FILM
ಪುನೀತ್ ರಾಜ್ ಕುಮಾರ್ ಅವರ ಕೊನೆಯ 5 ನಿಮಿಷ..! ಅಪ್ಪು ಕಾರ್ ಡ್ರೈವರ್ ಬಿಚ್ಚಿಟ್ಟ ಸತ್ಯ..!!
ಬೆಂಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ಅಸುನೀಗಿದ್ದು ಅವರ ಅಗಲಿಕೆ ಹೊಂದುವುದಕ್ಕೆ ಮೊದಲು ಆರೋಗ್ಯದಲ್ಲಿ ಏನೇನು ವ್ಯತ್ಯಾಸವಾಯಿತು ಎಂದು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ಮಾಹಿತಿ ನೀಡಿದ್ದರು.
ಹೌದು ಶುಕ್ರವಾರ ಬೆಳಗ್ಗೆ ಎದ್ದ ಪುನೀತ್ ರಾಜ್ ಕುಮಾರ್ ರವರು ಎಂದಿನಂತೆ ವರ್ಕೌಟ್ ಗೆ ಜಿಮ್ ಗೆ ಹೋಗಿದ್ದರು. ಅಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಪಕ್ಕದ ಫ್ಯಾಮಿಲಿ ಡಾಕ್ಟರ್ ಆದ ಡಾ.ರಮಣರ ಬಳಿಗೆ ಹೋಗಿದ್ದಾರೆ.
ಅಲ್ಲಿ ಇಸಿಜಿ ಮಾಡಿದ್ದು ಇಸಿಜಿಯಲ್ಲಿ ಹೃದಯಾಘಾತವಾಗಿದೆ ಎಂದು ತೋರಿಸಿತ್ತು. ಕೂಡಲೇ ವಿಕ್ರಂ ಆಸ್ಪತ್ರೆಗೆ ಪುನೀತ್ ಅವರನ್ನು ಕರೆತರಲಾಗಿತ್ತು.
ದಾರಿಮಧ್ಯದಲ್ಲಿ ಅವರಿಗೆ ಹೃದಯಾಘಾತವಾಗಿದ್ದು ಕರೆದುಕೊಂಡು ಬರುವಾಗ ಅವರ ಹೃದಯ ಚಟುವಟಿಕೆ ಮಾಡುತ್ತಿರಲಿಲ್ಲ ನಂತರ ಸುಮಾರು 3 ಗಂಟೆಗಳ ಕಾಲ ವೆಂಟಿಲೇಟರ್ ನಲ್ಲಿಟ್ಟು ಹೃದಯಕ್ಕೆ ಮಸಾಜ್ ಮಾಡಿ ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ ಅಷ್ಟಕ್ಕೂ ಆ ಕೊನೆಯ ಕ್ಷಣದಲ್ಲಿ ನಿಜಕ್ಕೂ ಏನು ನಡೆಯಿತೆಂದು ಅಪ್ಪು ಕೊನೆಯದಾಗಿ ಮಲಗಿದ್ದ ಅದೇ ಕಾರ್ ನ ಡ್ರೈವರ್ ಬಾಬು ಸತ್ಯ ಬಿಚ್ಚಿಟ್ಟಿದ್ದಾರೆ. ಗುರುವಾರ ರಾತ್ರಿಯಷ್ಟೆ ಗುರುಕಿರಣ್ ಅವರ ಮನೆಯಲ್ಲಿ ಬರ್ತ್ ಡೆ ಪಾರ್ಟಿ ಮಾಡುತ್ತಾ ಹಾಡಿ ನಲಿದ ಅಪ್ಪು ರಾತ್ರಿ 11.20 ರ ತನಕ ಕೂಡ ಎಂಜಾಯ್ ಮಾಡಿದ್ದರು.
ಅಲ್ಲದೇ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಅವರ ಜೊತೆ ಮಾತನಾಡುತ್ತಾ ಕುಳಿತಿದ್ದು ಅಲ್ಲಿಯೂ ಕೂಡ ಅನಿರುದ್ಧ್ ಅವರ ಜೊತೆ ವ್ಯಾಯಾಮ ಹಾಗೂ ಸೈಕ್ಲಿಂಗ್ ಬಗ್ಗೆ ಅಪ್ಪು ಮಾತನಾಡಿದ್ದರು.
