Connect with us

    FILM

    ಜೆರುಸಲೇಂ ವೈದ್ಯರ ಸಾಧನೆ : ಅಪಘಾತದಲ್ಲಿ ಬೇರ್ಪಟ್ಟ ತಲೆಯನ್ನು ಯಶಸ್ವಿಯಾಗಿ ಜೋಡಿಸಿ ಬಾಲಕನಿಗೆ ಮರುಜೀವ..!

    Published

    on

    ಇಸ್ರೇಲ್‌ನ ಶಸ್ತ್ರಚಿಕಿತ್ಸಕರು ಪವಾಡ ಶಸ್ತ್ರಕ್ರಿಯೆ ನಡೆಸಿ ವಿಶ್ವವನ್ನೇ ನಿಬ್ಬೆರಗಾಗಿರುವಂತೆ ಮಾಡಿದ್ದಾರೆ. ಬೈಕ್ ಓಡಿಸುವಾಗ ಕಾರಿಗೆ ಡಿಕ್ಕಿ ಹೊಡೆದು ಶರೀರದಿಂದ ಬೇರ್ಪಟ್ಟ ಬಾಲಕನ ತಲೆಯನ್ನು ಮತ್ತೆ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜೆರುಸಲೇಂ : ಇಸ್ರೇಲ್‌ನ ಶಸ್ತ್ರಚಿಕಿತ್ಸಕರು ಪವಾಡ ಶಸ್ತ್ರಕ್ರಿಯೆ ನಡೆಸಿ ವಿಶ್ವವನ್ನೇ ನಿಬ್ಬೆರಗಾಗಿರುವಂತೆ ಮಾಡಿದ್ದಾರೆ. ಬೈಕ್ ಓಡಿಸುವಾಗ ಕಾರಿಗೆ ಡಿಕ್ಕಿ ಹೊಡೆದು ಶರೀರದಿಂದ ಬೇರ್ಪಟ್ಟ ಬಾಲಕನ ತಲೆಯನ್ನು ಮತ್ತೆ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವೆಸ್ಟ್ ಬ್ಯಾಂಕ್‌ನ 12 ವರ್ಷದ ಪ್ಯಾಲೆಸ್ಟೀನಿಯಾದ ಸುಲೇಮಾನ್ ಹಸನ್ ಬೈಸಿಕಲ್​ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ತಲೆ ತುಂಡಾಗಿತ್ತು.

    ಕಾರು ಅಪಘಾತದ ನಂತರ ಸುಲೈಮಾನ್ ಹಸನ್​ನನ್ನು ವೆಸ್ಟ್ ಬ್ಯಾಂಕ್‌ನಿಂದ ಹದಸ್ಸಾ ವೈದ್ಯಕೀಯ ಕೇಂದ್ರಕ್ಕೆ ವಿಮಾನದ ಮೂಲಕ ಕೊಂಡೊಯ್ಯಲಾಯಿತು.

    ತಪಾಸಣೆ ವೇಳೆ ಬಾಲಕನ ತಲೆಬುರುಡೆಯ ಹಿಂಭಾಗದ ತಳವನ್ನು ಹಿಡಿದಿರುವ ಅಸ್ಥಿರಜ್ಜುಗಳು ಹೆಚ್ಚು ಹಾನಿಗೊಳಗಾಗಿರುವುದು ತಿಳಿದುಬಂದಿದೆ.ಅವನ ತಲೆಯು “ಕತ್ತಿನ ಬುಡದಿಂದ ಬಹುತೇಕ ಸಂಪೂರ್ಣವಾಗಿ ಬೇರ್ಪಟ್ಟಿದೆ” ಎಂದು ವೈದ್ಯರು ಹೇಳಿದರು.

    ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮೂಳೆಚಿಕಿತ್ಸಕ ತಜ್ಞ ಡಾ. ಓಹಾದ್ ಐನಾವ್, ಈ ಪ್ರಕ್ರಿಯೆಯು ಹಲವಾರು ಗಂಟೆಗಳನ್ನು ತೆಗೆದುಕೊಂಡಿತು ಮತ್ತು ವೈದ್ಯರು “ಹಾನಿಗೊಳಗಾದ ಪ್ರದೇಶದಲ್ಲಿ ಹೊಸ ಪ್ಲೇಟ್‌ಗಳು ಮತ್ತು ಸ್ಥಿರೀಕರಣಗಳನ್ನು” ಬಳಸಬೇಕೆಂದು ಹೇಳಿದರು.

    “ಮಗುವನ್ನು ಉಳಿಸುವ ನಮ್ಮ ಸಾಮರ್ಥ್ಯವು ನಮ್ಮ ಜ್ಞಾನ ಮತ್ತು ಆಪರೇಟಿಂಗ್ ಕೋಣೆಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಧನ್ಯವಾದಗಳು” ಎಂದು ಐನಾವ್ ಹೇಳಿದರು,
    ತಂಡವು “ಹುಡುಗನ ಜೀವಕ್ಕಾಗಿ ಹೋರಾಡಿದೆ” ಎಂದು ಹೇಳಿದರು. ಇಂತಹ ಸ್ಥಿತಿಯಲ್ಲಿ ವ್ಯಕ್ತಿ ಬದುಕುಳಿಯುವ ಅವಕಾಶ ಶೇಕಡಾ 50 ರಷ್ಟು ಮಾತ್ರ ಇರುತ್ತದೆ. ಆದರೆ ಬಾಲಕನಲ್ಲಿ ಆಗುತ್ತಿರುವ ಚೇತರಿಕೆಯು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಶಸ್ತ್ರಚಿಕಿತ್ಸಕರು ಹೇಳಿದ್ದಾರೆ.

    ಈ ಶಸ್ತ್ರಚಿಕಿತ್ಸೆಯು ಕಳೆದ ತಿಂಗಳು ನಡೆದಿದೆ. ಆದರೆ ಜುಲೈವರೆಗೆ ವೈದ್ಯರು ಫಲಿತಾಂಶಗಳನ್ನು ಬಹಿರಂಗಪಡಿಸಲಿಲ್ಲ. ಆದರೆ ಇತ್ತೀಚೆಗೆ ಹಸನ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

    ಕಾರ್ಯಾಚರಣೆಯು ಜೂನ್‌ನಲ್ಲಿ ಸಂಭವಿಸಿತು, ಆದರೆ ಫಲಿತಾಂಶಗಳನ್ನು ಪ್ರಕಟಿಸಲು ವೈದ್ಯರು ಒಂದು ತಿಂಗಳು ಕಾಯುತ್ತಿದ್ದರು.

    “ಅಂತಹ ಮಗುವಿಗೆ ನರವೈಜ್ಞಾನಿಕ ಕೊರತೆಗಳು ಅಥವಾ ಸಂವೇದನಾ ಅಥವಾ ಮೋಟಾರು ಅಪಸಾಮಾನ್ಯ ಕ್ರಿಯೆ ಇಲ್ಲ ಮತ್ತು ಅವರು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅಂತಹ ಸುದೀರ್ಘ ಪ್ರಕ್ರಿಯೆಯ ನಂತರ ಸಹಾಯವಿಲ್ಲದೆ ನಡೆಯುತ್ತಿದ್ದಾರೆ ಎಂಬುದು ಸಣ್ಣ ವಿಷಯವಲ್ಲ” ಎಂದು ಐನಾವ್ ಹೇಳಿದರು.

    ಹಸನ್ ತಂದೆ ಚೇತರಿಕೆಯ ಪ್ರಕ್ರಿಯೆಯಲ್ಲಿ ತನ್ನ ಮಗನ ಹಾಸಿಗೆಯನ್ನು ಬಿಡಲಿಲ್ಲ, ವೈದ್ಯಕೀಯ ಸಿಬ್ಬಂದಿಗೆ “ದೊಡ್ಡ ಧನ್ಯವಾದ” ಹೊರತುಪಡಿಸಿ ಏನೂ ಇಲ್ಲ ಎಂದು ಹೇಳಿದರು.

    “ನಿಮ್ಮೆಲ್ಲರನ್ನೂ ಆಶೀರ್ವದಿಸಿ” ಎಂದು ತಂದೆ ಹೇಳಿದರು. “ನಿಮಗೆ ಧನ್ಯವಾದಗಳು, ಆಡ್ಸ್ ಕಡಿಮೆ ಮತ್ತು ಅಪಾಯವು ಸ್ಪಷ್ಟವಾಗಿದ್ದಾಗಲೂ ಅವನು ತನ್ನ ಜೀವನವನ್ನು ಮರಳಿ ಪಡೆದನು.”

    “ಆತನನ್ನು ಉಳಿಸಿದ್ದು ವೃತ್ತಿಪರತೆ, ತಂತ್ರಜ್ಞಾನ ಮತ್ತು ಆಘಾತ ಮತ್ತು ಮೂಳೆಚಿಕಿತ್ಸಕ ತಂಡದಿಂದ ತ್ವರಿತ ನಿರ್ಧಾರ ತೆಗೆದುಕೊಳ್ಳುವಿಕೆ” ಎಂದು ವರದಿ ಮಾಡಿದೆ.

    BANTWAL

    ದೊಡ್ಮನೆಗೆ ಎಂಟ್ರಿ ಕೊಟ್ಟ ಕರಾವಳಿಯ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ಯ

    Published

    on

    ಬಂಟ್ವಾಳ : ಖ್ಯಾತ ಯುಟ್ಯೂಬರ್ ಧನರಾಜ್ ಆಚಾರ್ಯ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
    ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ಯ ತಮ್ಮ ಕಾಮಿಡಿ ಮ್ಯಾನರಿಸಂನಿಂದಲೇ ಫೇಮಸ್. ಹಾಸ್ಯಮಯ ವೀಡಿಯೋಗಳನ್ನು ಮಾಡಿ ಜನಮನಕ್ಕೆ ಹತ್ತಿರವಾಗಿದ್ದಾರೆ. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ.

    ಟಿಕ್ ಟಾಕ್ ನಲ್ಲಿ ಕಾಮಿಡಿ ವೀಡಿಯೋ ಮಾಡಿ ಪ್ರಸಿದ್ದಿ ಪಡೆದಿದ್ದ ಧನರಾಜ್ ಬಳಿಕ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು.


    ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್ಯ ಜೊತೆಗೂಡಿ ವೀಡಿಯೋಗಳನ್ನು ಮಾಡುತ್ತಿರುವ ಧನರಾಜ್ ಆಚಾರ್ಯ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

    Continue Reading

    BIG BOSS

    ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಎಂಟ್ರಿ ಪಡೆದ ನಾಲ್ಕು ಸ್ಪರ್ಧಿಗಳು ಯಾರು? ಇಲ್ಲಿದೆ ವಿವರ

    Published

    on

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಶುರುವಿಗೆ ಕ್ಷಣಗಣನೆ ಆರಂಭ ಆಗಿದೆ. ಇದಕ್ಕೂ ಮೊದಲು ‘ರಾಜಾ ರಾಣಿ’ ರಿಯಾಲಿಟಿ ಶೋ ಫಿನಾಲೆಯಲ್ಲಿ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಅವರು ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.

    1. ಗೌತಮಿ ಜಾಧವ್

    ಅಂತೂ ಇಂತೂ ಬಿಗ್‌ ಬಾಸ್‌ ಸ್ಪರ್ಧಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ದೊಡ್ಮನೆಗೆ ಬರಲಿರುವ ಮೊದಲ ಸ್ಪರ್ಧಿಯ ಬಗ್ಗೆ ಅನಾವರಣ ಆಗಿದೆ. ಕಿರುತೆರೆ ಫೇಮಸ್‌ ನಟಿ ಗೌತಮಿ ಜಾದವ್ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ. ಅವರು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ‘ಸತ್ಯ’ ಧಾರಾವಾಹಿಯಲ್ಲಿ ಮಿಂಚಿದ್ದರು. ಅಲ್ಲದೇ ಕಿರುತೆರೆಯಲ್ಲೂ ಹೆಸರು ಮಾಡಿದ್ದಾರೆ. ಧಾರಾವಾಹಿಯಲ್ಲಿ ಅವರದ್ದು ಸಖತ್ ರಗಡ್ ಪಾತ್ರ. ನಿಜ ಜೀವನದಲ್ಲಿ ಅವರು ಯಾವ ರೀತಿ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ‘ಬಿಗ್ ಬಾಸ್’ ಸಹಕಾರಿ ಆಗಲಿದೆ.

    2. ಲಾಯರ್ ಜಗದೀಶ್

    ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಲಾಯರ್ ಜಗದೀಶ್. ಇತ್ತೀಚಿನ ದಿನಗಳಲ್ಲಿ ತಮ್ಮ ಸೋಶಿಯಲ್‌ ಮೀಡಿಯಾ ಕಂಟೆಂಟ್‌ಗಳ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದರು. ರಾಜ್ಯದಲ್ಲಿ ಯಾವುದೇ ಹೈವೋಲ್ಟೇಜ್‌ ಪ್ರಕರಣವಾದರೂ ಅದರ ಹಿಂದೆ ನಿಂತು ಮಾತನಾಡುತ್ತಿದ್ದರು. ಇವರ ಹೆಸರು ಸಾಕಷ್ಟು ಚರ್ಚೆಯಲ್ಲಿ ಇತ್ತು. ದರ್ಶನ್ ಅವರನ್ನು ಹೊರಕ್ಕೆ ತರಲು ತಾವು ಪ್ರತಿಭಟನೆ ಮಾಡೋದಾಗಿ ಅವರು ಹೇಳಿಕೊಂಡಿದ್ದರು. ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ, ದರ್ಶನ್ ಇಲ್ಲದೆ ಪ್ರತಿಭಟನೆ ಫ್ಲಾಪ್ ಆಯಿತು.

