ಪ್ರೌಢ ಪ.ಪೂ ಕಾಲೇಜುಗಳ ಆರಂಭ:ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವರ ಸಭೆ..!
ಬೆಂಗಳೂರು :ನಾಳೆ ಮಧ್ಯಾಹ್ನ 12ಗೆ ವಿಧಾನಸೌಧದಲ್ಲಿ ಮುಖ್ಯ ಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಚಿವರು, ಅಧಿಕಾರಿಗಳ ಜತೆ ಸಿಎಂ ಸಭೆ ನಡೆಸಲಿದ್ದು, ಪ್ರೌಢಶಾಲೆ, ಪಿಯು ಕಾಲೇಜು ಭವಿಷ್ಯ ನಿರ್ಧಾರವಾಗಲಿದೆ.
ಶಾಲೆ ಆರಂಭದ ಬಗ್ಗೆ ಸಚಿವರ ಜತೆ ಸಭೆಯಲ್ಲಿ ಚರ್ಚಿಸಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಶಾಲೆ ತೆರೆಯಬೇಕೋ? ಬೇಡವೋ? ಎಂದು ಚರ್ಚಿಸಲಿದ್ದಾರೆ. ಅಧಿಕಾರಿಗಳು ಹಾಗೂ ಸಚಿವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ.