WORLD
ಕುವೈಟ್: ಭಾರತೀಯ ಪ್ರವಾಸಿ ಪರಿಷತ್ತಿನಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಕುವೈಟ್: ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ನಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಫರ್ವಾನಿಯಾದ ಬದ್ರ್ ಅಲ್ ಸಮಾ ವೈದ್ಯಕೀಯ ಕೇಂದ್ರದ ಸಮನ್ವಯದಲ್ಲಿ ನಡೆಸಲಾಯಿತು.
ಕುವೈಟ್ನಲ್ಲಿ ಭಾರತೀಯ ಸಮುದಾಯದ ಸೇವೆಯ ಭಾಗವಾಗಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಇಎನ್ಟಿ ತಜ್ಞೆ ಡಾ.ಸೌಮ್ಯ ಆರ್.ಶೆಟ್ಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೀನಿಯರ್ ಮ್ಯಾನೇಜರ್ ನಾಗರಾಜ ತಂತ್ರಿ ಮತ್ತು ಮನೋಜ್ ಮಾಳೇವಿಕರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವು ಬೇಬಿ ಸಾನ್ವಿ ರಾಜೇಶ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ನಂತರ ಮುಖ್ಯ ಅತಿಥಿಗಳಾದ ಡಾ.ಸೌಮ್ಯ ಆರ್.ಶೆಟ್ಟಿ, ನಾಗರಾಜ್ ತಂತ್ರಿ ಮತ್ತು ಮನೋಜ್ ಮಾಳೇವಿಕರ ದೀಪ ಬೆಳಗಿಸಿದರು. ಇನ್ನು ಕಾರ್ಯಕ್ರಮ ಆಯೋಜಕರಾದ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ – ಕರ್ನಾಟಕ ವಿಭಾಗದ ಅಧ್ಯಕ್ಷರಾದ ರಾಜ್ ಭಂಡಾರಿಯವರು ಅವರು ಸದಸ್ಯರನ್ನು ಸ್ವಾಗತಿಸಿದರು.
ಬೆಳಗ್ಗೆ ಆರಂಭವಾದ ಶಿಬಿರ ಮಧ್ಯಾಹ್ನ 1.30ರವರೆಗೆ ನಡೆಯಿತು. ಭಾರತೀಯರು ಮತ್ತು ಇತರ ರಾಷ್ಟ್ರೀಯತೆಯ 192 ಕ್ಕೂ ಹೆಚ್ಚು ಸದಸ್ಯರು ಸೇವೆಯ ಪ್ರಯೋಜನ ಪಡೆದರು. ಭಾರತೀಯ ಪ್ರವಾಸಿ ಪರಿಷತ್ತು ಕುವೈತ್ – ಕರ್ನಾಟಕ ವಿಭಾಗದ ತಂಡವು ಶಿಬಿರವನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ಕಾರ್ಯ ಮಾಡಿ ಇಡೀ ಕಾರ್ಯಕ್ರಮವನ್ನು ಸುಗಮವಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
LATEST NEWS
ಸೈರನ್ನಂತೆ ಸೌಂಡ್ ಮಾಡ್ತದೆ ಈ ಪಕ್ಷಿ
ಯುಕೆ: ಕೆಲ ಪಕ್ಷಿಗಳ ಕೂಗು ಕೇಳಿದರೆ ಕೇಳಿಸುತ್ತಲೇ ಇರಬೇಕು ಅನ್ನಿಸುತ್ತದೆ. ಅದರಲ್ಲೂ ಕೋಗಿಲೆಯ ಕೂಗನ್ನು ಸಂಗೀತದ ಕಂಠಕ್ಕೆ ಹೋಲಿಸುತ್ತಾರೆ. ಕೆಲ ಪಕ್ಷಿಗಳು ನಾವು ಮಾತಾಡಿದಂತೆಯೇ ಮತ್ತೆ ಮಾತಾಡುತ್ತದೆ. ಇನ್ನು ಕೆಲವು ಗಿಣಿಶಾಸ್ತ್ರ ಹೇಳುತ್ತದೆ. ಹೀಗೆ ಬಗೆಬಗೆಯ ಪಕ್ಷಿಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅದೇ ರೀತಿ ಇಲ್ಲೊಂದು ಪಕ್ಷಿ ಪೊಲೀಸ್ ವಾಹನದಂತೆ ಸೌಂಡ್ ಮಾಡ್ತದೆ. ಜನರು ಪೊಲೀಸ್ ಗಾಡಿಯ ಸೈರನ್ ಕೇಳುತ್ತಿದ್ದಂತೆ ಅಲ್ಲಿಂದ ಜಾಗ ಕಾಲಿ ಮಾಡುತ್ತಾರೆ.
ಆದರೆ ಇಲ್ಲೊಂದು ಸೈರನ್ ಸೌಂಡ್ ಪೊಲೀಸರನ್ನೇ ಕನ್ಫ್ಯೂಸ್ ಮಾಡಿದೆ. ಇದು ಪೊಲೀಸ್ ವಾಹನದ ಸೌಂಡ್ ಅಲ್ಲ. ಬದಲಾಗಿ ಹಕ್ಕಿಯೊಂದರ ಕೂಗು.
ಯುನೈಟೆಡ್ ಕಿಂಗ್ ಡಮ್ ನ ಥೇಮ್ಸ್ ವ್ಯಾಲಿ ಪೊಲೀಸ್ ಠಾಣೆ ಪಕ್ಕದ ಮುಖ್ಯ ರಸ್ತೆಯಲ್ಲಿ ಸೈರನ್ ಸೌಂಡ್ ರೀತಿಯಲ್ಲಿ ಕೂಗುವ ಹಕ್ಕಿಯೊಂದು ಕಾಣಿಸಿಕೊಂಡಿದೆ. ಈ ಹಕ್ಕಿಯ ಕೂಗು ಪ್ರಯಾಣಿಕರು ಹಾಗೂ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ.
ಬಿಸೇಸ್ಟರ್ ಪೊಲೀಸ್ ಸ್ಟೇಷನ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಹಕ್ಕಿ ಸೈರನ್ ನಿಂದ ಕೆಲಕಾಲ ಗೊಂದಲಕ್ಕೀಡಾದ ಬಗ್ಗೆ ಹಂಚಿಕೊಂಡಿದ್ದಾರೆ. ಸದ್ಯ ಪೊಲೀಸ್ ಸೈರನ್ ರೀತಿಯಲ್ಲಿ ಕೂಗುವ ಹಕ್ಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೊಂದು ವಿಶೇಷ ಹಕ್ಕಿ:
ಮರದ ಮೇಲೆ ಪುಟ್ಟದಾದ ಕಪ್ಪು ಹಕ್ಕಿಯೊಂದು ಕುಳಿತು ಸೈರನ್ನಂತೆ ಕೂಗಿದೆ. ಇದೊಂದು ವಿಶೇಷ ರೀತಿಯ ಪಕ್ಷಿಯಾಗಿದ್ದು, ಸಣ್ಣ ಬಾಲ, ತ್ರಿಕೋನಾಕಾರದ ರೆಕ್ಕೆಗಳು ಇದೆ. ಇಂತಹ ಪಕ್ಷಿಗಳು ಚಳಿಗಾಲದಲ್ಲಿ ಬಿಳಿಬಣ್ಣದ ಮಚ್ಚೆಗಳನ್ನು ಹೊಂದಿರುತ್ತದೆ. ಬೇಸಿಗೆಗಾಲದಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
DAKSHINA KANNADA
ಯುದ್ಧಕ್ಕೆ ಸನ್ನದ್ಧರಾಗಲು ಸರ್ವಾಧಿಕಾರಿಯ ಕರೆ..! ಹೆಚ್ಚಿದ ಜಾಗತಿಕ ಯುದ್ಧದ ಭೀತಿ..!
ಮಂಗಳೂರು (North Korea ) : ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ (King Jong Un ) ಯುದ್ಧಕ್ಕೆ ಸನ್ನದ್ಧರಾಗ್ತಾ ಇದ್ದಾರಾ ? ಇಂತಹ ಒಂದು ಆಘಾತಕಾರಿ ವಿಚಾರವನ್ನು ಕೆಸಿಎನ್ಎ(KCNA) ಸುದ್ದಿ ಸಂಸ್ಥೆ ಪ್ರಕಟಿಸಿದೆ. ಉತ್ತರ ಕೊರಿಯಾದ ಪ್ರಮುಖ ಮಿಲಿಟರಿ ವಿವಿಯನ್ನು ಪರಿಶೀಲಿಸಿದ ಕಿಮ್ ಜಾಂಗ್ ಉನ್ “ತನ್ನ ದೇಶದ ಸುತ್ತಲಿನ ಅಸ್ಥಿರ ಭಗೋಳಿಕ ಹಾಗೂ ರಾಜಕೀಯ ಪರಿಸ್ಥಿತಿಗಳು ಎಂದಿಗಿಂತಲೂ ಹೆಚ್ಚು ಯುದ್ಧಕ್ಕೆ ಸಿದ್ಧರಾಗುವ ಸಮಯ” ಎಂದು ಹೇಳಿದ್ದಾಗಿ ವರದಿ ಮಾಡಿದೆ.
ಉತ್ತರ ಕೊರಿಯಾ ಇತ್ತೀಚಿನ ವರ್ಷಗಳಲ್ಲಿ ತನ್ನ ಶಸ್ತ್ರಾಸ್ತ್ರಗಳ ಅಭಿವೃದ್ದಿಯನ್ನು ಹೆಚ್ಚಿಸಿದ್ದು, ರಷ್ಯಾದೊಂದಿಗೆ ನಿಕಟ ಮಿಲಿಟರಿ ಮತ್ತು ರಾಜಕೀಯ ಸಂಬಂಧ ಬೆಳೆಸಿಕೊಂಡಿದೆ. ಉಕ್ರೇನ್ ಯದ್ಧದಲ್ಲಿ ಗುಟ್ಟಾಗಿ ಸಹಾಯ ಮಾಡಿದೆ ಅನ್ನೋ ಆರೋಪ ಕೂಡಾ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಅಕ್ಕ ಪಕ್ಕದ ರಾಷ್ಟ್ರಗಳು ಜಂಟಿಯಾಗಿ ಮಿಲಿಟರಿ ಕಸರತ್ತುಗಳನ್ನು ನಡೆಸಿದೆ. ಯುದ್ಧ ಕುಶಲತೆ ಹೆಸರಿನಲ್ಲಿ ಅಮೇರಿಕಾ , ದಕ್ಷಿಣ ಕೊರಿಯಾ ದೇಶಗಳು ಉತ್ತರ ಕೊರಿಯಾವನ್ನು ಪ್ರಚೋದಿಸುತ್ತಿದೆ ಎಂದು ಕಿಮ್ ಜಾಂಗ್ ಉನ್ ಆರೋಪಿಸಿದ್ದಾರೆ.
ಶತ್ರುಗಳು ಡಿಪಿಆರ್ಕೆ ( ದೆಮಾಕ್ರಟಿಕ್ ಪಿಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ)ದ ವಿರುದ್ಧ ಮುಖಾಮುಖಿಯಾದರೆ ಮಾರಣಾಂತಿಕ ಹೊಡೆತ ನೀಡುವುದಾಗಿ ಕಿಮ್ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಘನ ಇಂಧನ ಬಳಸಿದ ಹೊಸ ಹೈಪರ್ಸಾನಿಕ್ ಮಧ್ಯಂತರ ಕ್ಷಿಪಣಿಯನ್ನು ಉತ್ತರ ಕೊರಿಯ ಅಭಿವೃದ್ದಿ ಪಡಿಸಿದೆ. ಇದು ದ್ರವ ಇಂಧನದ ಬದಲಾಗಿ ಘನ ಇಂಧನವನ್ನು ಬಳಿಸಿಕೊಂಡು ಆವಿಷ್ಕರಿಸಲಾಗಿದೆ. ಇದು ಅತೀ ಹೆಚ್ಚು ದೂರವನ್ನು ಕ್ರಮಿಸುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಹೀಗಾಗಿ ಕಿಮ್ ಜಾಂಗ್ ಉನ್ ಅವರ ಯುದ್ಧಾಸಕ್ತಿಯ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಣೆಗೆ ಒಳಗಾಗಿದೆ. ಯುದ್ಧ ದಾಹಿಯಾಗಿರುವ ಕಿಂಗ್ ಜಾಂಗ್ ಉನ್ ನೆರೆಯ ರಾಷ್ಟಗಳ ಜೊತೆ ಯುದ್ಧ ಘೋಷಣೆ ಮಾಡ್ತಾರಾ? ಇಲ್ಲಾ ಅಮೇರಿಕಾ ಅಥವಾ ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿ ಈ ಹೇಳಿಕೆ ನೀಡಿದ್ದಾರಾ ಅನ್ನೋದು ಚರ್ಚೆ ಆಗುತ್ತಿದೆ.
LATEST NEWS
ಬೆಕ್ಕಿನಂತಿದೆ ಈ ಮಗುವಿನ ಮುಖ…! ಮಗು ಹೀಗಾಗಲು ಕಾರಣವೇನು ಗೊತ್ತಾ ?
ಮಂಗಳೂರು ( ಫಿಲಿಪ್ಪೀನ್ಸ್ ) : ಮನುಷ್ಯರ ದೇಹದ ಕೆಲ ಭಾಗಗಳಲ್ಲಿ ಕೂದಲು ಇರುವುದು ಸಹಜ. ಆದ್ರೆ ಇಲ್ಲೊಂದು ಮಗುವಿನ ದೇಹ ಹಾಗೂ ಮುಖದ ಭಾಗದಲ್ಲೆಲ್ಲ ದಟ್ಟವಾಗಿ ಕೂದಲು ಬೆಳೆದಿದೆ. ಇದಕ್ಕೆ ಕಾರಣ ನಾನು ಗರ್ಭಾವಸ್ಥೆಯಲ್ಲಿ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಹಾಗಾಗಿ ನನ್ನ ಮಗು ಈ ಪರಿಸ್ಥಿತಿಗೆ ಬಂದಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ.
ಈ ಘಟನೆ ಫಿಲಿಪ್ಪೀನ್ಸ್ ಅಲ್ಲಿ ನಡೆದಿದ್ದು ಇಲ್ಲಿನ ಜರೆನ್ ಎಂಬ 2 ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ.
ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನಬೇಕು ಎನ್ನುವ ಆಸೆ ಇತ್ತಂತೆ. ಹಾಗಾಗಿ ಅವರು ಹಳ್ಳಿಯವರಿಗೆ ಹೇಳಿ ಕಾಡುಬೆಕ್ಕಿನ ಮಾಂಸವನ್ನು ತಂದು ಅದರಿಂದ ಖಾದ್ಯ ಮಾಡಿ ತಿಂದಿದ್ದರು. ಕಾಡು ಬೆಕ್ಕಿನ ಶಾಪ ನನ್ನ ಮಗನಿಗೆ ತಟ್ಟಿದೆ ಹೀಗಾಗಿ ಮಗನ ಮೈಯೆಲ್ಲಾ ಕೂದಲುಗಳಿವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : WATCH VIDEO : ಬೆಕ್ಕಿನ ಮರಿಯನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಪರದಾಡಿದ ನಾಗರಹಾವು; ಆಮೇಲೇನಾಯ್ತು?
ವೈದ್ಯರು ಏನಂತಾರೆ?
ತಾಯಿಯೇನೋ ತಾನು ಗರ್ಭಿಣಿಯಾಗಿದ್ದಾಗ ಬೆಕ್ಕಿನ ಮಾಂಸ ತಿಂದಿದ್ದು ಇದಕ್ಕೆ ಕಾರಣ ಅಂತಿದ್ದಾರೆ. ಆದರೆ, ವೈದ್ಯರು ಕೊಟ್ಟಿರುವ ಕಾರಣಾನೇ ಬೇರೆ. ಅವರ ಪ್ರಕಾರ, ಈ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ. ಅಲ್ಲದೇ ಈ ಕಾಯಿಲೆಯು ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಕೇವಲ 50 ವೂಲ್ಫ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿದೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ.
ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ.