Connect with us

BANTWAL

ಪ್ರವೀಣ್ ನೆಟ್ಟಾರು ಪ್ರಕರಣ NIA ಗೆ ಅಧಿಕೃತ ಹಸ್ತಾಂತರ : ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತಾ ಬಂಟ್ವಾಳ ಪೊಲೀಸ್ ತಂಡ..!?

Published

on

ಪ್ರವೀಣ್ ನೆಟ್ಟಾರು ಪ್ರಕರಣ NIA ಗೆ ಅಧಿಕೃತ ಹಸ್ತಾಂತರ : ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತಾ ಬಂಟ್ವಾಳ ಪೊಲೀಸ್ ತಂಡ..!? 

ಮಂಗಳೂರು : ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ರಾಜ್ಯ ಕರ್ನಾಟಕ ಪೋಲಿಸ್ ಎನ್.ಐ.ಎ.ಗೆ ಇಂದು ಹಸ್ತಾಂತರ ಮಾಡಿದೆ.

ಪ್ರವೀಣ್ ಹತ್ಯೆ ವಿಚಾರಣೆಯಲ್ಲಿ ಹೆಚ್ಚಿನ ಸುಳಿವು ಪಡೆಯುವ ಹಿನ್ನೆಲೆಯಲ್ಲಿ ಎನ್.ಐ.ಎ.ಗೆ ಪ್ರಕರಣವನ್ನು ವಹಿಸಲಾಗಿದ್ದು ತನಿಖೆ ಮುಂದುವರಿಯಲಿದೆ.
ಕೇವಲ ಹದಿನೈದು ದಿನಗಳಲ್ಲಿ ಕರ್ನಾಟಕ ಪೋಲೀಸರು ಎಲ್ಲಾ ನೈಜ ಆರೋಪಿಗಳನ್ನು ಬಂಧಿಸಿ ‌ನ್ಯಾಯಾಲಯಕ್ಕೆ ಹಾಜರು ಪಡಿಸಿಲಾಗಿತ್ತು.
ಸವಾಲಿನ ಪ್ರಕರಣ: 
ಪ್ರವೀಣ್ ಹತ್ಯೆಯ ಬಳಿಕ ಆರೋಪಿಗಳನ್ನು ಪತ್ತೆ ಹಚ್ಚಲು ಪೋಲೀಸರಿಗೆ ಆರಂಭದಲ್ಲಿ ಸವಾಲಿನ ಪ್ರಕರಣವಾಗಿತ್ತು .
ಹತ್ಯೆಯನ್ನು ಪೂರ್ವ ಯೋಜಿತ ತಯಾರಿ ನಡೆಸಿ ಮಾಡಿದ ಹಿನ್ನೆಲೆಯಲ್ಲಿ ಸಾಕಷ್ಟು ಕಠಿಣ ಪ್ರಕರಣವಾಗಿ ಕಂಡಿತ್ತು.
ನಗರದಲ್ಲಿ ವಿದ್ಯುತ್ ಕಡಿತಗೊಳಿಸಿ, ಸಿ‌ಸಿ.ಕ್ಯಾಮರಾ ದಲ್ಲಿ ಸೆರೆಯಾಗದಂತೆ, ಅತ್ಯಂತ ನಾಜೂಕಾದ ರೀತಿಯಲ್ಲಿ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಆರೋಪಿಗಳ ಬಂಧಿಸುವಲ್ಲಿ ಬಂಟ್ವಾಳ ಪೋಲೀಸರ ತಂಡ ಯಶಸ್ವಿ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರ ಸೂಚನೆಯಂತೆ ಬಂಟ್ವಾಳ ಡಿವಿಜನ್ ನ ಅನುಭವಿ ತಂಡವನ್ನು ಬೆಳ್ಳಾರೆಗೆ ಕರೆಸಿಕೊಂಡು ಆರೋಪಿಗಳ ಬಂಧನಕ್ಕೆ ಪ್ಲಾನ್ ರೆಡಿ ಮಾಡಿದ ಫಲವಾಗಿ ಕೇವಲ ಎರಡನೇ ದಿನದಂದು ಎರಡು ಆರೋಪಿಗಳನ್ನು ಬಂಧನ ಮಾಡುತ್ತಾರೆ.
ನಾಲ್ಕನೇ ದಿನಕ್ಕೆ ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಹತ್ತು ಆರೋಪಿಗಳ ಬಗ್ಗೆ ಬಂಟ್ವಾಳ ಪೋಲೀಸರ ತಂಡ ಮಾಹಿತಿ ಪಡೆದುಕೊಂಡು ಬಂಧನಕ್ಕೆ ತಂಡ ರೆಡಿ ಮಾಡುತ್ತಾರೆ.
ಹತ್ಯೆಯಾದ ದಿನದಂದೇ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ಪೋಲೀಸರ ತಂಡಕ್ಕೆ ಸ್ಥಳೀಯ ಹಂತಕರಿಂದಲೇ ಹತ್ಯೆಯಾಗಿದೆ, ಮತ್ತು ಎರಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿ ಸುಳಿವು ಸಿಕ್ಕಿತು.
ಆದರೆ ಆರೋಪಿಗಳ ಬಗ್ಗೆ ಎಲ್ಲಾ ಸುಳಿವು ಇದ್ದರೂ ಕೂಡ ಆರೋಪಿಗಳ ಬಂಧನಕ್ಕೆ ತೊಡಕುಗಳು ಉಂಟಾಗಬಹುದು ಎಂಬ ಹಿನ್ನೆಲೆಯಲ್ಲಿ ಮತ್ತು ‌ತನಿಖೆಯ ದೃಷ್ಟಿಯಿಂದ ಪೋಲೀಸರು ಸತ್ಯಾಂಶವನ್ನು ಬಹಿರಂಗಪಡಿಸದೆ ಆರೋಪಿಗಳ ಬಂಧನಕ್ಕೆ ಬೆನ್ನ ಹಿಂದೆ ಬಿದ್ದರು.ಈ ನಡುವೆ ಆರೋಪಿಗಳು ಕೇರಳದವರು ಎಂಬ ಸುಳ್ಳು ವದಂತಿಗಳು ಹರಡಿದ್ದು,ಎಲ್ಲಾವನ್ನು ಪೋಲೀಸರ ತಂಡ ಮೌನವಾಗಿ ಗಮನಿಸುತ್ತಿತ್ತು.

ಸರಿಯಾಗಿ ನಿದ್ದೆ,ಊಟ ಬಿಟ್ಟು ಕೆಲಸ ಮಾಡಿದ ಬಂಟ್ವಾಳದ ತಂಡ
ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಬಂಟ್ವಾಳ ಪೋಲೀಸರ ತಂಡಕ್ಕೆ ಸ್ಥಳೀಯ ವ್ಯಕ್ತಿಗಳಿಂದಲೇ ಈ ಕೃತ್ಯ ನಡೆಸಿದಬಹುದು ಎಂಬುದಕ್ಕೆ ಸಾಕ್ಷ್ಯಾಧಾರ ಗಳು ಸಿಕ್ಕರೂ ಕೂಡ ಆರೋಪಿಗಳ ಪತ್ತೆಗೆ ಕೊಂಚ ತೊಡಕುಗಳು ಕಂಡುಬಂದವು.
ಹತ್ಯೆಯಾದ ಎರಡೇ ದಿನದಲ್ಲಿ ಸಹಕಾರ ನೀಡಿದ ಶಕೀರ್ ಮತ್ತು ಜಾಕೀರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೋಲೀಸ್ ತಂಡಕ್ಕೆ ನಾಲ್ಕನೇ ದಿನದಲ್ಲಿ ಹತ್ಯೆಯಲ್ಲಿ ಭಾಗಿಯಾದ ಉಳಿದ ಎಂಟು ಮಂದಿ ನೈಜ ಆರೋಪಿಗಳ ಬಗ್ಗೆ ಸಂಪೂರ್ಣ ಸುಳಿವು‌ ಸಿಕ್ಕಿತ್ತು.
ಆದರೆ ಉಳಿದ ಎಂಟು ಮಂದಿ ಆರೋಪಿಗಳಲ್ಲಿ ಕಬೀರ್ , ಹಬೀದ್ ಮತ್ತು ನೌಫಲ್ ನ್ನು ಬಂಧಿಸಿದ ಬಳಿಕ ಪ್ರಮುಖ ಆರೋಪಿ ಗಳಾದ ಪ್ರವೀಣ್ ಹತ್ಯೆ ಮಾಡಿದ ಶಿಯಾಬ್ , ರಿಯಾಜ್,ಬಶೀರ್ ಬಂಧನಕ್ಕೆ ಕೆಲ ದಿನಗಳು ಬೇಕಾಯಿತು.
ಕಾರಣ ಅವರು ದಿನವೊಂದಕ್ಕೆ ತಂಗುದಿಂದ ಜಾಗವನ್ನು ಬದಲಾಯಿಸುವ ಮೂಲಕ ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು.
ಆದರೆ ಛಲ ಬಿಡದ ಪೋಲೀಸ್ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ‌.
ಕೇರಳ, ತಮಿಳುನಾಡು, ಹುಬ್ಬಳ್ಳಿ, ಬೀದರ್ ಹೀಗೆ ನಾನಾಕಡೆಗಳಲ್ಲಿ ಆರೋಪಿಗಳು ಬಚ್ಚಿಟ್ಟುಕೊಂಡಿದ್ದರು.

15 ದಿನದಲ್ಲಿ ನೈಜ ಆರೋಪಿಗಳ ಬಂಧನ

ಶರತ್ ಮಡಿವಾಳ ಹಾಗೂ ಬೆಂಗಳೂರಿನ ರುದ್ರೇಶ್ ಅವರ ಹತ್ಯೆಯ ಆರೋಪಿಗಳನ್ನು ಬಂಧಿಸಲು ಒಂದುವರೆ ತಿಂಗಳು ಬೇಕಾಗಿತ್ತು.
ಆದರೆ ಪ್ರವೀಣ್ ನೆಟ್ಟಾರು ಅವರ ಹತ್ಯೆ ಆರೋಪಿಗಳನ್ನು ಕೇವಲ ಹದಿನೈದು ದಿನಗಳಲ್ಲಿ ಹೆಡೆಮುರಿಕಟ್ಟಿದೆ.

ಬೆಳ್ಳಾರೆ ಪ್ರವೀಣ್ ಹತ್ಯೆ ಪ್ರಕರಣ ಬೇಧಿಸಲು ಪ್ರಮುಖ ಪಾತ್ರ ಬಂಟ್ಚಾಳ ಪೋಲೀಸರದ್ದಾಗಿತ್ತಾ ?

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳನ್ನು ಬಂಧಿಸಿದ ಬಂಟ್ವಾಳ ಪೋಲಿಸರ ತಂಡ.
ತಂಡದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ವಿಟ್ಲ ಪೋಲಿಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಬಂಟ್ವಾಳ ನಗರ ಠಾಣಾ ಎಸ್ ‌ಐ.ಅವಿನಾಶ್, ಗ್ರಾಮಾಂತರ ಎಸ್.ಐ.ಹರೀಶ್, ಇವರ ಜೊತೆಯಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಕೆಲಸ ಮಾಡಿದ ಹಿರಿಯ ಅನುಭವಿ ಇತ್ತೀಚೆಗೆ ಬೆಳ್ತಂಗಡಿಗೆ ವರ್ಗಾವಣೆಗೊಂಡಿರುವ ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಎಸ್.ಐ‌ ಆಗಿ ಕಾರ್ಕಳಕ್ಕೆ ವರ್ಗಾವಣೆಯಾದ ಪ್ರಸನ್ನ ಹಾಗೂ ಪುತ್ತೂರಿನ ಉದಯರವಿ ಅವರ ತಂಡ ಕೆಲಸ ಮಾಡಿತ್ತು.
ಬಂಟ್ವಾಳ ದ ನುರಿತ ಸಿಬ್ಬಂದಿ ಗಳಾದ ಉದಯ ರೈ ಮಂದಾರ, ಪ್ರವೀಣ್ ದೇವಾಡಿಗ, ಪ್ರವೀಣ್ ರೈ, ಕುಮಾರ್, ಇರ್ಶಾದ್, ವಿವೇಕ್,ಅದ್ರಾಮ ಇವರ ಶ್ರಮ ಬಹಳಷ್ಟು ಮೆಚ್ಚುಗೆ ಪಡೆಯಿತು.

ಬೆಳ್ಳಾರೆಯ ಪ್ರಕರಣದಲ್ಲಿ ಒಟ್ಟು ಆರು ತಂಡಗಳನ್ಬು ಮಾಡಿದ ಎಸ್.ಪಿ. ಅದರಲ್ಲಿ ನಾಲ್ಕು ತಂಡ ಬಂಟ್ವಾಳದಾಗಿತ್ತು.
ಈ ಆರು ತಂಡದಲ್ಲಿ ಕೆಲಸ ಮಾಡಿದ ಪೋಲೀಸ್ ಸಿಬ್ಬಂದಿ ಗಳು ಬಂಟ್ವಾಳ ದವರೇ ಎಂಬುದು ಸತ್ಯ ವಿಚಾರ.
ಅನೇಕ ಹತ್ಯೆ ಸಹಿತ ಸೂಕ್ಷ್ಮ ಪ್ರಕರಣಗಳನ್ನು ಭೇದಿಸಿ ಆರೋಪಿಗಳ ಹೆಡೆಮುರಿಕಟ್ಟಿದ ಅನುಭವಿ ಬಂಟ್ವಾಳದ ತಂಡ ಬೆಳ್ಳಾರೆಯ ಪ್ರವೀಣ್ ಹತ್ಯೆ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಎಸ್.ಪಿ.ಹೃಷಿಕೇಶ್ ಸೋನಾವಣೆ ಅವರು ತಂಡದ ಮೇಲಿರಿಸಿದ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೈಜ ಆರೋಪಿಗಳನ್ನು ಬಂಧಿಸಿದ ಕ್ಕಾಗಿ ವಿಶೇಷ ವಾಗಿ ಹತ್ತು ಲಕ್ಷ ಬಹುಮಾನ ವನ್ನು ತಂಡ ಪಡೆದುಕೊಂಡಿದೆ.

BANTWAL

BANTWAL: ಬಸ್ – ಕಾರು ನಡುವೆ ಅಪಘಾತ; ಕಾರು ಚಾಲಕ ಗಂ*ಭೀರ

Published

on

ಬಂಟ್ವಾಳ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬಲೆನೋ ಕಾರಿನ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕನನ್ನು ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಬಂಟ್ವಾಳ ತಾಲೂಕಿನ ವಗ್ಗದ ಸಮೀಪ ಮುಂಜಾನೆ ಈ ಅಪಘಾತ ನಡೆದಿದೆ.

ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಬಸ್ ಹಾಗೂ ಬೆಳ್ತಂಗಡಿಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದರೆ, ಬಸ್‌ನ ಮುಂಬಾಗ ಜಖಂಗೊಂಡಿದೆ.

ತಕ್ಷಣ ಸ್ಥಳೀಯರ ನೆರವಿನಿಂದ ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ಹೊರ ತೆಗೆದು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಚಾಲಕನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

BANTWAL

WATCH VIDEO : ಬಂಟ್ವಾಳದಲ್ಲಿ ಧರ್ಮಗುರುವಿನ ಪೈಶಾಚಿಕ ಕೃತ್ಯ; ಅಸಹಾಯಕ ವೃದ್ಧ ದಂಪತಿಗೆ ಹಿಗ್ಗಾಮುಗ್ಗ ಥಳಿತ

Published

on

ಬಂಟ್ವಾಳ : ಕ್ರೈಸ್ತ ದಂಪತಿ ಮೇಲೆ ಧರ್ಮಗುರುವೊಬ್ಬರು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ವಿಟ್ಲ ಸಮೀಪದ ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ 79 ವರ್ಷ ಪ್ರಾಯದ ಗ್ರೆಗರಿ ಮೊಂತೇರೋ ಹಾಗೂ ಅವರ ಪತ್ನಿ ಮೇಲೆ ಮನೆಲಾ ಚರ್ಚ್‌ನ ಪ್ರಧಾನ ಧರ್ಮ ಗುರು ನೆಲ್ಸನ್‌ ಒಲಿವೆರಾ ಅವರು ಹಲ್ಲೆ ಮಾಡಿದ್ದಾರೆ.

ಫಾದರ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಫೆ.29 ರ ಮುಂಜಾನೆ ಈ ಘಟನೆ ನಡೆದಿದೆ. ಮನೆ ಶುದ್ಧ ಭೇಟಿ ನಿಮಿತ್ತ ವೃದ್ಧ ದಂಪತಿಗಳ ಮನೆಗೆ ಬಂದಿದ್ದ ಫಾದರ್ ಒಲಿವೆರಾ ಗೇಟ್‌ ಬಳಿಯಲ್ಲೇ ಗ್ರೆಗರಿ ಮೊಂತೆರೋ ಅವರಿಗೆ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ಕುತ್ತಿಗೆ ಹಿಡಿದು ಎಳೆದಾಡಿದ್ದು, ಕೋಲಿನಿಂದಲೂ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಗ್ರೆಗರಿ ಮೊಂತೆರಾ ಅವರ ಪತ್ನಿ ಪ್ರತಿರೋಧ ತೋರಿಸಿದ್ರೂ ಫಾದರ್ ಜೊತೆಗಿದ್ದ ವ್ಯಕ್ತಿ ವೃದ್ಧೆಯನ್ನು ಅಡ್ಡ ಗಟ್ಟಿದ್ದಾನೆ.

ಆದರೆ, ಫಾದರ್ ಅವರಿಗೂ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಫಾಧರ್ ಆಗಿದ್ದು ವಯೋ ವೃದ್ಧರಿಗೆ ಗೌರವ ಕೊಡಲು ಗೊತ್ತಿಲ್ಲದ ಇಂತಹ ನೀಚನ ವಿರುದ್ಧ ಕ್ರಮ ಕೈಗೊಳ್ಳಿ ಅಂತ ವೃದ್ಧ ದಂಪತಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಫಾದರ್‌ ಪರ ಹಲವರು ವಿಟ್ಲ ಠಾಣೆ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Continue Reading

BANTWAL

ಬಾಲವಿಕಾಸದಲ್ಲಿ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ

Published

on

ವಿಟ್ಲ: ಪೆರಾಜೆ, ಮಾಣಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮಾಣಿ ಸ್ಥಳೀಯ ಸಂಸ್ಥೆ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವರ ಸಹಭಾಗಿತ್ವದಲ್ಲಿ ಫೆ. 28 ರಂದು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ ಪೆರಾಜೆ, ಮಾಣಿ ಇಲ್ಲಿ 2023-24 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕ ಹಾಗೂ ಮಾಣಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ  ಪ್ರಹ್ಲಾದ್ ಶೆಟ್ಟಿ ಜೆ  ಪರೀಕ್ಷಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣವಿದ್ದಾಗ ಮುಂದಿನ ದಿನಗಳಲ್ಲಿ ಸದೃಢ ದೇಶ ಕಟ್ಟಬಲ್ಲರು ಎಂದು ಹೇಳಿ ಪರೀಕ್ಷಾ ಶಿಬಿರಕ್ಕೆ ಶುಭ ಹಾರೈಸಿದರು.

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರವೀಂದ್ರ ಡಿ ಸ್ವಾಗತಿಸಿ,ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಬ್ ವಿಭಾಗದ ಶಿಬಿರ ನಾಯಕಿ ಯಮುನಾ,ಬುಲ್ ಬುಲ್ ವಿಭಾಗದ ಶಿಬಿರ ನಾಯಕಿ ಯಶೋಧ ಕೆ (HWB) ರವರು ಉಪಸ್ಥಿತರಿದ್ದರು. ಪರೀಕ್ಷಾ ಶಿಬಿರದಲ್ಲಿ ಸಹಾಯಕರಾಗಿ ಕಬ್ ಮಾಸ್ಟರ್ ಮತ್ತು ಫ್ಲಾಕ್ ಲೀಡರ್ ಗಳಾದ ಕಾಂತಪ್ಪ, ಸುಮಾ, ಅಮಿತಾ ಎಸ್, ಪ್ರಮೀಳಾ, ಕುರ್ಶಿದ, ಯೋಗಿನಿ, ಚಿತ್ರ ಕೆ, ವೀಣಾ, ಶೀಲಾವತಿ, ಪ್ರಮೀಳಾ ಕ್ರಾಸ್ತಾ, ಸೌಮ್ಯ ಹಾಗೂ ಸ್ಕೌಟ್ ಮತ್ತು ಗೈಡ್ ಶಿಕ್ಷಕಿ ಸಪ್ನ, ಅನಿತಾ ಗೌರಿ, ಲೀಲಾರವರು ಸಹಕರಿಸಿದರು. ಕಬ್ ವಿಭಾಗದಲ್ಲಿ 77 ವಿದ್ಯಾರ್ಥಿಗಳು ಹಾಗೂ ಬುಲ್ ಬುಲ್ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಒಟ್ಟು 143 ವಿದ್ಯಾರ್ಥಿಗಳು ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕರಾಗಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸಹಕರಿಸಿದರು. ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ ಕಾರ್ಯಕ್ರಮ ನಿರೂಪಿಸಿದರು.

Continue Reading

LATEST NEWS

Trending