Connect with us

WORLD

ದುಬೈ: ‘ತುಳು ಪಾತೆರ್ಗ ತುಳು ಒರಿಪಾಗ’ 10 ನೇ ವರ್ಷದ ಗೌಜಿ ಗಮ್ಮತ್ತು

Published

on

ದುಬೈ: ‘ತುಳು ಪಾತೆರ್ಗ ತುಳು ಒರಿಪಾಗ’ ಯುಎಇ, ದುಬೈ ಇದರ 10 ನೇ ವರ್ಷದ ಗೌಜಿ ಗಮ್ಮತ್ತು ತುಳುನಾಡ ಗೊಬ್ಬುಳೆದ ಲೇಸ್‌ ಮಾ. 12 ರಂದು ದುಬೈನ ಕರಾಮದ ಜಬೀಲ್ ಪಾರ್ಕ್ ನಲ್ಲಿ ಅದ್ಧೂರಿಯಾಗಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಗೋಪಿ ಅಂಚನ್ ಕುಲಶೇಖರ, ಯಶೋಧ, ಕಿರಣ್ ಕೈೂಕುಡೆ ಇವರು ಭತ್ತವನ್ನು ತುಂಬಿಸಿದ ಕಳಸೆಯಲ್ಲಿ ನೆಟ್ಟಾಂತಹ ಕಲ್ಪವೃಕ್ಷದ ಕೊಂಬೆಯನ್ನು ಅರಳಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.


ದುಬೈ ಉದ್ಯಮಿಗಳಾದ ಅಜ್ಮಲ್ ದುಬೈ, ಪ್ರಭಾಕರ ಶೆಟ್ಟಿ, ನೊವೆಲ್ ಅಲ್ಮಡ, ಸತೀಶ್ ಉಳ್ಳಾಲ, ಸಂದೀಪ್ ಕೋಟ್ಯಾನ್, ಅಶೋಕ್ ಬೈಲೂರು, ಡೋನಿ ಕೊರೆಯ, ಆಶಾ ಕೊರೆಯ ಉಪಸ್ಥಿತರಿದ್ದರು.
ತುಳುನಾಡಿನ ಸಂಪ್ರದಾಯದಂತೆ ಬಂದತಹ ಅತಿಥಿಗಳನ್ನು ಬೆಲ್ಲ ಮತ್ತು ನೀರು ಹಾಗೂ ತಾಂಬುಲ ಕೊಟ್ಟು ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.

ದುಬೈಯ ಖ್ಯಾತ ಯಕ್ಷಗಾನ ಕಲಾವಿದರು ಯಕ್ಷಗುರುಗಳು ಆದ ಶ್ರೀಯುತ ಕಿಶೋರ್ ಗಟ್ಟಿ ಹಾಗೂ ತುಳು ಪಾತೆರ್ಗ ತುಳು ಒರಿಪಾಗ ಕೂಟದ ಸ್ಥಾಪಕ ಸದಸ್ಯ, ತುಳು ಭಾಷಾ ಪ್ರೇಮಿ ಕಿರಣ್ ತುಳುವ ಕೈೂಕುಡೆ ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ, ಅಪ್ಪೆ ಭಾಷೆ ತುಳುವ ತುಡರ್ ಎಂಬ ಬಿರುದು ಕೊಟ್ಟು ಸನ್ಮಾನಿಸಲಾಯಿತು.

ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ 10 ಜನ ಸಾಧಕರುಗಳಾದ ಪ್ರಭಾಕರ್ ಶೆಟ್ಟಿ, ಬಾಲಕೃಷ್ಣ ಸಾಲಿಯಾನ್, ಜಯಂತ್ ಶೆಟ್ಟಿ, ಎಂ ಇ ಮೂಳೂರು, ಹರೀಶ್ ಬಂಗೇರ, ಇರ್ಷಾದ್ ಮೂಡಬಿದ್ರೆ, ಮರಿನ ನೊರ್ಮ ಮೇನೆಜೇಶ್, ಅಶೋಕ್ ಬೈಲೂರು,

ಡೋನಿ ಮತ್ತು ಆಶಾ ಕೊರೆಯಾ, ಜಷ್ಮಿತ ವಿವೇಕ್ ಇವರನ್ನು ಶಾಲು ಹೊದಿಸಿ ಸನ್ಮಾನಪತ್ರ ನೀಡಿ ಸನ್ಮಾನಿಸಲಾಯಿತು. ತಂಡದ ಪ್ರಧಾನ ಕಾರ್ಯದರ್ಶಿಯಾದ ರಿತೇಶ್ ಅಂಚನ್ ಕುಲಶೇಖರ ಇವರಿಗೆ ಶಾಲು ಹೊದಿಸಿ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.


20 ವರ್ಷಗಳ ಕಾಲ ದುಬೈಯಲ್ಲಿ ನೆಲೆಸಿ ಹೆಚ್ಚಿನ ತುಳು, ಕನ್ನಡ ಸಂಘಟನೆಗಳ ಹುಟ್ಟಿಗೆ ಕಾರಣವಾದ ದಿ. ಉಮೇಶ್ ನಂತೂರು ಇವರಿಗೆ ಮರಣದನಂತರದ ನೆನಪಿನ ಒಲೆಯನ್ನು ಅವರನ್ನು ಸ್ಮರಿಸುವ ಸಲುವಾಗಿ ಅವರ ಮಗನಾದ ಅಮರ್ ನಂತೂರು ಇವರಿಗೆ ನೀಡಲಾಯಿತು.

ತುಳುನಾಡಿನ ಆಟಗಳದ ಲಗೋರಿ, ಕಬ್ಬಡಿ, ಹಗ್ಗಜಗ್ಗಾಟ, ಸೈಕಲ್ ಚಕ್ರ ಓಡಿಸುವುದು, ರಸಪ್ರಶ್ನೆ, ಹಾಸ್ಯ ಪ್ರಹಸನ , ಗೋಣಿ ಚೀಲ ಓಟ, ತೆಂಗಿನ ಕಾಯಿಯ ಅಂಕ ಹಾಗೂ ಮಕ್ಕಳಿಗೆ ಮಹಿಳೆಯರಿಗೆ ವಿಶೇಷ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು.

ಚೆನ್ನೆದ ಮನೆ ಆಟ ಆಡುವ ಮೂಲಕ ಡೋನಿ ಕೊರೆಯ ಮತ್ತು ಆಶಾ ಕೊರೆಯರವರು ತುಳುನಾಡಿನ ಆಟಗಳಿಗೆ ಚಾಲನೆ ನೀಡಿದರು. ಕುಡ್ಲ, ಬಾರ್ಕೂರು, ಪುತ್ತೂರು, ಉಡುಪಿ ಎಂಬ ಹೆಸರಿನ 4 ತಂಡ ವಿಂಗಡಿಸಿ ಆಡಿಸಲಾಯಿತು. ನೊವೆಲ್ ಡಿ ಆಲ್ಮಡ, ಅಮರ್ ನಂತೂರು, ಶೋಭಿತ ಪ್ರೇಮ್ ಜಿತ್, ಅಶ್ವಿನಿ ಸತೀಶ್,ಜಸ್ಮಿತ ವಿವೇಕ್ ಆಟಗಳನ್ನು ಅಚ್ಚುಗಟ್ಟಾಗಿ ನಿರ್ವಹಿಸಿದರು.

ಮದ್ಯಹ್ನ ಊಟಕ್ಕೆ ತುಳುನಾಡಿನ ಕುಚಲಕ್ಕಿ ಗಂಜಿ, ಕಡ್ಲೆ ಬಲಿಯಾರ್, ಹುರುಳಿ ಚಟ್ನಿ, ಒಣ ಮೀನು, ಮಾವಿನ ಕಾಯಿ ತಲ್ಲಿ, ಪಾಯಸ ಖಾದ್ಯಗಳನ್ನು ಊರಿನಿಂದ ತರಿಸಿದ್ದ ಅಡಿಕೆ ಹಾಳೆಯ ಬಟ್ಟಲಿನಲ್ಲಿ ಬಡಿಸುವ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಪ್ರತಿ ವರ್ಷದಂತೆ ಸಹಾಯ ನಿಧಿಯನ್ನು ಸಮರ್ಪಿಸಲಾಯಿತು. ಆಟಗಳನ್ನು ಆಡಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗುರುತಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಪ್ರೇಮ್ ಜಿತ್ ಇವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಿತೇಶ್ ಅಂಚನ್ ಕುಲಶೇಖರ್‌ ನಿರ್ವಹಿಸಿ ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು.

LATEST NEWS

ಅಮೆರಿಕ ಗುಂಡಿನ ದಾಳಿಗೆ ಭಾರತದ ಡಾಕ್ಟರೇಟ್ ವಿದ್ಯಾರ್ಥಿ ಬಲಿ..!

Published

on

ವಾಷಿಂಗ್ಟನ್: ಅಮೆರಿಕದ ಬಹಿಯೋದಲ್ಲಿ ನಡೆದ ಗುಂಡಿನ ದಾಳಿಗೆ ಭಾರತ ಮೂಲದ ಡಾಕ್ಟರೇಟ್ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮೆಡಿಕಲ್ ವಿಶ್ವವಿದ್ಯಾಲಯದ ಪ್ರಕಟನೆಯಲ್ಲಿ ತಿಳಿಸಿದೆ.

ಭಾರತ ಮೂಲದ ಆದಿತ್ಯ ಅದ್ಲಾಖಾ (26) ಸಿನ್ಸಿನಾಟಿ ಮೆಡಿಕಲ್ ಸ್ಕೂಲ್ ನಲ್ಲಿ ನಾಲ್ಕನೆ ವರ್ಷದ ಡಾಕ್ಟರೇಟ್ ವಿದ್ಯಾರ್ಥಿ ಮೃತ ಯುವಕ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಗೆ ಗೋಡೆಗೆ ಢಿಕ್ಕಿ ಹೊಡೆದ ಕಾರಿನಲ್ಲಿ ಆದಿತ್ಯ ಸಿಲುಕಿದ್ದಾನೆ ಎಂದು ಸಿನ್ಸಿನಾಟಿ ಪೊಲೀಸ್ ಲೆಫ್ಟಿನೆಂಟ್ ಜೋನಾಥನ್ ಕನ್ನಿಂಗ್ ಹ್ಯಾಮ್ ತಿಳಿಸಿರುವುದು ವರದಿಯಾಗಿದೆ. ದಾಳಿಗೆ ಒಳಗಾದ ಕಾರನ್ನು ಪರಿಕ್ಷಿಸಿದಾಗ ಅದರೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವಾಹನದ ಚಾಲಕರೊಬ್ಬರು 9111 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಅದರೆ 2 ದಿನದ ಬಳಿಕ ಆದಿತ್ಯ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 

Continue Reading

DAKSHINA KANNADA

ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಹಿಂದೆ ಇದ್ದಾಳೆ ಕುಡ್ಲದ ನಾರಿ

Published

on

ಮಂಗಳೂರು: 2023ರ ವಿಶ್ವಕಪ್‌ ಗೆದ್ದು ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವ ಚಾಂಪಿಯನ್ ಆಗಿದೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ದಿಗ್ವಿಜಯ ಸಾಧಿಸಿದ್ದು, ಆಸೀಸ್ ತಂಡದ ಸಮತೋಲಿತ ಆಟ ವಿಶ್ವಕಪ್ ಟ್ರೋಫಿ ಗೆಲ್ಲುವುದಕ್ಕೆ ಕಾರಣವಾಗಿದೆ.

ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋತೀರೋದು ಅಭಿಮಾನಿಗಳಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಈ ನಡುವೆ ಒಂದು ಮನಸ್ಸಿಗೆ ತೃಪ್ತಿ ನೀಡುವ ವಿಚಾರ ಇಲ್ಲಿದೆ ನೋಡಿ. ಆಸ್ಟ್ರೇಲಿಯಾ ಗೆಲುವಿಗೂ ಭಾರತದ ಸಹಕಾರವಿದೆ. ಕರ್ನಾಟಕದ ಮಂಗಳೂರು ಮೂಲದ ಯುವತಿ ಆಸ್ಟ್ರೇಲಿಯಾ ಕಪ್ ಗೆಲ್ಲಲು ಹಿಂದಿನ ಶಕ್ತಿಯಾಗಿ ನಿಂತಿದ್ದಾರೆ. ಅದ್ಯಾರಪ್ಪಾ ಅಂತೀರಾ ? ಹೌದು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಮಂಗಳೂರು ಮೂಲದ ಯುವತಿ ಕಾರ್ಯನಿರ್ವಹಿಸಿದ್ದು, ಆರನೇ ಬಾರಿಗೆ ಟ್ರೋಫಿ ಗೆಲ್ಲಲು ಕಾಂಗರೂ ಪಡೆಯನ್ನು ಹುರಿದುಂಬಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ  ಮಂಗಳೂರು ಮೂಲದ ಉರ್ಮಿಳಾ ರೊಸಾರಿಯೋ (34) ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಲತಃ ಮಂಗಳೂರಿನ ಕಿನ್ನಿಗೋಳಿಯವರಾಗಿರುವ ಐವಿ ಮತ್ತು ವಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿಯಾಗಿರುವ ಊರ್ಮಿಳಾ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ಕೇರ್ ಟೇಕರ್ ಆಗಿದ್ದಾರೆ. ಉರ್ಮಿಳಾ ರೊಸಾರಿಯೋ ಹೆತ್ತವರು ಮೂಲತಃ ಕಿನ್ನಿಗೋಳಿಯವರು. ಉದ್ಯೋಗದ ನಿಮಿತ್ತ ಕತಾರ್‌ನ ದೋಹಾದಲ್ಲಿ ವಾಸಿಸುತ್ತಿದ್ದಾರೆ. ಉರ್ಮಿಳಾ ಅವರ ಜನಿಸಿದ್ದು ಕೂಡಾ ಕತಾರ್‌ನಲ್ಲಿಯೇ. ಮೊದಲು ಉರ್ಮಿಳಾ ಕತಾರ್ ಟೆನ್ನಿಸ್ ಫೆಡರೇಶನ್‌ನಲ್ಲಿ ಕಾರ್ಯನಿರ್ವಹಿಸಿದ್ದರು.

ಬಳಿಕ ಆಸ್ಟ್ರೇಲಿಯಾದಲ್ಲಿ ಅಡಿಟೇಲ್ ಕ್ರಿಕೆಟ್ ತಂಡದಲ್ಲಿ ಮೂರು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಟೀಮ್ ಮ್ಯಾನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಉರ್ಮಿಳಾ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್ ಆಗಿದ್ದಾರೆ.

Continue Reading

bengaluru

ಕ್ರಿಕೆಟ್ ನಲ್ಲಿ ಮೀಸಲಾತಿ ಇದ್ದಿದ್ದರೆ ಟೀಂ ಇಂಡಿಯಾ ಗೆಲ್ಲುತ್ತಿತ್ತು- ಚೇತನ್ ಉಡಾಫೆ ಮಾತು

Published

on

ಬೆಂಗಳೂರು: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿ ಕಣ್ಣೀರು ಇಡುತ್ತಿದ್ದಾರೆ ಇತ್ತ ನಟ ಚೇತನ್‌ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವರ್ಲ್ಡ್ ಕಪ್ 2023 ರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಕದನ ಶುರುವಾಗಿತ್ತು, ಆದರೆ ಅದರಲ್ಲಿ ಭಾರತ ಸೋಲನ್ನು ಅನುಭವಿಸಿದ್ದು, ಕೋಟ್ಯಂತರ ಅಭಿಮಾನಿಗಳಿಗೆ ನೋವು ಉಂಟಾಗಿದೆ.  ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತ ಬೆನ್ನಲೇ ನಟ ಚೇತನ್‌ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ‘ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ ಗೆಲ್ಲುತ್ತಿತ್ತು’ ಎಂದು ಬರೆದುಕೊಂಡಿದ್ದಾರೆ.


ಈ ಟೀಕೆಗೆ ಸಾಮಾಜಿಕ ಜಾಲತಣಾದಲ್ಲಿ ಇಂಡಿಯಾ ಕ್ರಿಕೆಟ್‌ ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಕ್ರಿಕೆಟ್‌ ಫ್ಯಾನ್ಸ್‌’ ಎಂತೆಂತಹ ಮನೋ ರೋಗಿಗಳನ್ನು ವೈದ್ಯರು ಗುಣಪಡಿಸಿದ್ದಾರೆ, ಸಾಧ್ಯವಾದರೆ ಇವರನ್ನು‌ ಗುಣಪಡಿಸಬೇಕು. ಏಕೆಂದರೆ ಇಂತಹ ಪ್ರತಿಭೆ ನಮ್ಮನ್ನು ಬಿಟ್ಟು ಹೋಗಬಾರದು ಎಂದು ತಿವಿದಿದ್ದಾರೆ. ಅಲ್ಲದೇ ನೆಮ್ಮದಿಯಾಗಿ ಅಳೋಕು ಈ ಜನ ಬಿಡ್ತಿಲ್ಲ, ಅಣ್ಣ ರಿಸರ್ವೇಶನ್ ಕ್ರಿಕೆಟ್ ಅಲ್ಲಿ ಬೇಕು ಅಂತ ಅಂಬೇಡ್ಕರ್ ಹೇಳಿದ್ರಾ? ಪೆರಿಯಾರ್ ಹೇಳಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು.

Continue Reading

LATEST NEWS

Trending