ಉಳ್ಳಾಲದಲ್ಲಿ ರೈಲಿನಿಂದ ಹಾರಿದ ರೈಲ್ವೇ ಸಿಬ್ಬಂದಿ..!

ಉಳ್ಳಾಲ: ತೊಕ್ಕೊಟ್ಟು ಗಣೇಶನಗರ ಸಮೀಪದ ರೈಲ್ವೇ ಹಳಿಯಲ್ಲಿ ರೈಲ್ವೇ ಆಸ್ಪತ್ರೆ ಸಿಬ್ಬಂದಿ ಶವ ಪತ್ತೆಯಾಗಿದೆ. ಪಣಂಬೂರಿನಲ್ಲಿ ವಾಸಿಸುವ ವಿಜಯನ್ ( 50) ಮೃತದೇಹ ಪತ್ತೆಯಾಗಿದೆ. ಚಲಿಸುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ಮೂಲಗಳ ಪ್ರಕಾರ ಮಂಗಳೂರು ರೈಲ್ವೇ ಆಸ್ಪತ್ರೆಗೆ ಸಿಬಿಐ ತಂಡ ದಾಳಿ ನಡೆಸಿದ್ದು, ಇದರಿಂದ ನೊಂದು ಆತ್ಮಹತ್ಯೆ ನಡೆಸಿರುವ ಶಂಕೆಯೂ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ರೈಲ್ವೇ ಪೊಲೀಸರು ಭೇಟಿ ನೀಡಿದ್ದಾರೆ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ‌.