ಸಮಸ್ತ ಲೋಕಕ್ಕೆ ಹೊಸ ವರ್ಷದ ಶುಭಾಶೀರ್ವಚನ ಗೈದ ಡಾ.ಡಿ ವೀರೇಂದ್ರ ಹೆಗ್ಗಡೆ..!
ಮಂಗಳೂರು: ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಒಳ್ಳೆಯದು ಮಾಡಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ ಹೇಳಿದರು.
ಹೊಸ ವರ್ಷಾಚರಣೆಗೆ ಸಂಬಂಧ ಪಟ್ಟಂತೆ ನಮ್ಮ ಕುಡ್ಲ ವಾಹಿನಿಯೊಂದಿಗೆ ಮಾತನಾಡಿದ ಅವರು 2021ನೇ ವರ್ಷ ಎಲ್ಲರಿಗೂ ಒಳಿತು ಮಾಡಬೇಕು ಎನ್ನುವ, ಆಶಯ ನಮ್ಮದು.
ಅದರಲ್ಲೂ 2020 ನೇ ವರ್ಷದಲ್ಲಿ ಬಂದ ಕೊರೊನಾ ಮಹಾಮಾರಿ ಬದುಕನ್ನು , ಹೇಗೆ ಗೆಲ್ಲಬೇಕು ಅನ್ನುವುದನ್ನು ಕಲಿಸಿಕೊಟ್ಟಿದೆ.
ಹಲವಾರು ಸಂಕಷ್ಟಗಳ ಸರಮಾಲೆ ತಂದು ಜನ ಜೀವನವನ್ನು, ಅತಂತ್ರ ಸ್ಥಿತಿಗೆ ತಳ್ಳಿ ಬಿಟ್ಟಿದೆ.ಆದ್ರೆ ಮುಂಬರುವ ಹೂಸ ವರ್ಷವಾದರೂ ಜನತೆಗೆ ಸುಖ ,ಶಾಂತಿ ,ನೆಮ್ಮದಿ ತರಲಿ. ಸಂಕಷ್ಟಗಳು ದೂರವಾಗಲಿ ಎಂದು ಕ್ಷೇತ್ರದ ಸ್ವಾಮಿ ಮಂಜನಾಥ ದೇವರಲ್ಲಿ ಪ್ರಾರ್ಥಸುವುದಾಗಿ ಹೇಳಿದರು..