Connect with us

LATEST NEWS

ಪ್ರೀತಿಸಿದವಳನ್ನೇ ಪಾಳು ಬಾವಿಗೆ ದೂಡಿ ಕೊಲ್ಲಲು ಯತ್ನಿಸಿ ಜೈಲು ಸೇರಿದ ಅಶೋಕ…!

Published

on

ಪ್ರೀತಿಸಿದವಳನ್ನೇ ಪಾಳು ಬಾವಿಗೆ ದೂಡಿ ಕೊಲ್ಲಲು ಯತ್ನಿಸಿ ಜೈಲು ಸೇರಿದ ಅಶೋಕ…!

ಬೆಂಗಳೂರು :  ಪ್ರಿಯಕರನ ಮಾತಿಗೆ ಮರುಳಾಗಿ ಗಂಡನ ಮನೆ ಬಿಟ್ಟು ಪರಾರಿಯಾಗಿದ್ದ ಗೃಹಿಣಿ 100 ಅಡಿ ಆಳದ ಪಾಳು ಬಾವಿಯಲ್ಲಿ 4 ರಾತ್ರಿ ಮತ್ತು 4 ಹಗಲುಗಳನ್ನು ಕಳೆದ ಘಟನೆ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಡೆದಿದೆ.

ನಾಪತ್ತೆಯಾದ ಗೃಹಿಣಿಯನ್ನು ಹುಡುಕಾಡಿದ ಪೊಲೀಸರಿಗೆ ಗೊನೆಗೂ ಪಾಳುಬಾವಿಯಲ್ಲಿ ಬಿದ್ದು ನರಳಾಡುತ್ತಿದ್ದ ಗೃಹಿಣಿ ಸಿಕ್ಕಿದ್ದಾಳೆ.

ಬಳಿಕ ಆಕೆಯನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆಕೆಯನ್ನ ಪ್ರಿಯಕರನೇ ಬಾವಿಗೆ ತಳ್ಳಿ, ಕೊಲ್ಲುವ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಇದೀಗ ಪ್ರಿಯಕರನ್ನು ಹಿಡಿದು ಲಾಕಪ್‌ ಗೆ ತಳ್ಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಎ. ರಂಗನಾಥಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಾಲೂರು ತಾಲೂಕಿನ ಸೊಣ್ಣಹಳ್ಳಿ ಗ್ರಾಮದ 23 ವರ್ಷದ ಗೃಹಿಣಿ ಅಮೃತಾ ಎಂಬಾಕೆಯನ್ನು ಪಾಳು ಬಾವಿಯಿಂದ ರಕ್ಷಣೆ ಮಾಡಲಾಗಿದೆ.

ಅಮೃತಾಳಿಗೆ ಸೊಣ್ಣಹಳ್ಳಿಯ ಅಶೋಕ್ ಎಂಬ ಯುವಕನೊಂದಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು.

ಇವರಿಗೆ ಒಂದು ಗಂಡು ಮಗು ಸಹ ಇದೆ.

ಆದರೆ ಪ್ರಿಯಕರ ಇವರ ದಾಂಪತ್ಯ ಜೀವನದ ಮಧ್ಯೆ ಬಂದು  ಹುಳಿ ಹಿಂಡಿ ಬಳಿಕ ಅಮೃತಾಳನ್ನು ಪಾಳುಬಾವಿಯಲ್ಲಿ ನರಳುವಂತೆ ಮಾಡಿದ್ದಾನೆ.

 ಘಟನೆ ಹೇಗಾಯಿತು..!?

ಕಳೆದ ಶನಿವಾರ ಎಂದಿನಂತೆ ಅಮ್ರತಾಳ ಗಂಡ ಅಶೋಕ್ ಕೆಲಸಕ್ಕೆ ತೆರಳಿದ್ದಾನೆ. ಅತ್ತೆ- ಮಾವ ಹೊಲಕ್ಕೆ ಹೋಗಿದ್ದಾರೆ.

ಆಗ ಮಗುವನ್ನು ಪಕ್ಕದ ಮನೆಯವರಿಗೆ ಕೊಟ್ಟು ಮಾಲೂರಿಗೆ ಹೋಗುವುದ್ದಾಗಿ ಹೇಳಿದ ಅಮೃತಾ ಮಾಲೂರಿನ ಗಂಡನ ಮನೆ ಸೊಣ್ಣಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದಳು.

ಅಂದು ನಾಪತ್ತೆಯಾಗಿದ್ದ ಅಮೃತಾಳನ್ನು ಗಂಡನ ಮನೆ ಕಡೆಯವರು ಹುಡುಕಾಟ ನಡೆಸಿದ್ದರೂ ಆಕೆಯ ಪತ್ತೆಯಾಗಿರಲಿಲ್ಲ.

ಅಮೃತಾಳನ್ನು ಶನಿವಾರವೇ ಕರೆಸಿಕೊಂಡಿದ್ದ ರಂಗನಾಥಪುರದಲ್ಲಿದ್ದ ಪ್ರಿಯಕರ ಆದರ್ಶ ಆಕೆಯನ್ನು 100 ಅಡಿ ಆಳದ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ.

ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲೆ ಬಿದ್ದಿದ್ದ ಅಮೃತಾ ಮೇಲೆ ಬರಲು ಆಗದೇ ಕಾಪಾಡಿ ಎಂದು ಕೂಗಿಕೊಂಡಿದ್ದಾಳೆ.

ಆದರೆ, ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ. ಪಾಳು ಬಾವಿಯಿಂದ ನಿರಂತರವಾಗಿ ಕೂಗಾಟದ ಶಬ್ದ ಕೇಳಿದ ಅಕ್ಕಪಕ್ಕದ ತೋಟದವರು ಭಯಗೊಂಡು ಹತ್ತಿರಕ್ಕೆ ಹೋಗದೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಿರ್ಜನ ಪ್ರದೇಶವಾದ್ದರಿಂದ‌ ಬಾವಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಣ್ಯ ಸಹ ಇದ್ದು ಮರ-ಗಿಡಗಳ ಮಧ್ಯೆ ದೊಡ್ಡ ಬಾವಿಯ ಸಮೀಪಕ್ಕೆ ಯಾರೂ ಹೋಗುತ್ತಿರಲಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ತೀವ್ರ ಅಸ್ವಸ್ಥವಾಗಿರುವ ಅಮೃತಾಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾವಿಗೆ ತಳ್ಳಿದ್ದ ಆದರ್ಶನ ಮಾಹಿತಿ ಪಡೆದಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸುಖ ಸಂಸಾರಕ್ಕೆ ಸಾಕ್ಷಿಯಾಗಿದ್ದ ಪುಟ್ಟ ಮಗು, ಗಂಡನಿಗೆ ಕೈ ಕೊಟ್ಟು ಪ್ರಿಯತಮನ ಮಾತಿಗೆ ಮರುಳಾಗಿ ಮನೆ ಬಿಟ್ಟು ಹೋದ ಅಮೃತಾ ಬಾವಿಯಲ್ಲಿ ನರಳಿ, ಜೀವನದ ಪಾಠ ಕಲಿತಿದ್ದು ಎಷ್ಟೋ ಗೊತ್ತಿಲ್ಲ.

ಸಾಂಸಾರಿಕ ಜೀವನ ಬಿಟ್ಟು ಪರ ಪುರುಷರು, ಮಹಿಳೆಯರ ಹಿಂದೆ ಬೀಳುವರಿಗೆ ಮಾತ್ರ ಈ ಘಟನೆ ಒಂದು ಪಾಠವಾಗಿದೆ.

Click to comment

Leave a Reply

Your email address will not be published. Required fields are marked *

LATEST NEWS

ಹೋಟೆಲ್ ನಲ್ಲಿ ಆತ ಹಣಕೊಟ್ಟು ತಿಂದೇ ಇಲ್ಲ…! ಫ್ರೀ ತಿಂಡಿ ತಿಂದಿದ್ದು ಹೇಗೆ ?

Published

on

ನ್ಯೂಯಾರ್ಕ್: ಜನರಿಗೆ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವೆರೈಟಿ ಫುಡ್ ತಿನ್ನೊದು ಎಂದ್ರೆ ತುಂಬಾ ಇಷ್ಟ. ಆದರೆ ಈಗ ಎಲ್ಲಾ ರೀತಿಯ ಆಹಾರಗಳ ಹಣ ಜಾಸ್ತಿ ಆಗಿದೆ. ರುಚಿಗೆ ತಕ್ಕಂತೆ ಹಣ ಕೂಡ ಕೊಡಬೇಕು. ಅಮೆರಿಕಾದ ನ್ಯೂಯಾರ್ಕ್‌ ವ್ಯಕ್ತಿಯೊಬ್ಬ ಹೆಚ್ಚು ಹಣ ಕೊಟ್ಟು ರೆಸ್ಟೋರೆಂಟ್ ಹೋಟೆಲ್‌ ಫುಡ್ ತಿನ್ನುವುದಕ್ಕೆ ಒಳ್ಳೆಯ ಉಪಾಯ ಮಾಡಿಕೊಂಡಿದ್ದಾನೆ. ಈತನ ಉಪಾಯದಿಂದ ನಯಾಪೈಸೆಯೂ ಹಣವಿಲ್ಲದೇ ದಿನವೂ ರುಚಿರುಚಿಯಾದ ಆಹಾರ ತಿನ್ನುವ ಜೊತೆಗೆ ಲಕ್ಷ ಲಕ್ಷ ಹಣ ಉಳಿಸಿದ್ದಾನೆ.

