Thursday, March 23, 2023

ಪುತ್ತೂರು: ಕ್ಯಾಂಪ್ಕೊಗೆ ವಂಚನೆ-ಮುಂಬೈ ವಿಮಾನ ನಿಲ್ದಾಣದಲ್ಲಿ ಆರೋಪಿ ಅರೆಸ್ಟ್

ಪುತ್ತೂರು: ಕ್ಯಾಂಪ್ಕೊಗೆ ವಿದೇಶದಿಂದ ಕೊಕೊ ಬೀನ್ಸ್ ಕಳುಹಿಸುವ ಸಂದರ್ಭ ಸುಮಾರು 10 ಕೋಟಿ ರೂ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.


2018-19 ರಲ್ಲಿ ಕ್ಯಾಂಪ್ಕೊ ಥೈಲ್ಯಾಂಡ್ನಿಂದ ಸುಂಕ ರಹಿತವಾಗಿ ಕೋಕೋ ಡ್ರೈ ಬೀನ್ಸ್ ಆಸಿಯನ್ ಎಫ್‌ಟಿಎ ಮೂಲಕ ದುಬಾಯಿಯ ಕೋಸ್ಪ್ಯಾಕ್ ಜನರಲ್ ಟ್ರೆಂಡಿಂಗ್ ಕಂಪನಿ ಅಮದು ಮಾಡಿತ್ತು.


ಖರೀದಿ ಆರ್ಡರ್ ಪ್ರಕಾರ ಕೋಸ್ ಪ್ಯಾಕ್ ಸಂಸ್ಥೆಯು ಕಸ್ಟಮ್ಸ್ ಕ್ಲಿಯರೆನ್ಸ್ ಮಾಡಿ ಕೋಕೋ ಬೀನ್ಸ್‌ನ್ನು ಪುತ್ತೂರಿನ ಕ್ಯಾಂಪ್ಕೋ ವೇರ್‌ಹೌಸ್‌ಗೆ ಕಳುಹಿಸಿತ್ತು.

ಆದರೆ 2019 ರ ನವೆಂಬರ್‌ನಲ್ಲಿ ಡಿಆರ್‌ಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ಕ್ಯಾಂಪ್ಕೊ ಗೋದಾಮಿಗೆ ದಾಳಿ ನಡೆಸಿ ಇದು ಥೈಲ್ಯಾಂಡ್ ಕೋಕೋ ಬೀನ್ ಅಲ್ಲ, ಇದನ್ನು ಆಫ್ರಿಕನ್ ರಾಷ್ಟ್ರಗಳಿಂದ ಆಮದು ಮಾಡಲಾಗಿದೆ ಎಂದು ಹೇಳಿ ಜಫ್ತಿ ಮಾಡಿದ್ದರು.

ಈ ಸಂದರ್ಭ ಕ್ಯಾಂಪ್ಕೊ 10.07 ಕೋಟಿ ರೂ ಮೊತ್ತವನ್ನು ಸುಂಕ, ಉಳಿಕೆ ತೆರಿಗೆ, ಬಡ್ಡಿ ಮತ್ತು ದಂಡದ ರೂಪದಲ್ಲಿ ಪಾವತಿ ಮಾಡಿ ಕೋಕೋ ಬೀನ್ಸ್ ಬಿಡುಗಡೆ ಮಾಡಿಸಿತ್ತು.

ನಂತರ 2020ರ ಜೂನ್ 20ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕೋಸ್‌ಪ್ಯಾಕ್‌ನ ಮಾಲೀಕ ವಿನ್ಸಿ ಪಿಂಟೊ ಮತ್ತು ನಿರ್ದೇಶಕ ಜೀವನ್ ಲೋಬೋ ವಿರುದ್ಧ ಕ್ಯಾಂಪ್ಕೊ ದೂರು ದಾಖಲಿಸಿತ್ತು.

ಸೋಮವಾರ ವಿದೇಶದಿಂದ ಮುಂಬಯಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿನ್ಸಿ ಪಿಂಟೊನನ್ನು ಪೊಲೀಸರು ಬಂಧಿಸಿದ್ದಾರೆ.

ಆತನನ್ನು ಪುತ್ತೂರು ಪೊಲೀಸರು ಕರೆತರುತ್ತಿದ್ದಾರೆ. ಆರೋಪಿಯನ್ನು ಬಂಧಿಸಲು ನೆರವಾದ ಗೃಹ ಸಚಿವ ಆರಗ ಜ್ಞಾನೇಂದ್ರ, ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಹಾಗೂ ಪೊಲೀಸ್ ಇಲಾಖೆಗೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಕೃತಜ್ಞತೆ ಸಲ್ಲಿಸಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಚಿಕ್ಕಮಗಳೂರು : ಬೈಕಿಗೆ ಬಸ್ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು..!

ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ. ಚಿಕ್ಕಮಗಳೂರು: ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು...

40 ವರ್ಷಗಳಿಂದ ಅದೇ ಪೊಳ್ಳು ಭರವಸೆ : ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಸುಳ್ಯ ಅರಮನೆಗಾಯದ ಜನತೆ..!

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಈ ಗ್ರಾಮದ ಜನ ಕಳೆದ 40 ವರ್ಷಗಳಿಂದ ಬಿದಿರಿನ ತೂಗು ಸೇತುವೆಯ ಮುಖಾಂತರ ಜೀವ ಭಯದಲ್ಲಿ ಜೀವನ ನಡೆಸುತಿದ್ದಾರೆ.ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ...

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ..!

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆವರು ಜಿನೈಕ್ಯರಾಗಿದ್ದಾರೆ.ಹಾಸನ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ...