ಕಡಬದಲ್ಲಿ ಅಂಬ್ಯುಲೆನ್ಸ್ ನಲ್ಲಿ ಹೆರಿಗೆ: ತಾಯಿ ಮಗು ಸೇಫ್..!
ಕಡಬದಲ್ಲಿ ಅಂಬ್ಯುಲೆನ್ಸ್ ನಲ್ಲಿ ಹೆರಿಗೆ: ತಾಯಿ ಮಗು ಸೇಫ್..!
ಸುಳ್ಯ : ಕಡಬದ 108 ಅಂಬ್ಯುಲೆನ್ಸ್ ನಲ್ಲಿ ಕುಟ್ರುಪ್ಪಾಡಿಯ ತುಂಬು ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಅಂಬ್ಯುಲೆನ್ಸ್ ಸಿಬಂದಿಗಳ ಸಮಯಪ್ರಜ್ಞೆಯಿಂದ ಹೆರಿಗೆ ಯಶಸ್ವಿಯಾಗಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಕಳಾರ ಅಡ್ಕಾಡಿ ನಿವಾಸಿ ದಿನೇಶ್ ಎಂಬವರ ಪತ್ನಿ ಬಾಲಕಿ(30ವ) ಎಂಬವರು ಪ್ರಸವ ವೇದನೆ ಆರಂಭವಾಗಿ ಕಡಬದ ಸಮುದಾಯ ಆಸ್ಪತ್ರೆಗೆ ಬಂದಿದ್ದರು.ಆದರೆ ಇಲ್ಲಿ ಹೆರಿಗೆ ಆಗುವುದಿಲ್ಲ ಎಂಬ ಕಾರಣದಿಂದಾಗಿ ಇವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದರು.
ಕೂಡಲೇ ಇವರನ್ನು 108 ಆಂಬ್ಯುಲೆನ್ಸ್ ಮೂಲಕ ಮಂಗಳೂರು ಕೊಂಡೊಯ್ಯುವ ವೇಳೆ ಮಾಣಿ ಸಮೀಪ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
108 ಅಂಬ್ಯುಲೆನ್ಸ್ ನ ಶುಶ್ರೂಷಕಿ ಪ್ರಜ್ಞಾ ವಾಹನದ ಚಾಲಕ ಚಂದ್ರಶೇಖರ್ ಅವರುಗಳು ಸೂಕ್ತ ಸಮಯ ಪ್ರಜ್ಞೆಯಿಂದಾಗಿ ಮಹಿಳೆಗೆ ಯಶಸ್ವಿಯಾಗಿ ಪ್ರಸವ ಕಾರ್ಯ ಮಾಡಿದ್ದಾರೆ. ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
LATEST NEWS
ಕಾರು ಅಪಘಾ*ತದಲ್ಲಿ ಬಾಲಿವುಡ್ ನಟ ಪರ್ವೀನ್ ದಬಾಸ್ ಗಂಭೀ*ರ..!
