LATEST NEWS
ಮುಂಬೈನಲ್ಲಿ ಗೋಕುಲ ಬ್ರಹ್ಮಕಲಶೋತ್ಸವ ಸಂಭ್ರಮ
ಮುಂಬಯಿ: ಬಿಎಸ್ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ್ ಎಸ್.ರಾವ್ ಕಟೀಲು ಸಾರಥ್ಯದಲ್ಲಿ ಗೋಕುಲ ಬ್ರಹ್ಮಕಲಶೋತ್ಸವ ಸಾಯನ್ ಪೂರ್ವದ ಕಿಂಗ್ಸರ್ಕಲ್ನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ನಡೆಯಿತು.
ಕೇಂದ್ರ ಸರಕಾರದ ರಾಜ್ಯ ವಿತ್ತ ಸಚಿವ ಡಾ. ಭಗತ್ಕೃಷ್ಣ ರಾವ್ ಕರಾಡ್ ಗೋಕುಲದಲ್ಲಿ ಶ್ರೀಗೋಪಾಲಕೃಷ್ಣನ ದರ್ಶನ ಪಡೆದು ಗೋಕುಲ ಬ್ರಹ್ಮಕಲಶೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮುಖದ್ವಾರದ ಆರಂಭದಿಂದ ನಿರ್ಗಮನದವರೆಗೂ ಮಂದಿರದೊಳಗಿನ ಶಾಸ್ತ್ರಾಭವ್ಯತೆ ಅನುಭವಿಸಿ ದನ್ಯನೆಣಿಸಿದೆ. ಶ್ರೀಕೃಷ್ಣ ವಿವಿಧ ಲೀಲೆ, ರೂಪಗಳನ್ನು ಇಲ್ಲಿ ಕೆತ್ತನೆಯ ಮೂಲಕ ಸೃಷ್ಠಿಸಿ ಪ್ರತಿಷ್ಠಾಪಿಸಲ್ಪಟ್ಟಿವೆ. ಅಜಂತಾ, ಎಲ್ಲೋರಾ ಗುಹೆಗಳಲ್ಲಿನ ಕೆತ್ತನೆಕ್ಕಿಂತಲೂ ಮಿಗಿಲಾದ ವರ್ಣನೆ ಇಲ್ಲಿ ರೂಪಿಸಲ್ಪಟ್ಟಿವೆ.
ಮಥುರಾ ಉತ್ತರ ಪ್ರದೇಶದಲ್ಲಿದೆ ಆದರೆ ಈ ಗೋಕುಲ ಮಹಾರಾಷ್ಟ್ರದ ಮಥುರಾವಾಗಿದೆ. ಜನರ ಒಳ್ಳೆಯ ಭಾವನೆಗಳಿಂದ ಬದುಕು ಪಾವನಗೊಂಡಂತೆ ಇಂತಹ ದೇವಾಲಯಗಳಿಂದಲೂ ರಾಷ್ಟ್ರವು ವಿಕಾಸಗೊಳ್ಳುತ್ತದೆ. ಎಲ್ಲಾ ಹಿಂದು ಜನತೆ ಭಗವಂತನನ್ನು ನಂಬುವ, ಪೂಜಿಸುವ ಜನರಾಗಿದ್ದು, ನಮ್ಮಲ್ಲಿ ಸಕಲ ಐಶ್ವರ್ಯ ಶ್ರೇಷ್ಠರೇ ಇದ್ದಾರೆ. ಇವೆಲ್ಲರಿಗೂ ಶಾಂತಿ ನೆಮ್ಮದಿ ಸಿಗುವಂತಿದ್ದರೆ ಅದು ಮಠ ಮಂದಿರಗಳಲ್ಲಿ ಮಾತ್ರ. ಆದುದರಿಂದ ಭಗವಂತನ ರೂಪ ಕಾಣಲು ದೇಗುಲಗಳು ಶ್ರದ್ಧಾ ಕೇಂದ್ರಗಳಾಗಿವೆ. ಜನ್ಮ ಭೂಮಿಯಲ್ಲಿ ರುಗ್ಣಾಲಯ, ಕರ್ಮಭೂಮಿಯಲ್ಲಿ ದೇವಾಲಯ ನಿರ್ಮಿಸಿ ಭಗದ್ಭಕ್ತನಾದ ಡಾ. ಸುರೇಶ್ ರಾವ್ ಅವರ ಸಾಧನೆ ಶ್ರೇಷ್ಠವಾಗಿದೆ ಎಂದು ತಿಳಿಸಿದರು.
ದಿ. ಹೆಚ್.ಬಿ ಎಲ್ ರಾವ್ ಪರಿಕಲ್ಪನೆಯಲ್ಲಿ ಅರಳಿ ಕೆ.ಎಲ್ ಕುಂಡಂತಾಯ ಪ್ರಧಾನ ಸಂಪಾದಕತ್ವದಲ್ಲಿ ಪ್ರಸಾಶಿತ `ಶ್ರೀ ಕೃಷ್ಣ ದರ್ಶನ’ ಬೃಹತ್ ಗ್ರಂಥವನ್ನು ಉಡುಪಿ ಶ್ರೀ ಪಲಿಮಾರು ಮಠಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನಾವರಣ ಗೊಳಿಸಿದರು.
ನಂತರ ಮಾತನಾಡಿದ ಅವರು ಇದೊಂದು ವೈಭವದ ಧರ್ಮ ಕಲಾಭಿಷೇಕ. ಕೃಷ್ಣ ಅಂದರೆನೇ ಅದು ಆಕಾರ್ಷಣೀಯವಾದುದು. ಕೃಷ್ಣ ಉತ್ತರಪ್ರದೇಶದವನು. ಆದರೆ ಇವರ್ರು ದಕ್ಷಿಣದ ತನಕ ಎಲ್ಲರನ್ನೂ ತನ್ನ ಬುಟ್ಟಿಯಲ್ಲಿ ಹಾಕಿಕೊಂಡ ಶ್ರೇಷ್ಠ ದೇವರು. ಮಹಾರಾಷ್ಟ್ರವನ್ನು ಕೂಡಾ ಎಳೆದಿದೆ ಅಂದರೆ ತನ್ನ ಬುಟ್ಟಿಗೆ ಅಂತಾದರೆ ಇದೊಂದು ಕೊಂಡಿ ದೇವರು ಗೋಪಾಲಕೃಷ್ಣ. ಇಲ್ಲಿ ದೇವಸ್ಥಾನ ಎಲ್ಲಾ ಹೊಸತು ಆದರೆ ದೇವರು ಮಾತ್ರ ಹಳತು. ಸಾಮಾನ್ಯವಾಗಿ ದೇವರು ಹೊಸತಾಗುತ್ತಾನೆ ಇದು ಸಲ್ಲದು. ಬದಲಾಗಿ ಹಳೆ ದೇವರು ಗುಡಿಮಾತ್ರ ಹೊಸತಾಗಿರಬೇಕು. ನಾವು ಹಳಬರಾಗಬೇಕು ನಮ್ಮ ಉಡುಪು ಹಳೆಯದಾಗಿರಬೇಕು. ಹಾಗೆಯೇ ನಮ್ಮ ಭಗವಂತ ಹಳತ್ತಾಗಿ ಬಿಟ್ಟರೆ ಆ ದೇವಸ್ಥಾನಕ್ಕೊಂದು ಕಳೆ, ಊರಿಗೊಂದು ತಾಕತ್ತುನಮ್ಮ ರಾಷ್ಟ್ರಕ್ಕೆನೇ ಒಂದು ದೊಡ್ಡ ಸಂಪತ್ತು ಈ ಗೋಪಾಲಕೃಷ್ಣ ಎಂದರು.
ಡಾ. ಸುರೇಶ್ ರಾವ್ ಪ್ರಸ್ತಾವನೆಗೈದು ಮಾತನಾಡಿ ಈ ಗೋಕುಲದ ಪುನರ್ ನಿರ್ಮಾಣ ಬಿಎಸ್ಕೆಬಿ-ಜಿಕೆಪಿ ಪರಿವಾರದ ತ್ಯಾಗ, ಪರಿಶ್ರಮ ಮತ್ತು ಪ್ರತಿಯೊಂದು ಭಕ್ತರ ವರದಾನದಿಂದ ನಿರ್ಮಾಣಗೊಂಡಿದೆ. ಜೊತೆಗೆ ನನ್ನ ತಾಯಿ ಕತ್ಯಾಯಿಣಿ, ಪತ್ನಿ ವಿಜಯಲಕ್ಷಿ ್ಮೀ ಮತ್ತು ಸುಪುತ್ರಿ ಡಾ. ಶ್ರುತಿ ಹೆಬ್ಬಾರ್ ಅವರ ಸಹಯೋಗದ ಫಲವಾಗಿದೆ. ದಾನಿಗಳ, ಪ್ರಾಯೋಜಕರ, ಹಿರಿಯ ವಾಸ್ತು ಶಿಲ್ಪಿ ಅವಿನಾಶ್ ದಹಣುಕರ್, ವಾಸ್ತುಶಿಲ್ಪಿ ಸುದರ್ಶನ ಶಬರಾಯ, ಶಿಲ್ಪಕಾರರು, ಕಟ್ಟಡದ ಎಲ್ಲಾ ಗುತ್ತಿಗೆದಾರರಿಗೆ ಗೋಕುಲದ ಯಶಸ್ಸು ಸಲ್ಲುತ್ತದೆ ಎಂದರು.
ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶಿಕ ಅರ್ಚಕ ಶ್ರೀ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ
ಕರ್ನಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್ ಮಹಾಬಲೇಶ್ವರ ಭಟ್, ಅಜಂತಾ ಫಾರ್ಮ ಮುಂಬಯಿ ಸಂಸ್ಥೆಯ ಉಪಾಧ್ಯಕ್ಷ ಮಧುಸೂಧನ ಅಗರ್ವಾಲ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಚರೀಶ್ಮಾ ಬಿಲ್ಡರ್ಸ್ನ ಕಾರ್ಯಾಧ್ಯಕ್ಷ ಮೂಲ್ಕಿ ಪಡುಮನೆ ಸುಧೀರ್ ವಿ.ಶೆಟ್ಟಿ, ಎಸ್ಬಿಐ ಲೈಫ್ ಇನ್ಸೂರೆನ್ಸ್ ಕಂಪೆನಿಯ ಕಾರ್ಯನಿರ್ವಹಕ ನಿರ್ದೇಶಕ ಆನಂದ ಪೇಜಾವರ, ಹಿರಿಯ ಪತ್ರಕರ್ತ ಕೆ.ಎಲ್ ಕುಂಡಂತಾಯ ಪ್ರಧಾನ ಅಭ್ಯಾಗತರಾಗಿ ವೇದಿಕೆಯಲ್ಲಿದ್ದರು.
ಬಿಎಸ್ಕೆಬಿ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಸದಸ್ಯರುಗಳಾದ ಎ. ಶ್ರೀನಿವಾಸ ರಾವ್, ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಎಸ್.ಎನ್ ಉಡುಪ ಜೆರಿಮೆರಿ, ಜೊತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಜೊತೆ ಕೋಶಾಧಿಕಾರಿ ಪಿ.ಬಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯ ಭಕ್ತಾದಿಗಳು ಹಾಜರಿದ್ದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಿದ್ಧ ನೃತ್ಯ ನರ್ತಕಿ ಮತ್ತು ಸಂಯೋಜಕಿ ಸೋನಿಯಾ ಪರಚುರೆ ಇವರಿಂದ ಸಂಕೇತ್ ಅಜ್ವೆಕರ್ ಅಭಿನಯದಲ್ಲಿ ಕೃಷ್ಣ ಬ್ಯಾಲೆ ಹಾಗೂ ಮದನ್ ಮೋಹನ್ ಬಳಗವು ಅಂತಿಮ ಮಧುರ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
DAKSHINA KANNADA
‘ನಾಟು ನಾಟು’ ರೀತಿಯ ಸಾಂಗ್..! ಕುತೂಹಲ ಮೂಡಿಸಿದ ‘ವಾರ್ 2’
2019 ರಲ್ಲಿ ಸೂಪರ್ ಹಿಟ್ ಆಗಿದ್ದ ‘ವಾರ್’ ಸಿನೆಮಾದ ಸೆಕಂಡ್ ವರ್ಷನ್ ‘ವಾರ್ 2’ ತೆರೆ ಮೇಲೆ ಬರಲು ಭರದ ಸಿದ್ಧತೆ ನಡೆಸಿದೆ. ‘ವಾರ್’ ಸಿನೆಮಾದಲ್ಲಿ ‘ ಜೈ ಜೈ ಶಿವಶಂಕರ್’ ಹಾಡು ಸುಪರ್ ಹಿಟ್ ಆಗಿದ್ದು ಫ್ಯಾನ್ಸ್ಗಳು ಹಾಡಿಗೆ ಫಿದಾ ಆಗಿದ್ರು. ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್’ ಸಿನೆಮಾ ಬಳಿಕ ಈಗ ‘ವಾರ್ 2’ ರೆಡಿ ಆಗ್ತಾ ಇದೆ. ಇದರಲ್ಲಿ ಹೃತಿಕ್ ರೋಷನ್ ಹಾಗೂ ಜ್ಯೂನಿಯರ್ ಎನ್ಟಿಆರ್ ಜೊತೆಯಾಗಿದ್ದಾರೆ.
ಅದ್ಧೂರಿಯಾಗಿ ನಿರ್ಮಾಣ ಆಗ್ತಾ ಇರೋ ‘ವಾರ್ 2’ ಸಿನೆಮಾಗೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲಾಗ್ತಾ ಇದೆ. ಯಶ್ ರಾಜ್ ಫಿಲಂಸ್ ಸಂಸ್ಥೆ ಈ ‘ವಾರ್ 2’ ಸಿನೆಮಾಗೆ ಬಂಡವಾಳ ಹಾಕುತ್ತಿದೆ. ‘ವಾರ್’ ಸಿನೆಮಾದಂತೆ ಈ ಸಿನೆಮಾದಲ್ಲೂ ವಿಶೇಷ ಹಾಡನ್ನ ಸಿನೆಮಾ ತಂಡ ಪ್ಲ್ಯಾನ್ ಮಾಡಿದೆ. ಜೂನಿಯರ್ ಎನ್ಟಿಆರ್ ಅವರ ಆಸ್ಕರ್ ಅವಾರ್ಡ್ ವಿನ್ ಆಗಿದ್ದ ‘ನಾಟು ನಾಟು” ಹಾಡಿನಂತೆ ಇರೋ ಹಾಡಿಗೆ ಹೃತಿಕ್ ಹಾಗೂ ಜ್ಯೂನಿಯರ್ ಎನ್ಟಿಆರ್ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ‘ನಾಟು ನಾಟು’ ರೀತಿಯ ಹಾಡು ಹಾಗೂ ಡ್ಯಾನ್ಸ್ ‘ವಾರ್ 2’ ಸಿಎನಮಾದ ಹೈಲೈಟ್ ಆಗಲಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.
ಈಗಾಗಲೇ ‘ವಾರ್ 2’ ಚಿತ್ರದ ಶೂಟಿಂಗ್ ಆರಂಭವಾಗಿದೆ. ಚಿತ್ರದ ಸೆಟ್ ಫೋಟೋಗಳು ಕೂಡಾ ಲೀಕ್ ಆಗಿವೆ. ಅಯಾನ್ ಮುಖರ್ಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದಿತ್ಯ ಚೋಪ್ರಾ ಅವರು ದೊಡ್ಡ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ವಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಸಿನಿಮಾ 2025ರಲ್ಲಿ ಆಗಸ್ಟ್ 14ರಂದು ರಿಲೀಸ್ ಆಗಲಿದೆ.
LATEST NEWS
ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ
ಉಡುಪಿ : ಪ್ರಧಾನಿ ಮೋದಿ ಚಿಕ್ಕಬಳ್ಳಾಪುರ ಬೆಂಗಳೂರು ಪ್ರವಾಸ ಮಾಡ್ತಿದ್ದಾರೆ. ಮೂರು ಬಾರಿ ಕಾರಣಾಂತರದಿಂದ ಉಡುಪಿಗೆ ಬರಲು ಸಾಧ್ಯವಾಗಿರಲಿಲ್ಲ. ಪ್ರಧಾನಮಂತ್ರಿ ಕಚೇರಿಯಿಂದ ಅನುಮತಿ ಪಡೆದು ಉಡುಪಿ ಬಂದಿದ್ದೇನೆ. ಕರಾವಳಿ ಜನರ ರಕ್ತದಲ್ಲಿ ಹಿಂದುತ್ವ ಇದೆ. ಮೋದಿಯ 10 ವರ್ಷದ ಆಡಳಿತವನ್ನು ಜಗತ್ತು ಕೊಂಡಾಡಿದೆ. ಎಲ್ಲಾ ಅಸಾಧ್ಯಗಳನ್ನು ಪ್ರಧಾನಿ ಮೋದಿ ಸಾಧ್ಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶದ ಜನರಲ್ಲಿ ವಿಶ್ವಾಸ -ಭರವಸೆ ಮೂಡಿಸಿದ್ದು ಮೋದಿ. ರಾಮಮಂದಿರ, ಆರ್ಟಿಕಲ್ 370 ರದ್ದು, ಅಭಿವೃದ್ಧಿ ಎಲ್ಲವೂ ಮೋದಿ ಕಾಲದಲ್ಲಿ ಆಗಿದೆ. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ. ನಾವು ರಕ್ಷಣೆ ಮಾಡ್ತೇವೆ ಎಂದು ಖರ್ಗೆ ಹೇಳ್ತಾರೆ. ಮೋದಿ ಮತ್ತೆ ಪ್ರಧಾನಿ ಆಗಬಾರದು ಅಂತ ಖರ್ಗೆ ಕರೆ ಕೊಡ್ತಾರೆ. ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರನ್ನು ಬದುಕಿದ್ದಾಗಲೇ ಕಗ್ಗೊ*ಲೆ ಮಾಡಿದ್ದಾರೆ. ಅಂಬೇಡ್ಕರ್ ರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಬಾಬಾ ಸಾಹೇಬರ ಅಂತ್ಯ ಸಂಸ್ಕಾರಕ್ಕೂ ಅವಕಾಶ ಕೊಟ್ಟಿಲ್ಲ. ಅಂಬೇಡ್ಕರ್ ರ ಪಂಚ ತೀರ್ಥಕ್ಷೇತ್ರ ಅಭಿವೃದ್ಧಿ ಮಾಡಿದ್ದು ಮೋದಿ – ಬಿಜೆಪಿ ಸರಕಾರ ಎಂದರು.
ಇದನ್ನೂ ಓದಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್
DAKSHINA KANNADA
ಕಡಬ: ಬಿಳಿನೆಲೆ ಕಾಡಿನಲ್ಲಿ ಅಸ್ಥಿಪಂಜರ ಪತ್ತೆ ..!
ಕಡಬ: ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿಯಿರುವ ಕಾಡಿನಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ಎ.19ರಂದು ವರದಿಯಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದ ಪಕ್ಕದಲ್ಲಿ ಅಸ್ಥಿಪಂಜರ ದೊರಕಿದೆ.
ಬಿಳಿನೆಲೆಯ ಚಂದ್ರಶೇಖರ್ ಎಂವರು ಕಾಡಿಗೆ ಸೌದೆ ತರಲು ಹೋಗಿದ್ದಾಗ ಕೊಳೆತ ವಾಸನೆ ಬಂದಿದೆ. ಈ ಬಗ್ಗೆ ಹುಡುಕಾಡಿದಾಗ ಮೃತ ವ್ಯಕ್ತಿಯ ಅಸ್ಥಿಪಂಜರ ಕಂಡುಬಂದಿದೆ. ದೂರದದಲ್ಲಿದ್ದ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುವುದು ಕಂಡು ಬಂದಿದೆ.
Read More..;ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿ ಆರ್:12/2024 ಕಲಂ:174(3),(iv) CrPC ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.