ಅನಿರುದ್ಧ್ ಅವರು ಸೈಕ್ಲಿಂಗ್ ಸ್ಪರ್ಧೆಯೊಂದರ ಬಗ್ಗೆ ತಿಳಿಸಿ ಅದರಲ್ಲಿ ಭಾಗವಹಿಸುವಂತೆ ತಿಳಿಸಿದ್ದು ಎಂದಿನಂತೆ ಪುನೀತ್ ತಮ್ಮ ಮುಗ್ಧತೆಯಿಂದ ನಕ್ಕು ಸುಮ್ಮನಾಗಿದ್ದರು. ಆನಂತರ ಕಾರ್ಯಕ್ರಮ ಮುಗಿಸಿ 11.45ರ ಸಮಯಕ್ಕೆ ಮನೆಗೆ ಮರಳಿದ್ದರು.
ಮನೆಗೆ ಬಂದು ಆರಾಮಾಗೇ ಅಪ್ಪು ಬೆಳಿಗ್ಗೆ ಎಂದಿನಂತೆ ತಮ್ಮ ದಿನಚರಿಗಳನ್ನು ಮುಗಿಸಿ ಯಾಕೋ ಸ್ವಲ್ಪ ಸುಸ್ತಾಗ್ತಾ ಇದೆ ಎಂದು ಅಶ್ವಿನಿ ಅವರ ಬಳಿ ಹೇಳಿಕೊಂಡಿದ್ದಾರೆ.
ಗಾಬರಿಗೊಂಡ ಅಶ್ವಿನಿ ಅವರು ಆಸ್ಪತ್ರೆಗೆ ಹೋಗೋಣ ಎಂದಿದ್ದು ಆದರೆ ಆಗಲೂ ಸಹ ಅಪ್ಪು ಬೇಡ ರೆಸ್ಟ್ ಮಾಡಿದರೆ ಸರಿ ಹೋಗುತ್ತದೆ ಎಂದಿದ್ದಾರೆ.
ಆದರೆ ಅಶ್ವಿನಿ ಮಾತ್ರ ಫ್ಯಾಮಿಲಿ ಡಾಕ್ಟರ್ ಬಳಿಯಾದರೂ ಹೋಗಿ ಬರೋಣ ಎಂದು ಕಾಳಜಿ ತೋರಿದ್ದು ಕೊನೆಗೆ ಇಬ್ಬರೂ ಕಾರ್ ನಲ್ಲಿ ರಮಣ ಕ್ಲಿನಿಕ್ ಗೆ ತೆರಳಿದ್ದಾರೆ. ಇನ್ನು ಮನೆಯಿಂದ ಹೊರಡುವಾಗ ಪುನೀತ್ ಅವರು ಬಹಳ ಹಾರಾಮಾಗಿದ್ದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.
ಇನ್ನು ಬಾಡಿಗಾರ್ಡ್ ಚಲಪತಿ ಅವರನ್ನು ಬರೋದು ಬೇಡ ಎಂದು ಹೇಳಿದ ಪುನೀತ್ ಅವರು ಅಶ್ವಿನಿ ಅವರ ಜೊತೆ ಕ್ಲಿನಿಕ್ ಗೆ ಹೊರಟಿದ್ದು ಅಲ್ಲಿ ಜೊತೆಗಿದ್ದದ್ದು ಕೇವಲ ಡ್ರೈವರ್ ಬಾಬು ಅಶ್ವಿನಿ ಅವರು ಹಾಗೂ ಮತ್ತೊಬ್ಬ ಸಹಾಯಕ ಅಷ್ಟೇ.
ಆಗಲೂ ಕೂಡ ಪುನೀತ್ ಅವರು ಕಾರಿ ನಲ್ಲಿ ಭಜರಂಗಿ ಚಿತ್ರ ವಿತರಕರಿಗೆ ಫೋನ್ ಮಾಡಿ ಹೇಗಿದೆ ರೆಸ್ಪಾನ್ಸ್ ಎಂದು ವಿಚಾರಿಸಿಕೊಂಡಿದ್ದಾರೆ. ನಂತರ ಡಾಕ್ಟರ್ ರಮಣ್ ಅವರ ಕ್ಲಿನಿಕ್ ನಲ್ಲಿ ಅಪ್ಪುವಿಗೆ ಪರೀಕ್ಷೆ ನಡೆಸಲಾಗಿದ್ದು,
ಎಲ್ಲವೂ ನಾರ್ಮಲ್ ಆಗಿದ್ದರು ಕೂಡ ಇಸಿಜಿ ಮಾಡಿಸಲಾಯಿತು. ಆಗ ಅಲ್ಲಿ ಅವರ ಹಾರ್ಟ್ ರೇಟ್ ನಲ್ಲಿ ಒತ್ತಡ ಇರುವುದು ಕಂಡು ಬಂದಿದ್ದು ಅದಾಗಲೇ ಪುನೀತ್ ಬಹಳ ಬೆವರಲು ಶುರು ಮಾಡಿದ್ದರು.
FILM
ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತುಗಳು ಬಹಳ ಸಮಯದಿಂದ ಕೇಳಿ ಬರುತ್ತಿದೆ. ನಟಿಯರು ನಟರ ಬಗ್ಗೆ, ನಿರ್ಮಾಪಕರು, ನಿರ್ದೇಶಕರುಗಳ ಬಗ್ಗೆ ಆರೋಪಗಳನ್ನು ಮಾಡುವ ಸುದ್ದಿಗಳು ಹರಿದಾಡುತ್ತಿರುತ್ತಿವೆ. ಇದೀಗ ರಿಯಾಲಿಟಿ ಶೋ ಸರದಿ.
ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಆರೋಪ:
ಸಿನಿ ಇಂಡಸ್ಟ್ರಿಯಲ್ಲಿದ್ದ ಕಾಸ್ಟಿಂಗ್ ಕೌಚ್ ಈಗ ಟಿವಿ ರಿಯಾಲಿಟಿ ಶೋಗಳಲ್ಲೂ ನಡಿತಾ ಇದೆಯಾ ? ಇಂತಹ ಒಂದು ಆರೋಪವನ್ನು ಡ್ಯಾನ್ಸಿಂಗ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾಜಾ ‘ ಸೀಸನ್ 11 ಗೆದ್ದಿದ್ದ ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಅವರು ಆರೋಪಿಸಿದ್ದಾರೆ.
ತನ್ನ ಡ್ಯಾನ್ಸ್ ಮೂವ್ಸ್ ಮತ್ತು ಎಲ್ಲರೊಂದಿಗೆ ಬೆರೆಯುವ ಸ್ವಭಾವದಿಂದ ಮನೀಶಾ ರಾಣಿ ಜನರ ಮನ ಗೆದ್ದಿದ್ದರು. ಇತ್ತೀಚೆಗೆ ಬಿಗ್ ಬಾಸ್ ಒಟಿಟಿ ಸೀಸನ್ 2 ನಲ್ಲೂ ಕಾಣಿಸಿಕೊಂಡಿದ್ದ ಮನೀಶಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಒಂದು ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಮೋಸ ಮಾಡಿದ್ದಾಗಿ ಹೇಳಿದ್ದಾರೆ. ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಿದ್ದ ಎಂದು ಆರೋಪಿಸಿದ್ದಾರೆ.
ಬಿಗ್ ಬಾಸ್ ತಂಡದ ಸದಸ್ಯನಿಂದ ಕರೆ :
ಸಂದರ್ಶನದಲ್ಲಿ ಮಾತನಾಡಿದ ಮನೀಶಾ ರಾಣಿ, “ನಾನು ಮುಂಬೈನಲ್ಲೂ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ನಾನೂ ಸಂಪೂರ್ಣವಾಗಿ ಅದಕ್ಕೆ ಬಲಿಯಾಗದೇ ಇದ್ರೂ ಬಿಗ್ ಬಾಸ್ ತಂಡದ ಸದಸ್ಯ ಎಂದು ಹೇಳಿಕೊಂಡಿದ್ದ ವ್ಯಕ್ತಿ ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆಸಿಕೊಂಡಿದ್ದ” ಎಂದು ಹೇಳಿದ್ದಾರೆ.
“ಮನೆಗೆ ವಾಪಾಸಾಗಿದ್ದ ಸಮಯದಲ್ಲಿ ಅಡಿಷನ್ ಪ್ರಾರಂಭವಾಗಿದೆ ಎಂದು ಮುಂಬೈಗೆ ಕರೆಸಿಕೊಂಡಿದ್ದ. ಹೀಗಾಗಿ ತರಾತುರಿಯಲ್ಲಿ ನಾನು ಮುಂಬೈಗೆ ಬಂದಿದ್ದೆ. ಆದ್ರೆ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದೆ. ಅದಕ್ಕೆ ಆತನಿಗೆ ನನ್ನ ಮೇಲೆ ಕೋಪ ಬಂದಿತ್ತು” ಎಂದು ಹೇಳಿದ್ದಾರೆ.
‘ಝಲಕ್ ದಿಖ್ಲಾ ಜಾ’ ಕಾರ್ಯಕ್ರಮ ಮೂಲಕ ಸ್ಟಾರ್ ಪಟ್ಟ
ಮೂಲತಃ ಬಿಹಾರದ ನಿವಾಸಿ ಆಗಿರೋ ಮನೀಶಾ ರಾಣಿ ಅವರು ‘ಝಲಕ್ ದಿಖ್ಲಾಜಾ’ 11 ನೇ ಸೀಸನ್ ಗೆಲ್ಲುವ ಮೂಲಕ ಜನಮನ್ನಣೆ ಗಳಿಸಿದರು. ಮನೀಶಾ ರಾಣಿ ಈ ಪ್ರಶಸ್ತಿ ಗೆಲ್ಲುವುದಕ್ಕೂ ಮೊದಲು ಜೀವನದಲ್ಲಿ ಸಾಕಷ್ಟು ಸಂಘರ್ಷ ಅನುಭವಿಸಿದ್ದಾರೆ.
ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದ ಮನೀಶಾ ರಾಣಿ ಡ್ಯಾನ್ಸರ್ ಆಗಲು ಅಡ್ಡಿಯಾಗಿದ್ದೇ ಆಕೆಯ ತಂದೆ. ಹೀಗಾಗಿ 12 ನೇ ತರಗತಿಯಲ್ಲಿ ಮನೆ ಬಿಟ್ಟು ಕೊಲ್ಕತ್ತಾ ಸೇರಿದ ಮನಿಷಾ ಮದುವೆ ಸಮಾರಂಭದಲ್ಲಿ ಊಟ ಬಡಿಸುವ ಕೆಲಸ ಆರಂಭಿಸಿದ್ದರು. ಅಲ್ಲಿಂದ ಬಳಿಕ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಆರಂಭಿಸಿದ ಮನೀಶಾ ಬಳಿಕ ಅದನ್ನೂ ಬಿಟ್ಟು ಟಿಕ್ಟಾಕ್ ಮೂಲಕ ತನ್ನ ನೃತ್ಯವನ್ನು ಜನರಿಗೆ ತೋರಿಸಲು ಆರಂಭಿಸಿದರು.
ಇದನ್ನೂ ಓದಿ : ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?
ಇದು ಗುಡಿಯಾ ಹಮಾರಿ ಸಭಿ ಪೆ ಭಾರಿ ತಯಾರಕರ ಗಮನಕ್ಕೆ ಬಂದು ಆಕೆಗೆ ಅವಕಾಶ ನೀಡಿದ್ರು. ಅಲ್ಲಿಂದ ಆರಂಭವಾದ ಮನೀಷಾ ರಾಣಿ ಜರ್ನಿ ಇಂದು ಆಕೆಯನ್ನು ಟಿವಿ ಲೋಕದ ಸ್ಟಾರ್ ಆಗಿ ಮಾಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿರೋ ಮನಿಷಾ 12.5 ಮಿಲಿಯನ್ಗಿಂತಲೂ ಹೆಚ್ಚು ಜನ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
FILM
ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?
ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ವಿಚ್ಛೇದನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಓಡಾಡುತ್ತಿತ್ತು. ಸಮಂತಾ ಅಭಿಮಾನಿಗಳು ನಾಗಚೈತನ್ಯ ವಿರುದ್ಧ ಕಮೆಂಟ್ಗಳನ್ನೂ ಹಾಕ್ತಾ ಇದ್ರು. ಇದರ ಬೆನ್ನಲ್ಲೇ ನಾಗಚೈತನ್ಯ ಹಾಗೂ ಶೋಬಿತಾ ಡೇಟಿಂಗ್ ಮಾಡ್ತಿದ್ದಾರೆ ಅನ್ನೊ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ಇವರಿಬ್ಬರು ಇದನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಂತಿದ್ದಾರೆ ಶೋಭಿತಾ ಹಾಗೂ ನಾಗಚೈತನ್ಯ.
ಒಂದೇ ಕಡೆ ಫೊಟೋ ಶೂಟ್ ಮಾಡಿಕೊಂಡ್ರ ಶೋಬಿತಾ-ನಾಗಚೈತನ್ಯ!
