ರಾಜಕೀಯ ಬದಿಗಿಟ್ಟು ಅಭಿವೃದ್ಧಿಗೆ ಪಣತೊಡಿ ಜಲ್ ಮಿಷನ್ ಯೋಜನೆಯಲ್ಲಿ ಶಾಸಕ ರಾಜೇಶ್ ಹೇಳಿಕೆ..!
ಬಂಟ್ವಾಳ:ರಾಜಕೀಯ ಬದಿಗಿಟ್ಟು ಅಭಿವೃದ್ಧಿಗಾಗಿ ಪಣತೊಡಿ , ಪ್ರತಿ ಗ್ರಾಮದ ಅಭಿವೃದ್ದಿಗಾಗಿ ಜೊತೆಯಾಗಿ ಕೆಲಸ ಮಾಡಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಪೆರಾಜೆ ಗ್ರಾಮದಲ್ಲಿ ಪ್ರತಿ ಮನೆಗೆ ನೀರು ನೀಡುವ ಹಿನ್ನಲೆಯಲ್ಲಿ ರೂ. 74.93 ಲಕ್ಷ ವೆಚ್ಚದಲ್ಲಿ ಕಾರ್ಯರೂಪಕ್ಕೆ ಬರುವ ಪ್ರಧಾನ ಮಂತ್ರಿಯವರ ಮಹತ್ವದ ಯೋಜನೆ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಸುಮಾರು 118 ಕೋಟಿ ರೂ ವೆಚ್ಚದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಗ್ರಾಮದ ಪ್ರತಿ ಮನೆಗೂ ” ಗಂಗೆ ” ನೀಡುವ ಯೋಜನೆ ಜಾರಿಯಾಗಿದ್ದು ಈಗಾಗಲೇ ಸುಮಾರು 33 ಕೋಟಿ ಅನುದಾನ ಬಂದಿದೆ.
85 ಕೋಟಿ ಬಾಕಿ ಅನುದಾನ ಶೀಘ್ರವಾಗಿ ಬರಲಿದ್ದು, ಮುಂದಿನ ಒಂದು ವರ್ಷದಲ್ಲಿ ಎಲ್ಲಾ ಮನೆಗೂ ನೀರು ನೀಡುವ ಭರವಸೆ ನೀಡಿದರು.
ಜಿ.ಪಂ.ಸದಸ್ಯೆ ಮಂಜುಳಾ ಮಾದವ ಮಾವೆ, ಗ್ರಾ.ಪಂ.ಅಧ್ಯಕ್ಷೆ ರೋಹಿಣಿ, ಉಪಾಧ್ಯ ಕ್ಷ ಉಮ್ಮರ್, ಸದಸ್ಯರಾದ ಹರೀಶ್ ರೈ ಪಾಣೂರು, ರಾಜಾರಾಂ ಭಟ್ ಕಾಡೂರು, ಶಶಿಕುಮಾರಿ, ಮಾಜಿ ಅಧ್ಯಕ್ಷೆ ಪುಷ್ಪ, ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.