ಫ್ರೀ ಊಟ ತಿಂಡಿ ಮಾಡಲು ಐಡಿಯಾ!

ನ್ಯೂಯಾರ್ಕ್ ನ ಪಶ್ಚಿಮ ಭಾಗದ ನಿವಾಸಿಯಾಗಿರುವ ಹಾನಿ ಮಹಮೌದ್, ವೆರೈಟಿ ತಿನಿಸುಗಳನ್ನು ಹೊರಗಡೆ ಹೋಗಿ ತಿನ್ನುವುದಕ್ಕೆ ಇಷ್ಟಪಡುತ್ತಿದ್ದರು. 10 ಡಾಲರ್ ನಲ್ಲಿ ಒಳ್ಳೆಯ ಊಟವನ್ನು ಸವಿಯುವುದು ಹಾನಿ ಮಹಮೌದ್ ಗೆ ಕಷ್ಟಕರವಾಯಿತು. ಆಗ ಹೆಚ್ಚು ಹಣ ಖರ್ಚು ಮಾಡದೆ ಕಡಿಮೆ ಹಣದಲ್ಲಿ ರುಚಿಯಾದ ಆಹಾರ ಸೇವಿಸುವುದು ಹೇಗೆ ಎಂದು ಆಲೋಚಿಸಿದರು. ಆಗ ರೆಸ್ಟೋರೆಂಟ್ ಗಳಲ್ಲಿ ಉಳಿದ ಆಹಾರವನ್ನು ತಿನ್ನಲು ಮುಂದಾದನು. ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರು ತಿಂದು ಬಿಟ್ಟೋಗಿರುವ ವೆರೈಟಿ ಆಹಾರವನ್ನು ಹಣ ನೀಡದೆ ಹಾನಿ ಮಹಮೌದ್ ತಿನ್ನಲು ಪ್ರಾರಂಭಿಸಿದರು.

ಈತನಿಗೆ ಸಹಾಯ ಮಾಡಿದ್ದು ಆ್ಯಪ್!

32 ವರ್ಷದ ಹಾನಿ ಮಹಮೌದ್ ಸಾರ್ವಜನಿಕರಿಗೆ ಉಪಯೋಗವಾಗುವ ಟೂಗುಡ್ ಟು ಗೋ (TooGoodToGo) ಆ್ಯಪ್ ಅನ್ನು ಬಳಸಲು ಶುರು ಮಾಡಿಕೊಂಡರು. ಈ ಆ್ಯಪ್ ಡೆನ್ಮಾರ್ಕ್ ನದ್ದಾಗಿದ್ದು, ಇದು ವ್ಯರ್ಥವಾದ ಆಹಾರ ಇರುವ ಸ್ಥಳಗಳನ್ನು ಸೂಚಿಸುತ್ತದೆ. ಇದು ರೆಸ್ಟೋರೆಂಟ್, ಶಾಪ್ ಗಳಲ್ಲಿ ಉಳಿದಿರುವ ಆಹಾರದ ಬಗ್ಗೆ ಮಾಹಿತಿ ನೀಡುತ್ತದೆ. ಇದು ಆಹಾರ ಹಾಳಾಗದಂತೆ ಮತ್ತೊಬ್ಬರ ಹಸಿವು ನೀಗಿಸುವಲ್ಲಿ ಸಹಾಯ ಮಾಡುತ್ತದೆ.

1.41 ಲಕ್ಷ ಮೌಲ್ಯದ ಆಹಾರ ಫ್ರೀ!

ಹಾನಿ ಮಹಮೌದ್ ಈ ರೀತಿ ಬಿಟ್ಟೋದ ಆಹಾರವನ್ನು ಸೇವಿಸಿ ಎರಡು ವರ್ಷಗಳಲ್ಲಿ ಸುಮಾರು 1700 ಡಾಲರ್ ಅಂದರೆ 1,41,846 ರೂಪಾಯಿ ಉಳಿಸಿದ್ದಾರೆ. ಹಾನಿ ಮಹಮೌದ್ ಮಾಡಿರುವ ಈ ಉಪಾಯದಿಂದ ಹಣ ಉಳಿಸುವ ಜೊತೆಗೆ ವೆರೈಟಿ ವೆರೈಟಿ ಆಹಾರ ಸಹ ಸವಿಯುತ್ತಿದ್ದಾರೆ.

ನಗರದಲ್ಲಿ ಎಷ್ಟೇ ಹುಡುಕಿದರೂ ಕಡಿಮೆ ಬೆಲೆಯಲ್ಲಿ ಆಹಾರ ಸಿಗುವ ರೆಸ್ಟೋರೆಂಟ್ ಗಳು ಸಿಗುವುದಿಲ್ಲ. ಮಹಮೌದ್ ಈ ರೀತಿಯಾದ ಆಹಾರ ಸೇವನೆಯಿಂದ ಎರಡು ವರ್ಷಗಳಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿಯನ್ನು ಉಳಿತಾಯ ಮಾಡಿದ್ದಾರೆ. ಈ ಆ್ಯಪ್ ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವುದರ ಜೊತೆಗೆ ಹಣವಿಲ್ಲದೆ ಪರದಾಡುವ ಜನರಿಗೆ ಹೊಟ್ಟೆ ತುಂಬಿಸುತ್ತದೆ.

Continue Reading

DAKSHINA KANNADA

ದೇಶದಲ್ಲಿ ಮೊದಲ ಬಾರಿಗೆ QR ಕೋಡ್ ವೋಟರ್ ಸ್ಲಿಪ್

Published

on

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ ನೀಡಲಾಗುವುದು.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ ನೀಡಲಾಗುವ ವೋಟರ್‌ ಸ್ಲಿಪ್‌ ಗಳಲ್ಲಿ ಮತಗಟ್ಟೆಯ ಕ್ಯೂ ಆರ್‌ ಕೋಡ್‌ ಮುದ್ರಿಸಲಾಗಿದೆ.

ನಗರದ ನಿವಾಸಿಗಳು ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.

Continue Reading

FILM

ಹಿರಿಯ ನಟ ನಿರ್ಮಾಪಕ…ಕಳ್ಳ ‘ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ

Published

on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೇರು ನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್(81 ವ) ರವರು ಎ.16ರಂದು ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಇನ್ನಿಲ್ಲ ಎಂಬ ಸುದ್ದಿ ಸಾಕಷ್ಟು ನೋವುಂಟು ಮಾಡಿದೆ. ಹಲವು ದಿಗ್ಗಜರ ಜೊತೆ ನಟಿಸಿದ್ದ ಇವರು ವಿಷ್ಣುವರ್ದನ್ ಜೊತೆ ನಡಿಸಿದ್ದ ಕಳ್ಳ-ಕುಳ್ಳ ಸಿನೆಮಾದಲ್ಲಿ ಇವರಿಬ್ಬರ ಜೋಡಿ ಬಹಳಷ್ಟು ಸದ್ದು ಮಾಡಿತ್ತು.

ರಾತ್ರಿ ಭೇದಿ ಆರಂಭ ಆಗಿದ್ದರಿಂದ ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ಮಲಗಿದ್ದವರು ಮತ್ತೆ ಏಳಲೇ ಇಲ್ಲ.  ಅವರಿಗೆ ಹೃದಯಾಘಾತ ಆಗಿದೆ ಎಂದು ದ್ವಾರಕೀಶ್ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ದ್ವಾರಕೀಶ್ ಸಾವಿನ ಸುಳ್ಳು ಸುದ್ದಿ ಹರಡಿತ್ತು…!
ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಸಂತಾಪ ಸೂಚಿಸುತ್ತಿದ್ದಾರೆ. ಈ ಹಿಂದೆ ದ್ವಾರಕೀಶ್ ಮರಣ ಫೇಕ್ ಸುದ್ದಿ ಹರಿದಾಡಿತ್ತು. ಇದೇ ರೀತಿ ಈ ಬಾರಿಯೂ ಆಗಿರಬಹುದು ಎಂದು ಹಲವರು ಭಾವಿಸಿದ್ದರು. ಇದೀಗ ದ್ವಾರಕೀಶ್ ರವರ ಕುಟುಂಬದವರು ಅವರ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ.

READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

ರಾಜ್‌ಕುಮಾರ್, ವಿಷ್ಣವರ್ಧನ್, ಶ್ರೀನಾಥ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದರು. ಇವರ ಮಂಕು ತಿಮ್ಮ ಸಿನೆಮಾ ಸುಪರ್ ಹಿಟ್ ಆಗಿತ್ತು. ನಟಿ ಮಂಜುಳಾ ಜೊತೆ ಹಲವು ಸಿನೆಮಾದಲ್ಲಿ ನಟಿಸಿದ್ದರು. ನಟನಾಗಿ ನಿರ್ದೇಶನಕ್ಕೂ ಇಳಿದಿದ್ದ ಇವರು ಹಲವು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಮಮತೆಯ ಬಂಧನ ಇವರ ಮೊದಲ ನಿರ್ಮಾಣದ ಚಿತ್ರವಾಗಿದ್ದು, ‘ವೀರ ಸಂಕಲ್ಪ’ ಅವರು ನಟಿಸಿರುವ ಕೊನೆಯ ಚಿತ್ರವಾಗಿದೆ.

 

Continue Reading

LATEST NEWS

Trending