Wednesday, May 31, 2023

ಶರದ್​ ಪವಾರ್‌ಗೆ ದಾವೂದ್‌ ಇಬ್ರಾಹಿಂ ಜೊತೆ ನಂಟು: ಕೇಂದ್ರ ಸಚಿವರ ಪುತ್ರರ ವಿರುದ್ಧ ಎಫ್‌ಐಆರ್‌

ಮುಂಬೈ: ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್​ ಅವರಿಗೆ ಭೂಗತ ಪಾತಕಿ ದಾವೂದ್​​ ಇಬ್ರಾಹಿಂನೊಂದಿಗೆ ಸಂಪರ್ಕ ಹೊಂದಿರುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಇಬ್ಬರು ಪುತ್ರರ ವಿರುದ್ಧ ಮುಂಬೈನ ಆಜಾದ್​ ಮೈದಾನ ಪೊಲೀಸ್​​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.


ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾವೂದ್​​ ಇಬ್ರಾಹಿಂ ಮತ್ತು ಆತನ ಸಹಚಾರರ ಜತೆ ನಂಟು ಹೊಂದಿದ ಆರೋಪದಡಿ ಇತ್ತೀಚೆಗೆ ಎನ್​ಸಿಪಿ ಮುಖಂಡ,

ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದೇ ವಿಚಾರವಾಗಿ ಶರದ್​ ಪವರ್​ ಅವರಿಗೆ ಭೂಗತ ಪಾತಕಿ ದಾವೂದ್​​ ಇಬ್ರಾಹಿಂನೊಂದಿಗೆ ನಂಟಿದೆ.

ಹೀಗಾಗಿ ಬಂಧನಕ್ಕೊಳಾಗಿರುವ ನವಾಬ್​ ಮಲಿಕ್ ಅವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ರಾಣೆ ಅವರ ಪುತ್ರರಾದ ಬಿಜೆಪಿ ಶಾಸಕ ನಿತೇಶ್​ ರಾಣೆ ಮತ್ತು ನಿಲೇಶ್​ ರಾಣೆ ಹೇಳಿಕೆ ನೀಡಿದ್ದರು.
ಈ ಬಗ್ಗೆ ಎನ್​ಸಿಪಿ ಮುಖಂಡ ಸೂರಜ್​ ಚವ್ಹಾಣ ದೂರಿನ ಮೇರೆಗೆ ರಾಣೆ ಪುತ್ರರ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics