DAKSHINA KANNADA
ಕುಕ್ಕರ್ ಸ್ಪೋಟಕ್ಕೂ ಮುನ್ನ ಫೋಟೋ ತೆಗೆಸಿದ್ದ ಶಾರೀಕ್-ಐಸಿಸ್ ದಿರಿಸು ಧರಿಸಿ, ಕುಕ್ಕರ್ ಕೈಯಲ್ಲಿಟ್ಟು ತೆಗೆದ ಭಾವಚಿತ್ರ ಪತ್ತೆ
ಮಂಗಳೂರು: ಮಂಗಳೂರಿನ ಆಟೋ ರಿಕ್ಷಾ ಸ್ಫೋಟ ಪ್ರಕರಣ ಸಂಬಂಧ ಶಂಕಿತ ಉಗ್ರ ಶಾರಿಕ್ ಹೊಸ ಮುಖವಾಡ ಬಯಲಾಗಿದೆ.
ದೊಡ್ಡ ಮಟ್ಟದಲ್ಲಿ ಸ್ಪೋಟವನ್ನು ನಡೆಸಲು ಶಾರೀಕ್ ಮಂಗಳೂರಿನಲ್ಲಿ ಸಂಚುರೂಪಿಸಿದ್ದ ಎನ್ನುವುದು ಈತನ ಕೃತ್ಯದಿಂದಲೇ ದೃಢವಾಗಿದೆ.
ಮೈಸೂರಿನಿಂದ ಮಂಗಳೂರಿಗೆ ಕುಕ್ಕರ್ ಬಾಂಬ್ ತರುವುದಕ್ಕೂ ಮುನ್ನ ಶಾರೀಕ್ ವಿಚಿತ್ರ ವೇಷಭೂಷಣದೊಂದಿಗೆ, ಕುಕ್ಕರ್ ಕೈಯಲ್ಲಿ ಹಿಡಿದು ತೆಗೆದಿರುವ ಭಾವಚಿತ್ರ ಇದೀಗ ಲಭ್ಯವಾಗಿದೆ.
ಐಸಿಸ್ ಉಗ್ರರನ್ನೇ ಅನುಸರಿಸುತ್ತಿದ್ದ ಶಾರಿಖ್ ಅವರನ್ನೇ ಹೋಲುವ ಧಿರಿಸಿ ಧರಿಸಿ ಕುಕ್ಕರ್ ಬಾಂಬ್ ಜೊತೆಗೆ ಕಾಣಿಸಿಕೊಂಡಿರುವ ಫೋಟೋ ಲಭ್ಯವಾಗಿದೆ.
ಆರೋಪಿಯ ಮೈಸೂರಿನ ಮನೆಯಲ್ಲಿ ಲಭ್ಯವಾಗಿದೆ ಎನ್ನಲಾದ ಆತನ ಫೋಟೋಗಳು ನಿಜಕ್ಕೂ ಭಯಾನಕವಾಗಿದೆ. ಕುಕ್ಕರ್ ಬಾಂಬ್ ತಯಾರಿಸಿದ ಬಳಿಕ ಆತ ಕುಕ್ಕರ್ ಬಾಂಬ್ ಜೊತೆಗೆ ಫೋಟೋಗೆ ಫೋಸು ನೀಡಿದ್ದ.
ಬಲಗೈಯ ತೋರು ಬೆರಳು ಎತ್ತಿ ತೋರಿಸುತ್ತಾ ಐಸಿಸ್ ಮಾದರಿ ಅನುಸರಿಸಿದ್ದಾನೆ. ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಅರೇಬಿಕ್ ದೇಶಗಳಲ್ಲಿ ಧರಿಸುವ ರುಮಾಲು ಧರಿಸಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ.
ಹೀಗಾಗಿ ಶಾರಿಕ್ ಬಹುದೊಡ್ಡ ಭಯೋತ್ಪಾದನಾ ಕೃತ್ಯಕ್ಕೆ ಸಂಚು ಹೂಡಿದ್ದ ಅನ್ನೋದು ಬಯಲಾಗಿದೆ. ತಾನೇ ಗೆದ್ದೆ ಎನ್ನುವ ಸಂಕೇತವಾಗಿ ಒಂದು ಬೆರಳನ್ನು ಎತ್ತಿ ತೋರಿಸುವ ಮೂಲಕ ಈತ ತನ್ನ ಕೃತ್ಯಕ್ಕೆ ಮತಾಂಧತೆ ಬಳಸಿಕೊಂಡಿದ್ದಾನೆ.
