮನಸ್ಥಾಪವಾದಾಗ ಈ ರೀತಿ ಕೆಲ ದಿನ ದೂರ ಮಲಗಿದರೆ ಆ ವಿರಹ ವೇದನೆಯಿಂದ ಕೋಪವೂ ತಣ್ಣಗಾಗುತ್ತದೆ. ದೈಹಿಕ ಅನ್ಯೋನ್ಯತೆ ಮತ್ತು ಭಾವನಾತ್ಮಕ ಪ್ರೀತಿಯ ಅವಶ್ಯಕತೆ ಯಾವಾಗಲೂ ಇರುತ್ತದೆ ಮತ್ತು ಆದ್ದರಿಂದ ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗುವುದು ಉತ್ತಮ. ಜೊತೆಗೆ ಕೆಲವೊಮ್ಮೆ ಜ್ವರ ರೀತಿಯ ಅನಾರೋಗ್ಯವಿದ್ದಾಗ ದೂರ ಮಲಗಿದರೆ ಒಬ್ಬರಿಂದ ಒಬ್ಬರಿಗೆ ಅದು ಹರಡುವುದಿಲ್ಲ.
ಇದನ್ನೂ ಓದಿ ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ
ಕೆಲವೊಮ್ಮೆ ದಂಪತಿಗಳಿಗೆ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಅವರ ಲೈಂಗಿಕ ಜೀವನಕ್ಕೆ ಒಳ್ಳೆಯದು ಎಂದು ಸಂಶೋಧನೆ ಸೂಚಿಸುತ್ತದೆ. ಇದರಿಂದ ದಣಿವು ಆಗುವುದು ಕಡಿಮೆ ಆಗುತ್ತದೆ. ಪರಿಣಾಮವಾಗಿ, ಲೈಂಗಿಕ ಜೀವನವನ್ನು ಸುಧಾರಿಸಬಹುದು.
LATEST NEWS
ಹನುಮಂತ ತನ್ನ ಹೆಂಡತಿಯೊಂದಿಗೆ ಕುಳಿತಿರುವ ವಿಶಿಷ್ಟ ದೇವಾಲಯ ಎಲ್ಲಿದೆ ಗೊತ್ತಾ!?
ಹನುಮಂತ ವಿಶ್ವದ ಅನೇಕ ಭಾಗಗಳಲ್ಲಿ ಆರಾಧಿಸಲ್ಪಡುವ ಶಕ್ತಿ. ಅಂಜನೀಪುತ್ರ, ಕೇಸರಿನಂದನ, ಮಾರುತಿ, ವಾಯು ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಭಗವಂತ. ಆತನನ್ನು ನಂಬಿದರೆ ಸಂಕಷ್ಟ ದೂರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರೊಂದಿಗೆ ಮತ್ತೊಂದು ವಿಚಾರವಿದೆ. ಅದು, ಹನುಮಂತ ಬ್ರಹ್ಮಚಾರಿ ಎಂಬುದು. ಅಂದರೆ, ಆತನಿಗೆ ವಿವಾಹವಾಗಿಲ್ಲ ಎಂದು ಅರ್ಥ. ಆದರೆ, ಹನುಮನು ಕೂಡ ವಿವಾಹವಾಗಿದ್ದ ಎಂದು ಸಾರುವ ದೇವಾಲಯ ಒಂದಿದೆ.
ಎಲ್ಲಿದೆ ದೇವಾಲಯ?
ರಾಮಾಯಣದ ಪ್ರಕಾರ, ಈ ಭೂಮಿಯ ಮೇಲೆ ಅಮರತ್ವ ಪಡೆದ ಏಳು ಋಷಿಗಳಲ್ಲಿ ಭಜರಂಗ ಬಲಿಯೂ ಒಬ್ಬ. ಇಡೀ ವಿಶ್ವವು ಹನುಮಂತನನ್ನು ಬಾಲ ಬ್ರಹ್ಮಚಾರಿ ಎಂದು ಹೇಳುತ್ತದೆ. ಆದರೆ ಹನುಮನು ಕೂಡ ವಿವಾಹವಾಗಿದ್ದಾನೆ ಎನ್ನುತ್ತದೆ ಈ ದೇಗುಲ.
ಆಂಜನೇಯನಿಗೆ ವಿವಾಹವಾಗಿತ್ತು ಎಂದು ಹೇಳುವ ದೇಗುಲ ತೆಲಂಗಾಣದಲ್ಲಿದೆ. ಹೈದರಾಬಾದ್ ನಿಂದ 220 ಕಿ.ಮೀ ದೂರದಲ್ಲಿದೆ ಈ ದೇವಸ್ಥಾನ. ಖಮ್ಮಮ್ ಜಿಲ್ಲೆಯಲ್ಲಿರುವ ದೇವಸ್ಥಾನದಲ್ಲಿ ಹನುಮಂತ ಮತ್ತು ಪತ್ನಿ ಸುವರ್ಚಲಾ ದೇವಿಯ ದೇವಾಲಯವಿದೆ.
ಇದು ಪ್ರಾಚೀನ ಮಂದಿರವಾಗಿದೆ. ಇಲ್ಲಿ ಹನುಮಂತ ಮತ್ತು ಅವನ ಪತ್ನಿಯ ವಿಗ್ರಹವಿದೆ. ಈ ದೇವಾಲಯಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡಲ್ಲಿ ವೈವಾಹಿಕ ಸಮಸ್ಯೆಗಳು ಬಗೆ ಹರಿಯಲಿವೆ ಎಂದು ನಂಬಲಾಗಿದೆ.
ಇದನ್ನೂ ಓದಿ : ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?
ಭಜರಂಗಿ ಮದುವೆ ಹಿಂದಿನ ಕಥೆ ಏನು?
ಸೂರ್ಯ ದೇವರು ಆಂಜನೇಯನಿಗೆ ಮಾರ್ಗದರ್ಶಕರಾಗಿದ್ದರು. ಆಂಜನೇಯ ಸೂರ್ಯ ದೇವರಿಂದ ಒಂಬತ್ತು ವಿಷಯಗಳನ್ನು ಕಲಿಯಬೇಕಾಗಿತ್ತು. ಮೊದಲ ಐದು ವಿದ್ಯೆಗಳನ್ನು ಕಲಿಸಿದ ನಂತರ ಸೂರ್ಯ ದೇವರು ಹನುಮಂತನನ್ನು ಮದುವೆಯಾಗಲು ವಿನಂತಿಸಿದರು.
ಮದುವೆಯ ನಂತರವಷ್ಟೇ ಭಜರಂಗಿ ಮುಂದಿನ ನಾಲ್ಕು ವಿದ್ಯೆಗಳನ್ನು ಅವನಿಗೆ ಕಲಿಯಬಹುದಾಗಿತ್ತು. ಏಕೆಂದರೆ ಅವುಗಳನ್ನು ವಿವಾಹಿತ ವ್ಯಕ್ತಿಗಳಿಗೆ ಮಾತ್ರ ಕಲಿಸಬೇಕು ಎಂಬ ನಿಯಮವಿತ್ತು. ಆಂಜನೇಯ ಸ್ವಾಮಿಯು ಸೂರ್ಯ ದೇವರ ಸೂಚನೆಗಳಿಗೆ ಅನುಗುಣವಾಗಿ ಮದುವೆಯಾಗಲು ನಿರ್ಧರಿಸಿದರು. ಸೂರ್ಯ ದೇವರೇ ಆಂಜನೇಯನಿಗಾಗಿ ವಧುವನ್ನು ಅನ್ವೇಷಿಸಿದರು. ಅವರು ಅನ್ವೇಷಿಸಿದ ವಧು ಬೇರೆ ಯಾರು ಅಲ್ಲ, ಸ್ವತಃ ತಮ್ಮ ಪುತ್ರಿಯ ಹೆಸರನ್ನೇ ಪ್ರಸ್ತಾಪಿಸಿದರು.
ಇದನ್ನೂ ಓದಿ : ಕಾಗೆ ನಿಜಕ್ಕೂ ನಮ್ಮ ಪಿತೃನಾ..?
