ಕ್ಷಮಿಸಿ ಕುಂದಾಪುರದಲ್ಲಿ ಅಪರಾಹ್ನ 2ರವರೆಗೆ ಮಾತ್ರ ವ್ಯವಹಾರ..!
ಕ್ಷಮಿಸಿ ಕುಂದಾಪುರದಲ್ಲಿ ಅಪರಾಹ್ನ 2ರವರೆಗೆ ಮಾತ್ರ ವ್ಯವಹಾರ..!
ಉಡುಪಿ : ಉಡುಪಿ ಜಿಲ್ಲೆಯಲ್ಲೂ ಕೊರೊನಾ ಹಾವಳಿ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಕೋವಿಡ್-19 ವೈರಸ್ ಸಾಮುದಾಯಿಕವಾಗಿ ಹಬ್ಬುತ್ತಿರುವ ಕಾರಣ ಸ್ಥಳೀಯ ವರ್ತಕರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ.
ಸಾರ್ವಜನಿಕರ ಹಿತದೃಷ್ಠಿಯಿಂದ ಜು.13 ರಿಂದ ಜು.31 ತನಕ ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್ಲಾ ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆಯ ಬಳಿಕ ಸ್ವಯಂ ಪ್ರೇರಿತ ಬಂದ್ ನಡೆಸಲು ತೀರ್ಮಾನಿಸಿದ್ದಾರೆ.
ಇಂದು ನಗರದ ಖಾಸಗಿ ಹೋಟೇಲ್ ನ ಲ್ಲಿ ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಮೆಡಿಕಲ್, ಹಾಲು, ಹೋಟೆಲ್, ಬಾರ್ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಿದ್ದು, ಆ ಬಳಿಕ ಸ್ವಯಂ ಪ್ರೇರಿತ ಬಂದ್ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕುಂದಾಪುರ ಪುರಸಭಾ ವ್ಯಾಪ್ತಿಯ ಸುಮಾರು 150ಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕ ವ್ಯಾಪಾರಸ್ಥರು ಈ ಬಗ್ಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಕಳೆದ ನಾಲ್ಕು ದಿನಗಳಿಂದ ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಮನವಿ ಮಾಡಲಾಗಿದ್ದು, ಸ್ವಯಂ ಪ್ರೇರಿತ ಬಂದ್ಗೆ ಎಲ್ಲರ ಬೆಂಬಲ ಸಿಕ್ಕಿದೆ ಎಂದು ವರ್ತಕ ಪ್ರಮುಖರು ತಿಳಿಸಿದ್ದಾರೆ.
ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತದೊಂದಿಗೆ ನಮ್ಮ ಹೊಣೆಗಾರಿಕೆಯೂ ಇದೆ. ಸ್ವಯಂ ಪ್ರೇರಿತ ಬಂದ ಕುರಿತಂತೆ ಸಹಾಯಕ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
LATEST NEWS
ತ್ರಿಬಲ್ ಮರ್ಡ*ರ್ ಪ್ರಕರಣ: ಏಳು ದಿನಗಳ ಬಳಿಕ ಮನೆಗಳಿಗೆ ತಲುಪಿದ ಮೃ*ತದೇಹ
ಬೆಳ್ತಂಗಡಿ: ತುಮಕೂರಿನಲ್ಲಿ ನಡೆದ ತ್ರಿಬಲ್ ಮರ್ಡ*ರ್ ಪ್ರಕರಣಕ್ಕೆ ಸಂಬಂಧಿಸಿ ಮೃ*ತಪಟ್ಟ ಮೂವರ ಮೃ*ತ ದೇಹವನ್ನು ಶುಕ್ರವಾರ (ಮಾ.29) ಮುಂಜಾನೆ ಬೆಳ್ತಂಗಡಿಗೆ ತರಲಾಗಿದೆ.
ನಿಧಿ ಆಸೆಗೆ ಮಾ.22ರಂದು ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ಸುಡಲಾಗಿತ್ತು. ತನಿಖೆ ಬಳಿಕ ಮೃತದೇಹವನ್ನು ಡಿಎನ್ಎ ಪರೀಕ್ಷೆ ಮೂಲಕ ಪತ್ತೆ ಹಚ್ಚಲಾಗಿದೆ. ಘಟನೆ ನಡೆದ ಏಳು ದಿನಗಳ ಬಳಿಕ ಸಂಬಂಧಪಟ್ಟವರಿಗೆ ಮೃತದೇಹವನ್ನು ತಲುಪಿಸಲಾಗಿದೆ.
ಮೃತಪಟ್ಟ ಶಾಹುಲ್ ಹಮೀದ್ ಹಾಗೂ ಇಸಾಕ್ ಅವರ ಮೃತದೇಹ ಮೊಯ್ಯುದ್ದೀನ್ ಜುಮಾ ಮಸೀದಿ ಹಳೆಪೇಟೆಗೆ ಮತ್ತು ಸಿದ್ದೀಕ್ ಅವರ ಮೃತದೇಹ ಶಿರ್ಲಾಲ್ ಮಸೀದಿಗೆ ತಲುಪಿದ್ದು, ಅಲ್ಲಿ ಅಂತಿಮ ದರ್ಶನ ಹಾಗೂ ವಿಧಿ ವಿಧಾನ ನೆರವೇರಲಿದೆ.
ಪ್ರಕರಣದ ಹಿನ್ನೆಲೆ:
ತುಮಕೂರು ಜಿಲ್ಲೆಯಲ್ಲಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಶ*ವ ಪತ್ತೆಯಾಗಿತ್ತು. ಇದೊಂದು ವ್ಯವಸ್ಥಿತ ಕೊ*ಲೆ ಎಂಬುದು ತನಿಖೆಯಿಂದ ಹೊರಬಂದಿತ್ತು. ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಕೋರಾ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಮುಖ ಆರೋಪಿ ಪಾತರಾಜ ಹಾಗೂ ಗಂಗರಾಜು ಎಂಬವರನ್ನು ಬಂಧಿಸಲಾಗಿದೆ. ನಿಧಿಯ ಆಸೆಗೆ ತುಮಕೂರಿಗೆ ಹೋಗಿದ್ದ ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಹಾಕಿ ಬೆಂಕಿ ಹಾಕಿ ಸುಡಲಾಗಿತ್ತು.
ಮೃತರಿಗೆ ಪಾತರಾಜ ಎಂಬಾತ ಆರು ತಿಂಗಳ ಹಿಂದೆ ಪರಿಚಿತವಾಗಿದ್ದು, ನಿಧಿ ವಿಚಾರವಾಗಿ ಮೃತರಿಂದ 6 ಲಕ್ಷ ಹಣ ಪಡೆದುಕೊಂಡಿದ್ದ. ಆದರೆ ಆರು ತಿಂಗಳಾದ್ರೂ ಹಣ ವಾಪಾಸು ನೀಡದ ಕಾರಣ ಮೂವರೂ ಕೂಡಾ ಆತನ ಹಿಂದೆ ಬಿದ್ದಿದ್ದರು. ಹೀಗಾಗಿ ಈ ಮೂವರನ್ನು ಮುಗಿಸಲು ಪ್ಲಾನ್ ರೂಪಿಸಿದ್ದ ಪಾತರಾಜ ಸತ್ಯಮಂಗಲ ನಿವಾಸಿ ಗಂಗರಾಜು ಎಂಬಾತನ ಸಹಾಯ ಪಡೆದಿದ್ದ. ಆತನಿಗೆ 3 ಕೆ.ಜಿ ಚಿನ್ನಕೊಡುವುದಾಗಿ ನಂಬಿಸಿ ತನ್ನ ಕೆಲಸ ಮಾಡಿಸಿದ್ದ.
ಗಂಗರಾಜು ಕೂಡಾ ಚಿನ್ನದ ಆಸೆಗೆ ತನ್ನ ಸಹಚರರ ಮೂಲಕ ಇಸಾಕ್, ಹಮೀದ್ ಹಾಗೂ ಸಿದ್ದಿಕ್ ಅವರನ್ನು ಕೊಲೆ ಮಾಡಿಸಿದ್ದ. ತುಮಕೂರಿನ ಬೀರನಕಲ್ಲು ಬೆಟ್ಟದ ಬಳಿ ಬರಲು ಹೇಳಿ ಅಲ್ಲಿ ಮಚ್ಚು ಲಾಂಗ್ನಿಂದ ಹಲ್ಲೆ ಮಾಡಿ ಮೂವರನ್ನು ಕೊಲೆ ಮಾಡಲಾಗಿತ್ತು. ಬಳಿಕ ಅಲ್ಲಿಂದ ಅವರದೇ ಕಾರಿನಲ್ಲಿ ಮೃತದೇಹ ಇರಿಸಿ ಕುಚ್ಚಂಗಿ ಕೆರೆ ಬಳಿ ತಂದು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಪ್ರಕರಣ ಸಂಬಂಧ ತಲೆ ಮರೆಸಿಕೊಂಡಿರುವ ಪ ಮಧುಸೂದನ್ ನವೀನ್, ಕೃಷ್ಣ, ಗಣೇಶ್, ಕಿರಣ್, ಸೈಮನ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ..
FILM
ಯಶ್ ಅಭಿನಯದ “ಟಾಕ್ಸಿಕ್” ಗೆ ಹಿರೋಯಿನ್ ಫಿಕ್ಸ್..!!
ಕೆಜಿಎಫ್ ಹಿಟ್ ಬಳಿಕ ಯಶ್ ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ತನಕ ಫ್ಯಾನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಯಶ್ ಜೊತೆ ಸ್ಕರೀನ್ ಶೇರ್ ಮಾಡಲು ಹೀರೋಯನ್ಗಳು ತುದಿಗಾಲಿನಲ್ಲಿದ್ದಾರೆ. ಯಶ್ ಅಭಿನಯದ ಕೆಜಿಎಫ್-1, ಕಕೆಜಿಎಫ್-2 ಭಾರೀ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟಾನುಘಟಿ ಆ್ಯಕ್ಟರ್ಸ್ ಗಳನ್ನು ಹೊಂದಿದ್ದ ಸಿನೆಮಾ ದಾಖಲೆಯನ್ನೇ ನಿರ್ಮಿಸಿತ್ತು. ಕೆಜಿಎಫ್ನಲ್ಲಿ ಯಶ್ ಗೆ ಕರಾವಳಿ ಬೆಡಗಿ ಶ್ರೀನಿಧಿ ಶೆಟ್ಟಿ ಹಿರೋಯಿನ್ ಆಗಿದ್ದರು. ಬಳಿಕ ಅವರ ಸ್ಟಾರ್ ಬದಲಾಗಿದ್ದು, ಅನೇಕ ಸಿನೆಮಾ ಆಫರ್ಗಳು ಕೂಡಾ ಒಲಿದು ಬಂತು. ಇದೀಗ ಯಶ್ ರವರ ‘ಟಾಕ್ಸಿಕ್’ ಮೂವಿಗೆ ಹೀರೋಯಿನ್ ಯಾರಾಗಲಿದ್ದಾರೆ..? ಎಂಬುದು ಚಂದನವನದಲ್ಲಿ ಭಾರೀ ಕುತೂಹಲ ಉಂಟುಮಾಡಿದೆ.
ಇದನ್ನೂ ಓದಿ.. ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ…!
ಯಶ್ ಗೆ ಜೋಡಿಯಾಗಲಿದ್ದಾರ ಸೌತ್ ಸಿನೆಮಾ ನಟಿ..!!
ಟಾಕ್ಸಿಕ್ ಸಿನೆಮಾ ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆಯನ್ನುಂಟು ಮಾಡಿದೆ. ಯಶ್ ಸಿನೆಮಾ ಅಂದ್ರೆ ಹಾಗೆನೆ.. ಇವರು ಅಭಿನಯಿಸಿರುವ ಎಲ್ಲಾ ಸಿನೆಮಾಗಳು ಸೂಪರ್ ಹಿಟ್. ಟಾಕ್ಸಿಕ್ ನಲ್ಲಿ ಬಾಲಿವುಡ್ ಹಿರೋಯಿನ್ ಗಳ ಹೆಸರು ಕೇಳಿಬರುತ್ತಿದೆ. ಹೌದು, ಟಾಕ್ಸಿಕ್ ಸಿನೆಮಾದಲ್ಲಿ ನಾನಿರುವುದಾಗಿ ಸಂದರ್ಶನವೊಂದರಲ್ಲಿ ಕರೀನ ಕಪೂರ್ ರವರು ಖುದ್ದಾಗಿ ಮಾಹಿತಿ ನೀಡಿದ್ದಾರೆ. ಆದ್ರೆ ಹಿರೋಯಿನ್ ಆಗಿ ಅಲ್ಲ. ಸಿನೆಮಾದಲ್ಲಿ ಯಶ್ ರವರ ತಂಗಿಯಾಗಿ ನಟನೆ ಮಾಡಲಿದ್ದಾರೆ.
ಹಿರೋಯಿನ್ ಆಗಿ ಒಂದೆರಡು ಹೆಸರು ಚಂದನವನದಲ್ಲಿ ಓಡಾಡ್ತ ಇದೆ. ಸೌತ್ ಸಿನಿಮಾದ ನ್ಯಾಚುರಲ್ ಬ್ಯೂಟಿ ಕ್ವೀನ್, ಪಡ್ಡೆ ಹೈಕಳ ಮನಕದ್ದ ಮಲರ್ ಯಶ್ ಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡ್ತಾ ಇದೆ. ಹೌದು, ಟಾಕ್ಸಿಕ್ ಸಿನೆಮಾದ ರಾಣಿಯಾಗಲಿದ್ದಾರಂತೆ ಸಾಯಿ ಪಲ್ಲವಿ. ಆದರೆ ಇದು ಖಚಿತ ಮಾಹಿತಿ ಅಲ್ಲ. ಯಾಕಂದ್ರೆ ಇಲ್ಲಿ ಇಬ್ಬರು ನಾಯಕಿಯ ಹೆಸರು ಕೇಳಿ ಬರ್ತಾ ಇದೆ.
BELTHANGADY
ರಸ್ತೆ ದಾಟುವ ವೇಳೆ ದ್ವಿಚಕ್ರ ವಾಹನ ಡಿ*ಕ್ಕಿ..!! ಪಾದಾಚಾರಿ ಮೃ*ತ್ಯು
ಬೆಳ್ತಂಗಡಿ: ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ನಗರದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಮಾವ ಶೇಖರ್ ಬಂಗೇರ ಹೇರಾಜೆ(65 ವ) ಮೃ*ತಪಟ್ಟವರು.
ಗುರುವಾರ (ಮಾ.28) ರಾತ್ರಿ ಶೇಖರ್ ಬಂಗೇರ ರವರು ಹೋಟೆಲ್ ನಿಂದ ಪಾರ್ಸಲ್ ತೆಗೆದುಕೊಂಡು ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿ*ಕ್ಕಿ ಹೊಡೆದಿದೆ. ಪರಿಣಾಮ ಗಂಭೀ*ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಬಂಟ್ವಾಳದಲ್ಲಿ ಅವರು ಸಾವನ್ನಪ್ಪಿದ್ದಾರೆ. ಸ್ಕೂಟರ್ ನಲ್ಲಿದ್ದ ಬೆಳ್ತಂಗಡಿಯ ಗೇರುಕಟ್ಟೆ ನಿವಾಸಿ ಅನುಷಾ(19ವ) ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮೃತಪಟ್ಟ ಶೇಖರ್ ಬಂಗೇರ ಹೇರಾಜೆ ವಿಜಯ ಬ್ಯಾಂಕ್ ಮಾಜಿ ಉದ್ಯೋಗಿ, ಮುಗ್ಗ ಗುತ್ತು ಮನೆತನದ ಟ್ರಸ್ಟ್ ಕೋಶಾಧಿಕಾರಿ, ರಾಘವೇಂದ್ರ ಮಠದ ಕೋಶಾಧಿಕಾರಿ, ಗುರುನಾರಾಯಣ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದರು.
ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.