Connect with us

    LATEST NEWS

    1,563 ನೀಟ್ ಅಭ್ಯರ್ಥಿಗಳ ಗ್ರೇಸ್ ಮಾರ್ಕ್ ರದ್ದು, ಜೂನ್ 23 ರಂದು ಮರು ಪರೀಕ್ಷೆ: ಕೇಂದ್ರ ಸರ್ಕಾರ

    Published

    on

    ನವದೆಹಲಿ: 2024 ರ ನೀಟ್ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ ಪಡೆದಿರುವ 1,563 ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರವು ಇಂದು ಸುಪ್ರೀಂ ಕೋರ್ಟ್ ತಿಳಿಸಿದೆ.

    ಗ್ರೇಸ್ ಮಾರ್ಕ್ ನೀಡಲಾದ 1,563 ವಿದ್ಯಾರ್ಥಿಗಳಿಗೆ ಜೂನ್ 23 ರಂದು ಮರು-ಪರೀಕ್ಷೆಯನ್ನು ತೆಗೆದುಕೊಳ್ಳಲು ಆಯ್ಕೆಯನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಅವರ ನಿಜವಾದ ಅಂಕಗಳನ್ನು ಅಂದರೆ ಗ್ರೇಸ್ ಅಂಕ ಇಲ್ಲದೆ ಅವರು ಪಡೆದಿರುವ ಅಂಕಗಳನ್ನು ತಿಳಿಸಲಾಗುತ್ತದೆ. ಮರು ಪರೀಕ್ಷೆಗೆ ಹಾಜರಾಗಲು ಅವರಿಗೆ ಆಯ್ಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.

    ಮರು ಪರೀಕ್ಷೆಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳ ಫಲಿತಾಂಶಗಳು ಮೇ 5 ರಂದು ನಡೆದ ಪರೀಕ್ಷೆಗಳ ಅಂಕಗಳನ್ನು ಆಧರಿಸಿ ಇರುತ್ತದೆ. ನೀಟ್ ಪಾಸಾದವರ ರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದಿರುವ ತನ್ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಕೌನ್ಸೆಲಿಂಗ್ ನಿಗದಿತವಾಗಿ ಮುಂದುವರಿಯುತ್ತದೆ.

    ಯಾವುದೇ ಅಡ್ಡಿಯಾಗುವುದಿಲ್ಲ. ಪರೀಕ್ಷೆ ಮುಂದುವರಿದರೆ, ಉಳಿದವು ಯಥಾ ಪ್ರಕಾರ ನಡೆಯುತ್ತವೆ. ಹಾಗಾಗಿ ಇಲ್ಲಿ ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ನೀಟ್ ಸಮಸ್ಯೆಯನ್ನು ಪರಿಹರಿಸಲು ತೆಗೆದುಕೊಂಡ ಕ್ರಮಗಳನ್ನು ಕೇಂದ್ರ ಸರಕಾರ ವಿವರಿಸಿದೆ. ಆರೋಪಗಳ ತನಿಖೆಗಾಗಿ ಜೂನ್ 10, 11 ಮತ್ತು 12 ರಂದು ಸಮಿತಿಯ ಸಭೆ ನಡೆಸಲಾಗಿತ್ತು.

    ಸಮಿತಿಯ ಶಿಫಾರಸುಗಳನ್ನು ಆಧರಿಸಿ, ಸಂತ್ರಸ್ತ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ರದ್ದುಗೊಳಿಸಲಾಗುವುದು. ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುತ್ತದೆ. ನೀಟ್ ಪರೀಕ್ಷೆಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ 2024 ರ ನೀಟ್ ರದ್ದತಿ ಸೇರಿದಂತೆ ಎಲ್ಲಾ ಅರ್ಜಿಗಳನ್ನು ಜುಲೈ 8 ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ. ಸುಪ್ರೀಂ ಕೋರ್ಟ್ನ ವಿಚಾರಣೆಯ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಸರಕಾರ ಮತ್ತು ಎನ್.ಟಿ.ಎ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ ಎಂಬುದಾಗಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಭರವಸೆ ನೀಡಲು ಬಯಸುತ್ತೇನೆ.

    24 ಲಕ್ಷ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಬಗ್ಗೆ ಪುರಾವೆ ಇನ್ನೂ ಕಂಡು ಬಂದಿಲ್ಲ, ಸುಮಾರು 1,560 ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಶಿಫಾರಸು ಮಾಡಲಾದ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಅದಕ್ಕಾಗಿ ಶಿಕ್ಷಣತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ.

    Click to comment

    Leave a Reply

    Your email address will not be published. Required fields are marked *

    FILM

    ಟಿಆರ್ ಪಿನಲ್ಲಿ ಟಾಪ್ 10 ರೊಳಗಿನ ಸ್ಥಾನ ಗಿಟ್ಟಿಸಿಕೊಂಡ ಹೊಸ ಧಾರಾವಾಹಿ; ನಂಬರ್ 1 ಸ್ಥಾನ ಯಾವುದಕ್ಕೆ?

