Connect with us

BANTWAL

ಒಡಿಯೂರು ತುಳು ನಾಟಕೋತ್ಸವ ಸಂಪನ್ನ-ಫಲಿತಾಂಶ ಪ್ರಕಟ

Published

on

ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾರಂಗಣದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಶಂಬರ 1ರಿಂದ 7ರ ತನಕ ಶ್ರೀದತ್ತ ಜಯಂತಿ ಮಹೋತ್ಸವ – ಶ್ರೀದತ್ತ ಮಹಾಯಾಗ ಸಪ್ತಾಹ – ಹರಿಕಥಾ ಸತ್ಸಂಗ ಸಪ್ತಾಹ, ಒಡಿಯೂರು ತುಳು ನಾಟಕೋತ್ಸವ-ತುಳು ನಾಟಕ ಸ್ಪರ್ಧೆಯು ಸಂಪನ್ನಗೊಂಡಿತು. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ 16 ನಾಟಕ ತಂಡಗಳು ಭಾಗವಹಿಸಿ ಪ್ರದರ್ಶಿಸಿದ ನಾಟಕಗಳ ಫಲಿತಾಂಶ ಕೂಡಾ ಪ್ರಕಟವಾಗಿದೆ.

ಪ್ರೊ. ಅಮೃತ ಸೋಮೇಶ್ವರ ರಚಿಸಿದ, ವಿದ್ದು ಉಚ್ಚಿಲ್ ನಿರ್ದೇಶನದ, ಜರ್ನಿ ಥೇಟರ್ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸಿದ ‘ಗೋಂದೊಳು’ ಪ್ರಥಮ ಬಹುಮಾನ, ನವೀನ್ ಸಾಲ್ಯಾನ್ ಪಿತ್ರೋಡಿ ರಚಿಸಿ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ನಿರ್ದೇಶಿಸಿದ, ಕಲಾಚಾವಡಿ (ರಿ.), ಅಂಬಲಪಾಡಿ ಇವರು ಪ್ರದರ್ಶಿಸಿದ ನಾಟಕ ‘ಮೋಕೆದ ಮದಿಮಾಲ್’ ದ್ವಿತೀಯ ಬಹುಮಾನ ಹಾಗೂ ಬಾಲಕೃಷ್ಣ ಶಿಬಾರ್ಲ ರಚಿಸಿ, ದಿವಾಕರ ಕಟೀಲು ನಿರ್ದೇಶಿಸಿದ, ಸುಮನಸ ಕೊಡವೂರು ಇವರು ಪ್ರದರ್ಶನಗೈದ ನಾಟಕ ‘ಕಾಪ’ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.


ಉತ್ತಮ ನಿರ್ದೇಶನ: ಪ್ರಥಮ : ವಿದ್ದು ಉಚ್ಚಿಲ್ – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು)
ದ್ವಿತೀಯ: ದಿವಾಕರ ಕಟೀಲು – ನಾಟಕ: ಕಾಪ – (ಸುಮನಸ ಕೊಡವೂರು)
ತೃತೀಯ: ರಮೇಶ್ ಆಚಾರ್ಯ ನೂರಾಲ್‍ಬೆಟ್ಟು – ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)

ಕಥಾನಾಯಕ:
ಪ್ರಥಮ : ಶರತ್ ಶೆಟ್ಟಿ ಕೆಮ್ತೂರು (ಚಂದ್ರಶೇಖರ)- ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)
ದ್ವಿತೀಯ: ಅಕ್ಷತ್ ಅಮೀನ್(ಗಿರಿ) – ನಾಟಕ: ಕಾಪ – (ಸುಮನಸ ಕೊಡವೂರು)
ತೃತೀಯ: ಯುವ ಶೆಟ್ಟಿ (ರಾಜ್)- ನಾಟಕ: ನಾಲಯಿ ಮಗುರುಜಿ (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)

ಕಥಾನಾಯಕಿ
ಪ್ರಥಮ : ಸತ್ಯಾ ಜೀವನ್ ಸೋಮೇಶ್ವರ(ದೇಬೆ)- ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು
ದ್ವಿತೀಯ: ಅಶ್ವಿನಿ ಸುವರ್ಣ(ಜಾಹ್ನವಿ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)
ತೃತೀಯ: ಶ್ರಾವ್ಯ ಶೆಟ್ಟಿ ಬನ್ನಂಜೆ(ಸಪ್ನ)- ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)

ಹಾಸ್ಯನಟ
ಪ್ರಥಮ : ಪ್ರಭಾಕರ ಆಚಾರ್ಯ(ಗಂಗು) – ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)
ದ್ವಿತೀಯ: ರಮೇಶ್ ಆಚಾರ್ಯ(ಪಾಂಡು)- ನಾಟಕ: ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)
ತೃತೀಯ: ದಕ್ಷತ್ ಕಾಣಿಚ್ಚಾರು(ಪಾಂಡುರಂಗ)-ನಾಟಕ:ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)

ಖಳನಾಯಕ
ಪ್ರಥಮ : ಸುನಿಲ್ ಪಲ್ಲಮಜಲು(ಪೆರ್ಗಡೆ) – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು
ದ್ವಿತೀಯ: ಪ್ರತೀಕ್ ಸಾಲ್ಯಾನ್(ಶಂಕರ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)
ತೃತೀಯ:ನಝೀರ್ ಕೊಣಾಜೆ(ಫೈನಾನ್ಸ್ ರಾಜ)-ನಾಟಕ:ಕಟ್ಟೆದ ಗುಳಿಗೆ ಕೈಬುಡಯೆ(ಮಂಗಳಾ ಕಲಾವಿದೆರ್, ಮಂಗಳಾದೇವಿ)

ಪೋಷಕ ನಟ
ಪ್ರಥಮ : ಕೇಶವ ಆಚಾರ್ಯ ನೆಲ್ಲಿಕಾರು(ದೇಜಪ್ಪ ಮಾಸ್ಟ್ರು)-ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್,ನೂರಾಲ್‍ಬೆಟ್ಟು)
ದ್ವಿತೀಯ: ಅರುಣ್ ಶೆಟ್ಟಿ ಜಪ್ಪು(ಕೊರಗಪ್ಪ)- ನಾಟಕ: ಕಟ್ಟೆದ ಗುಳಿಗೆ ಕೈಬುಡಯೆ (ಮಂಗಳಾ ಕಲಾವಿದೆರ್, ಮಂಗಳಾದೇವಿ)
ತೃತೀಯ: ನಿತೇಶ್ ಕೊರಿಯಾ(ಕರಿಯ) – ನಾಟಕ: ಕಾಪ – (ಸುಮನಸ ಕೊಡವೂರು)

ಪೋಷಕ ನಟಿ
ಪ್ರಥಮ : ಸುಗಂಧಿ ಉಮೇಶ್ ಕಲ್ಮಾಡಿ(ರಾಮಕ್ಕ)-ನಾಟಕ: ಪಟ್ಟೆ ತತ್ತ್‍ಂಡ (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)
ದ್ವಿತೀಯ: ಹರಿಣಿ ಪ್ರಕಾಶ್ ಪಕಳ(ರೇಖಾ)-ನಾಟಕ:ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)

ಸಂಗೀತ:
ಪ್ರಥಮ : ಮೇಘನಾ ಕುಂದಾಪುರ – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು)
ದ್ವಿತೀಯ: ತಂಗವೇಲು ಕೊಯಿಲ – ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)
ತೃತೀಯ: ದಿವಾಕರ ಕಟೀಲು – ನಾಟಕ: ಕಾಪ – (ಸುಮನಸ ಕೊಡವೂರು)

ರಂಗವಿನ್ಯಾಸ:
ಪಟ್ಟೆ ತತ್ತ್‍ಂಡ (ನಮತುಳುವೆರ್ ಕಲಾ ಸಂಘಟನೆ, ಮುದ್ರಾಡಿ)

ಶಿಸ್ತುಬದ್ಧ ತಂಡ:
ಶ್ರೀ ವಾರಾಹಿ ಯುವಕ ಸಂಘ, ಉಡಲ್ ಕಲಾವಿದೆರ್, ಕನ್ಯಾನ
ಪ್ರತಿ ನಾಟಕದ ಶ್ರೇಷ್ಠ ನಟ:
ದಿನೇಶ್ ಕುಂಪಲ (ದೇವೇಂದ್ರ)- ನಾಟಕ: ಅಹಲ್ಯೆ – (ಸಂಗಮ ಕಲಾವಿದೆರ್, ಮಂಗಳೂರು)
ರವಿ
ಎಂ.ಎಸ್.ವರ್ಕಾಡಿ(ರಂಜಿತ್)-ನಾಟಕ: ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)
ಹರ್ಷಿತಾ ಜೋಗಿ ಮಿತ್ತನಡ್ಕ (ಸ್ವಾತಿ)-ನಾಟಕ: ಅಂಚಾಯಿನೆಟ್ ಇಂಚಾಂಡ್ (ಸಂತೋಷ್ ಕಲಾವಿದೆರ್, ಪಾವಳ, ವರ್ಕಾಡಿ)
ಶ್ರೀನಿವಾಸ ಶೆಟ್ಟಿ ವಿಟ್ಲ (ಸಾಯಿಬ)- ನಾಟಕ: ಅಮರ್ ಸಿರಿಕುಲು – (ಬಂಟವಾಳದ ಕಲಾವಿದೆರ್)
ರಾಜು ಸಾಲ್ಯಾನ್ ಕೋಜಕುಳಿ (ಗೋಪಾಲ)- ನಾಟಕ: ಮೋಕೆದ ಮದಿಮಾಲ್ – (ರಂಗಚಾವಡಿ (ರಿ.), ಉಡುಪಿ)
ರೋಹಿತ್ ಶೆಟ್ಟಿ(ಡಾ.ಮಧು) – ನಾಟಕ: ಬಯ್ಯಮಲ್ಲಿಗೆ – (ಕೂಡ್ದಿ ಕಲಾವಿದರು, ಪೆರ್ಡೂರು)
ನಮಿತ ಅಳಪೆ(ನಮಿತ)- ನಾಟಕ: ಕಟ್ಟೆದ ಗುಳಿಗೆ ಕೈ ಬುಡಯೆ – (ಮಂಗಳ ಕಲಾವಿದೆರ್, ಮಂಗಳಾದೇವಿ)
ಸತೀಶ್ ಶೆಣೈ(ಅಲ್ಲಮಪ್ರಭು)- ನಾಟಕ: ಅಕ್ಕಮಹಾದೇವಿ – (ಸರಕಾರಿ ನೌಕರರ ಕಲಾ ಮತ್ತು ಸಾಂಸ್ಕøತಿಕ ಸಂಘ, ಮಂಗಳೂರು)
ರಾಮಚಂದ್ರ ಶೆಟ್ಟಿಗಾರ್ ಸಾಣೂರು(ಆದಿಶೇಷ) – ನಾಟಕ: ಬಾಕಿಲ್ ದೆಪ್ಪೊಡ್ಚಿ – (ಘಳಿಗೆ ಕಾಲವಿದರು, ನೂರಾಲ್‍ಬೆಟ್ಟು)
ಚಂದ್ರಿಕಾ ವಿ.ಕೋಟ್ಯಾನ್(ದುಗ್ಗಣ್ಣ ಕೊಂಡೆ) – ನಾಟಕ: ದೇವು ಪೂಂಜೆ – (ಶ್ರೀ ಶಾರದಾ ಮಹೋತ್ಸವ ನಾಡಹಬ್ಬ ಸಮಿತಿ, ಕೈರಂಗಳ)

ವಿಕಾಸ್(ರಾಮೇಗೌಡ)- ನಾಟಕ: ಅಮರಸಂಗ್ರಾಮ – (ಕುಕ್ಕೆಶ್ರೀ ಸರಕಾರಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ)

ಸಾಯಿನಾರಾಯಣ ಕಲ್ಮಡ್ಕ(ರೈಟರ್) – ನಾಟಕ: ಚೋಮನದುಡಿ – (ಕಲಾಗ್ರಾಮ ಕಲ್ಮಡ್ಕ)

ಹರೀಶ್ ನೀಲಿಪಾಲ್(ಕಾಂತು) – ನಾಟಕ: ಗೋಂದೊಳು – (ಜರ್ನಿ ಥೇಟರ್ (ರಿ.), ಮಂಗಳೂರು)

ಪ್ರವೀಣ್‍ಚಂದ್ರ ತೋನ್ಸೆ(ಬಾಣೆರೆ ಅಣ್ಣೆರ್)- ನಾಟಕ: ಕಾಪ – (ಸುಮನಸ ಕೊಡವೂರು)

ಸುಕುಮಾರ ಮೋಹನ್(ರಂಗಣ್ಣ)- ನಾಟಕ: ಪಟ್ಟೆ ತತ್ತ್‍ಂಡ – (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)
ಸಂದೀಪ್ ಶೆಟ್ಟಿ ರಾಯಿ(ಮೋಹನ)- ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)

ಮೆಚ್ಚುಗೆ ಪಡೆದ ಪಾತ್ರಗಳು: ಮಹಿಮಾ (ಅಹಲ್ಯೆ) – ನಾಟಕ: ಅಹಲ್ಯೆ – (ಸಂಗಮ ಕಲಾವಿದೆರ್, ಮಂಗಳೂರು)
ಹೊನ್ನಪ್ಪ ಗೌಡ(ಚೋಮ) – ನಾಟಕ: ಚೋಮನದುಡಿ – (ಕಲಾಗ್ರಾಮ ಕಲ್ಮಡ್ಕ)
ನಿತಿನ್ ಹೊಸಂಗಡಿ (ಶರತ್) – ನಾಟಕ:ಅಂಚಾಯಿನಟ್ ಇಂಚಾಂಡ್-(ಸಂತೋಷ್ ಕಲಾವಿದೆರ್, ಪಾವಳ, ವರ್ಕಾಡಿ)
ಸಂತೋಷ್ (ವಾಮನ ಬಾಳಿಗ) -ನಾಟಕ:ಅಮರಸಂಗ್ರಾಮ-(ಕುಕ್ಕೆಶ್ರೀ ಸರಕಾರಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ)

ಪ್ರವೀಣ್ ಮರ್ಕಮೆ (ಮಾರಪ್ಪ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್
ರಶ್ಮಿತಾ (ಶಾಂತಿ) – ನಾಟಕ: ಬಯ್ಯಮಲ್ಲಿಗೆ – (ಕೂಡ್ದಿ ಕಲಾವಿದೆರ್, ಪೆರ್ಡೂರು)
ಅಕ್ಷತಾ ಮುದ್ರಾಡಿ (ಅಮ್ಮು) – ನಾಟಕ: ಪಟ್ಟೆ ತತ್ತ್‍ಂಡ – (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)

ಅತ್ಯುತ್ತಮ ನೃತ್ಯ:
ಸುರಕ್ಷಾ ಶೆಟ್ಟಿ & ಸುದೀಕ್ಷಾ ಶೆಟ್ಟಿ – ನಾಟಕ: ಅಮರ್ ಸಿರಿಕುಲು – (ಬಂಟವಾಳದ ಕಲಾವಿದೆರ್)

ಶ್ರೀ ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು, ಶ್ರೀ ಮಂಜು ವಿಟ್ಲ, ಶ್ರೀ ಮಧು ಬಂಗೇರ ಕಲ್ಲಡ್ಕ ಇವರು ತೀರ್ಪುಗಾರರಾಗಿ ಸಹಕರಿಸಿದರು.

