LATEST NEWS
ಸದ್ಯದಲ್ಲೇ ಫೇಸ್ಬುಕ್ ಹೆಸರು ಮರುನಾಮಕರಣ
ನವದೆಹಲಿ: ಸಾಮಾಜಿಕ ಜಾಲತಾಣದ ಕಂಪನಿ ಫೇಸ್ಬುಕ್ ತನ್ನ ಹೆಸರನ್ನು ಬದಲಾವಣೆ ಮಾಡಲು ಬಯಸಿದ್ದು, ಮುಂದಿನ ವಾರ ಮರುನಾಮಕರಣ ಆಗುವ ಸಾಧ್ಯತೆ ಇದೆ.
ಫೇಸ್ಬುಕ್ನ ಸಿಇಒ ಮಾರ್ಕ್ ಜುಕರ್ಬರ್ಗ್ ಕಂಪನಿಯ ಹೆಸರು ಬದಲಾವಣೆ ಮಾಡುವ ಕುರಿತು ಅಕ್ಟೋಬರ್ 28ರಂದು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಆದರೆ, ಹೊಸ ಹೆಸರು ಯಾವುದು ಎಂಬ ಸುಳಿವು ನೀಡಿಲ್ಲ.
ಫೇಸ್ಬುಕ್ನ ವ್ಯವಹಾರ ಕುರಿತು ಅಮೆರಿಕದ ಆಡಳಿತ ಪರಿಶೀಲನೆ, ತಪಾಸಣೆಯನ್ನು ಹೆಚ್ಚಿಸಿರುವುದು ಕಂಪನಿಗೆ ತಲೆನೋವಾಗಿದೆ. ಹೀಗಾಗಿ ಹೆಸರು ಬದಲಾವಣೆ ಮಾಡಬೇಕು ಎಂಬ ಆಲೋಚನೆಯನ್ನು ಫೇಸ್ಬುಕ್ ಮಾಡಿದೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರಕ್ರಿಯಿಸಿರುವ ಫೇಸ್ಬುಕ್, ಊಹಾಪೋಹ ಮತ್ತು ವದಂತಿಗಳಿಗೆ ಉತ್ತರಿಸುವ ಪರಿಪಾಠ ನಮ್ಮಲ್ಲಿ ಇಲ್ಲ ಎಂದಿದೆ.
bangalore
ಭಾವುಕರಾಗಿ ನಟಿ ಐಶ್ವರ್ಯ ರೈ ಪೋಸ್ಟ್..!
ತನ್ನ ತಂದೆಯನ್ನು ನೆನಪಿಸಿಕೊಂಡಿರುವ ನಟಿ ಐಶ್ವರ್ಯಾ ರೈ ( Aishwarya Rai ) ತಮ್ಮ ಇನ್ಸಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಾರ್ಚ್ 18 ರಂದು ಐಶ್ವರ್ಯ ರೈ ತಂದೆ ಕೃಷ್ಣರಾಜ್ ರೈ ನಿಧನರಾಗಿ 7 ವರ್ಷಗಳಾಗಿದ್ದು, ಈ ವೇಳೆ ತಂದೆಯನ್ನು ನೆನೆದುಕೊಂಡಿದ್ದಾರೆ. ತಂದೆಯ ಬಗ್ಗೆ “ಅಪ್ಪ ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ, ನನ್ನ ಪ್ರೀತಿಯ ಡ್ಯಾಡಿ – ಅಜ್ಜ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ” ಹೀಗಂತ ಬರೆದು ಪೋಸ್ಟ್( Post ) ಮಾಡಿದ್ದಾರೆ. ತಂದೆಯ ಫೋಟೋದ ಜೊತೆಗೆ ಇನ್ನೆರಡು ಫೋಟೋಗಳನ್ನು ಕೂಡಾ ಐಶ್ವರ್ಯ ರೈ ಹಂಚಿಕೊಂಡಿದ್ದಾರೆ.
2017 ರ ಮಾರ್ಚ್ 18 ರಂದು ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ನಿಧನರಾಗಿದ್ದರು. ಬಳಿಕ ಪ್ರತಿ ವರ್ಷ ತಪ್ಪದೆ ತಂದೆಯ ಬಗ್ಗೆ ಭಾವುಕರಾಗಿ ಐಶ್ವರ್ಯ ಪೋಸ್ಟ್ ಹಾಕುತ್ತಿದ್ದಾರೆ. ಇದೀಗ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಮೂರು ಫೋಟೋ ಅಪ್ಲೋಡ್(Upload) ಮಾಡಿದ್ದಾರೆ. ಆರಾಧ್ಯ(Aradhya) ಬಚ್ಚನ್ ಸಣ್ಣವಳಿದ್ದಾಗ ಅಜ್ಜನಿಗೆ ಮುತ್ತು (kiss) ನೀಡುವ ಒಂದು ಫೋಟೋ ಹಂಚಿಕೊಂಡಿದ್ದಾರೆ.
ಮತ್ತೋಂದು ಫೋಟದಲ್ಲಿ ತಂದೆಯ ಫೋಟೋ ಮುಂದೆ, ತಾಯಿ ವೃಂದಾ ರೈ ಹಾಗೂ ಮಗಳು ಆರಾಧ್ಯ ಜೊತೆಗೆ ತೆಗೆದಿರುವ ಸೆಲ್ಫಿ(selfy) ಪೋಟೋ ಇದೆ . ಪ್ರತಿ ವರ್ಷ ತಂದೆಯ ಅಗಲಿಕೆಯ ದಿನದಂದು ಐಶ್ವರ್ಯಾ ರೈ ಇನ್ಸ್ಟಾಗ್ರಾಮ್ನಲ್ಲಿ ತಂದೆಯನ್ನು ನೆನೆದು ಪೋಸ್ಟ್ ಮಾಡುತ್ತಿದ್ದಾರೆ. ಐಶ್ವರ್ಯ ರೈ ಅವರ ಈ ಪೋಸ್ಟ್ಗಳಿಗೆ ಅಭಿಮಾನಿಗಳೂ ರಿಯಾಕ್ಟ್ ಮಾಡಿ ನಟಿಗೆ ಸಾಂತ್ವಾನ ಹೇಳುತ್ತಾರೆ.
bangalore
ಪತ್ನಿಯ ಬೆಂಬಿಡದೆ ಕಾಡುತ್ತಿದ್ದ ಪತಿ! ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ!?
ಬೆಂಗಳೂರು : ವಿದೇಶದಲ್ಲಿದ್ದ ಪತ್ನಿಗೆ ಅಶ್ಲೀಲ ವಿಡಿಯೋ(video) ಕಳುಹಿಸಿದ ಪತಿಗೆ ನ್ಯಾಯಾಲಯ ಒಂದು ತಿಂಗಳ ಜೈಲು(jail) ವಾಸದ ಜೊತೆಗೆ 45 ಸಾವಿರ ದಂಡ(fine) ವಿಧಿಸಿದೆ. 2016 ರಲ್ಲಿ ಮದುವೆಯಾಗಿದ್ದ ದಂಪತಿ ನಡುವೆ ವಿರಸ ಮೂಡಿದ್ದು ಇಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರೂ ಬೇರೆ ಬೇರೆಯಾಗಿ ವಾಸವಾಗಿದ್ದು, ಪತ್ನಿ ವಿದೇಶದಲ್ಲಿದ್ರೆ, ಪತಿ ಬೆಂಗಳೂರಿನ ರಾಜಾಜಿ ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ದೂರವಾದ ಬಳಿಕ ಪತ್ನಿಯನ್ನು ಬೆಂಬಿಡದೇ ಕಾಡುತ್ತಿದ್ದ ಪತಿ ಈ ಮೇಲ್(e mail) ಮೂಲಕ ಅಶ್ಲೀಲ ವಿಡಿಯೋ(sex video) ಕಳುಹಿಸಿದ್ದಾಗಿ ಪತ್ನಿ ತನ್ನ ಸಹೋದರನಲ್ಲಿ ಹೇಳಿಕೊಂಡಿದ್ದಳು.
ಹೀಗಾಗಿ ಆಕೆಯ ಕಿರಿಯ ಸಹೋದರ ಬೆಂಗಳೂರಿನಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಬಳಿಕ ವಿದೇಶದಿಂದ ಬಂದ ಪತ್ನಿಯೂ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರ ವಿಚಾರಣೆಯ ವೇಳೆ ಪತಿಯ ಆರೋಪ ಸಾಭೀತಾಗಿದ್ದು, ಅಶ್ಲೀಲ ವಿಡಿಯೋ ಕಳುಹಿಸಿದ್ದಕ್ಕೆ ದಾಖಲೆಗಳು ಸಿಕ್ಕಿತ್ತು. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ(IT Act) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ನ್ಯಾಯಾಯಲದ ವಿಚಾರಣೆಯಲ್ಲೂ ಆರೋಪ ಸಾಭೀತಾಗಿದ್ದು, ನ್ಯಾಯಾಲಯ ಆರೋಪಿ ಪತಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಒಂದು ತಿಂಗಳ ಜೈಲುವಾಸ ಹಾಗೂ 45 ಸಾವಿರ ದಂಡ ವಿಧಿಸಿದೆ.
bangalore
ರಸ್ತೆಯಲ್ಲಿ ಚಲಿಸಿದ ಹೆಲಿಕಾಪ್ಟರ್..! ವಶಕ್ಕೆ ಪಡೆದ ಪೊಲೀಸರು ಶಾಕ್..!
