Connect with us

WORLD

ದುಬೈ: ‘ತುಳು ಪಾತೆರ್ಗ ತುಳು ಒರಿಪಾಗ’ 10 ನೇ ವರ್ಷದ ಗೌಜಿ ಗಮ್ಮತ್ತು

Published

on

ದುಬೈ: ‘ತುಳು ಪಾತೆರ್ಗ ತುಳು ಒರಿಪಾಗ’ ಯುಎಇ, ದುಬೈ ಇದರ 10 ನೇ ವರ್ಷದ ಗೌಜಿ ಗಮ್ಮತ್ತು ತುಳುನಾಡ ಗೊಬ್ಬುಳೆದ ಲೇಸ್‌ ಮಾ. 12 ರಂದು ದುಬೈನ ಕರಾಮದ ಜಬೀಲ್ ಪಾರ್ಕ್ ನಲ್ಲಿ ಅದ್ಧೂರಿಯಾಗಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಗೋಪಿ ಅಂಚನ್ ಕುಲಶೇಖರ, ಯಶೋಧ, ಕಿರಣ್ ಕೈೂಕುಡೆ ಇವರು ಭತ್ತವನ್ನು ತುಂಬಿಸಿದ ಕಳಸೆಯಲ್ಲಿ ನೆಟ್ಟಾಂತಹ ಕಲ್ಪವೃಕ್ಷದ ಕೊಂಬೆಯನ್ನು ಅರಳಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.


ದುಬೈ ಉದ್ಯಮಿಗಳಾದ ಅಜ್ಮಲ್ ದುಬೈ, ಪ್ರಭಾಕರ ಶೆಟ್ಟಿ, ನೊವೆಲ್ ಅಲ್ಮಡ, ಸತೀಶ್ ಉಳ್ಳಾಲ, ಸಂದೀಪ್ ಕೋಟ್ಯಾನ್, ಅಶೋಕ್ ಬೈಲೂರು, ಡೋನಿ ಕೊರೆಯ, ಆಶಾ ಕೊರೆಯ ಉಪಸ್ಥಿತರಿದ್ದರು.
ತುಳುನಾಡಿನ ಸಂಪ್ರದಾಯದಂತೆ ಬಂದತಹ ಅತಿಥಿಗಳನ್ನು ಬೆಲ್ಲ ಮತ್ತು ನೀರು ಹಾಗೂ ತಾಂಬುಲ ಕೊಟ್ಟು ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.

ದುಬೈಯ ಖ್ಯಾತ ಯಕ್ಷಗಾನ ಕಲಾವಿದರು ಯಕ್ಷಗುರುಗಳು ಆದ ಶ್ರೀಯುತ ಕಿಶೋರ್ ಗಟ್ಟಿ ಹಾಗೂ ತುಳು ಪಾತೆರ್ಗ ತುಳು ಒರಿಪಾಗ ಕೂಟದ ಸ್ಥಾಪಕ ಸದಸ್ಯ, ತುಳು ಭಾಷಾ ಪ್ರೇಮಿ ಕಿರಣ್ ತುಳುವ ಕೈೂಕುಡೆ ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ, ಅಪ್ಪೆ ಭಾಷೆ ತುಳುವ ತುಡರ್ ಎಂಬ ಬಿರುದು ಕೊಟ್ಟು ಸನ್ಮಾನಿಸಲಾಯಿತು.

ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ 10 ಜನ ಸಾಧಕರುಗಳಾದ ಪ್ರಭಾಕರ್ ಶೆಟ್ಟಿ, ಬಾಲಕೃಷ್ಣ ಸಾಲಿಯಾನ್, ಜಯಂತ್ ಶೆಟ್ಟಿ, ಎಂ ಇ ಮೂಳೂರು, ಹರೀಶ್ ಬಂಗೇರ, ಇರ್ಷಾದ್ ಮೂಡಬಿದ್ರೆ, ಮರಿನ ನೊರ್ಮ ಮೇನೆಜೇಶ್, ಅಶೋಕ್ ಬೈಲೂರು,

ಡೋನಿ ಮತ್ತು ಆಶಾ ಕೊರೆಯಾ, ಜಷ್ಮಿತ ವಿವೇಕ್ ಇವರನ್ನು ಶಾಲು ಹೊದಿಸಿ ಸನ್ಮಾನಪತ್ರ ನೀಡಿ ಸನ್ಮಾನಿಸಲಾಯಿತು. ತಂಡದ ಪ್ರಧಾನ ಕಾರ್ಯದರ್ಶಿಯಾದ ರಿತೇಶ್ ಅಂಚನ್ ಕುಲಶೇಖರ ಇವರಿಗೆ ಶಾಲು ಹೊದಿಸಿ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.


20 ವರ್ಷಗಳ ಕಾಲ ದುಬೈಯಲ್ಲಿ ನೆಲೆಸಿ ಹೆಚ್ಚಿನ ತುಳು, ಕನ್ನಡ ಸಂಘಟನೆಗಳ ಹುಟ್ಟಿಗೆ ಕಾರಣವಾದ ದಿ. ಉಮೇಶ್ ನಂತೂರು ಇವರಿಗೆ ಮರಣದನಂತರದ ನೆನಪಿನ ಒಲೆಯನ್ನು ಅವರನ್ನು ಸ್ಮರಿಸುವ ಸಲುವಾಗಿ ಅವರ ಮಗನಾದ ಅಮರ್ ನಂತೂರು ಇವರಿಗೆ ನೀಡಲಾಯಿತು.

ತುಳುನಾಡಿನ ಆಟಗಳದ ಲಗೋರಿ, ಕಬ್ಬಡಿ, ಹಗ್ಗಜಗ್ಗಾಟ, ಸೈಕಲ್ ಚಕ್ರ ಓಡಿಸುವುದು, ರಸಪ್ರಶ್ನೆ, ಹಾಸ್ಯ ಪ್ರಹಸನ , ಗೋಣಿ ಚೀಲ ಓಟ, ತೆಂಗಿನ ಕಾಯಿಯ ಅಂಕ ಹಾಗೂ ಮಕ್ಕಳಿಗೆ ಮಹಿಳೆಯರಿಗೆ ವಿಶೇಷ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು.

ಚೆನ್ನೆದ ಮನೆ ಆಟ ಆಡುವ ಮೂಲಕ ಡೋನಿ ಕೊರೆಯ ಮತ್ತು ಆಶಾ ಕೊರೆಯರವರು ತುಳುನಾಡಿನ ಆಟಗಳಿಗೆ ಚಾಲನೆ ನೀಡಿದರು. ಕುಡ್ಲ, ಬಾರ್ಕೂರು, ಪುತ್ತೂರು, ಉಡುಪಿ ಎಂಬ ಹೆಸರಿನ 4 ತಂಡ ವಿಂಗಡಿಸಿ ಆಡಿಸಲಾಯಿತು. ನೊವೆಲ್ ಡಿ ಆಲ್ಮಡ, ಅಮರ್ ನಂತೂರು, ಶೋಭಿತ ಪ್ರೇಮ್ ಜಿತ್, ಅಶ್ವಿನಿ ಸತೀಶ್,ಜಸ್ಮಿತ ವಿವೇಕ್ ಆಟಗಳನ್ನು ಅಚ್ಚುಗಟ್ಟಾಗಿ ನಿರ್ವಹಿಸಿದರು.

ಮದ್ಯಹ್ನ ಊಟಕ್ಕೆ ತುಳುನಾಡಿನ ಕುಚಲಕ್ಕಿ ಗಂಜಿ, ಕಡ್ಲೆ ಬಲಿಯಾರ್, ಹುರುಳಿ ಚಟ್ನಿ, ಒಣ ಮೀನು, ಮಾವಿನ ಕಾಯಿ ತಲ್ಲಿ, ಪಾಯಸ ಖಾದ್ಯಗಳನ್ನು ಊರಿನಿಂದ ತರಿಸಿದ್ದ ಅಡಿಕೆ ಹಾಳೆಯ ಬಟ್ಟಲಿನಲ್ಲಿ ಬಡಿಸುವ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಪ್ರತಿ ವರ್ಷದಂತೆ ಸಹಾಯ ನಿಧಿಯನ್ನು ಸಮರ್ಪಿಸಲಾಯಿತು. ಆಟಗಳನ್ನು ಆಡಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗುರುತಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಪ್ರೇಮ್ ಜಿತ್ ಇವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಿತೇಶ್ ಅಂಚನ್ ಕುಲಶೇಖರ್‌ ನಿರ್ವಹಿಸಿ ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು.