ಮೈಸೂರಿನಲ್ಲಿ ಈತ ಇದುವರೆಗೂ ಅವಿತುಕೊಂಡಿದ್ದು ಪೊಲೀಸರಿಗೆ ಕೈಗೆ ಸಿಗದೇ ಇರುವುದು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
DAKSHINA KANNADA
ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ
ಪುತ್ತೂರು: ಇಲ್ಲಿನ ಮುರ ಎಂಬಲ್ಲಿ ಕಬಕ-ಪುತ್ತೂರು ರೈಲು ಸಂಚಾರದ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃ*ತದೇಹ ಪತ್ತೆಯಾಗಿರುವ ಘಟನೆ ಎ.23ರಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯ ದೇಹ ಹಳಿಯಿಂದ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹ*ತ್ಯೆಯೋ? ಅಥವಾ ರೈಲು ಡಿಕ್ಕಿಯಾಗಿ ಸಂಭವಿಸಿದ ಘಟನೆಯೋ ಅನ್ನುವುದು ತನಿಖೆ ವೇಳೆ ಬೆಳಕಿಗೆ ಬರಲಿದೆ.
ಮುಂದೆ ಓದಿ..; ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ
BELTHANGADY
ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾ*ವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ
ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮಕ್ಕೆ ಸಂಬಂಧಪಟ್ಟಂತೆ ಕೊಯ್ಯೂರು ರಸ್ತೆಯ ಬದ್ಯಾರು ಎಂಬಲ್ಲಿ ಹೆಚ್ ಪದ್ಮಗೌಡ ಎಂಬವರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ*ದೇಹ ಪತ್ತೆಯಾಗಿದೆ.
ಮುಂದೆ ನೋಡಿ..; ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!
ಈ ಕೆರೆಗೆ ಸುತ್ತ ಕಾಂಕ್ರೀಟ್ ರಿಂಗ್ ಅಳವಡಿಸಿದ್ದು ನೀರು ಕುಡಿಯಲು ಬಂದ ಕಾಡುಕೋಣ ಮೂರ್ನಾಲ್ಕು ದಿನಗಳ ಹಿಂದೆಯೇ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಹೆಚ್ಚೂ ಕಮ್ಮಿ 10 ಕ್ವಿಂಟಾಲ್ ತೂಕ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಕೊಳೆತು ವಾಸನೆ ಬೀರುತ್ತಿತ್ತು. ಶೌರ್ಯ ವಿಪತ್ತು ತಂಡಕ್ಕೆ ಬಂದ ಮಾಹಿತಿಯಂತೆ ಉಜಿರೆ- ಬೆಳಾಲು ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ಮುಳುಗು ಪರಿಣತ ಹರೀಶ ಕೂಡುಗೆ, ಮುಹಮ್ಮದ್ ಶರೀಫ್ ಬೆಳಾಲು, ಅವಿನಾಶ್ ಭಿಡೆ ಅರಸಿಮನಕ್ಕಿ, ರವೀಂದ್ರ ಉಜಿರೆ, ಸುರೇಂದ್ರ ಉಜಿರೆ, ಅನಿಲ್ ಚಾರ್ಮಾಡಿ, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಧರ್ಮಸ್ಥಳ, ನಳಿನ್ ಕುಮಾರ್ ಧರ್ಮಸ್ಥಳ ಮೊದಲಾದವರು ಸಾರ್ವಜನಿಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಕಾಡುಕೋಣದ ಕಳೇಬರವನ್ನು ಮೇಲೆತ್ತಿದ್ದಾರೆ. ಬಳಿಕ ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ಪ್ರಕ್ರೀಯೆ ನಡೆಸಿದ್ದು, ತೋಟದಲ್ಲೇ ಹೊಂಡ ತೋಡಿ ಅಂತ್ಯಸಂಸ್ಕಾರ ನಡೆಸಲಾಗಿದೆ.
DAKSHINA KANNADA
ಕಾಗೆ ನಿಜಕ್ಕೂ ನಮ್ಮ ಪಿತೃನಾ..?
ಹಿಂದೂ ಸಂಪ್ರದಾಯದ ಪ್ರಕಾರ ಕಾಗೆಗೆ ವಿಶೇಷವಾದ ಸ್ಥಾನಮಾನವಿದೆ. ಪಕ್ಷಿ ಜಾತಿಗೆ ಸೇರಿದ ಕಾಗೆಯನ್ನ ಹಿಂದಿನ ಕಾಲದಲ್ಲಿ ಸಂಪರ್ಕ ಸಾಧನವಾಗಿ ಬಳಸಲಾಗುತ್ತಿತ್ತು. ಯಾವೂದೇ ರೀತಿಯ ತಂತ್ರಜ್ಞಾನ ಹಾಗೂ ದೂರವಾಣಿ ಇಲ್ಲದಂತಹ ಸಮಯದಲ್ಲಿ ಕಾಗೆಯನ್ನೇ ಸಂದೇಶ ರವಾನಿಸಲು ಬಳಸಲಾಗುತ್ತಿತ್ತು. ನಮ್ಮ ಹಿರಿಯರ ಪ್ರಕಾರ ಕಾಗೆಗೂ ಮನುಷ್ಯರಿಗೂ ಅವೀನಾಭಾವ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಹಿಂದೂಗಳ ಆಚರಣೆಯಲ್ಲಿ ಕಾಗೆಗೆ ಪಿಂಡ ಕೂಡ ಇಡುತ್ತಾರೆ.
ಪಿತೃ ಪಕ್ಷದ ಶ್ರಾದ್ಧ ಸಮಯದಲ್ಲಿ ಕಾಗೆಗೆ ಪಿಂಡ ಇಡುತ್ತೇವೆ. ಕಾರಣ ಇಷ್ಟೇ, ಕಾಗೆಯನ್ನ ‘ಮೇಸೆಂಜರ್ ಆಫ್ ಪಿತೃಲೋಕ’ ಎಂದು ಪರಿಗಣಿಸಲಾಗುತ್ತೆ. ಇನ್ನು, ಅದೇ ಪಿತೃಲೋಕದಲ್ಲಿ ನಮ್ಮ ಪಿತೃಗಳು ಇರುವುದು. ನಮ್ಮ ಪಿತೃಗಳ ಆತ್ಮ ಕಾಗೆಯಲ್ಲಿ ಇದೆ ಎನ್ನುವ ನಂಬಿಕೆಯಿಂದ. ಕಾಗೆ ಸ್ವೀಕಾರ ಮಾಡಿದ ಆಹಾರ ನಮ್ಮ ಪಿತೃಗಳನ್ನ ಖುಷಿ ಪಡಿಸುತ್ತೆ ಎನ್ನುವ ನಂಬಿಕೆ ಕೂಡ ಇದೆ.
ಪಿತೃಗಳಂತೆ ಕಾಗೆ..!
ಕಾಗೆ ಎದ್ದೇಳೋದು ಬ್ರಾಹ್ಮಿ ಮುಹೂರ್ತದಲ್ಲಿ. ಕೋಳಿ ಅಲ್ವಾ ಮುಂಜಾನೆ ಬೇಗ ಏಳೋದು ಅಂತ ಕೇಳಿದ್ರೆ ನೀವು, ಕೋಳಿ ಸೂರ್ಯೋದಯದ ಸಮಯದಲ್ಲಿ ಎದ್ದೇಳುತ್ತೆ. ಆದ್ರೆ, ಬ್ರಾಹ್ಮಿ ಮೂಹೂರ್ತದಲ್ಲಿ ಅಂದ್ರೆ ಸೂರ್ಯೋದಯಕ್ಕೂ ಮುಂಚೆ ಎದ್ದೇಳೋದು ಕಾಗೆ. ಇನ್ನು ಸೂರ್ಯಾಸ್ತ ಆದ ನಂತರ ಅದು ಏನನ್ನು ಸೇರಿಸೋದಿಲ್ಲ. ಇವೆಲ್ಲಾ ಶಾಸ್ತ್ರದ ಪ್ರಕಾರ ಇದೆ.
ನಾವು ಏನೇ ಆಹಾರ ಕೊಟ್ರು ಕಾಗೆಗಳು ಅದನ್ನ ಹಂಚಿ ತಿನ್ನುತ್ತವೆ. ನಮ್ಮ ಪಿತೃಗಳು ಇದ್ದದ್ದೂ ಹಾಗೇ ಅಲ್ವಾ.. ಈಗ ಹಂಚಿ ತಿನ್ನೋದು, ಬ್ರಾಹ್ಮಿ ಮೂಹೂರ್ತಕ್ಕೆ ಏಳೋದು, ಸೂರ್ಯಾಸ್ತ ಆಗುವ ಮೊದಲು ಊಟ ಮುಗಿಸೋದು ಈ ಎಲ್ಲವೂ ಕಮ್ಮಿ ಆಗಿದೆ. ಅದಕ್ಕೆ ಕಾಗೆಗಳು ಕೂಡ ಮೊದಲಿನ ಹಾಗೇ ಹೆಚ್ಚು ಕಂಡು ಬರುವುದಿಲ್ಲ.
ಕಾ..ಕಾ…ಅಂದ್ರೇನು..?
ಕಾಗೆ ಶನಿಯ ವಾಹನ ಕೂಡ ಹೌದು. ಹಾಗಾಗಿ ಕಾಗೆ ಜೀವನದಲ್ಲಿ ಬರುವ ಒಳ್ಳೆಯ ಅಥವಾ ಕೆಟ್ಟ ಸೂಚನೆಗಳನ್ನ ಕೊಡುವ ಒಂದು ಮಾಧ್ಯಮ ಕೂಡ ಹೌದು. ಕಾಗೆಯನ್ನು ನಾವು ಕರೆಯುವಾಗ ಕಾ… ಕಾ… ಅಂತ ಕರೆಯುತ್ತೇವೆ. ಈ ಕಾ ಅಂದ್ರೆ ಕಾಪಾಡು ಅನ್ನೋ ಅರ್ಥ ಕೂಡ ಬರುತ್ತೆ. ಒಂದು ಲೆಕ್ಕದಲ್ಲಿ ನೋಡಲು ಹೋದರೆ ಪಿತೃಗಳಲ್ಲಿ ನಾವು ಕೇಳೋ ಮೊರೆ ಇದು. ‘ನಮ್ಮನ್ನು ಕಾಪಾಡಿ’ ಎಂದು. ಇದಕ್ಕೆ ಉತ್ತರವಾಗಿ ಕಾಗೆ ಕೂಡ ‘ಕಾ ಕಾ’ ಅನ್ನುತ್ತದೆ.
ಕಾ ಅಂದ್ರೆ ಸಂಸ್ಕೃತದಲ್ಲಿ ಯಾರು ಎಂದು ಅರ್ಥ. ನೀನ್ಯಾರು..? ನಿನ್ನೊಂದಿಗೆ ಇರೋರು ಯಾರು..? ನೀನು ಸತ್ತ ಮೇಲೆ ನಿನ್ನೊಂದಿಗೆ ಬರುವವರು ಯಾರು..? ಯೋಚಿಸು ಅನ್ನೋ ಸಂದೇಶ ಕೂಡ ಇದರಲ್ಲಿ ಗೌಪ್ಯವಾಗಿ ಅಡಗಿದೆ. ಹೆಚ್ಚಿನ ಜನರಿಗೆ ನಿಮ್ಮ ಪಿತೃಗಳು ಕಾಗೆಯ ರೂಪದಲ್ಲಿ ಬಂದು ನಿಮಗೆ ಸೂಚನೆ ಕೊಟ್ಟದ್ದು ಇರಬಹುದು. ಒಟ್ಟಾರೆಯಾಗಿ, ಹೇಳುವುದಾದರೆ ಕಾಗೆಗೇ ತನ್ನದೇ ಆದಂತಹ ವೈಶಿಷ್ಟ್ಯಗಳು ಇವೆ.
- DAKSHINA KANNADA6 days ago
ಮಂಗಳೂರು : ಬೈಕ್ಗೆ ಕಾರು ಡಿಕ್ಕಿ; ಇಹಲೋಕ ತ್ಯಜಿಸಿದ ವಿದ್ಯಾರ್ಥಿ
- DAKSHINA KANNADA6 days ago
ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಂತೆ..! ಏನಿದು ಸೀರೆ ಕ್ಯಾನ್ಸರ್?
- FILM7 days ago
ಹಿರಿಯ ನಟ ನಿರ್ಮಾಪಕ…ಕಳ್ಳ ‘ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ
- DAKSHINA KANNADA7 days ago
ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!