ಉತ್ತರ ಪ್ರದೇಶ : ಹೆಲಿಕಾಪ್ಟರ್ ಒಂದು ರಸ್ತೆಯಲ್ಲಿ ಬಂದಿದ್ದು ಗಮನಿಸಿದ ಪೊಲೀಸರು ತಕ್ಷಣ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಆದ್ರೆ ಪರಿಶೀಲನೆ ನಡೆಸಿದ ಪೊಲೀಸರಿಗೆ ಅದೊಂದು ಕಾರು ಅನ್ನೋದು ಗೊತ್ತಾಗಿದೆ. ಹೀಗಾಗಿ ಕಾರ್ ಹೆಲಿಕಾಪ್ಟರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಕಾರನ್ನು ಮಾಡಿಫೈ ಮಾಡಿ ರಸ್ತೆಗೆ ತಂದು ಸಹೋದರರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.
ಮಾರುತಿ ವ್ಯಾಗನರ್( Maruthi Wagoner ) ಕಾರನ್ನು ಹೆಲಿಕಾಪ್ಟರ್( Helicopter ) ನಂತೆ ಪರಿವರ್ತಿಸಿದ ಸಹೋದರರಿಬ್ಬರು ಸುದ್ದಿಯಾಗಿದ್ದಾರೆ. ಉತ್ತ ಪ್ರದೇಶದ(UP) ಅಂಬೆಡ್ಕರ್ ನಗರದಲ್ಲಿ ಈ ಕಾರು ರಸ್ತೆಗೆ ಇಳಿಯುತ್ತಿದ್ದಂತೆ ಪೊಲೀಸ್ ವಶಪಡಿಸಿಕೊಂಡಿದ್ದಾರೆ. ಸಹೋದರರಿಬ್ಬರು ತಯಾರಿಸಿದ ಈ ಕಾರು ವಿಭಿನ್ನವಾಗಿದ್ದು ನೋಡಲು ಹೆಲಿಕಾಪ್ಟರ್ನಂತೆ ಕಾಣುತ್ತಿದೆ. ಹೆಲಿಕಾಪ್ಟರ್ನಲ್ಲಿ ಇರುವಂತೆ ಪ್ರೊಪೆಲರ್( propeller ) ಗಳನ್ನು ಈ ಕಾರಿಗೆ ಅಳವಡಿಸಿಕೊಳ್ಳಲಾಗಿದೆ. ಕಾರು ರಸ್ತೆಯಲ್ಲಿ ಓಡುವಾಗ ಇದರ ಪ್ರೊಪೆಲರ್ಗಳು ತಿರುಗುವಂತೆ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಆದ್ರೆ ಸಹೋದರರು ಶ್ರಮ ಪಟ್ಟು ಮಾಡಿದ ಈ ಹೆಲಿಕಾಪ್ಟರ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲ ತಾಣದಲ್ಲಿ ತೀವೃ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀಯಾ ರಜಪೂತ್ ಎಂಬವರು ಈ ಕಾರಿನ ವಿಡಿಯೋವನ್ನು ತಮ್ಮ ಟ್ವಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.
ಕಾರ್ ಹೆಲಿಕಾಪ್ಟರ್ ವಿಡಿಯೋ ಇಲ್ಲಿದೆ.
यूपी के अंबेडकर नगर में दो भाईयों ने जुगाड़ से कार को हेलीकॉप्टर बना दिया. डेंट- पेंट कराने जा रहे थे तभी पुलिस ने पकड़ लिया. और गाड़ी(हेलीकॉप्टर) सीज कर दी. pic.twitter.com/wK9QLaFZ1k
— Priya singh (@priyarajputlive) March 17, 2024
- FILM7 days ago
ಡೀಪ್ಫೇಕ್ ಮೂಲಕ ಮತ್ತೊಮ್ಮೆ ಸುದ್ದಿಯಾದ ರಶ್ಮಿಕಾ ಮಂದಣ್ಣ…!
- LATEST NEWS3 days ago
ಡಿವಿಜಿ ಸಾಲು ಹಂಚಿಕೊಂಡು ವಿರೋಧಿಗಳಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ!
- DAKSHINA KANNADA6 days ago
Vitla ; 1400 ಕೋಟಿ ಅನುದಾನ ತಂದಿರುವ ಬಗ್ಗೆ ನಾನು ಲೆಕ್ಕ ಕೊಡ್ತೇನೆ ಬನ್ನಿ : ಪುತ್ತೂರು ಶಾಸಕ ರೈ ಸವಾಲು
- LATEST NEWS6 days ago
ಮಗನಿಗೆ ಟಿಕೆಟ್ ಸಿಕ್ಕಿ ಗೆಲ್ಲಲಿ ಎಂದು ಕೊಲ್ಲೂರಿನಲ್ಲಿ ಪ್ರಾರ್ಥನೆ : ಮಾಜಿ ಸಚಿವ ಈಶ್ವರಪ್ಪ