LATEST NEWS

ಸೈರನ್‌ನಂತೆ ಸೌಂಡ್ ಮಾಡ್ತದೆ ಈ ಪಕ್ಷಿ

Published

on

ಯುಕೆ: ಕೆಲ ಪಕ್ಷಿಗಳ ಕೂಗು ಕೇಳಿದರೆ ಕೇಳಿಸುತ್ತಲೇ ಇರಬೇಕು ಅನ್ನಿಸುತ್ತದೆ. ಅದರಲ್ಲೂ ಕೋಗಿಲೆಯ ಕೂಗನ್ನು ಸಂಗೀತದ ಕಂಠಕ್ಕೆ ಹೋಲಿಸುತ್ತಾರೆ. ಕೆಲ ಪಕ್ಷಿಗಳು ನಾವು ಮಾತಾಡಿದಂತೆಯೇ ಮತ್ತೆ ಮಾತಾಡುತ್ತದೆ. ಇನ್ನು ಕೆಲವು ಗಿಣಿಶಾಸ್ತ್ರ ಹೇಳುತ್ತದೆ. ಹೀಗೆ ಬಗೆಬಗೆಯ ಪಕ್ಷಿಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅದೇ ರೀತಿ ಇಲ್ಲೊಂದು ಪಕ್ಷಿ ಪೊಲೀಸ್ ವಾಹನದಂತೆ ಸೌಂಡ್ ಮಾಡ್ತದೆ. ಜನರು ಪೊಲೀಸ್ ಗಾಡಿಯ ಸೈರನ್ ಕೇಳುತ್ತಿದ್ದಂತೆ ಅಲ್ಲಿಂದ ಜಾಗ ಕಾಲಿ ಮಾಡುತ್ತಾರೆ.

ಆದರೆ ಇಲ್ಲೊಂದು ಸೈರನ್ ಸೌಂಡ್ ಪೊಲೀಸರನ್ನೇ ಕನ್ಫ್ಯೂಸ್ ಮಾಡಿದೆ. ಇದು ಪೊಲೀಸ್ ವಾಹನದ ಸೌಂಡ್ ಅಲ್ಲ. ಬದಲಾಗಿ ಹಕ್ಕಿಯೊಂದರ ಕೂಗು.
ಯುನೈಟೆಡ್ ಕಿಂಗ್ ಡಮ್ ನ ಥೇಮ್ಸ್ ವ್ಯಾಲಿ ಪೊಲೀಸ್ ಠಾಣೆ ಪಕ್ಕದ ಮುಖ್ಯ ರಸ್ತೆಯಲ್ಲಿ ಸೈರನ್ ಸೌಂಡ್ ರೀತಿಯಲ್ಲಿ ಕೂಗುವ ಹಕ್ಕಿಯೊಂದು ಕಾಣಿಸಿಕೊಂಡಿದೆ. ಈ ಹಕ್ಕಿಯ ಕೂಗು ಪ್ರಯಾಣಿಕರು ಹಾಗೂ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ.

ಬಿಸೇಸ್ಟರ್ ಪೊಲೀಸ್ ಸ್ಟೇಷನ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಹಕ್ಕಿ ಸೈರನ್ ನಿಂದ ಕೆಲಕಾಲ ಗೊಂದಲಕ್ಕೀಡಾದ ಬಗ್ಗೆ ಹಂಚಿಕೊಂಡಿದ್ದಾರೆ. ಸದ್ಯ ಪೊಲೀಸ್ ಸೈರನ್ ರೀತಿಯಲ್ಲಿ ಕೂಗುವ ಹಕ್ಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದೊಂದು ವಿಶೇಷ ಹಕ್ಕಿ:

ಮರದ ಮೇಲೆ ಪುಟ್ಟದಾದ ಕಪ್ಪು ಹಕ್ಕಿಯೊಂದು ಕುಳಿತು ಸೈರನ್‌ನಂತೆ ಕೂಗಿದೆ. ಇದೊಂದು ವಿಶೇಷ ರೀತಿಯ ಪಕ್ಷಿಯಾಗಿದ್ದು, ಸಣ್ಣ ಬಾಲ, ತ್ರಿಕೋನಾಕಾರದ ರೆಕ್ಕೆಗಳು ಇದೆ. ಇಂತಹ ಪಕ್ಷಿಗಳು ಚಳಿಗಾಲದಲ್ಲಿ ಬಿಳಿಬಣ್ಣದ ಮಚ್ಚೆಗಳನ್ನು ಹೊಂದಿರುತ್ತದೆ. ಬೇಸಿಗೆಗಾಲದಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

Continue Reading

DAKSHINA KANNADA

ಯುದ್ಧಕ್ಕೆ ಸನ್ನದ್ಧರಾಗಲು ಸರ್ವಾಧಿಕಾರಿಯ ಕರೆ..! ಹೆಚ್ಚಿದ ಜಾಗತಿಕ ಯುದ್ಧದ ಭೀತಿ..!

Published

on

ಮಂಗಳೂರು (North Korea ) : ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್‌ (King Jong Un ) ಯುದ್ಧಕ್ಕೆ ಸನ್ನದ್ಧರಾಗ್ತಾ ಇದ್ದಾರಾ ? ಇಂತಹ ಒಂದು ಆಘಾತಕಾರಿ ವಿಚಾರವನ್ನು ಕೆಸಿಎನ್‌ಎ(KCNA) ಸುದ್ದಿ ಸಂಸ್ಥೆ ಪ್ರಕಟಿಸಿದೆ. ಉತ್ತರ ಕೊರಿಯಾದ ಪ್ರಮುಖ ಮಿಲಿಟರಿ ವಿವಿಯನ್ನು ಪರಿಶೀಲಿಸಿದ ಕಿಮ್‌ ಜಾಂಗ್ ಉನ್‌ “ತನ್ನ ದೇಶದ ಸುತ್ತಲಿನ ಅಸ್ಥಿರ ಭಗೋಳಿಕ ಹಾಗೂ ರಾಜಕೀಯ ಪರಿಸ್ಥಿತಿಗಳು ಎಂದಿಗಿಂತಲೂ ಹೆಚ್ಚು ಯುದ್ಧಕ್ಕೆ ಸಿದ್ಧರಾಗುವ ಸಮಯ” ಎಂದು ಹೇಳಿದ್ದಾಗಿ ವರದಿ ಮಾಡಿದೆ.

kim jong un

ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಕಿಮ್ ಜಾಂಗ್ ಉನ್ ಮಿಲಿಟರಿ ವಿವಿ ಭೇಟಿಯ  ಚಿತ್ರ

ಉತ್ತರ ಕೊರಿಯಾ ಇತ್ತೀಚಿನ ವರ್ಷಗಳಲ್ಲಿ ತನ್ನ ಶಸ್ತ್ರಾಸ್ತ್ರಗಳ ಅಭಿವೃದ್ದಿಯನ್ನು ಹೆಚ್ಚಿಸಿದ್ದು, ರಷ್ಯಾದೊಂದಿಗೆ ನಿಕಟ ಮಿಲಿಟರಿ ಮತ್ತು ರಾಜಕೀಯ ಸಂಬಂಧ ಬೆಳೆಸಿಕೊಂಡಿದೆ. ಉಕ್ರೇನ್ ಯದ್ಧದಲ್ಲಿ ಗುಟ್ಟಾಗಿ ಸಹಾಯ ಮಾಡಿದೆ ಅನ್ನೋ ಆರೋಪ ಕೂಡಾ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಅಕ್ಕ ಪಕ್ಕದ ರಾಷ್ಟ್ರಗಳು ಜಂಟಿಯಾಗಿ ಮಿಲಿಟರಿ ಕಸರತ್ತುಗಳನ್ನು ನಡೆಸಿದೆ. ಯುದ್ಧ ಕುಶಲತೆ ಹೆಸರಿನಲ್ಲಿ ಅಮೇರಿಕಾ , ದಕ್ಷಿಣ ಕೊರಿಯಾ ದೇಶಗಳು ಉತ್ತರ ಕೊರಿಯಾವನ್ನು ಪ್ರಚೋದಿಸುತ್ತಿದೆ ಎಂದು ಕಿಮ್ ಜಾಂಗ್ ಉನ್‌ ಆರೋಪಿಸಿದ್ದಾರೆ.
ಶತ್ರುಗಳು ಡಿಪಿಆರ್‌ಕೆ ( ದೆಮಾಕ್ರಟಿಕ್ ಪಿಪಲ್ಸ್ ರಿಪಬ್ಲಿಕ್ ಆಫ್‌ ಕೊರಿಯಾ)ದ ವಿರುದ್ಧ ಮುಖಾಮುಖಿಯಾದರೆ ಮಾರಣಾಂತಿಕ ಹೊಡೆತ ನೀಡುವುದಾಗಿ ಕಿಮ್ ಹೇಳಿದ್ದಾರೆ.

kim jong un photo

                                                      ಫೈಲ್ ಫೋಟೋ

ಈ ತಿಂಗಳ ಆರಂಭದಲ್ಲಿ ಘನ ಇಂಧನ ಬಳಸಿದ ಹೊಸ ಹೈಪರ್ಸಾನಿಕ್ ಮಧ್ಯಂತರ ಕ್ಷಿಪಣಿಯನ್ನು ಉತ್ತರ ಕೊರಿಯ ಅಭಿವೃದ್ದಿ ಪಡಿಸಿದೆ. ಇದು ದ್ರವ ಇಂಧನದ ಬದಲಾಗಿ ಘನ ಇಂಧನವನ್ನು ಬಳಿಸಿಕೊಂಡು ಆವಿಷ್ಕರಿಸಲಾಗಿದೆ. ಇದು ಅತೀ ಹೆಚ್ಚು ದೂರವನ್ನು ಕ್ರಮಿಸುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಹೀಗಾಗಿ ಕಿಮ್ ಜಾಂಗ್ ಉನ್ ಅವರ ಯುದ್ಧಾಸಕ್ತಿಯ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಣೆಗೆ ಒಳಗಾಗಿದೆ. ಯುದ್ಧ ದಾಹಿಯಾಗಿರುವ ಕಿಂಗ್ ಜಾಂಗ್ ಉನ್‌ ನೆರೆಯ ರಾಷ್ಟಗಳ ಜೊತೆ ಯುದ್ಧ ಘೋಷಣೆ ಮಾಡ್ತಾರಾ? ಇಲ್ಲಾ ಅಮೇರಿಕಾ ಅಥವಾ ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿ ಈ ಹೇಳಿಕೆ ನೀಡಿದ್ದಾರಾ ಅನ್ನೋದು ಚರ್ಚೆ ಆಗುತ್ತಿದೆ.

Continue Reading

LATEST NEWS

ಬೆಕ್ಕಿನಂತಿದೆ ಈ ಮಗುವಿನ ಮುಖ…! ಮಗು ಹೀಗಾಗಲು ಕಾರಣವೇನು ಗೊತ್ತಾ ?

Published

on

ಮಂಗಳೂರು ( ಫಿಲಿಪ್ಪೀನ್ಸ್ ) : ಮನುಷ್ಯರ ದೇಹದ ಕೆಲ ಭಾಗಗಳಲ್ಲಿ ಕೂದಲು ಇರುವುದು ಸಹಜ. ಆದ್ರೆ ಇಲ್ಲೊಂದು ಮಗುವಿನ ದೇಹ ಹಾಗೂ ಮುಖದ ಭಾಗದಲ್ಲೆಲ್ಲ ದಟ್ಟವಾಗಿ ಕೂದಲು ಬೆಳೆದಿದೆ. ಇದಕ್ಕೆ ಕಾರಣ ನಾನು ಗರ್ಭಾವಸ್ಥೆಯಲ್ಲಿ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಹಾಗಾಗಿ ನನ್ನ ಮಗು ಈ ಪರಿಸ್ಥಿತಿಗೆ ಬಂದಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ.

ಈ ಘಟನೆ ಫಿಲಿಪ್ಪೀನ್ಸ್ ಅಲ್ಲಿ ನಡೆದಿದ್ದು ಇಲ್ಲಿನ ಜರೆನ್ ಎಂಬ 2 ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ.
ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನಬೇಕು ಎನ್ನುವ ಆಸೆ ಇತ್ತಂತೆ. ಹಾಗಾಗಿ ಅವರು ಹಳ್ಳಿಯವರಿಗೆ ಹೇಳಿ ಕಾಡುಬೆಕ್ಕಿನ ಮಾಂಸವನ್ನು ತಂದು ಅದರಿಂದ ಖಾದ್ಯ ಮಾಡಿ ತಿಂದಿದ್ದರು. ಕಾಡು ಬೆಕ್ಕಿನ ಶಾಪ ನನ್ನ ಮಗನಿಗೆ ತಟ್ಟಿದೆ ಹೀಗಾಗಿ ಮಗನ ಮೈಯೆಲ್ಲಾ ಕೂದಲುಗಳಿವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : WATCH VIDEO : ಬೆಕ್ಕಿನ ಮರಿಯನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಪರದಾಡಿದ ನಾಗರಹಾವು; ಆಮೇಲೇನಾಯ್ತು?

ವೈದ್ಯರು ಏನಂತಾರೆ?

ತಾಯಿಯೇನೋ ತಾನು ಗರ್ಭಿಣಿಯಾಗಿದ್ದಾಗ ಬೆಕ್ಕಿನ ಮಾಂಸ ತಿಂದಿದ್ದು ಇದಕ್ಕೆ ಕಾರಣ ಅಂತಿದ್ದಾರೆ. ಆದರೆ, ವೈದ್ಯರು ಕೊಟ್ಟಿರುವ ಕಾರಣಾನೇ ಬೇರೆ. ಅವರ ಪ್ರಕಾರ, ಈ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ. ಅಲ್ಲದೇ ಈ ಕಾಯಿಲೆಯು ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಕೇವಲ 50 ವೂಲ್ಫ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿದೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ.

ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ.

Continue Reading

LATEST NEWS

Trending