LATEST NEWS
ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ
ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ ಪ್ರೀತಿ ಪಾತ್ರದವರಿಗೆ ಗುಡ್ಬೈ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾರನ್ನು ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿ ಒಳಗಡೆ ಕುಳಿತು ಕಣ್ಣೀರಿಡುತ್ತಾ ತಮ್ಮ ಪ್ರೀತಿ ಪಾತ್ರದವರಿಗೆ ಕೊನೆಯ ಸಾಲುಗಳನ್ನು ಹೇಳುತ್ತಿರುವ ದೃಶ್ಯವಿದೆ.
ಆರ್ಥಿಕ ಸಂಕಷ್ಟದಿಂದ ದಂಪತಿ ಈ ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಮೃತರನ್ನು ಕಾರ್ನತಿ ಸುಬ್ರಮಣ್ಯಂ (33) ಪತ್ನಿ ರೋಹಿಣಿ (27) ಎಂದು ಗುರುತಿಸಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಕೋಯ್ಲಕುಂಟ್ಲದಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ತೆರೆದಿದ್ದರು. ಆದರೆ, ಕರೊನಾ ಕಾರಣದಿಂದಾಗಿ ಮಕ್ಕಳ ಪಾಲಕರು ಶಾಲಾ ಶುಲ್ಕವನ್ನು ಕಟ್ಟಲು ಆಗಲಿಲ್ಲ.
ಇತ್ತ ಶಾಲೆ ಆರಂಭಿಸಲು ಮಾಡಿದ್ದ ಸಾಲದ ಬಡ್ಡಿ ಮತ್ತು ಇಎಂಐ ಕಟ್ಟುವುದೇ ದಂಪತಿಗೆ ಚಿಂತೆಯಾಗಿತ್ತು.
ಪೊಲೀಸ್ ಮೂಲಗಳ ಪ್ರಕಾರ ದಂಪತಿ ಶಾಲೆಯ ಮೂಲಸೌಕರ್ಯ ಹೆಚ್ಚಿಸಲು ಸುಮಾರು 1.5 ರಿಂದ 2 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.
ದಂಪತಿ ಮಾರ್ಗ ಮಧ್ಯೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಕೊನೆಯ ಸಂದೇಶದ ವಿಡಿಯೋ ರೆಕಾರ್ಡ್ ಮಾಡಿ ದಂಪತಿ ಕಣ್ಣೀರಿಡುತ್ತಲೇ ಬದುಕಿಗೆ ವಿದಾಯ ಹೇಳಿದ್ದಾರೆ.
ವಿಡಿಯೋ ನೋಡಿದ ಕುಟುಂಬಸ್ಥರು ಅವರನ್ನು ಹುಡುಕಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದಾದರೂ ಇಬ್ಬರು ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
LATEST NEWS
ಜಾರಿ ಬಿದ್ದು ಗಂಡ ಸತ್ತ ಅಂದ್ಲು ಹೆಂಡ್ತಿ; ಅಂತ್ಯಕ್ರಿಯೆ ಬಳಿಕ ಗೊತ್ತಾಯ್ತು ಅಸಲಿ ಸತ್ಯ!
ಉತ್ತರ ಕನ್ನಡ : ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯನ್ನು ಸದ್ದಿಲ್ಲದೆ ಮುಗಿಸಿದ ಪತ್ನಿ ಮನೆಯಲ್ಲಿ ಜಾರಿ ಬಿದ್ದು ಹೀಗಾಯ್ತು ಅಂತ ಊರಲ್ಲಿ ಕಥೆ ಕಟ್ಟಿದ್ದಳು. ಆದ್ರೆ ಪತಿಯ ಅಂತ್ಯ ಕ್ರಿಯೆ ನಡೆದು ಹದಿನೈದು ದಿನಗಳ ಬಳಿಕ ಪತ್ನಿಯೇ ಪತಿಯನ್ನ ಮುಗಿಸಿದ್ದಾಳೆ ಅನ್ನೋ ಸತ್ಯ ಬಯಲಾಗಿದೆ.
ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ. 44 ವರ್ಷದ ಟೋಪಣ್ಣ ಲಮಾಣಿ ಕೊ*ಲೆಗೀಡಾದಾತ. ಶಾಂತವ್ವ ಕೊ*ಲೆಗೈದ ಪತ್ನಿ.
ಕುಡಿದು ಗಲಾಟೆ ಮಾಡುತ್ತಿದ್ದ ಪತಿ:
ವಿಪರೀತ ಕುಡಿತದ ಚಟ ಹೊಂದಿರುವ ಮುಂಡಗೋಡಿನ ಲಂಬಾಣಿ ತಾಂಡಾದ ಟೋಪಣ್ಣ ಮನೆಗೆ ಬಂದು ಗಲಾಟೆ ಮಾಡ್ತಾ ಇದ್ದ. ಇದು ತಾಂಡದಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದ ಕಾರಣ ಈ ಮನೆಯಲ್ಲಿ ಗಲಾಟೆ ನಡೆದ್ರೆ ಯಾರೂ ಅತ್ತ ತಲೆ ಹಾಕ್ತಾ ಇರಲಿಲ್ಲ. ಆದ್ರೆ ಆ ದಿನ ಎಂದಿನಂತೆ ಕುಡಿದು ಬಂದ ಪತಿ ಮನೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದಿರುವುದಾಗಿ ಹೇಳಿದ್ದಾಳೆ. ಸ್ಥಳಕ್ಕೆ ಬಂದ ಆಕ್ಕಪಕ್ಕದವರು ನೋಡಿದಾಗ ಟೋಪಣ್ಣ ಲಮಾಣಿ ಇಹಲೋಕ ತ್ಯಜಿಸಿರುವುದು ಗೊತ್ತಾಗಿದೆ. ಹೀಗಾಗಿ ಕುಟುಂಬಸ್ಥರು ಸೇರಿ ಆತನ ಅಂತ್ಯಕ್ರಿಯೆ ನಡೆಸಿದ್ದಾರೆ.
ಸತ್ಯ ಬಯಲಾಗಿದ್ದು ಹೇಗೆ?
ಆದ್ರೆ ಟೋಪಣ್ಣ ಅಂತ್ಯಕ್ರಿಯೆ ಮುಗಿದು ಕೆಲ ದಿನಗಳ ಬಳಿಕ ಪತ್ನಿ ಶಾಂತವ್ವ ಬಾಯಿಂದ ಅಸಲಿ ಸತ್ಯ ಹೊರಬಿದ್ದಿದೆ. ಯಾರೊಂದಿಗೋ ಮೊಬೈಲ್ನಲ್ಲಿ ಮಾತಾಡುವ ವೇಳೆ ಪತಿಯ ಮರ್ಮಾಂಗ ಹಿಚುಕಿ ಕೊಲೆ ಮಾಡಿರುವುದಾಗಿ ಮಾತನಾಡಿದ್ದಾಳೆ.
ಇದು ಪಕ್ಕದ ಮನೆಯವರಿಗೆ ಕೇಳಿಸಿದ್ದು ವಿಚಾರವನ್ನು ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ. ವಿಚಾರ ತಿಳಿದ ತಾಂಡಾದ ಹಿರಿಯರು ಸಭೆ ಕರೆದು ಶಾಂತವ್ವಳ ಮೊಬೈಲ್ ಪರಿಶೀಲಿಸಿ ಆಕೆಯ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶಾಂತವ್ವ ತನ್ನ ಒಪ್ಪಿಕೊಂಡಿದ್ದು, ನಾನೇ ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ. ಸತ್ಯ ಹೊರಬಿದ್ದ ಹಿನ್ನೆಲೆಯಲ್ಲಿ ತಾಂಡದ ಮುಖ್ಯಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಶಾಂತವ್ವಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
DAKSHINA KANNADA
PUTTUR : ಅಂಗನವಾಡಿಯಲ್ಲಿ ಆಮ್ಲೇಟ್ ತಯಾರಿ; ಆರೋಗ್ಯ ಕೇಂದ್ರದ ಸಿಸಿ ಟಿವಿ ಕದ್ದು ಪರಾರಿ; ಕಿಡಿಗೇಡಿಗಳ ಅನೈತಿಕ ಚಟುವಟಿಕೆಗೆ ಯಾವಾಗ ಬ್ರೇಕ್!?
ಪುತ್ತೂರು : ನಗರದ ಹೃದಯಭಾಗದಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಾಡಬಾರದ್ದು ಮಾಡಿ ಸಿಸಿ ಕ್ಯಾಮೆರಾ ಸಹಿತ ಪರಾರಿಯಾಗಿದ್ದಾರೆ. ಆದ್ರೆ, ಪ್ರಕರಣ ದಾಖಲಿಸಿ ಅಂತ ಪೊಲೀಸ್ ಠಾಣೆಗೆ ಹೋದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳಿಗೆ ಅಂತ ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೇಟ್ ಮಾಡಿ ತಿಂದಿರುವ ಕಿಡಿಗೇಡಿಗಳು, ಬಳಿಕ ಪಕ್ಕದಲ್ಲೇ ಇರೋ ಆರೋಗ್ಯ ಕೇಂದ್ರದಲ್ಲಿ ಏನಾದ್ರೂ ಸಿಗತ್ತದಾ ಎಂದು ತಡಕಾಡಿದ್ದಾರೆ. ಇನ್ನು ಇಲ್ಲೇ ಅನೈತಿಕ ಚಟುವಟಿಕೆ ನಡೆಸಿರುವುದಕ್ಕೆ ಸಾಕ್ಷಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ಇದು ಕೇವಲ ಕಿಡಿಗೇಡಿಗಳ ಕೃತ್ಯ ಮಾತ್ರ ಆಗಿರದೆ ಅನೈತಿಕ ದಂಧೆಯವರೂ ಇದರ ಹಿಂದೆ ಇದ್ದಾರೆ ಅನ್ನೋ ಅನುಮಾನ ಸ್ಥಳಿಯರದ್ದು.
ಯಾಕಂದ್ರೆ ನಗರದ ನಡುವೆ ಇದ್ರೂ ಕೂಡಾ ರಾತ್ರಿಯಾದ ಮೇಲೆ ಇದೊಂದು ನಿರ್ಜನ ಪ್ರದೇಶವಾಗಿ ಜನ ಓಡಾಟ ಇರೋದು ಕಡಿಮೆ. ಹೀಗಾಗಿ ತಮ್ಮ ಅನೈತಿಕ ಚಟುವಟಿಕೆಗೆ ಈ ಜಾಗವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಸ್ಥಳಿಯರ ಅನುಮಾನ.
ಈ ಹಿಂದೆಯೂ ಅನೇಕ ಬಾರಿ ಇಂತಹ ಘಟನೆ ಇದೇ ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಆಗಲೂ ಪೊಲೀಸರಿಂದ ಯಾವುದೇ ಕ್ರಮ ಆಗಿರಲಿಲ್ಲ. ಇತ್ತೀಚೆಗೆ ಇಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಈ ಬಾರಿ ಕಿಡಿಗೇಡಿಗಳು ಗುರುತು ಪತ್ತೆಯಾಗಬಾರದು ಅಂತ ಸಿಸಿಟಿವಿನ್ನೇ ಹೊತ್ತೊಯ್ದಿದ್ದಾರೆ.
ಶಾಲೆ ಹಾಗೂ ಆರೋಗ್ಯ ಕೇಂದ್ರ ಒಂದೇ ಕಡೆ ಇದ್ರೂ ಇದಕ್ಕೆ ಸೂಕ್ತ ಭದ್ರತೆ ಇಲ್ಲ. ಆವರಣ ಗೋಡೆಯೂ ಇಲ್ಲದೆ ಇರೋದ್ರಿಂದ ಇಂತಹ ಕಿಡಿಗೇಡಿಗಳಿಗೆ ಕೃತ್ಯ ನಡೆಸಲು ಅನುಕೂಲ ಆಗಿದೆ. ಆದ್ರೆ, ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಬದಲಾಗಿ ಮೌನಕ್ಕೆ ಶರಣಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
LATEST NEWS
ದೇವಸ್ಥಾನದಲ್ಲಿ ದೇವರಿಗೆ ದೀಪ ಹಚ್ಚುವ ವೇಳೆ ಅವಘಡ; ಬ*ಲಿಯಾಯ್ತು ಒಂದನೇ ತರಗತಿ ಮಗು!
ತುಮಕೂರು : ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗಿ ಒಂದನೇ ತರಗತಿಯ ಮಗುವೊಂದು ಮೃ*ತ ಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ. ದೀಕ್ಷಾ ಮೃ*ತ ಮಗು. ದೀಕ್ಷಾ ಇಲಲಿನ ಗೌಡಗೆರೆ ಹೋಬಳಿಯ ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. \
ಏನಿದು ಘಟನೆ?
ಮಧ್ಯಾಹ್ನ ಊಟದ ವೇಳೆಗೆ ಶಾಲೆಯ ಪಕ್ಕದಲ್ಲೇ ಇರುವ ದೇವಸ್ಥಾನಕ್ಕೆ ನಾಲ್ಕು ಮಕ್ಕಳು ಆಟವಾಡಲು ಹೋಗಿದ್ದಾರೆ. ಈ ವೇಳೆ ದೀಕ್ಷಾ ದೇವಸ್ಥಾನದಲ್ಲಿ ಇದ್ದ ದೇವರ ದೀಪವನ್ನು ಉರಿಸಲು ಹೋಗಿದ್ದಾಳೆ. ಈ ಸಂದರ್ಭ ದೀಪದ ಬೆಂಕಿ ಬಟ್ಟೆಗೆ ಅಂಟಿಕೊಂಡಿದ್ದು, ಇಡೀ ದೇಹಕ್ಕೆ ಬೆಂಕಿ ತಗುಲಿದೆ.
ತಕ್ಷಣ ಗಮನ ಹರಿಸಿದ ಸ್ಥಳಿಯರು ಬೆಂಕಿಯನ್ನು ನಂದಿಸಿ ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮಗುವನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃ*ತಪಟ್ಟಿದೆ.
ಶಿಕ್ಷಕರ ಅಮಾನತು :
ಶಾಲೆಯ ಊಟದ ಬಿಡುವಿನ ಸಮಯದಲ್ಲಿ ಈ ಘಟನೆ ನಡೆದಿದ್ದರೂ ಶಿಕ್ಷಕರು ಪುಟ್ಟ ಮಕ್ಕಳ ಮೇಲೆ ನಿಗಾ ವಹಿಸದ ಹಿನ್ನಲೆಯಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಒಂದರಿಂದ ಏಳನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ 75 ವಿದ್ಯಾರ್ಥಿಗಳಿದ್ದು, ನಾಲ್ವರು ಶಿಕ್ಷಕರಿದ್ದಾರೆ. ಇಬ್ಬರು ಖಾಯಂ ಶಿಕ್ಷಕರಾಗಿದ್ದರೆ, ಇಬ್ಬರು ಗುತ್ತಿಗೆ ಆಧಾರದ ಶಿಕ್ಷಕರು. ಇದೀಗ ಇಬ್ಬರು ಖಾಯಂ ಶಿಕ್ಷರನ್ನು ಸೇವೆಯಿಂದ ಅಮಾನತು ಮಾಡಿ ಬಿಇಒ ಆದೇಶ ಹೊರಡಿಸಿದ್ದಾರೆ.
- FILM7 days ago
ಡೀಪ್ಫೇಕ್ ಮೂಲಕ ಮತ್ತೊಮ್ಮೆ ಸುದ್ದಿಯಾದ ರಶ್ಮಿಕಾ ಮಂದಣ್ಣ…!
- LATEST NEWS3 days ago
ಡಿವಿಜಿ ಸಾಲು ಹಂಚಿಕೊಂಡು ವಿರೋಧಿಗಳಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ!
- DAKSHINA KANNADA6 days ago
Vitla ; 1400 ಕೋಟಿ ಅನುದಾನ ತಂದಿರುವ ಬಗ್ಗೆ ನಾನು ಲೆಕ್ಕ ಕೊಡ್ತೇನೆ ಬನ್ನಿ : ಪುತ್ತೂರು ಶಾಸಕ ರೈ ಸವಾಲು
- LATEST NEWS6 days ago
ಮಗನಿಗೆ ಟಿಕೆಟ್ ಸಿಕ್ಕಿ ಗೆಲ್ಲಲಿ ಎಂದು ಕೊಲ್ಲೂರಿನಲ್ಲಿ ಪ್ರಾರ್ಥನೆ : ಮಾಜಿ ಸಚಿವ ಈಶ್ವರಪ್ಪ