ಸೂರ್ಯದೇವರ ಅತ್ಯಂತ ಪ್ರತಿಭಾವಂತ ಮಗಳಾದ ಸುವರ್ಚಲಾದೇವಿ ಮತ್ತು ಆಂಜನೇಯ ಸ್ವಾಮಿ ವಿವಾಹವಾದರು. ಇತ್ತ ಮದುವೆಯ ನಂತರ ಆಂಜನೇಯ ಉಳಿದ ನಾಲ್ಕು ವಿದ್ಯೆಗಳನ್ನು ಕಲಿತರೆ ಸುವರ್ಚಲಾ ದೇವಿ ಮದುವೆಯ ನಂತರ ತೀವ್ರವಾದ ತಪಸ್ಸನ್ನು ಆಚರಿಸಿದರು. ಹೀಗಾಗಿ ಮದುವೆಯಾದರೂ ಹನುಮಂತ ಬ್ರಹ್ಮಚರ್ಯವನ್ನು ಬಿಡಲಿಲ್ಲ ಎಂಬ ನಂಬಿಕೆಯಿದೆ.
LATEST NEWS
ಏನಿದು ‘ವಿಮಲ್ ಪಾನ್ ಮಸಾಲಾ ಐಸ್ ಕ್ರೀಮ್’..! ಜನರು ಉಗಳಬೇಕೋ, ನುಂಗಬೇಕಾ ಎಂದು ಪ್ರಶ್ನೆ ಮಾಡಿದ್ಯಾಕೆ?
ಇತ್ತೀಚಿನ ದಿನಗಳಲ್ಲಿ ಫುಡ್ಗಳಲ್ಲಿ ಎಕ್ಸ್ಪ ರಿಮೆಂಟ್ ಮಾಡೋದು ಜಾಸ್ತಿ ಆಗಿದೆ. ಹಿಂದೆಲ್ಲ ಫುಡ್ ಅಂದ್ರೆ ಅದು ರುಚಿಕರವಾಗಿ ಸ್ವಾದಭರಿತವಾಗಿ ಇರುತ್ತಿತ್ತು. ಜೊತೆಗೆ ಆರೋಗ್ಯಕರವಾಗಿಯೂ ಇರುತ್ತಿತ್ತು. ಆದರೆ ಈಗೀಗ ಫುಡ್ಗಳ ಎಕ್ಸ್ಪ ರಿಮೆಂಟ್ಗಳಿಂದಾಗಿ ಮನಷ್ಯನ ಆರೋಗ್ಯವೂ ಕೈ ತಪ್ಪಿ ಹೋಗುತ್ತಿದೆ. ಲೈಕ್ಸ್, ಕಮೆಂಟ್ಗಳ ಮೋಜಿಗೆ ಬಿದ್ದ ಜನರು ಸಿಕ್ಕ ಸಿಕ್ಕ ಒಂದಕ್ಕೊಂದು ಹೊಂದಾಣಿಕೆಯೇ ಇಲ್ಲದ ಐಟಂ ಗಳಿಂದ ಆಹಾರ ತಯಾರಿಸುತ್ತಿದ್ದಾರೆ.
ಇದೀಗ ವಿಮ್ ಪಾನ್ ಮಸಾಲಾ ಮಿಶ್ರಿತ ಐಸ್ಕ್ರೀಂ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪಾನ್ ಮಸಾಲಾ ಸಹಿತವಾದ ಐಸ್ಕ್ರೀಮ ತಯಾರಿಸಿದ ರೀತಿ ಹಾಗೂ ಅದನ್ನು ಡೆಕೋರೇಟ್ ಮಾಡಿದ ರೀತಿಗೆ ಜನ ಫಿದಾ ಆಗಿದ್ದಾರೆ.
ಮುಂದೆ ಓದಿ..; ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?