    Published

    on

    ಮಂಗಳೂರು : ಧಾರಾವಾಹಿಗಳನ್ನು ಇಷ್ಟ ಪಡುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಧಾರಾವಾಹಿ ಪ್ರಿಯವಾದುದು. ನಿತ್ಯ ನೂರಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ ಬಾರಿ ಟಿ ಆರ್ ಪಿ ಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್ 1 ಸ್ಥಾನದಲ್ಲಿದೆ. ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ನಿತ್ಯ ಹೊಸ ಹೊಸ ತಿರುವಿನೊಂದಿಗೆ ಗಮನ ಸೆಳೆಯುತ್ತಿರುತ್ತದೆ.


    ಇನ್ನು ಎರಡನೇ ಸ್ಥಾನದಲ್ಲಿ, ‘ಲಕ್ಷ್ಮೀ ನಿವಾಸ’ ಇದೆ. ತುಂಬು ಸಂಸಾರದ ಕಥೆ ಹೊಂದಿರುವ ಲಕ್ಷ್ಮೀ ನಿವಾಸವನ್ನು ಆರಂಭದಿಂದಲೇ ಜನ ಮೆಚ್ಚಿಕೊಂಡಿದ್ದಾರೆ.


    ಮೂರನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ವಿದೆ. ಇದು ಈ ಧಾರಾವಾಹಿಗೆ ಭರ್ಜರಿ ಟಿಆಆರ್​ಪಿ ಸಿಕ್ಕಿದೆ.

    ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ.


    ಇನ್ನು ಐದನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ.

    Continue Reading

    DAKSHINA KANNADA

    ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆ

    Published

    on

    ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ನಡೆಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಾದ ಕೃ ತಿಕ್ ಮತ್ತು ಪೃತ್ವಿಕ್ 6 ರಿಂದ 10ನೇ ತರಗತಿಯ ಮಕ್ಕಳಿಗೆ ಯೋಗವನ್ನು ಹೇಳಿಕೊಟ್ಟರು.

    ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

     

    Continue Reading

    LATEST NEWS

    ಕರ್ನಾಟಕದ ಈ ಜನಪ್ರಿಯ ಸೀರೆಗಳು ನಿಮ್ಮಲ್ಲಿದ್ಯಾ?

    Published

    on

    ಮಂಗಳೂರು: ಕರ್ನಾಟಕದಲ್ಲಿ ಹಲವಾರು ಬಗೆಯ ಉಡುಗೆಗಳು ನೋಡಲು ಸಿಗುತ್ತದೆ. ಉತ್ತರ ಕರ್ನಾಟಕದವರ ಒಂದು ಶೈಲಿಯಾದರೆ, ದಕ್ಷಿಣ ಕರ್ನಾಟಕದವರದ್ದು ಇನ್ನೊಂದು ರೀತಿ. ಅದರಲ್ಲೂ ನಾರಿಯರು ಸೀರೆಯನ್ನುಡುವಾಗಲೂ ಅಲ್ಲಿ ಹಲವು ಶೈಲಿಗಳು ಇವೆ. ಅದಕ್ಕಾಗಿಯೇ ಸೀರೆಗಳು ಕೂಡ ತುಂಬಾ ಭಿನ್ನವಾಗಿರುವಂತದ್ದು ಇವೆ. ವಿವಿಧ ಶೈಲಿ, ಬಗೆಯ ಸೀರೆಗಳನ್ನು ಹಿಂದಿನಿಂದಲೂ ನಮ್ಮ ರಾಜ್ಯದಲ್ಲಿ ತಯಾರಿಸಿಕೊಂಡು ಬರಲಾಗುತ್ತಿದೆ. ಐದು ಬಗೆಯ ಸಾಂಪ್ರದಾಯಿಕ ಸೀರೆಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

    ​ಮೈಸೂರು ಸಿಲ್ಕ್

    ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿರುವಂತಹ ಮೈಸೂರು ಸಿಲ್ಕ್ ಗೆ ಹೆಚ್ಚು ವಿವರಣೆ ಬೇಕಾಗಿಲ್ಲ. ಮೈಸೂರು ಶ್ರೀಗಂಧ ಮತ್ತು ಸಿಲ್ಕ್ ಸೀರೆಗಳಿಗೆ ತುಮಬಾ ಜನಪ್ರಿಯ. ಕ್ರಿ.ಶ. ೧೭೮೫ರಲ್ಲಿ ಈ ಸೀರೆಗಳು ಅಸ್ತಿತ್ವಕ್ಕೆ ಬಂದವು ಮತ್ತು ಉನ್ನತ ಗುಣಮಟ್ಟದ ಸಿಲ್ಕ್ ನಯವಾದ ಮತ್ತು ಉನ್ನತ ವಿನ್ಯಾಸ ನೀಡುವುದು. ಇದು ತುಂಬಾ ದುಬಾರಿ ಸೀರೆಯಾಗಿದ್ದು, ಹೆಚ್ಚಾಗಿ ಶ್ರೀಮಂತರೇ ಇದನ್ನು ಧರಿಸುವರು.

    ಇಳಕಲ್

    ಉತ್ತರ ಕರ್ನಾಟಕದ ಇಳಕಲ್ ನಿಂದ ಈ ಸೀರೆಯು ಬಂದಿದ್ದು, ಈ ಭಾಗದ ಶೇ.50-60ರಷ್ಟು ಜನರು ಕೈಮಗ್ಗದ ಕೆಲಸವನ್ನೇ ಮಾಡುವರು. ಸುಮಾರು ೮ನೇ ಶತಮಾನದಿಂದಲೂ ಈ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಇಳಕಲ್ ಸೀರೆಯು ಅದರ ಅಂಚು ಮತ್ತು ಸೆರಗಿನಿಂದಾಗಿ ತುಂಬಾ ಜನಪ್ರಿಯವಾಗಿದೆ. ಚಿಕ್ಕಿಯ ಅಂಚು ಹೊಂದಿರುವಂತಹ ಇದನ್ನು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕೂಡ ಧರಿಸುವರು.

    ​ಗುಳೇದಗುಡ್ಡ​

    ಉತ್ತರ ಕರ್ನಾಟಕದ ಬಾಗಲಕೋಟೆಯಿದ ಬಂದಿರುವ ಗುಳೇದಗುಡ್ಡ ಸೀರೆಯು ಸುಮಾರು ನೂರು ವರ್ಷಗಳಿಂದಲೂ ಜನಪ್ರಿಯವಾಗಿದೆ. ಈ ಸೀರೆಯನ್ನು ಗುಳೇದಗುಡ್ಡ ಖಾನ ಎಂದು ಕೂಡ ಕರೆಯಲಾಗುತ್ತದೆ. ಈಗ ಇದನ್ನು ಶರ್ಟ್, ಬ್ಯಾಗ್, ತಲೆದಿಂಬಿನ ಕವರ್ ಮತ್ತು ಡೆಕೋರೇಟಿವ್ ಉತ್ಪನ್ನಗಳಲ್ಲಿ ಬಳಕೆ ಮಾಡುವರು. ತೆಳು ಮತ್ತು ಸರಳವಾಗಿ ಬರುವ ಈ ಸೀರೆಗಳು ರಾಜ್ಯದೆಲ್ಲೆಡೆಯಲ್ಲಿ ತುಂಬಾ ಜನಪ್ರಿಯಾಗಿದೆ.

    ಪಟ್ಟೆದ ಅಂಚು​

     

    ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದಾಗಿದೆ. ಇಂತಹ ಸೀರೆಗಳನ್ನು ಹತ್ತನೇ ಶತಮಾನದಿಂದಲೂ ಧರಿಸಿಕೊಂಡು ಬರಲಾಗುತ್ತಿದೆ. ಈಗಲೂ ಈ ಸಾಂಪ್ರದಾಯಿಕ ಸೀರೆಯು ಜನಪ್ರಿಯವಾಗಿದೆ. ಅದರ ಅಂಚು ಮತ್ತು ಚೆಕ್ಸ್ ನಿಂದಾಗಿಯೇ ಅದಕ್ಕೆ ಈ ಹೆಸರು ಬಂದಿದೆ. ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಇದನ್ನು ವಿಶೇಷವಾಗಿ ತಯಾರಿಸಲಾಗಿದೆ. ಇದು ಉಡುವವರಿಗೆ ಒಳ್ಳೆಯ ಹಿತಕರ ಭಾವೆ ನೀಡುವುದು. ಇದರಲ್ಲಿ ಸಾಮಾನ್ಯವಾಗಿ ಹಳದಿ, ಕೆಂಪು, ಗುಲಾಬಿ, ಹಸಿರು ಬಣ್ಣಗಳು ಇವೆ.

    ​ಕಸೂತಿ ಸೀರೆ​

    ಕೈಮಗ್ಗದಿಂದ ಮಾಡಲ್ಪಡುವಂತಹ ಈ ಸೀರೆಯು ರಾಜ್ಯದ ಮಹಿಳೆಯರಲ್ಲಿ ತುಂಬಾ ಜನಪ್ರಿಯ ಸೀರೆಯಾಗಿದೆ. ಈ ಸೀರೆಯಲ್ಲಿ ಮೊದಲಿಗೆ ಪೆನ್ಸಿಲ್ ನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಇದರ ಬಳಿಕ ಸೂಜಿ ಮತ್ತು ಬಣ್ಣ ಬಣ್ಣದ ದಾರಗಳಿಂದ ವಿನ್ಯಾಸಿಸಲಾಗುತ್ತದೆ. ಹತ್ತಿ, ಸಿಲ್ಕ್ ಸೀರೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ, ಬೇರೆ ಕಡೆಗಳಲ್ಲೂ ತುಂಬಾ ಜನಪ್ರಿಯವಾಗಿದೆ.

    Continue Reading

    LATEST NEWS

    Trending