Connect with us

ಕೊರೊನಾ ಸ್ಫೋಟದ ನಡುವೆ ರೋಹಿಣಿ ಮಳೆಯ ಅಬ್ಬರ: ಬೆಂಗಳೂರಿನಲ್ಲಿ ಧರೆಗುರುಳಿದ ಮರಗಳು..

Published

on

ಕೊರೊನಾ ಸ್ಫೋಟದ ನಡುವೆ ರೋಹಿಣಿ ಮಳೆಯ ಅಬ್ಬರ: ಬೆಂಗಳೂರಿನಲ್ಲಿ ಧರೆಗುರುಳಿದ ಮರಗಳು..

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸ್ಫೋಟದ ನಡುವೆ ರೋಹಿಣಿ ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿದೆ.

ಬೆಂಗಳೂರಿನಲ್ಲಿ ಸತತ ನಾಲ್ಕನೇ ದಿನವೂ ನಿನ್ನೆ (ಮೇ 29) ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.

ವಾಯು ಮತ್ತು ವರುಣದೇವನ ಅಬ್ಬರಕ್ಕೆ ನಗರದ ಹಲವೆಡೆ 40ಕ್ಕೂ ಹೆಚ್ಚು ಮರಗಳು ಉರುಳಿದ್ದು, ಹಲವು ವಾಹನ ಜಖಂ ಆಗಿದೆ.

ಕೆ.ಆರ್.ವೃತ್ತದಲ್ಲಿ ಚಲಿಸುವ ಕಾರಿನ ಮೇಲೆ ಮರ ಬಿದ್ದಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

ಮಲ್ಲೇಶ್ವರಂನಲ್ಲಿ ಕಟ್ಟಡವೊಂದಕ್ಕೆ ಹಾನಿಯಾಗಿದ್ದು, ಕಾರೊಂದು ಸಂಪೂರ್ಣವಾಗಿ ಹಾನಿಗೊಂಡಿದೆ.

ವರುಣನ ಅಬ್ಬರಕ್ಕೆ ಬೆಂಗಳೂರು ಥಂಡಾ ಹೊಡೆದಿದ್ದು, ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡಿದರು.

ಬಹುತೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲದಲ್ಲಿ ಬೈಕೊಂದು ಕೊಚ್ಚಿ ಹೋಗಿದ್ದು.

ಹೆಬ್ಬಾಳ ಬಳಿ ಲುಂಬಿಣಿ ಗಾರ್ಡನ್, ಆನಂದರಾವ್ ಸರ್ಕಲ್ ಸಂದ್ಯಾ ಲಾಡ್ಜ್, ವಿಧಾನ ಸೌಧ, ವಿದ್ಯಾರಣ್ಯಪುರ, ಕಾವೇರಿ ಜಂಕ್ಷನ್ ಸೇರಿದಂತೆ ರಾಜಾಜಿನಗರ ಬಳಿ ರಸ್ತೆಯುದ್ದಕ್ಕೂ ಮರಗಳು ರಸ್ತೆಗೆ ಉರುಳಿ ಬಿದಿದ್ದವು.

ಇದನ್ನು ವಿಲೇವಾರಿ ಮಾಡಲು ಬೆಂಗಳೂರು ಬಿಬಿಎಂಪಿ ಹರಸಾಹಸಪಟ್ಟಿತು.

Click to comment

Leave a Reply

Your email address will not be published. Required fields are marked *

DAKSHINA KANNADA

ಬಿಜೆಪಿಗೆ ಸವಾಲಾದ ಬಿರುವೆರ್..! ವರ್ಕೌಟ್‌ ಆಗಿಲ್ಲ ನಮೋ ಪ್ಲ್ಯಾನ್‌…!

Published

on

ಮಂಗಳೂರು : 33 ವರ್ಷದ ಬಳಿಕ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪ್ರಚಾರದ ವೈಖರಿ ಹಾಗೂ ಪಡೆದುಕೊಳ್ಳುತ್ತಿರುವ ಜನಪ್ರೀಯತೆ ಒಂದು ಕಾರಣವಾದ್ರೆ. ಬಿಜೆಪಿಯಲ್ಲಿದ್ದ ಬಿಲ್ಲವ ಸಮೂದಾಯದ ಬಹುದೊಡ್ಡ ಮತದಾರರು ಪದ್ಮರಾಜ್ ಕಡೆ ವಾಲಿರುವುದು ಮತ್ತೊಂದು ಕಾರಣ . ಈ ಎರಡು ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಕರೆಯಿಸಿ ಅವರ ಮೂಲಕ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಮಾಡಿಸಲಾಗಿದೆ.

ಎಚ್ಚರಿಕೆ ನೀಡಿದ್ದ ನಾರಾಯಣಗುರು ವಿಚಾರ ವೇದಿಕೆ..!

ಬಿಲ್ಲವರನ್ನು ಓಲೈಸಿಕೊಳ್ಳಲು ಬಿಜೆಪಿಗೆ ಇದ್ದ ಒಂದೇ ಮಾರ್ಗ ಅಂದ್ರೆ ಅದು ನಾರಾಯಣಗುರು.  ಆ ಒಂದು ಕಾರಣ ಇಟ್ಟುಕೊಂಡು ಕಾರಣಾಂತರದಿಂದ ಸಮಾವೇಶ ರದ್ಧು ಮಾಡಿ ರೋಡ್‌ ಶೋ ನಡೆಸಲಾಗಿತ್ತು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿ ಬಳಿಕ ರೋಡ್‌ ಶೋ ಮಾಡುವ ಬಗ್ಗೆ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಆದ್ರೆ ಈ ವಿಚಾರ ತಿಳಿಯುತ್ತಿದ್ದಂತೆ ನಾರಾಯಣಗುರು ವಿಚಾರ ವೇದಿಕೆ ಮೂಲಕ ಸತ್ಯಜಿತ್‌ ಸುರತ್ಕಲ್‌ ಬಿಜೆಪಿ ನಾಯಕರಿಗೆ ಹಲವು ಸವಾಲು ಎಸೆದಿದ್ದರು.  ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಟ್ಯಾಬ್ಲೋ ನಿರಾಕರಣೆ, ರಾಜ್ಯದಲ್ಲಿ ಪಠ್ಯದಿಂದ ನಾರಾಯಣಗುರುಗಳ ಪಾಠ ತೆಗೆದು ಹಾಕಿರುವುದು ಹಾಗೂ ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಉತ್ತರ ನೀಡಿ ಎಂದು ಆಗ್ರಹಿಸಿದ್ದರು.  ಇಷ್ಟೆಲ್ಲಾ ಮಾಡಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸುವ ಬಿಜೆಪಿಯ ನಿರ್ಧಾರವನ್ನು ಟೀಕಿಸಿದ್ದರು.

 

ಬಿಲ್ಲವರ ಕಡೆಗಣನೆ ಮಾಡಿದ ಬಿಜೆಪಿ ನಾಯಕರು…!

ಪ್ರಧಾನಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದ್ರೆ ಎಲ್ಲವೂ ಸರಿಯಾಗಲಿದೆ ಅಂದುಕೊಂಡಿದ್ದರು. ಆದ್ರೆ ಬಹುತೇಕ ಬಿಲ್ಲವರು ಮೋದಿ ಕಾರ್ಯಕ್ರಮದ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಧಾನಿ ಮೋದಿ ಗುರುಗಳಿಗೆ ಹಾರ ಹಾಕುವಾಗ ಮಾಡಿದ ಆ ಒಂದು ತಪ್ಪು ಬಿಲ್ಲವ ಸಮೂದಾಯದ ಜನರ ಮನಸಿಗೆ ನೋವುಂಟು ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲದೆ ನಾರಾಯಣ ಗುರು ವೃತ್ತ ನಿರ್ಮಾಣದ ರೂವಾರಿಯಾಗಿದ್ದ ಬಿರುವೆರ ಕುಡ್ಲದ ಮುಖಂಡ ಉದಯ ಪೂಜಾರಿಯನ್ನು ಕಡೆಗಣಿಸಿದ್ದೂ ಬಿಲ್ಲವ ಯುವಕರಲ್ಲಿ ಅಸಮಾಧಾನ ಮೂಡಿಸಿದೆ. ಈ ವಿಚಾರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಗುರು ಪೀಠದ ಮೇಲೆ ಕಾಲಿರಿಸಿದ ಪ್ರಧಾನಿ..!

ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದ ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲಿರಿಸಿದ್ದರು. ಇದು ಬಿಲ್ಲವರ ಸ್ವಾಭಿಮಾನದ ಮೇಲೆ ಸ್ಥಳಿಯ ಬಿಜೆಪಿಯ ನಾಯಕರು ಇಟ್ಟ ಕಾಲು ಎಂದು ಟೀಕೆ ವ್ಯಕ್ತವಾಗಿದೆ. ಬಿರುವೆರ ಕುಡ್ಲದ ಉದಯ ಪೂಜಾರಿಯನ್ನು ಕಡೆಗಣಿಸಿದ್ದಲ್ಲದೆ, ಮೋದಿಯವರಿಗೆ ಸರಿಯಾದ ಮಾರ್ಗದರ್ಶನ ನೀಡದೆ ಈ ಪ್ರಮಾದ ಆಗಿದೆ. ಪ್ರಧಾನಿ ಮೋದಿಯ ಮೇಲೆ ಇರುವ ಅಭಿಮಾನ ಬಿಟ್ಟು ಕೊಡದ ಬಿಲ್ಲವ ಯುವಕರು ಇದಕ್ಕೆ ಸ್ಥಳಿಯ ಬಿಜೆಪಿ ನಾಯಕರೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲು ಇರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ಕಾಂಗ್ರೆಸ್‌ ಪಕ್ಷ ಕೂಡಾ ಅಸ್ತ್ರವಾಗಿ ಬಳಸಿಕೊಂಡಿದೆ.

 

ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಹೋಗಿ ಬಿಜೆಪಿ ಯಡವಟ್ಟು…!

ಪದ್ಮರಾಜ್‌ ಪೂಜಾರಿ ಅವರಿಗೆ ಟಿಕೇಟ್‌ ಸಿಕ್ಕ ಸಮಯದಲ್ಲಿ ಭಾಷಣ ಮಾಡಿದ್ದ ಬಿಜೆಪಿ ಅಭ್ಯರ್ಥಿ ಬೃಜೇಶ್‌ ಚೌಟ ಪದ್ಮರಾಜ್‌ ಪೂಜಾರಿ ದೇಶ ದ್ರೋಹಿ ಎಂದು ಕರೆದಿದ್ದರು . ಆ ಒಂದು ಹೇಳಿಕೆಯ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಬಿಜೆಪಿ ನಾಯಕರು ಹಲವಾರು ಸರ್ಕಸ್‌ ಮಾಡಿದ್ದಾರೆ. ಜನಾರ್ಧನ ಪೂಜಾರಿ ಕಾಲಿಗೆ ಬಿದ್ದ ಬೃಜೇಶ್‌ ಚೌಟ ಒಂದು ರೀತಿಯಲ್ಲಿ ಬಿಲ್ಲವರ ಮನ ಒಲಿಸುವ ಪ್ರಯತ್ನ ಕೂಡಾ ಮಾಡಿದ್ದಾರೆ. ಆದರೆ ಅದಾಗಲೇ ಬಿಲ್ಲವ ಯುವಕರು ಅದೇನೇ ಆದ್ರೂ ಈ ಬಾರಿ ಪದ್ಮರಾಜ್‌ ಪೂಜಾರಿ ಗೆಲ್ಲಿಸುವ ಪಣತೊಟ್ಟಿದ್ದಾರೆ. ಬಿಜೆಪಿ ಮತಗಳು ಕೇವಲ ಜಾತಿ ಹೆಸರಿನಲ್ಲಿ ಕಾಂಗ್ರೆಸ್‌ ಪಾಲಾಗಲಿದೆ ಅನ್ನೋ ಆತಂಕದಲ್ಲಿ ಬಿಲ್ಲವರ  ಓಲೈಕೆಗೆ ಪ್ರಧಾನಿ ಮೋದಿಯವರನ್ನು ಕರೆಸಲಾಗಿದೆ. ಆದ್ರೆ ಈಗ ಪ್ರಧಾನಿ ಮೋದಿ ಅವರಿಂದ ಆದ ಪ್ರಮಾದ ಹಾಗೂ ಸ್ಥಳೀಯ ನಾಯಕರಿಂದ ಬಿರುವೆರ ಕುಡ್ಲದ ನಾಯಕನ ಕಡೆಗಣನೆ ಬಿಜೆಪಿಗೆ ಮುಳುವಾಗುವ ಲಕ್ಷಣ ಕಾಣಿಸಿದೆ. ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ ಬಂದು ಹೋದಾಗಿನಿಂದ ಈ ಚರ್ಚೆ ಜೋರಾಗಿ ನಡೆಯುತ್ತಿದೆ.

