Connect with us

LATEST NEWS

ಕುಡುಕನ ಬೇಜವಾಬ್ದಾರಿ ಕೃತ್ಯ; ಒಂದೇ ಕುಟುಂಬದ 6ಜನ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ..!

Published

on

ಮಡಿಕೇರಿ:  ಕುಡುಕನೋರ್ವ  ಮನೆಗೆ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿ 6ಮಂದಿ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಮಡಿಕೇರಿಯ ಪೊನ್ನಂಪೇಟೆ ತಾಲೂಕಿನ ಮುಟಗೇರಿ ಗ್ರಾಮದಲ್ಲಿ ನಡೆದಿದೆ.ಮಡಿಕೇರಿಯ ಪೊನ್ನಂಪೇಟೆಯ ಮುಟಗೇರಿ ‌ಗ್ರಾಮದ ಬೋಜ ಎಂಬಾತ ಮದ್ಯ ಸೇವಿಸಿ ನೆರೆಮನೆಯ ಮಂಜು ಎನ್ನುವವರ ಮನೆಯ ಬಾಗಿಲು ಹಾಕಿ ಅವರ ಮನೆಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಮನೆಯೊಳಗೆ ನಿದ್ದೆ ಹೋಗಿದ್ದವರು ಬೆಂಕಿಗೆ ಆಹುತಿಯಾಗಿದ್ದಾರೆ.

ಒಟ್ಟು ಎಂಟು ಜನರಲ್ಲಿ ಮೂವರು ಸಜೀವ ದಹನವಾಗಿದ್ದು ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

3,6,7ವರ್ಷದ ಮಕ್ಕಳು ಸೇರಿದಂತೆ ಆರು ಜನ ಸಾವನ್ನಪ್ಪಿದ್ದರೆ, ಇಬ್ಬರು ವಯಸ್ಕರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವನ್ನಪ್ಪಿರುವವರು  ಬೇಬಿ(45)  ಸೀತೆ(40) ಪ್ರಕಾಶ್  (7)  ಪ್ರಾರ್ಥನಾ (6)  ವಿಶ್ವಾಸ್ (3)  ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಪಾನಮತ್ತ  ಭೋಜ ಹಾಗೂ ಆತನ ಪತ್ನಿ ನಡುವೆ ಜಗಳವಾಗಿದ್ದು,  ಮಧ್ಯರಾತ್ರಿ ಪಕ್ಕದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಮನೆಯಲ್ಲಿ  ಮಲಗಿದ್ದ 8ಮಂದಿಯಲ್ಲಿ 6ಮಂದಿ ಸಜೀವ ದಹನವಾಗಿದ್ದಾರೆ.

ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

LATEST NEWS

ಮೋದಿ ಹಾಡು ಶೇರ್ ಮಾಡಿ ಎಂದಿದಕ್ಕೆ ಹಿಗ್ಗಾಮುಗ್ಗ ಯುವಕನಿಗೆ ಥಳಿತ..! ಏನಿದು ಪ್ರಕರಣ?

Published

on

ಮೈಸೂರು: ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಹಾಡೊಂದನ್ನು ಶೇರ್ ಮಾಡುವಂತೆ ಹೇಳಿದ್ದಕ್ಕೆ ಅನ್ಯಕೋಮಿನ ಯುವಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.  ಪ್ರಕರಣದ ಕುರಿತು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

rohith

Read More..; ಚುನಾವಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ.. 40 ಮಂದಿಗೆ ಗಾಯ

ಏನಿದು ಪ್ರಕರಣ?

ರೋಹಿತ್ ರಮಣ ಎಂಬ ಯುವಕ ಮೋದಿಗೆ ಸಂಬಂಧಪಟ್ಟ ಹಾಡನ್ನು ಎಲ್ಲೆಡೆ ಶೇರ್ ಮಾಡುತ್ತಿದ್ದರು. ಮೈಸೂರಿನ ಸರಕಾರಿ ಗೆಸ್ಟ್ ಹೌಸ್‌ನಲ್ಲಿ ರೋಹಿತ್ ಕುಳಿತಿದ್ದಾಗ, ಈ ವೇಳೆ ಅಲ್ಲಿಗೆ ಬಂದ ಯುವಕನೊಬ್ಬನಿಗೆ ಮೋದಿಯ ಹಾಡನ್ನು ತೋರಿಸುತ್ತಾನೆ. ಆತ ಸಾಂಗ್ ಬಹಳ ಚೆನ್ನಾಗಿದೆ. ನನ್ನ ಸ್ನೇಹಿತರಿಗೂ ತೋರಿಸು ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ರೋಹಿತ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅನ್ಯಕೋಮಿನ ಯುವಕರ ತಂಡ ರೋಹಿತ್‌ನನ್ನು ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಬಿಯರ್ ಸುರಿದರು. ನನ್ನ ಕೈ ಕೊಯ್ದು ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿಪುರಂ ಪೊಲೀಸ್ ನೇತೃತ್ವದಲ್ಲಿ ಹಲ್ಲೆಗೊಳಗಾದ ಯುವಕ ರೋಹಿತ್‌ನ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಪ್ರಕರಣ ನಜರಬಾದ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ವರ್ಗಾಯಿಸಲಾಗಿದೆ.

 

Continue Reading

LATEST NEWS

ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ

Published

on

ಗದಗ : ಗದಗ ಬೆಟಗೇರಿ ಅವಳಿ ನಗರದಲ್ಲಿ ಒಂದೇ ಕುಟುಂಬದ ನಾಲ್ಕು ಜನರನ್ನು ಬರ್ಬರ ಹ*ತ್ಯೆ ಮಾಡಲಾಗಿದೆ. ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿದಂತೆ ನಾಲ್ವರನ್ನು ರಾತೋರಾತ್ರಿ ಹತ್ಯೆ ಮಾಡಲಾಗಿದೆ. ಗದಗ ನಗರದ ದಾಸರ್ ಓಣಿಯ ನಿವಾಸಿಯಾದ ಪ್ರಕಾಶ ಬಾಕಳೆ ಅವರ ಮನೆಯಲ್ಲಿ ಈ ಹ*ತ್ಯಾಕಾಂಡ ನಡೆದಿದೆ.


ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ 27 ವರ್ಷದ ಕಾರ್ತಿಕ್ ಬಾಕಳೆ, ಸಂಬಂಧಿಕರಾದ 66 ವರ್ಷದ ಪರಶುರಾಮ, 45 ವರ್ಷದ ಲಕ್ಷ್ಮಿ ಹಾಗೂ 16 ವರ್ಷದ ಆಕಾಂಕ್ಷಾ ಎನ್ನುವವರ ಕೊ*ಲೆಯಾಗಿದೆ.

 

ಚರಂಡಿಯಲ್ಲಿ ಮಾರಕಾಸ್ತ್ರ ಪತ್ತೆ :

ಮಧ್ಯರಾತ್ರಿ 1 ಗಂಟೆಯಿಂದ 2 ಗಂಟೆಯ ಅವಧಿಯಲ್ಲಿ ಮನೆಯ ಹಿಂದಿನ ಕಿಟಕಿ ಮೂಲಕ ಎಂಟ್ರಿ ಹೊಡೆದ ದುಷ್ಕರ್ಮಿಗಳು ಮೊದಲು ಒಂದನೇಯ ಮಹಡಿಯಲ್ಲಿ ಮಲಗಿಕೊಂಡಿದ್ದ ಕಾರ್ತಿಕ ಹಾಗೂ ಪರಶುರಾಮ ಅವರನ್ನು ಹ*ತ್ಯೆ ಮಾಡಿದ್ದಾರೆ. ಬಳಿಕ ತಳ ಮಹಡಿಯಲ್ಲಿ ಮಲಗಿಕೊಂಡಿದ್ದ ತಾಯಿ ಲಕ್ಷ್ಮಿ ಹಾಗೂ ಮಗಳು ಆಕಾಂಕ್ಷಾ ಅವರನ್ನು ಮಾರಕಾಸ್ತ್ರಗಳಿಂದ ಕೊ*ಚ್ಚಿ ಕೊ*ಲೆ ಮಾಡಿದ್ದಾರೆ.


ಈ ವೇಳೆ ಪಕ್ಕದ ರೂಮಿನಲ್ಲಿದ್ದ ಪ್ರಕಾಶ ಬಾಕಳೆ ಹಾಗೂ ಸುನಂದಾ ಬಾಕಳೆ ಎಂಬವರು ರೂಮ್ ಬಾಗಿಲು ತೆರೆಯದೆ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರು ಬರುತ್ತಾ ಇದ್ದಂತೆ, ಹಂ*ತಕರು ಮನೆಯ ಹಿಂದಿನ ಕಿಟಕಿ ‌ಮೂಲಕ ಎಸ್ಕೇಪಾಗಿದ್ದಾರೆ. ಈ ವೇಳೆ ಹಂ*ತಕರು ಉಪಯೋಗ ಮಾಡಿದ್ದ ಮಾರಕಾಸ್ತ್ರಗಳನ್ನು ಚರಂಡಿಯಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ : ಚುನಾವಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ.. 40 ಮಂದಿಗೆ ಗಾಯ
ಬಿಜೆಪಿ ಮುಖಂಡ ಹಾಗೂ ನಗರಸಭೆ ಉಪಾಧ್ಯಕ್ಷೆಯ ಪತಿಯಾದ ಪ್ರಕಾಶ ಬಾಕಳೆಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಈ ಹಿಂದಿಯೇ ಸಾವನ್ನಪ್ಪಿದ್ದಾಳೆ. ಎರಡನೇಯ ಪತ್ನಿಯಾದ ಸುನಂದಾಳ ಜೊತೆಗೆ ಇದೇ ಮನೆಯಲ್ಲಿ ಜೀವನ ನಡೆಸುತ್ತಿದ್ದ. ಏಪ್ರಿಲ್ 17 ರಂದು ಎರಡನೇಯ ಪತ್ನಿ ಸುನಂದಾ ಬಾಕಳೆ ಅವ್ರ ಪುತ್ರ ಕಾರ್ತಿಕ್ ಎಂಗೇಜ್ಮೆಂಟ್ ಸಮಾರಂಭ ನಡೆಸಲಾಗಿತ್ತು.
ಮೊದಲ ಪತ್ನಿಯ ಸಹೋದರ ಪರಶುರಾಮ ಅವರ ಪತ್ನಿ ಲಕ್ಷ್ಮಿ, ಅವರ ಪುತ್ರಿ ಆಕಾಂಕ್ಷಾ ಕೊಪ್ಪಳ ಜಿಲ್ಲೆಯಿಂದ ಎಂಗೇಜ್ಮೆಂಟ್ ಕಾರ್ಯಕ್ಕೆ ಬಂದಿದ್ದರು. ಆದ್ರೆ, ಎಂಗೇಜ್ಮೆಂಟ್ ಮುಗಿಸಿ ವಾಪಾಸಾಗಬೇಕಾದವರು ಕಾರಣಾಂತರದಿಂದ ಇಲ್ಲೇ ಉಳಿದುಕೊಂಡಿದ್ದರು.

ತನಿಖೆಗೆ 4 ತಂಡ ರಚನೆ :

ಉತ್ತರ ವಲಯ ಐಜಿಪಿ ವಿಕಾಸಕುಮಾರ ಅವರು ಘಟನಾ ಸ್ಥಳವನ್ನು ಪರಿಶೀಲನೆ ಮಾಡಿದರು. ಈಗಾಗಲೇ ಗದಗ ಎಸ್ಪಿ ಬಿ.ಎಸ್.ನೇಮಗೌಡ ಅವರ ನೇತೃತ್ವದಲ್ಲಿ 4 ತಂಡವನ್ನು ರಚನೆ ಮಾಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೊ*ಲೆ ಮಾಡಿರೋದು ದರೋಡೆಕೋರರ ಅಲ್ಲಾ ಅಥವಾ ಇನ್ಯಾರು ಎಂಬ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ‌‌ಮಾಡ್ತಾಯಿದ್ದೇವೆ, ಆದಷ್ಟು ಬೇಗ ಹಂತಕರನ್ನು ಪತ್ತೆ ಮಾಡುವ ಭರವಸೆ ನೀಡಿದ್ದಾರೆ.

ರಾಜಕೀಯ ಹಿನ್ನೆಲೆ, ರಿಯಲ್ ಎಸ್ಟೇಟ್, ಕೌಟುಂಬಿಕ ಕಲಹ ಸೇರಿದಂತೆ ಎಲ್ಲಾ ಆ್ಯಂಗಲ್ ‌ಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಒಂದು ಕುಟುಂಬದ ನಾಲ್ಕು ಜನರ ಹತ್ಯೆ ಮಾಡುವಷ್ಟು ದ್ವೇಷ ಏನೂ ಎನ್ನುವುದು ಪೊಲೀಸರ ಸಮಗ್ರ ತನಿಖೆಯಿಂದಲೇ ಬಯಲಾಗಬೇಕಾಗಿದೆ.

Continue Reading

LATEST NEWS

ಚುನಾವಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ.. 40 ಮಂದಿಗೆ ಗಾಯ

Published

on

ಮಧ್ಯಪ್ರದೇಶ: ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾದ ಘಟನೆ ಎ.20ರಂದು ಮುಂಜಾನೆ ಮಧ್ಯಪ್ರದೇಶ್ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.

palti

ಘಟನೆಯಿಂದ 21 ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಗಾಯಗೊಂಡಿರುವ ಅಧಿಕಾರಿಗಳು ಚುನಾವಣಾ ಕರ್ತವ್ಯ ಮುಗಿಸಿ ರಾಜ್‌ಗಢಕ್ಕೆ ಹಿಂತಿರುಗುತ್ತಿದ್ದಾಗ ಭೋಪಾಲ್-ಬೇತುಲ್ ಹೆದ್ದಾರಿಯ ಬರೇತಾ ಘಾಟ್ ಬಳಿ ಅಪಘಾತ ಸಂಭವಿಸಿದೆ.

Read More..; ಹೊತ್ತಿ ಉರಿದು ಭಸ್ಮ*ವಾದ ಸ್ವೀಟ್ ಕಾರ್ನ್ ಸ್ಟಾಲ್‌..!! ಓಡಿ ಜೀವ ಉಳಿಸಿಕೊಂಡ ಸ್ಟಾಲ್ ಮಾಲೀಕ, ಗ್ರಾಹಕರು

ಐವರು ಪೊಲೀಸರು ಮತ್ತು ಉಳಿದ ಗೃಹರಕ್ಷಕರು (ಹೋಮ್ ಗಾರ್ಡ್)​​​​​ ಸೇರಿದಂತೆ ಒಟ್ಟು 40 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಉಪ ವಿಭಾಗಾಧಿಕಾರಿ ಶಾಲಿನಿ ಪರಸ್ತೆ ತಿಳಿಸಿದ್ದಾರೆ.

 

Continue Reading

LATEST NEWS

Trending