ಹಳೆಯಂಗಡಿ ತೋಕೂರು ಬಳಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು..!
ಮಂಗಳೂರು : ಮಂಗಳೂರು ಹೊರ ವಲಯದ ಹಳೆಯಂಗಡಿ ತೋಕೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಓರ್ವ ಬಲಿಯಾಗಿದ್ದಾನೆ.ಹಳೆಯಂಗಡಿಯ ತೋಕೂರು ಸರಕಾರಿ ಶಾಲೆಯ ಬಳಿ ಇಂದು ಸಂಜೆ ಈ ದುರ್ಘಟನೆ ಸಂಭವಿಸಿದೆ.
ಮಂಗಳೂರಿನಿಂದ ಕಿನ್ನಿಗೋಳಿ ಕಡೆ ಚಲಿಸುವ ಬೆಸಿಲಿಕಾ ಎಂಬ ಹೆಸರಿನ ಖಾಸಾಗಿ ಸರ್ವಿಸ್ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಂದಿನಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಚಕ್ರಕ್ಕೆ ಸಿಲುಕಿದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮೃತ ಬೈಕ್ ಸವಾರನ ಹೆಸರು ಮೂಡಬಿದ್ರಿ ಪರಿಸರದ ಮೋಕ್ಷಿತ್ ಎಂದು ಗುರುತ್ತಿಸಲಾಗಿದ್ದು ಈ ಬಗ್ಗೆ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.