ಶಿಶಿಲೇಶ್ವರನ ಮೀನುಗಳಿಗೆ ಆಹಾರ ಪೂರೈಕೆಗೆ ಧಾವಿಸಿದ ಶಾಸಕ ಹರೀಶ್ ಪೂಂಜಾ
ಶಿಶಿಲೇಶ್ವರನ ಮೀನುಗಳಿಗೆ ಆಹಾರ ಪೂರೈಕೆಗೆ ಧಾವಿಸಿದ ಶಾಸಕ ಹರೀಶ್ ಪೂಂಜಾ
ಬೆಳ್ತಂಗಡಿ: ದೇಶದಾದ್ಯಂತ ಕೊರೋನಾ ಲಾಕ್ ಡೌನ್ ನಿಂದಾಗಿ ನಾಡಿನ ಎಲ್ಲ ದೇವಸ್ಥಾನ, ಚರ್ಚ್, ಮಸೀದಿ ಹಾಗೂ ಇತರ ಪ್ರಾರ್ಥನಾ ಮಂದಿರಗಳು ಮುಚ್ಚಲ್ಪಟ್ಟಿದೆ.
ಇದರಿಂದ ದೇವಸ್ಥಾನದ ಕೆರೆಯಲ್ಲಿರುವ ಮತ್ತು ದೇವಸ್ಥಾನದ ಪಕ್ಕದಲ್ಲಿರುವ ನದಿಗಳ ಮೀನು ಆಹಾರಗಳಲ್ಲಿದೆ ಸಂಕಷ್ಟ ಎದುರಿಸುತ್ತಿದೆ.
ಇದಕ್ಕೆ ಪೂರಕವೆಂಬಂತೆ ಮತ್ಸ್ಯತೀರ್ಥವೆಂದೇ ಖ್ಯಾತಿ ಪಡೆದಿರುವ ತಾಲೂಕಿನ ಶಿಶಿಲ ಶ್ರೀ ಶಿಶಿಲೇಶ್ವರ ದೇವಾಲಯದ ಕಪಿಲ ನದಿಯ ದೇವರ ಮೀನುಗಳಿಗೆ ಆಹಾರದ ಕೊರತೆಯಾಗಿದೆ.
ಸದಾ ಯಾತ್ರಿಕರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಕಾರಣ ಮತ್ಸ್ಯತೀರ್ಥದ ಮೀನುಗಳಿಗೆ ಸಾಕಷ್ಟು ಆಹಾರ ಲಭ್ಯವಾಗುತ್ತಿತ್ತು.
ಆದ್ರೆ ಇದೀಗ ಲಾಕ್ ಡೌನ್ ಕಾರಣ ಕ್ಷೇತ್ರಗಳಿಗೆ ಬೀಗ ಜಡಿಯಲಾಗಿದೆ. ಮೀನುಗಳು ಕೂಡ ಆಹಾರಕ್ಕಾಗಿ ಪರಿತಪಿಸುತ್ತಿದ್ದವು.
ಇದೀಗ ಮೀನುಗಳಿಗೆ ಆಹಾರದ ಕೊರತೆಯನ್ನು ಮನಗಂಡ ತಾಲೂಕಿನ ಶಾಸಕ ಹರೀಶ್ ಪೂಂಜಾ 4 ಚೀಲ ಹರಳುಗಳನ್ನು ಶಿಶಿಲ ದೇವಾಲಯದ ಆಡಳಿತ ಮಂಡಳಿಗೆ ತಲುಪಿಸಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮತ್ಸ್ಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶಿಶಿಲ ಜಯರಾಮ ನೆಲ್ಲಿತ್ತಾಯ, ‘ಶಾಸಕ ಹರೀಶ್ ಪೂಂಜರ ಸಾಮಾಜಿಕ ಬದ್ಧತೆಗೆ ನಾವು ಧನ್ಯವಾದ ತಿಳಿಸುತ್ತೇವೆ.
ಕ್ಷೇತ್ರದ ಒಡೆಯ ಶ್ರೀ ಶಿಶಿಲೇಶ್ವರನ ಆಶೀರ್ವಾದ ಸದಾ ಶಾಸಕ ಹರೀಶ್ ಪೂಂಜರ ಉತ್ತಮ ಕಾರ್ಯದ ಮೇಲಿರಲಿ’ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದಿದ್ದಾರೆ.
ಕಾರಣಿಕದ ಕ್ಷೇತ್ರವಾಗಿರುವ ಶಿಶಿಲ, ಶ್ರೀ ಶಿಶಿಲೇಶ್ವರ ದೇವಾಲಯ ಭಕ್ತಿಗೆ ಹೆಸರುವಾಸಿಯಾಗುವುದರೊಂದಿಗೆ ದೇವಾಲಯದ ದೇವರ ಮೀನುಗಳಿಗೂ ಪ್ರಸಿದ್ಧ.
ಏನಾದರೂ ಕಷ್ಟಗಳು ಬಂದಲ್ಲಿ ಶಿಶಿಲ ದೇವರ ಮೀನುಗಳಿಗೆ ಆಹಾರ ಹಾಕುತ್ತೇವೆ ಎಂದು ಸಂಕಲ್ಪ ಮಾಡಿಕೊಂಡು ಇಲ್ಲಿಗೆ ಆಹಾರ ಹಾಕಲು ಭಕ್ತರು ಬರುತ್ತಿದ್ದರು.
ಜೊತೆಗೆ ದೇವರ ಮೀನು ನೋಡಲು ಧರ್ಮ ಬೇಧವಿಲ್ಲದೆ ಜಿಲ್ಲೆಯ ಹೆಚ್ಚಿನ ಭಾಗದಿಂದ ಜನರು ಬರುತ್ತಿದ್ದರು.
ದೇವರ ಮೀನುಗಳಿಗೆ ಆಹಾರ ನೀಡಲು ಇಚ್ಚಿಸುವ ಈ ಭಾಗದ ಭಕ್ತರು ಅಥವಾ ಮತ್ಯಪ್ರೇಮಿಗಳು ಮೀನುಗಳಿಗೆ ಹರಳು (ಪೊರಿ) ಅಥವಾ ಅಕ್ಕಿಯನ್ನು ದೇವಾಲಯದ ಆಡಳಿತ ಮಂಡಳಿಗೆ ಒಪ್ಪಿಸಬಹುದಾಗಿದೆ.
ಆದ್ರೆ ಕೊರೋನಾ ಲಾಕ್ ಡೌನ್ ನಿಂದಾಗಿ ಗುಂಪಾಗಿ ಬರದೇ ಒಬ್ಬೊಬ್ಬರಾಗಿ ಬಂದು ಸಹಾಯಹಸ್ತ ಚಾಚಬೇಕೆಂದು ಮತ್ಸ್ಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶಿಶಿಲ ಜಯರಾಮ ನೆಲ್ಲಿತ್ತಾಯ ಮನವಿ ಮಾಡಿಕೊಂಡಿದ್ದಾರೆ.
ದಾನಿಗಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9448622805
FILM
ಆತ್ಮಗಳ ಜೊತೆ ಮಾತಾಡ್ತಾರಂತೆ ಕನ್ನಡದ ಈ ನಟಿ..!! ಸಿನೆಮಾ ಬಿಟ್ಟು ಕನಸುಗಳನ್ನು ಟ್ಯ್ರಾಕ್ ಮಾಡಲು ಹೊರಟಿದ್ದು ಯಾಕೆ ಗೊತ್ತಾ?
ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದ ನೀತು ಗಾಳಿಪಟ ಸೇರಿದಂತೆ ಕೆಲವು ಬೆರಳೆಣಿಕೆಯ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಖಾಸಗಿ ಯೂಟ್ಯೂಬ್ ಸಂದರ್ಶನಗಳಲ್ಲಿ ಬಿಟ್ಟರೆ ನೀತು ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಇದೀಗ ನೀತು ಹೊಸ ವಿದ್ಯೆಯೊಂದನ್ನು ಕಲಿತಿದ್ದಾರಂತೆ. ಸಿನೆಮಾ ಬಿಟ್ಟು ನೀತು ಏನು ಮಾಡುತ್ತಿದ್ದಾರೆ ಅನ್ನೋರಿಗೆ ನೀತು ಹೊಸ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಇವರು ಆತ್ಮಗಳ ಜೊತೆ ಸಂಪರ್ಕಿಸುವ ವಿದ್ಯೆಯನ್ನು ಕಲಿತಿದ್ದು, ಕನಸುಗಳನ್ನು ಟ್ರ್ಯಾಕ್ ಮಾಡುವಲ್ಲಿ ಬಿಸಿಯಾಗಿದ್ದಾರಂತೆ. ಈ ವಿದ್ಯೆಯನ್ನು ಶಮನಿಸಂ ಎಂದು ಕರೀತಾರೆ.
ಈ ಕುರಿತಾಗಿ ಸ್ವತಃ ನೀತುರವರು ಖಾಸಗಿ ಯೂಟ್ಯೂಬ್ ಚಾನೆಲ್ವೊಂದಕ್ಕೆ ಸಂದರ್ಶನ ನೀಡುವ ವೇಳೆ ತಿಳಿಸಿದ್ದಾರೆ. ‘ನಾನು ಶಮನಿಸಂ ಕೋರ್ಸ್ ಮಾಡಿದ್ದೇನೆ ಆದ್ರೆ ಅದು ಡ್ರೀಮ್ ಟ್ರ್ಯಾಕ್ ಅಂತ ಹೋಳೋಕೆ ಆಗಲ್ಲ. ಶಮನಿಸಂ ಅನ್ನೋ ವಿದ್ಯೆಯಲ್ಲಿ ಇದೊಂದು ಭಾಗವಾಗಿರುತ್ತೆ. ಆದ್ರೆ ಇಲ್ಲಿ ಓಜಾ ಬಾಕ್ಸ್ ಇಟ್ಟುಕೊಂಡು ಆತ್ಮಗಳನ್ನು ಕರೆಯೋದಿಲ್ಲ. ಇದೊಂದು ಕೋರ್ಸ್ ಆಗಿದ್ದು ನಾನು ಇದನ್ನು ಇಷ್ಟು ಪ್ರೊಫೆಷನಲ್ ಆಗಿ ತೆಗೆದುಕೊಳ್ತೇನೆ ಅಂತ ಅಂದುಕೊಂಡಿರಲಿಲ್ಲ’ಎಂದು ಹೇಳಿದ್ರು.
ಮರಣದ ಬಳಿಕ ಮಗಳಿಗೆ ಕಾಣಿಸಿಕೊಂಡ ತಂದೆ..!
ನೀತು ತಂದೆಯ ಮರಣದ ಬಳಿಕ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ರಂತೆ. ರಾತ್ರಿ ಮಲಗೋ ವೇಳೆ ಯಾರೋ ಮುಂದೆ ಬಂದು ನಿಂತ ಹಾಗೆ ಅನುಭವ. ಆದ್ರೆ ಅದು ಕನಸಾಗಿರಲಿಲ್ಲ ಅಸಲಿಗೆ ಅದು ನನಸಾಗಿತ್ತಂತೆ. ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡ ವ್ಯಕ್ತಿ ಕೈ ಕಟ್ಟಿಕೊಂಡು ತಲೆ ಕೆಳಗೆ ಹಾಕಿ ನಿಂತಿದ್ದರಂತೆ. ನೀತು ಅವರಿಗೆ ರಾತ್ರಿ ವೇಳೆ ನಿದ್ದೆ ಮಾಡಲು ಭಯವಾಗುತ್ತಿತ್ತಂತೆ. ಒಂದು ಕಡೆ ತಂದೆ ಕುರಿತು ಕೇಳುವಾಗ ತಂದೆಗೆ ಇನ್ನೂ ಮೋಕ್ಷ ಸಿಗಲಿಲ್ಲ ಎಂದು ತಿಳಿಯಿತು. ಗುರುವಾಯೂರಿಗೆ ಹೋಗಿ ಅಲ್ಲಿ ತಂದೆಗೆ ಮೋಕ್ಷ ದೊರಕುವಂತೆ ಮಾಡಿದ್ದಾರೆ. ಇದಾದ ನಂತರ ಕನಸುಗಳನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಲು ಮನಸ್ಸು ಮಾಡಿದ್ರಂತೆ.
ಕನಸುಗಳ ಬೆನ್ನುಹತ್ತಿದ್ದ ನೀತು:
ತನಗಾಗಿರುವ ಅನುಭವಗಳಿಂದ ನೀತು ಕನಸುಗಳನ್ನು ಟ್ರ್ಯಾಕ್ ಮಾಡಲು ಬಯಸಿದ್ರಂತೆ. ಈ ವೇಳೆ ಹೈದರಾಬಾದ್ ನ ದಂಪತಿಯ ಭೇಟಿ ಮಾಡ್ತಾರೆ. ಇವರು ಈ ವಿದ್ಯೆಯನ್ನು ಕಲಿಸುತ್ತಾರೆ ಎಂದು ಗೊತ್ತಾಗಿ ಅವರ ಸಂಪರ್ಕದಲ್ಲಿದ್ರಂತೆ ನೀತು. ಇದು ಕೆಲವರು ಇದನ್ನು ಮೂಡನಂಬಿಕೆ ಎಂದು ಹೆಳ್ತಾರೆ. ಆದರೆ ನಾನು ಇದಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ ಅಂತ ಹೇಳ್ತಾರೆ ನೀತು. ನಂಬಿಕೆ ಹಾಗೂ ವಿಜ್ಞಾನಕ್ಕೆ ಅದರದ್ದೇ ಆದ ಗರುತು ಇದೆ. ಹಾಗಾಗಿ ಯಾರು ಏನು ಅಂದರೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ರು.
LATEST NEWS
VIRAL VIDEO : ಬೈಕ್ ಸವಾರನ ಪ್ರಾ*ಣ ತೆಗೆದ ನೀಲಗಾಯ್
ಉತ್ತರ ಪ್ರದೇಶ : ಸಾ*ವು ಯಾವಾಗ? ಹೇಗೆ? ಬರುತ್ತದೆ ಎಂದು ಹೇಳಲಾಗದು. ಬೇರೆ ಬೇರೆ ರೀತಿಯಲ್ಲಿ ಸಾವು ಸಂಭವಿಸಬಹುದು. ಎಷ್ಟೊತ್ತಿಗೆ ಎಲ್ಲಿ ಬೇಕಾದರೂ ಸಂಭವಿಸಬಹುದು. ಯಾವ ರೀತಿಯಲ್ಲೂ ಜವರಾಯ ಅಟ್ಟಹಾಸ ಮೆರೆಯಬಹುದು. ಅಂತೆಯೇ ಇಲ್ಲೂ ನೀಲಗಾಯ್ ರೂಪದಲ್ಲಿ ಬಂದ ಯಮ ಯುವಕನೊಬ್ಬನನ್ನು ಬ*ಲಿ ಪಡೆದಿದ್ದಾನೆ.
ನೀಲಗಾಯ್ ಎಂಬ ಅಪರೂಪದ ಪ್ರಾಣಿಯೊಂದು ಡಿ*ಕ್ಕಿ ಹೊಡೆದು ಬೈಕ್ ಸವಾರ ಯುವಕ ಇಹಲೋಕ ತ್ಯಜಿಸಿ
ಘಟನೆ ಉತ್ತರ ಪ್ರದೇಶದ ಇನಾಯತ್ ನಗರ ಸಮೀಪ ನಡೆದಿದೆ. ಅಯೋಧ್ಯೆಯ ಮುಕೇಶ್(28) ಮೃ*ತ ಯುವಕ.