ಮುಂಬೈ/ಮಂಗಳೂರು: ಬಾಲಿವುಡ್ ನಟ ಪರ್ವೀನ್ ದಬಾಸ್ ಶನಿವಾರ(ಸೆ.21) ಬೆಳಿಗ್ಗೆ ಮುಂಬೈನಲ್ಲಿ ನಡೆದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ನಟನನ್ನು ಬಾಂದ್ರಾದ ಹೋಲಿ ಲೈಫ್ ಲೈನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಕಾರು ಅಪಘಾತದಲ್ಲಿ ಪರ್ವೀನ್ ತೀವ್ರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪತ್ನಿ ಪ್ರೀತಿ ಜಂಗೈನಿ ತಿಳಿಸಿದ್ದಾರೆ. ನಟ ಬರ್ವಿನ್ ದಿಲ್ಲಗಿ, ಖೊಸ್ಲಾಕಾ ಗೋಸ್ಲಾ, ಮೈ ನೇಮ್ ಈಸ್ ಖಾನ್, ರಾಗಿಣಿ ಎಮ್ಎಮ್ಎಸ್ 2 ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
DAKSHINA KANNADA
ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ
ಮಂಗಳೂರು: ಹಲ್ಲಿಗಳು ಯಾವಾಗಲೂ ನಮಗಿಂತ ಹೆಚ್ಚಾಗಿ ನಮ್ಮ ಮನೆಯಲ್ಲಿ ಸುತ್ತಾಡುತ್ತಿರುತ್ತವೆ. ಕೆಲವರ ಮನೆಯಲ್ಲಿ ಹಲ್ಲಿಗಳಿದ್ದರೆ ಇನ್ನು ಹಲವರಿಗೆ ನಡುಕ, ಹಲ್ಲಿ ಹತ್ತಿರ ಬಂದರೆ ಬಹಳ ದೂರ ಓಡಿ ಹೋಗುತ್ತಾರೆ. ಹಲ್ಲಿಯಿಂದ ಓಡಿಹೋಗುವ ಭಯವನ್ನು ಹರ್ಪಿಟೋಫೋಬಿಯಾ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಅಡುಗೆ ಮನೆಯಲ್ಲಿ ಹಲ್ಲಿ ಇದ್ದರೆ, ಅಡುಗೆ ಮಾಡುವಾಗ ಅದರೊಳಗೆ ಬೀಳುವ ಭಯವಿದೆ. ಆದ್ದರಿಂದ, ಮನೆಯಿಂದ ಹಲ್ಲಿಗಳನ್ನು ತೊಡೆದುಹಾಕುವ ಸಿಂಪಲ್ ಮನೆಮದ್ದು ಇಲ್ಲಿ ತಿಳಿದುಕೊಳ್ಳಿ.
ಈರುಳ್ಳಿ:
ಈರುಳ್ಳಿಯನ್ನು ಅಡುಗೆಗೆ ಮಾತ್ರ ಬಳಸಲಾಗುವುದಿಲ್ಲ, ಬದಲಾಗಿ ಅಡಿಗೆಮನೆಗಳಿಂದ ಹಲ್ಲಿಗಳನ್ನು ಹಿಮ್ಮೆಟ್ಟಿಸಬಹುದು. ಈರುಳ್ಳಿಯಿಂದ ಹೊರಹೊಮ್ಮುವ ಕಟುವಾದ ವಾಸನೆಯು ಹಲ್ಲಿಗಳನ್ನು ಓಡಿಸುತ್ತದೆ. ಈರುಳ್ಳಿಯನ್ನು ಕತ್ತರಿಸಿ, ಹಲ್ಲಿ ಬರುವ ಸ್ಥಳದಲ್ಲಿ ತುಂಡರಿಸಿ ಇಡಿ. ಅದರಿಂದ ಬರುವ ವಾಸನೆಯಿಂದ ಹಲ್ಲಿ ಮನೆಯೊಳಗೆ ಬರುವುದಿಲ್ಲ. ಹಾಗೆಯೇ ಹಲ್ಲಿಗಳನ್ನು ಗೋಡೆಯಿಂದ ಓಡಿಸಲು ಈರುಳ್ಳಿಯನ್ನು ಸುಲಿದು ಅದರ ತುಂಡುಗಳನ್ನು ದಾರದಿಂದ ಕಟ್ಟಿ ಗೋಡೆಗೆ ನೇತು ಹಾಕಿ.
