LATEST NEWS
ಕಳವುಗೈದ ಸೊತ್ತೇ ಕಳ್ಳನಿಗೆ ಮುಳುವಾಯಿತು;ಉಡುಪಿಯಲ್ಲಿ ಒಣಮೀನು ಕಳ್ಳನ ಬಂಧನ..!
ಕಳವುಗೈದ ಸೊತ್ತೇ ಕಳ್ಳನಿಗೆ ಮುಳುವಾಯಿತು;ಉಡುಪಿಯಲ್ಲಿ ಒಣಮೀನು ಕಳ್ಳನ ಬಂಧನ..!
ಉಡುಪಿ:ಸಣ್ಣ ಕಾಗದದ ತುಂಡಿನಿಂದಲೂ ದೊಡ್ಡ ಕಳ್ಳ ಸಿಕ್ಕಿ ಹಾಕಿಕೊಳ್ಳುತ್ತಾನೆ ಅನ್ನೋದಿಕ್ಕೆ ಒಣ ಮೀನು ಕಳ್ಳತನವಾಗಿ, ಕಳ್ಳ ಅಜ್ಜಿಯರ ಕೈಗೆ ಸಿಕ್ಕಿಹಾಕಿ ಕೊಂಡದ್ದೇ ಕುತೂಹಲಕಾರಿ ಘಟನೆ. ಕದ್ದ ವಸ್ತು ಇದ್ದಲ್ಲಿಗೆ ಬಂದು, ಕಳ್ಳ ತಗಲ್ಹಾಕಿಕೊಂಡದ್ದು ಹೇಗೆ ಅನ್ನೋದನ್ನ ನೋಡಿ.ಕರಾವಳಿಯ ಸುಡು ಬಿಸಿಲಿನಲ್ಲಿ ಮೀನು ಒಣ ಹಾಕುತ್ತಿರುವ ಅಜ್ಜಿಯರಿಗೆ, ಮೀನು ಮಾರಾಟವೇ ಜೀವಾಳ.. ವಯಸ್ಸಾದಂತೆ ಮೀನುಗಾರ ಮಹಿಳೆಯರು, ಹಸಿ ಮೀನು ಮಾರಾಟ ಮಾಡುವ ವೃತ್ತಿಯನ್ನು ಸ್ವಲ್ಪ ಕಮ್ಮಿ ಮಾಡಿ, ಹಸಿ ಮೀನು ಒಣಗಿಸಿ ಮಾರಾಟ ಮಾಡುತ್ತಾರೆ..
ಉಡುಪಿಯ ಮಲ್ಪೆ ಬಂದರಿನ ಬಳಿ ಹಸಿ ಮೀನು, ಒಣಗಿಸಿ ಮಾರಾಟ ಮಾಡಿ ಅದರಿಂದಲೇ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಾರೆ.. ಆದ್ರೆ ಇತ್ತೀಚಿನ ಕೆಲ ತಿಂಗಳಿನಿಂದ ಮೀನು ಒಣಗಿಸಿ, ಚೀಲಗಳಲ್ಲಿ ಕಟ್ಟಿ ಗೂಡುಗಳಲ್ಲಿ ಇಟ್ಟಿದ್ದ ಮೀನುಗಳು ಕಾಣಿಯಾಗುತ್ತಿತ್ತು. ಟನ್ ಗಟ್ಟಲೇ ಮೀನು ಕಳ್ಳತನವಾಗುತ್ತಿತ್ತು.. ಇದರ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ರೂ ಕಳ್ಳ ಮಾತ್ರ ಸಿಕ್ಕಿರಲಿಲ್ಲ
ಆದ್ರೀಗ ಕಳ್ಳ ತಗಲ್ಹಾಕಿಕೊಂಡಿದ್ದಾನೆ. ತಮಿಳುನಾಡು ಮೂಲದ ರಮನಾಥನೇ ಈ ಅಜ್ಜಿಯಂದಿರು ಮಾರಾಟ ಮಾಡಲು ಒಣಗಿಸಿದ್ದ ಮೀನು ಕದ್ದವನು.
ಹೇಗೆ ಸಿಕ್ಹಾಕಿಕೊಂಡ ಎನ್ನುವುದೇ ಇಂಟ್ರೆಸ್ಟಿಂಗ್.. ಇದೇ ಮೀನು ಒಣಗಿಸುವ ಸ್ಥಳಕ್ಕೆ ಒಬ್ಬ ಯುವಕ ರಿಕ್ಷಾದಲ್ಲಿ ಬಂದು ಈ ಮಹಿಳೆಯರ ಬಳಿ ನನ್ನಲ್ಲಿ ಒಣ ಮೀನು ಇದೆ..ನನಗೆ ಹಣ ನೀಡಿ, ನೀವ್ ಮಾರಾಟ ಮಾಡುವಾಗ ಇದನ್ನು ಮಾರಾಟ ಮಾಡಿ ಎಂದು ಹೇಳಿದ್ದಾನೆ.
ಆಟೋದಲ್ಲಿ ಇದ್ದ ಮೀನಿನ ಗೋಣಿ ನೋಡುವಾಗಲೇ ಮಹಿಳೆಯರಿಗೆ ಇದು ನಮ್ಮದೇ ಗೋಣಿ ಚೀಲ ಎಂದು ಸಂಶಯ ಬಂದಿತ್ತು.. ಆದರೂ ಗೋಣಿ ಚೀಲ ಕಳಗೆ ಇರಿಸಿ ಕಟ್ಟಿದ ಹಗ್ಗ ಬಿಚ್ಚಿಸಿ ನೋಡಿದಾಗ ಅದರಲ್ಲಿ ಬರೆದು ಹಾಕಿದ ಕಾಗದ ಇತ್ತು..
ಇದೇ ಕಳ್ಳನನ್ನು ಹಿಡಿಯಲು ಸಾಕ್ಷಿ ಆಯ್ತು.. ಅದು ಹೇಗಪ್ಪ ಅಂದ್ರೆ, ಕಾಗದ ಈ ಮಹಿಳೆಯರು ಯಾರಿಗೆ ಮಾರಾಟ ಮಾಡಬೇಕು ಅವರ ಹೆಸರು ಬರೆದು ಗೋಣಿ ಚೀಲದ ಒಳಗೆ ಇಟ್ಟಿದ್ರೋ ಅದೇ ಕಾಗದವದು…ರಿಕ್ಷಾ ಚಾಲಕನಿಗೆ ಎರಡೇಟು ಬಿಗಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ.
ಕದ್ದದ್ದು ನಾನಲ್ಲ ನನಗೆ ತಮಿಳುನಾಡು ಮೂಲದ ರಮಾನಾಥ ಎಂಬುವನು ಕೊಟ್ಟದ್ದು ಎಂದಿದ್ದಾನೆ. ಬಳಿಕ, ರಮಾನಾಥನನ್ನು, ರಿಕ್ಷಾ ಚಾಲಕನಿಂದಲೇ ಎಣ್ಣೆ ಹಾಕುವ ಬಾ ಅಂತ ಸ್ಥಳಕ್ಕೆ ಉಪಾಯದಿಂದ ಕರೆಸಿ, ಹಿಡಿದು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ..
ನಾವು ನಂಬಿರುವ ಕಲ್ಕುಡ ಹಾಗೂ ಕೊರಗಜ್ಜ ದೈವಗಳಲ್ಲಿ ನಮ್ಮಿಂದ ಕದ್ದ ಒಣಮೀನು, ಕಳ್ಳತನ ಮಾಡಿದ ಜಾಗಕ್ಕೆ ಬರಬೇಕು ಎಂದು ಹರಕೆ ಹೊತ್ತಿದ್ದೆ ಎನ್ನುತ್ತಾರೆ ಮೀನುಗಾರ ಮಹಿಳೆಯೋರ್ವರು…
ಮಾರುಕಟ್ಟೆಯಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದೇ ಕಳವಿಗೆ ಕಾರಣ ಎಂದಿದ್ದಾರೆ ಮಹಿಳೆಯರು.. ಹೈಮಾಸ್ಟ್ ಕೆಟ್ಟು ಹೋಗಿ ವರ್ಷವಾದ್ರೂ ಇನ್ನೂ ಸರಿಪಡಿಸಿಲ್ಲ, ಅಲ್ಲದೇ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಎಂದು ಜನಪ್ರತಿನಿಧಿಗಳನ್ನು ಕೇಳಿದ್ರೂ ಸ್ಪಂದನೆಯಿಲ್ಲ ಇದು ಕಳ್ಳರಿಗೆ ವರದಾನವಾಗಿದೆ ಎನ್ನುವ ಆರೋಪವಿದೆ..
ಒಟ್ಟಿನಲ್ಲಿ, ಅಜ್ಜಿಯಂದಿರು ಕಷ್ಟ ಪಟ್ಟು ಬೆವರು ಸುರಿಸಿ, ಕೂಡಿಟ್ಟ ಒಣ ಮೀನನ್ನು ಕದಿಯುತ್ತಿದ್ದ ಖದೀಮ ಸಿಕ್ಕಿಬಿದ್ದು ಪೊಲೀಸ್ ವಶದಲ್ಲಿ ಇದ್ದಾನೆ.. ಮಹಿಳೆಯರಿಗೂ ಒಣ ಮೀನು ಮತ್ತೆ ಸಿಕ್ಕ ಖುಷಿ ಇದೆ.
bengaluru
ಮನ್ಸಿಂದ ಯಾರೂನು ಕೆಟ್ಟೋರಲ್ಲ..ಬಿಗ್ ಬಾಸ್ ವಿನಯ್ ಕಣ್ಣೀರು
ಬೆಂಗಳೂರು : ಬಿಗ್ಬಾಸ್ ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಕರೆಸಿಕೊಳ್ಳುವ ವಿನಯ್ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಮಂಗಳವಾರ ಪ್ರಸಾರವಾದ ಎಪಿಸೋಡ್ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.
ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಜೊತೆ ಮಾತನಾಡುತ್ತಿದ್ದಾಗ ಸ್ನೇಹಿತ್ ಬಿಗ್ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗಿರುವ ಅಭಿಪ್ರಯಾದ ಬಗ್ಗೆ ತಿಳಿಸುವಂತೆ ಹೇಳ್ತಾರೆ.ಆಗ ಪವಿ ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು.ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.
ಇದರಿಂದಾಗಿ ವಿನಯ್ ತೀರಾ ಡಲ್ ಆಗ್ಬಿಟ್ಟರು. ಬಾತ್ರೂಮ್ ಒಳಗೆ ಹೋಗಿ ವಿನಯ್ ಗಳಗಳನೆ ಅತ್ತುಬಿಟ್ಟರು. ಬಳಿಕ ‘ಬಿಗ್ ಬಾಸ್’ ಬಳಿ ಮಾತನಾಡಿದ್ಮೇಲೆ ವಿನಯ್ ಸಮಾಧಾನಗೊಂಡರು.
DAKSHINA KANNADA
Sullia : ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಸರ್ಕಾರಿ ಅಧಿಕಾರಿ
ಸುಳ್ಯ : ಸರ್ಕಾರಿ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಬೈಗುಳ ತಿಂದ ಸುಳ್ಯದ ಅರಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದ ಮದ್ಯದ ಮತ್ತಿನಲ್ಲಿ ಸುಳ್ಯ ಅರಂಬೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹಲವಾರು ವಾಹನಗಳಿಗೆ ಢಿಕ್ಕಿ ಆಗುವಂತಹ ಸಂಭಾವ್ಯ ದುರಂತವೊಂದು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದೆ. ರಸ್ತೆಯುದ್ದಕ್ಕೂ ವಿರುದ್ಧ ದಿಕ್ಕಿನಲ್ಲಿ, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಸಂಭವಿಸುವ ಸಾಧ್ಯತೆಯನ್ನು ಮನಗಂಡ ಕೆಲವು ವಾಹನ ಸವಾರರು ಸಾರ್ವಜನಿಕರ ಸಹಕಾರದಿಂದ ಅಡ್ಡಗಟ್ಟಿದ್ದಾರೆ. ಸರ್ಕಾರಿ ಅಧಿಕಾರಿಯ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
bangalore
ಕ್ಷೀಣಿಸುತ್ತಿದೆ ಹಿರಿಯ ನಟಿ ಲೀಲಾವತಿ ಆರೋಗ್ಯ-ಡಿಕೆಶಿ, ನಟ ಶಿವಣ್ಣ ಆರೋಗ್ಯ ವಿಚಾರಣೆ
ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದು ಅವರ ಆರೋಗ್ಯ ವಿಚಾರಿಸುವುದಕ್ಕಾಗಿ ಅನೇಕ ನಟ ನಟಿಯರು ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.ಜೊತೆಗೆ ನಿನ್ನೆ ನಟ ಶಿವಣ್ಣ ದಂಪತಿ ಕೂಡ ಮನೆಗೆ ಭೆಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮನೆಗೆ ಆಗಮಿಸಿದ ಶಿವಣ್ಣ ಅವರನ್ನು ವಿನೋದ್ ರಾಜ್ಕುಮಾರ್ ಹೆಚ್ಚು ಆತ್ಮೀಯವಾಗಿ ಬರಮಾಡಿಕೊಂಡು ತಾಯಿಯ ಆರೋಗ್ಯದ ಕುರಿತು ವಿವರಣೆ ನೀಡಿದ್ದಾರೆ..
ಇನ್ನು ಮೊನ್ನೆಯಷ್ಟೇ ನಟ ಅರ್ಜುನ್ ಸರ್ಜಾ ಲೀಲಾವತಿ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಸಿದ್ದರು.. ಅಲ್ಲದೇ ದರ್ಶನ್ ಸಹ ಅವರ ಮನೆಗೆ ಭೇಟಿ ನೀಡಿದ್ದರು.. ಡಿಕೆಶಿ ಕೂಡ ಆರೋಗ್ಯ ವಿಚಾರಿಸಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಯಲ್ಲಿನ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ..
- FILM7 days ago
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ
- bengaluru6 days ago
ಇನ್ಸ್ಟಾಗ್ರಾಂನಲ್ಲಿ 11 ಸಾವಿರ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಗೀತಾ
- DAKSHINA KANNADA6 days ago
Breaking news :ಮಂಗಳೂರಿನ ಹೊಟೇಲ್ ರೂಂನಲ್ಲಿ ಬೆಂಕಿ-ಒಳಗಿದ್ದ ವ್ಯಕ್ತಿ ಸಾವು
- bengaluru6 days ago
ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ-ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಕೋಣಗಳ ಪ್ರಯಾಣ