Continue Reading

FILM

ಮೂಗುತಿ ಸುಂದರಿ ಮೇಲೆ ತೆಲುಗು ಹೀರೋ ಕಣ್ಣು…!

Published

on

ಮಂಗಳೂರು ( ಸ್ಯಾಂಡಲ್‌ವುಡ್‌ ) : ಸುಪರ್ ಹಿಟ್ ಕಾಂತಾರದ ಮೂಲಕ ಮೂಗುತಿ ಸುಂದರಿ ಅಂತ ಫೇಮಸ್ ಆಗಿದ್ದ ಸಪ್ತಮಿ ಗೌಡ ಮೇಲೆ ತೆಲುಗು ನಿರ್ಮಾಪಕರ ಕಣ್ಣು ಬಿದ್ದಿದೆ. ಹೀಗಾಗಿ ಸಪ್ತಮಿ ಗೌಡಗೆ ತೆಲುಗು ಸಿನೆಮಾದಲ್ಲಿ ಉತ್ತಮ ಅವಕಾಶ ನೀಡಿ ಕರೆಸಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದ ಮೂಗುತಿ ಸುಂದರಿ ಸಪ್ತಮಿ ಗೌಡ ತೆಲುಗಿನ ‘ತಮ್ಮುಡು’ ಸಿನೆಮಾದಲ್ಲಿ ಹೀರೋ ನಿತಿನ್ ಜೊತೆ ನಟಿಸಲಿದ್ದಾರೆ.

ಕೆಲ ನಟಿಯರು ಇರೋ ಉದ್ಯಮದಲ್ಲಿ ಏನಾದರೂ ಸಾಧಿಸಿ ಬೇರೆ ಭಾಷೆಯತ್ತ ಮುಖ ಮಾಡ್ತಾರೆ. ಇನ್ನು ಕೆಲ ನಟಿಯರು ಏನಾದರೂ ಸಾಧಿಸಲೆಬೇಕು ಅಂತ ಪಕ್ಕದ ಮನೆಗಳತ್ತ ಮುಖ ಮಾಡ್ತಾರೆ. ಇದಕ್ಕೆ ಸಪ್ತಮಿಗೌಡ ಅತ್ಯುತ್ತಮ ಉದಾಹರಣೆ.ಹೌದು. ಕಾಂತಾರ ಮೂಲಕ ಭಾಷೆಯ ಭೇದ ಭಾವ ಇಲ್ಲದೇ, ಎಲ್ಲ ವರ್ಗದ ಜನರ ಹೃದಯವನ್ನ ಗೆದ್ದ ಸಪ್ತಮಿಗೌಡ ‘ಯುವ’ದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಕಳೆದ ನಾಲ್ಕು ವರ್ಷದಲ್ಲಿ ಪಾಪ್‌ ಕಾರ್ನ್ ಮಂಕಿ ಟೈಗರ್, ಕಾಂತಾರ, ಯುವ ಹೀಗೆ ಮೂರು ಕನ್ನಡ ಸಿನಿಮಾಗಳನ್ನ ಮಾಡಿರುವ ಸಪ್ತಮಿ ಗೌಡ, ಇದೀಗ ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. `ಜಯಂ’ ಸಿನಿಮಾ ಹೀರೊ ನಿತಿನ್‌ ಅವರ ಮುಂದಿನ ಚಿತ್ರ ʻತಮ್ಮುಡುʼದಲ್ಲಿ ಸಪ್ತಮಿ ಗೌಡ ಹೀರೊಯಿನ್.

ತಮ್ಮುಡು ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಇನ್ನೂ ರೇಸ್‌ ಕೋರ್ಸ್ ಮೈದಾನದಲ್ಲಿನ ಜಾಕಿಗಳಿಗೂ ಸೆಡ್ಡು ಹೊಡೆಯುವಂತೆ ಸಪ್ತಮಿ ಗೌಡ ಈ ಚಿತ್ರಕ್ಕೆ ಕುದುರೆ ಸವಾರಿಯನ್ನ ಕಲಿತಿದ್ದಾರೆ.

ಇನ್ನೂ ತಮ್ಮ ಮೊದಲ ತೆಲುಗು ಚಿತ್ರದಲ್ಲಿಯೇ ನಿತಿನ್ ಅವರಂತಹ ಪ್ರತಿಭಾವಂತ ನಟನ ಜೊತೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಸಪ್ತಮಿಗೌಡ ಅವರಿಗೆ ಸಿಕ್ಕಾಪಟ್ಟೆ ಖುಷಿ ಇದೆ. ಸೋನೆ ಪೆ ಸುಹಾಗ ಅನ್ನುವಂತೆ ವಕೀಲ್ ಸಾಬ್ ಅಂತಹ ಚಿತ್ರವನ್ನ ನಿರ್ದೇಶಿಸಿರುವ ವೇಣು ಶ್ರೀರಾಮ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಸಪ್ತಮಿ ಗೌಡ ಸದ್ಯಕ್ಕೆ ಕ್ಲೌಡ್ ನೈನ್‌ ನಲ್ಲಿದ್ದಾರೆ. ಒಟ್ನಲ್ಲಿ ಕನ್ನಡದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಕನ್ನಡಿಗರ ಮನಗೆದ್ದ ಸಪ್ತಮಿ ಗೌಡ ಈಗ ಬಾಲಿವುಡ್‌ ನಂತರ ಟಾಲಿವುಡ್‌ ಕಡೆ ಹೊರಟಿದ್ದಾರೆ.

Continue Reading

LATEST NEWS

ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Published

on

ಬೆಂಗಳೂರು: ಚುನಾವಣಾ ಪ್ರಚಾರದ ವೇಳೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಕಿರಿಕ್ ಮಾಡಿಕೊಂಡಿದ್ದಾರೆ. ಠೇವಣಿದಾರರ ಸಭೆ ಕರೆದು ಸಭೇಯ ನಡುವೆ ಕಿರಿಕ್ ಮಾಡಿ ಸಭೆಯಿಂದ ಹೊರ ನಡೆದಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಕೈ ಹಿಡಿದು ಎಳೆದಿದ್ದು, ಚುನಾವಣಾ ಅಧಿಕಾರಿಗಳ  ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

thejasvi surya

READ MORE..; ಮೈದಾನ ಸ್ವಚ್ಛತೆಯಲ್ಲಿ ತೊಡಗಿದ ಒಡೆಯರ್ ದಂಪತಿ..!

ಎಪ್ರಿಲ್ 13 ರಂದು ಈ ಘಟನೆ ನಡೆದಿದ್ದು, ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ತೇಜಸ್ವಿ ಸೂರ್ಯ ಕೋಪರೇಟಿವ ಬ್ಯಾಂಕ್ ಠೇವಣಿದಾರರ ಸಭೆ ಕರೆದಿದ್ದರು. ಸಭೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಠೇವಣಿದಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಠೇವಣಿದಾರರು ಕೇಳಿದ ಪ್ರಶ್ನೆ ಸರಿಯಾಗಿ ಉತ್ತರಿಸಲಾಗದೆ ತೇಜಸ್ವಿ ಸೂರ್ಯ ತಬ್ಬಿಬ್ಬಾಗಿದ್ದರು. ಹೀಗಾಗಿ ಠೇವಣಿದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿ ತೇಜಸ್ವಿ ಸೂರ್ಯ ಸಭೆಯಿಂದ ಹೊರ ನಡೆಯಲು ಮುಂದಾಗಿದ್ದಾರೆ. ಈ ವೇಳೆ ತೇಜಸ್ವಿ ಸೂರ್ಯ ಅವರಿಗೆ ಸಭೆಯಲ್ಲಿದ್ದವರು ಡೌನ್ ಡೌನ್ ಎಂದು ಘೋಷಣೆ ಕೂಗಿದ್ದಾರೆ. ಅವರು ಹೊರ ಹೋಗದಂತೆ ತಡೆಯಲು ಬಂದವರನ್ನು ತಳ್ಳಿದ್ದು , ಮಹಿಳೆಯೊಬ್ಬರ ಕೈ ಹಿಡಿದು ಎಳೆದಿದ್ದಾರೆ. ಚುನಾವಣಾ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದ್ದಾಗಿ ಸಭೆಯಲ್ಲಿದ್ದ ಠೇವಣಿದಾರರು ಆರೋಪಿಸಿದ್ದಾರೆ.

Continue Reading

LATEST NEWS

Trending