    3. ಚೈತ್ರಾ ಕುಂದಾಪುರ

     

    ಚೈತ್ರಾ ಕುಂದಾಪುರ ಕೂಡ ಈ ಬಾರಿಯ ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಹಿಂದೂಪರ ಭಾಷಣಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕೆಲವು ಸಂದರ್ಭದಲ್ಲಿ ದ್ವೇಷ ಭಾಷಣಗಳನ್ನು ಮಾಡಿದ ಆರೋಪವೂ ಚೈತ್ರಾ ಮೇಲಿದೆ. ಬಿಜೆಪಿ ಟಿಕೇಟ್ ಕೊಡಿಸೋದಾಗಿ ಭಾರಿ ಮೊತ್ತದ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿದ್ದರು.

    4 ಗೋಲ್ಡ್ ಸುರೇಶ್

    ಬಿಗ್‌ ಬಾಸ್‌ ಮನೆಯ ನಾಲ್ಕಯೇ ಸ್ಪರ್ಧಿಯ ಘೋಷಣೆಯಾಗಿದೆ. ಬೆಳಗಾವಿ ಮೂಲದ ರೈತ ಹಾಗೂ ಉದ್ಯಮಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗಲಿದ್ದಾರೆ. ತಮ್ಮದೇ ಆದ ಸ್ವಂತ ಉದ್ಯಮ ಹೊಂದಿರುವ ಗೋಲ್ಡಡ್‌ ಸುರೇಶ್‌ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಮೈಮೇಲಿನ ಆಭರಣದ ಕಾರಣಕ್ಕಾಗಿಯೇ ಸುದ್ದಿಯಾದವರು. ಮೈಮೇಲೆ ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನು ಹಾಕಿಕೊಂಡೇ ತಿರುಗಾಡುವ ಗೋಲ್ಡ್‌ ಸುರೇಶ್‌, ಬಿಗ್‌ ಬಾಸ್‌ ಮನೆಯಲ್ಲಿ ಯಾವ ರೀತಿಯಲ್ಲಿ ಇರ್ತಾರೆ ಅನ್ನೋದರ ಕುತೂಹಲ ಎಲ್ಲರಲ್ಲಿದೆ. ಕಳೆದ ವರ್ಷ ವರ್ತೂರು ಸಂತೋಷ್ ಚಿನ್ನ ಹೇರಿಕೊಂಡು ಬಂದಿದ್ದರು.

    Continue Reading

    FILM

    ಎರಡು ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿದ ಸಾಯಿ ಪಲ್ಲವಿ

    Published

    on

    ನಟನೆ, ಡ್ಯಾನ್ಸಿಂಗ್‌ ಅಪಾರ ಅಭಿಮಾನಿಗಳ ಮನಗೆದ್ದಿರುವ ಸಾಯಿ ಪಲ್ಲವಿ ಇದೀಗ ಎರಡು ವರ್ಷಗಳ ನಂತರ ಬೆಳ್ಳಿಪರದೆಗೆ ಮರಳಿದ್ದಾರೆ. ‘ಅಮರನ್’  ಚಿತ್ರದ ಮೂಲಕ ಮತ್ತೆ ನಟಿ ಸದ್ದು ಮಾಡುತ್ತಿದ್ದಾರೆ. ನಟಿಯ ಕ್ಯಾರೆಕ್ಟರ್ ಟೀಸರ್ ರಿವೀಲ್ ಚಿತ್ರತಂಡ ಸರ್ಪ್ರೈಸ್ ನೀಡಿದೆ.

    ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದಲ್ಲಿ ಸಾಯಿ ಪಲ್ಲವಿ ಹೀರೋಯಿನ್ ಆಗಿ ನಟಿಸಿದ್ದಾರೆ. ವೀರಯೋಧ ಮೇಜರ್ ಮುಕುಂದ ವರದರಾಜನ್ ಬಯೋಪಿಕ್ ಆಗಿದೆ. ಇದರಲ್ಲಿ ವೀರಯೋಧನಾಗಿ ಶಿವಕಾರ್ತಿಕೇಯನ್ ನಟಿಸಿದ್ರೆ, ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ಜೀವ ತುಂಬಿದ್ದಾರೆ.

    ಇನ್ನೂ ಚಿತ್ರದಲ್ಲಿ ನಟಿಯ ಕ್ಯಾರೆಕ್ಟರ್ ಟೀಸರ್ 1.22 ನಿಮಿಷವಿದ್ದು, ಸಾಯಿ ಪಲ್ಲವಿ ಗುಂಗುರು ಕೂದಲು ಬಿಟ್ಟು ನಯಾ ಲುಕ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ‘ಅಮರನ್’ ಚಿತ್ರವನ್ನು ರಾಜಕುಮಾರ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇದೇ ಅ.11ಕ್ಕೆ ರಿಲೀಸ್ ಆಗಲಿದೆ.

    Continue Reading

    LATEST NEWS

    Trending