ಹೇಗಾಯಿತು ಘಟನೆ?
ನೀಲಗಾಯ್ ಎಂಬುದು ಅಪರೂಪದ ಪ್ರಾಣಿ. ಇದು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬೈಕ್ ಸವಾರ ಮುಕೇಶ್ ಇನಾಯತ್ ನಗರದ ಮಾರ್ಕೇಟ್ ಗೆ ಸಾಗುತ್ತಿದ್ದರು. ಈ ವೇಳೆ ರಸ್ತೆ ದಾಟಲು ನೀಲಗಾಯ್ ಅತಿವೇಗದಿಂದ ಹಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅದರ ಕೊಂಬು ಸವಾರನ ಎದೆಗೆ ಚುಚ್ಚಿದೆ. ಅಲ್ಲದೇ, ಅವರು ಬೈಕ್ ನಿಂದ ಕೆಳಕ್ಕೆಸೆಯಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನೀಲಗಾಯ್ ಗೂ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
ಘಟನೆಯ ದೃಶ್ಯ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ವೀಡಿಯೋ ವೈರಲ್ ಆಗುತ್ತಿದೆ. 6 ಸೆಕೆಂಡುಗಳ ಈ ಭಯಾನಕ ವೀಡಿಯೋ ಕಂಡು ವೀಕ್ಷಕರು ಬೆಚ್ಚಿ ಬಿದ್ದಿದ್ದಾರೆ.
LATEST NEWS
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
ಆಂಧ್ರಪ್ರದೇಶ : ಆಲದ ಮರದ ಪೊಟರೆಯಲ್ಲಿ ಬರೋಬ್ಬರಿ 64 ಲಕ್ಷ ರೂ. ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇದು ಹೇಗೆ ಪತ್ತೆಯಾಯ್ತು? ಮಾಯಾಜಾಲನಾ? ಎಂಬ ಪ್ರನೆ ಮೂಡೋದು ಸಹಜ. ಆದ್ರೆ, ಇಲ್ಲಿ ಸಿಕ್ಕಿರೋದು ಮೇಲಿಂದ ಉದುರಿದ ದುಡ್ಡಲ್ಲ. ಬದಲಿಗೆ ಕಳವುಗೈದ ದುಡ್ಡು.
ಹೌದು, ಎಟಿಎಂಗೆ ಹಣ ತುಂಬಿಸಲು ಹೋದ ವಾಹನದಿಂದ ಹಣವನ್ನು ವ್ಯಕ್ತಿಯೊಬ್ಬ ಕಳವು ಮಾಡಿದ್ದಾನೆ. ಬಳಿಕ ಆಲದ ಮರದ ಪೊಟರೆಯಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ.
ಏನಿದು ಘಟನೆ ?
ಸಿಎಂಎಸ್ ಭದ್ರತಾ ಸಂಸ್ಥೆಯ ಸಿಬ್ಬಂದಿ ಗುರುವಾರ ಮಧ್ಯಾಹ್ನ 68 ಲಕ್ಷ ರೂಪಾಯಿಯೊಂದಿಗೆ ಒಂಗೋಲ್ ನಿಂದ ತೆರಳಿದ್ದರು. ಚಿಮಕುರ್ತಿ, ಮರ್ರಿಚೆಟ್ಲಪಾಲೆಂ, ದೊಡ್ಡಾವರಂ, ಗುಂಡ್ಲಪಲ್ಲಿ, ಮಡ್ಡಿಪಾಡು ಪ್ರದೇಶಗಳಲ್ಲಿರುವ ವಿವಿಧ ಎಟಿಎಂ ಯಂತ್ರಗಳಿಗೆ ಹಣ ತುಂಬಿಸಬೇಕಾಗಿತ್ತು.
ಆದರೆ, ಅದೇ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಒಂಗೋಲ್ನ ಕರ್ನೂಲ್ ರಸ್ತೆಯಲ್ಲಿರುವ ಭಾರತೀಯ ಪೆಟ್ರೋಲ್ ಬಂಕ್ನಲ್ಲಿ ವಾಹನ ನಿಲ್ಲಿಸಿದ್ದಾರೆ. ಮಧ್ಯಾಹ್ನ ಆಗಿದ್ದರಿಂದ ತಾವು ತಂದಿದ್ದ ತಿಂಡಿ ತಿನ್ನಲು ಬಂಕ್ ರೂಮಿಗೆ ಹೋಗಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿದ್ದ ವಾಚ್ ಮನ್ ಬಂದು ವಾಹನದ ಬೀಗ ಮುರಿದು 64 ಲಕ್ಷ ರೂ.ಮೌಲ್ಯದ 500 ರೂ.ನೋಟುಗಳ ಬಂಡಲ್ಗಳನ್ನು ಕಳ್ಳತನ ಮಾಡಿದ್ದ.
ಅಷ್ಟರಲ್ಲಿ ಊಟ ಮುಗಿಸಿ ಹಿಂದಿರುಗಿದ ಸಿಬ್ಬಂದಿಗೆ ವಾಹನದ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಒಳಗೆ ನೋಡಿದಾಗ 100 ರೂಪಾಯಿ ನೋಟುಗಳ ಬಂಡಲ್ ಗಳು ಮಾತ್ರ ಪತ್ತೆಯಾಗಿವೆ. 500 ರೂಪಾಯಿ ನೋಟುಗಳ ಬಂಡಲ್ಗಳು ಕಾಣಿಸಲಿಲ್ಲ.
ಅವರು ತಂದಿದ್ದ 68 ಲಕ್ಷ ರೂಪಾಯಿಯಲ್ಲಿ 64 ಲಕ್ಷ ರೂ. ಕಳ್ಳತನವಾಗಿರುವುದು ಗೊತ್ತಾಗಿದೆ.
ಕೂಡಲೇ ಪೊಲೀಸರಿಗೆ ದೂರು ನೀಡಿದ ನಂತರ ಹೆಚ್ಚುವರಿ ಎಸ್ಪಿ (ಅಪರಾಧ) ಎಸ್.ವಿ.ಶ್ರೀಧರ್ ರಾವ್ ಮತ್ತು ತಾಲೂಕು ಸಿಐ ಭಕ್ತವತ್ಸಲ ರೆಡ್ಡಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ಮುಸುಕುಧಾರಿಯೊಬ್ಬ ಬೈಕ್ನಲ್ಲಿ ಬಂದು ವಾಹನದಲ್ಲಿದ್ದ ನಗದು ದೋಚಿರುವುದು ಕಂಡುಬಂದಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿ ಬಂಧನ :
ಬಂಧಿತ ಆರೋಪಿ ಮಹೇಶ್ ಎಂದು ಗುರುತಿಸಲಾಗಿದೆ. ಆತ ಈ ಹಿಂದೆ ಸಿಎಂಎಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೋಟುಗಳ ಬಂಡಲ್ಗಳ ಜೊತೆಗೆ, ಅವನು ತನ್ನ ಸ್ವಗ್ರಾಮವಾದ ಸಂತನೂತಲಪಾಡು ಮಂಡಲದ ಕಾಮೆಪಲ್ಲಿವಾರಿಪಾಲೆಂನಲ್ಲಿರುವ ತನ್ನ ಮನೆಯ ಸಮೀಪವಿರುವ ಆಲದ ಮರದ ಕಾಂಡದಲ್ಲಿ ಹಣವನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆಲದ ಮರದ ಬುಡದಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.