 

Click to comment

Leave a Reply

Your email address will not be published. Required fields are marked *

BANTWAL

ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು

Published

on

ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್‌ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.


ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.

Continue Reading

BANTWAL

ಪುತ್ತೂರು ಜಾತ್ರೆಯಿಂದ ಹಿಂದಿರುಗುವ ವೇಳೆ ಜವರಾಯನ ಅಟ್ಟಹಾಸ; ಜೀಪ್ ಡಿಕ್ಕಿ; ಬೈಕ್ ಸವಾರ ಸಾ*ವು

Published

on

ಪುತ್ತೂರು : ಜೀಪೊಂದು ಬೈಕ್ ಗೆ ಡಿ*ಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃ*ತಪಟ್ಟು, ಅವರ ಇಬ್ಬರು ಮಕ್ಕಳು ಗಂಭೀ*ರ ಗಾ*ಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯಲ್ಲಿನ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ (48) ಮೃ*ತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀ*ರ ಗಾಯಗೊಂಡಿದ್ದು, ಗಾ*ಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಲೋಕೇಶ್ ಅವರು  ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಅವರು ಚಲಾಯಿಸುತ್ತಿದ್ದ ಬೈಕ್ ಗೆ ಡಿ*ಕ್ಕಿಯಾಗಿತ್ತು.

ಇದನ್ನೂ ಓದಿ : ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್

ಡಿ*ಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 50 ಮೀಟರ್ ದೂರದ ತನಕ ಬೈಕನ್ನು ಜೀಪ್‌ ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಅವರು ಸ್ಥಳದಲ್ಲಿಯೇ ಸಾ*ವನ್ನಪ್ಪಿದ್ದಾರೆ. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಗಂಡ ಹೆಂಡತಿಗೆ ನಾಲ್ವರಿಂದ ಹಲ್ಲೆ..!!

Published

on

ಬಂಟ್ವಾಳ; ಅಪಘಾತದ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ಮಾಡಿರುವ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಎ.15ರಂದು ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ ಹಲ್ಲೆಗೊಳಗಾದವರು. ಹಲ್ಲೆಗೊಳಗಾದವರು ಬಂಟ್ವಾಳ ನಗರ ಪೋಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಂಜುನಾಥ್ ಅವರು ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಇವರ ಕಾರಿಗೆ ಹರಿಯಾಣ ಮೂಲದ ಕಾರೊಂದ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ಪ್ರಶ್ನಿಸಿದಕ್ಕೆ ಅಪಘಾತ ಎಸಗಿದ ಕಾರು ಮುಂದೆ ಹೋಗಿ ಕರಿಂಗಾಣ ಕ್ರಾಸ್ ಎಂಬಲ್ಲಿ ಅಡ್ಡವಾಗಿ ಇರಿಸಿ ಮಂಜುನಾಥ್ ಹಾಗೂ ಅವರ ಪತ್ನಿ ಪೂರ್ಣಿಮಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಪೂರ್ಣಿಮಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಹಲ್ಲೆಯಿಂದ ಮಂಜುನಾಥ್ ಅವರ ಕಣ್ಣಿಗೆ ಏಟಾಗಿದ್ದು, ಅವರು ಬಂಟ್ವಾಳ ನಗರ ಪೋಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದ ಕೂಡಲೇ ಸಂಚಾರ ಪೊಲೀಸರು ಭೇಟಿ ನೀಡಿ ವಾಹನವನ್ನು ಹಾಗೂ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ನಗರ ಪೊಲೀಸ್‌ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಭಜರಂಗದಳ, ವಿಶ್ವಹಿಂದೂಪರಿಷತ್ ಕಲ್ಲಡ್ಕ ಪ್ರಖಂಡ ಖಂಡನೆ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

Trending