ಬೆಳ್ಳುಳ್ಳಿ:
ಮನೆಯಲ್ಲಿ ಹಲ್ಲಿಗಳನ್ನು ಬರದಂತೆ ತಡೆಯಲು ಬೆಳ್ಳುಳ್ಳಿಯನ್ನು ಬಳಸಬಹುದು. ಮನೆಯಲ್ಲಿ ಹಲ್ಲಿಗಳು ಓಡಾಡುವ ಕಿಟಕಿ, ಬಾಗಿಲು ಮುಂತಾದ ಸ್ಥಳಗಳಲ್ಲಿ ಬೆಳ್ಳುಳ್ಳಿಯನ್ನು ಕತ್ತರಿಸಿ ಇಡಿ. ಬೆಳ್ಳುಳ್ಳಿಯ ಬಲವಾದ ವಾಸನೆಯು ಹಲ್ಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಇದಲ್ಲದೇ ಹಲ್ಲಿ ಬರುವ ಜಾಗದಲ್ಲಿ ಬೆಳ್ಳುಳ್ಳಿಯನ್ನು ಪುಡಿ ಮಾಡಿ ಸ್ವಲ್ಪ ನೀರು ಚಿಮುಕಿಸಿದರೆ ಮತ್ತೆ ಬರುವುದಿಲ್ಲ.
ಪೆಪ್ಪರ್ ಸ್ಪ್ರೇ:
ಪೆಪ್ಪರ್ ಸ್ಪ್ರೇ ಮತ್ತು ಚಿಲ್ಲಿ ಸ್ಪ್ರೇ ಬಳಸಿ ಮನೆಗಳ ಸುತ್ತ ತಿರುಗುವ ಹಲ್ಲಿಗಳನ್ನು ಸಹ ಹಿಮ್ಮೆಟ್ಟಿಸಬಹುದು. ಸ್ಪ್ರೇನಿಂದ ಬಲವಾದ ವಾಸನೆಯು ಹಲ್ಲಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುತ್ತದೆ. ನೀವು ಮಾರುಕಟ್ಟೆಯಲ್ಲಿ ಪೆಪ್ಪರ್ ಸ್ಪ್ರೇ ಖರೀದಿಸಲು ಬಯಸದಿದ್ದರೆ, ನೀವು ಮನೆಯಲ್ಲಿಯೇ ಪೆಪ್ಪರ್ ಸ್ಪ್ರೇ ತಯಾರಿಸಬಹುದು. ಮೊದಲು ಸ್ವಲ್ಪ ಮೆಣಸು ತೆಗೆದುಕೊಂಡು ಪುಡಿ ಮಾಡಿ. ಈಗ ಅದನ್ನು ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಈಗ ಹಲ್ಲಿಗಳು ಇರುವ ಸ್ಥಳಗಳಲ್ಲಿ ಸ್ಪ್ರೇ ಮಾಡಿದರೆ ಮತ್ತೆ ತೊಂದರೆ ಆಗುವುದಿಲ್ಲ.
LATEST NEWS
ಬೆಟ್ಟಿಂಗ್ನಿಂದಾಗಿ 96 ಲಕ್ಷ ಕಳೆದುಕೊಂಡ ಯುವಕ..! ಕಣ್ಣೀರಿಟ್ಟು ಯುವಕನ ಗೋಳಾಟ
ಮುಂಬೈ/ಮಂಗಳೂರು: ಸುಲಭವಾಗಿ ದುಡ್ಡು ಮಾಡಬೇಕು ಅನ್ನೋ ನಿಟ್ಟಿನಲ್ಲಿ ಯುವಕರು ಅದೆಷ್ಟೋ ಅಡ್ಡ ದಾರಿಗಳನ್ನು ಹಿಡಿಯುತ್ತಾರೆ. ಅದರಲ್ಲೂ ಈ ಬೆಟ್ಟಿಂಗ್ ದಂಧೆಗಳು, ಆನಲೈನ್ ಬೆಟ್ಟಿಂಗ್ ಗೆ ಜನರು ಮಾರು ಹೋಗುತ್ತಾರೆ. ಒಮ್ಮೆ ಬೆಟ್ಟಿಂಗ್ ಚಟ ಹಿಡೀತು ಅಂದ್ರೆ ಸಾಕು ನಿಮ್ಮ ಜೀವನವನ್ನೇ ನಾಶ ಮಾಡಿ ಬಿಡುತ್ತದೆ. ಇನ್ನು ಇದರಲ್ಲಿ ಸಕ್ಸಸ್ನ್ನು ಪಡೆಯುವವರ ಸಂಖ್ಯೆ ಬಹಳ ವಿರಳ. ಇದರಲ್ಲಿ ನಿಮ್ಮ ಜೇಬು ತುಂಬುವುದಕ್ಕಿಂತ ಜೇಬು ಖಾಲಿಯಾಗುವುದೇ ಜಾಸ್ತಿ. ಈ ಬೆಟ್ಟಿಂಗ್ ಗೆ ಮಾರುಹೋದವರು ಸಂಕಷ್ಟಕ್ಕೆ ಸಿಲುಕುವುದಂತೂ ಅಕ್ಷರಶಃ ನಿಜ. ಹೀಗೆ ಇಲ್ಲೊಬ್ಬ ಯುವಕ ಆನ್ಲೈನ್ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 96 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾನೆ. ಬಿಟೆಕ್ ಮಾಡಲೆಂದು ಕೂಡಿಟ್ಟಿದ್ದ ಹಣವನ್ನು ಬೆಟ್ಟಿಂಗ್ಗೆ ಸುರಿದಿದ್ದಾನೆ. ಬೆಟ್ಟಿಂಗ್ ನಲ್ಲಿ 96 ಲಕ್ಷ ಹಣವನ್ನು ಕಳೆದುಕೊಂಡ ಈತ ಇದೀಗ ಖಿನ್ನತೆಗೆ ಜಾರಿದ್ದಾನೆ.
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಯುವಕ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ನಲ್ಲಿ ಹಣ ಹಾಕಿ 96 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಗಿ ಕಣ್ಣೀರಿಟ್ಟಿದ್ದಾನೆ. ಇದರಿಂದಾಗಿ ಮನೆಯವರೂ ಕೂಡಾ ಆತನ ಮುಖವನ್ನು ನೋಡಲು ಬಯುಸುತ್ತಿಲ್ಲವಂತೆ. ಇತ್ತ ವಿದ್ಯಾಭ್ಯಾಸವೂ ಮೊಟಕುಗೊಂಡು, ಕಟುಂಬದವರ ಜೊತೆ ಮಾತೂ ಕಳೆದುಕೊಂಡ ಯುವಕನ ಪರಿಸ್ಥಿತಿ ಹೇಳತೀರದು. ಇದರಿಂದ ಬೇಸೊತ್ತ ಯುವಕ ಆತ್ಮಹತ್ಯೆ ಯತ್ನಿಸಿದ್ದಾನೆ.
ಟಿವಿಯಲ್ಲಿ ಬಂದ ಬೆಟ್ಟಿಂಗ್ ಜಾಹೀರಾತನ್ನು ನೋಡಿದ ಬಳಿಕ ತಾನು ಬಿಟೆಕ್ ಮಾಡಲು ಇಟ್ಟಿದ್ದ ಹಣವನ್ನು ಜೂಜಾಟಕ್ಕೆ ಉಪಯೋಗ ಮಾಡಿದ್ದಾನಂತೆ. ಈ ಬೆಟ್ಟಿಂಗ್ ಚಟ ಹೆಚ್ಚಾದಂತೆ ಆತನ ಸಾಲ ಕೂಡಾ ಮಿತಿ ಮೀರಿ ಹೋಗಿದೆ. ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕನಂತೆ ಆಗಿಬಿಟ್ಟಿದ್ದಾನೆ.
ಟ್ವಿಟ್ಟರ್ನಲ್ಲಿ ಈ ವೀಡಿಯೋವನ್ನು @khurpenchh ಎಂಬ ಪೇಜ್ನಿಂದ ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಿಸಲ್ಪಟ್ಟಿದ್ದು ಜನರು ಬೆಟ್ಟಿಂಗ್ ಆ್ಯಪ್ ಬ್ಗಗೆ ಆಕ್ರೋಶ ಹೊರಹಾಕಿದ್ದಾರೆ.