ಬಾಲಿವುಡ್ ಸ್ಟಾರ್ ಅಜಯ್ ದೇವಗನ್, ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರು ಪ್ರಚಾರ ಮಾಡ್ತಾ ಇರೋ ವಿಮಲ್ ಎಲೈಚಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಬೋಲೋ ಜುಬಾನ್ ಕೇಸರ್ ಕಿ ಅಂತ ಹೇಳೋ ಈ ಜಾಹಿರಾತು ಸಾಕಷ್ಟು ಫೇಮಸ್ ಆಗಿದೆ. ಆದ್ರೆ ಇದೀಗ ಇದೇ ವಿಮಲ್ ಪಾನ್ ಮಸಾಲಾ ಐಸ್ ಕ್ರೀಮ್ ಜೊತೆಗೆ ಹೊಸ ರೂಪ ಪಡೆದುಕೊಂಡಿದೆ. ಈ ರೀತಿ ವಿಮಲ್ ಪಾನ್ ಮಸಾಲಾ ಜೊತೆಗೆ ಐಸ್ಕ್ರೀಂ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದ್ದು, ಜನರು ಈ ವೀಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಿಮಲ್ ಪಾನ್ ಮಸಾಲಾ ಬಳಸಿ ವಿಶೇಷ ಐಸ್ ಕ್ರೀಂ ತಯಾರಿಸಲಾಗಿದೆ. ಮೊದಲಿಗೆ ಐಸ್ಕ್ರೀಮ್ ಪ್ಲೇಟ್ ಮೇಲೆ ವಿಮಲ್ ಪಾನ್ ಮಸಾಲಾ ಹಾಕಿ ನಂತರ ಅದರ ಮೇಲೆ ಐಸ್ಕ್ರೀಂ ಹಾಕುತ್ತಾರೆ. ಬಳಿಕ ಅವೆರಡರ ಮಿಶ್ರಣ ಮಾಡಿ ರೋಲ್ ಮಾಡಿ ಡೆಕೋರೇಟ್ ಮಾಡ್ತಾರೆ. ಇದಕ್ಕೆ ಕೆಲವೊಂದು ಸಾಸ್ಗಳನ್ನೂ ಕೂಡಾ ಬಳಸಿ ಚಾಕೋಲೇಟ್ ಚಿಪ್ಸ್ ಮುಂತಾದವುಗಳನ್ನು ಸೇರಿಸಿಕೊಂಡಿದ್ದಾರೆ. ಒಟ್ಟಾರೆ ಹೇಳ್ಬೇಕಂದ್ರೆ ಕಲರ್ ಫುಲ್ ಆಗಿ ರೆಡಿಯಾದ ಪಾನ್ ಐಸ್ ಕ್ರೀಂ ನೋಡಿ ಜನ ಅಂತು ಫಿದಾ ಆಗಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬರೋಬ್ಬರಿ 23ಮಿಲಿ ಜನರು ವೀಕ್ಷಕಣೆ ಮಾಡಿದ್ದು, ಪರ ವಿರೋಧ ಚರ್ಚೆಗಳಾಗುತ್ತಿದೆ. ಕೆಲವರು ಈ ಐಸ್ಕ್ರೀಂ ಅನ್ನು ಅಜಯ್ ದೇವಗನ್ಗೆ ನೀಡಿ ಎಂದರೆ ಇನ್ನು ಕೆಲವರು ಈ ಐಸ್ಕ್ರೀಂ ತಿಂದು ಉಗುಳಬೇಕಾ.. ನುಂಗಬೇಕಾ ಎಂದು ಪ್ರಶ್ನೆ ಮಾಡ್ತಾ ಇದ್ದಾರೆ. ಈ ಹಿಂದೆ ಮ್ಯಾಗಿ ಹಾಗೂ ಐಸ್ಕ್ರೀಂ ಮಿಕ್ಸ್ ಮಾಡಿ ರೋಲ್ ಮಾಡಿದ್ದು ಅದನ್ನು ಚಪ್ಪರಿಸಿಕೊಂಡು ತಿಂದ ವೀಡಿಯೊ ವೈರಲ್ ಆಗಿತ್ತು.
ಅದೇನೆ ಆಗಲಿ ಆಹಾರ ಯಾವತ್ತು ನಮ್ಮ ದೇಹಕ್ಕೆ ಆರೋಗ್ಯಕರವಾಗಿರಬೇಕೆ ಹೊರತು ಅನಾರೋಗ್ಯಕ್ಕೆ ತುತ್ತಾಗುವಂತೆ ಇರಬಾರದು.
- DAKSHINA KANNADA6 days ago
ಮಂಗಳೂರು : ಬೈಕ್ಗೆ ಕಾರು ಡಿಕ್ಕಿ; ಇಹಲೋಕ ತ್ಯಜಿಸಿದ ವಿದ್ಯಾರ್ಥಿ
- DAKSHINA KANNADA6 days ago
ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಂತೆ..! ಏನಿದು ಸೀರೆ ಕ್ಯಾನ್ಸರ್?
- DAKSHINA KANNADA7 days ago
ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!
- DAKSHINA KANNADA7 days ago
ಬಿಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!