ಇದೀಗ ಶೋಭಿತಾ ಅರಣ್ಯ ಸುತ್ತಾಟದ ಫೊಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದ್ರಲ್ಲೇನಿದೆ ವಿಶೇಷ ಅಂತ ನೀವು ಕೇಳ್ಬೋದು.. ನಾಗಚೈನ್ಯ ಕೂಡಾ ಇದೇ ರೀತಿಯ ಬ್ಯಾಕ್ಗ್ರೌಂಡ್ ಇರೋ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಇವರಿಬ್ಬರೂ ಒಂದೇ ಲೊಕೇಶನ್ನಿಂದ ಫೊಟೋ ಶೇರ್ ಮಾಡಿದ್ದಾರೆ. ಜೊತೆಯಾಗಿ ವನ್ಯ ಜೀವಿಧಾಮದಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಗಚೈತನ್ಯ ಹಾಗೂ ಶೋಭಿತಾ ಲಂಡನ್ನ ಹೋಟೆಲ್ವೊಂದರಲ್ಲಿ ಊಟಕ್ಕೆಂದು ತೆರಳಿದ್ದರು.
ಮುಂದೆ ಓದಿ..; ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
ಹೊಟೆಲ್ ಚೆಫ್ ನಾಗಚೈತನ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸೋಶೀಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಫೊಟೋ ಹಿಂದೆ ಶೋಬಿತಾ ಇರೋದು ಕಂಡು ಬಂದಿದೆ. ಇದರಿಂದ ಈಗಾಗಲೆ ಇವರಿಬ್ರು ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗೆ ಪುಷ್ಠಿನೀಡಿದಂತಾಗಿದೆ.
ಫ್ಯಾನ್ಸ್ ಏನಂದ್ರು..?
ಇನ್ನು ಇವರಿಬ್ಬರು ಜೊತೆಗಿರುವ ಫೊಟೋ ಎಲ್ಲೂ ಕಾಣ ಸಿಗಲಿಲ್ಲ. ಹಾಗಾಗಿ ಇಬ್ಬರೂ ಜೋಡಿ ಹೌದೋ ಇಲ್ಲವೋ ಅನ್ನೋದು ಇನ್ನೂ ಖಚಿತಗೊಂಡಿಲ್ಲ. ಸಮಂತಾ ಜೊತೆ ವಿಚ್ಛೇದನ ಬಳಿಕ ನಾಗಚೈನ್ಯ ಶೋಬಿತಾ ಜೊತೆ ಕ್ಲೋಸ್ ಆಗಿದ್ದಾರೆ. ಸಮಂತಾ ನಾಗಚೈತನ್ಯ ಬೇರೆ ಬೇರ ಆದರೂ ಕೂಡಾ ಫ್ಯಾನ್ಸ್ ಇವರಿಬ್ಬರನ್ನೂ ಜೋಡಿಯಾಗಿ ನೋಡಲು ಕಾಯ್ತಾ ಇದ್ದಾರೆ. ಒಂದು ವೇಳೆ ಶೋಬಿತಾ ಜೊತೆ ಚೈತನ್ಯ ಡೇಟಿಂಗ್ನಲ್ಲಿರೋದು ಪಕ್ಕಾ ಆದ್ರೆ ಫ್ಯಾನ್ಸ್ ಅಂತೂ ಸಿಟ್ಟಿಗೇಳೋದು ಗ್ಯಾರಂಟಿ.
FILM
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
ಬೆಂಗಳೂರು: ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಾಗಿಣಿ ದ್ವಿವೇದಿ ನಟನೆಯ ವೀರ ಮದಕರಿ ಸಿನೆಮಾ ಚಿತ್ರರಂಗದಲ್ಲೇ ಮೋಡಿ ಮಾಡಿತ್ತು. ಸಿನೆಮಾದ ಹೆಸರು ನೆನಪು ಮಾಡಿದ್ರೆ ಸುದೀಪ್, ರಾಗಿಣಿ ಜೊತೆ ಅವರ ಅವರ ಮಗಳ ಪಾತ್ರವನ್ನು ಮಾಡಿದ ಜೆರುಶಾ ಕೂಡಾ ನೆನಪಿಗೆ ಬರ್ತಾಳೆ.
ಮುದ್ದಾದ ಮುಖದ ಮುದ್ದು ಗೊಂಬೆ, ಗುಂಗುರು ಕೂದಲಿನ ಪುಟಾಣಿ ಸದಾ ಅಮ್ಮನ ಲಾಲಿ ಹಾಡನ್ನು ಟೇಪ್ರೆಕಾರ್ಡರ್ನಲ್ಲಿ ಕೇಳಿಕೊಂಡು ಅಪ್ಪನ ಹಿಂದೆನೆ ಸುತ್ತುತ್ತಿದ್ದ ಪುಟಾಣಿ ಈಗ ನಾಯಕಿ ನಟಿ.
READ MORE..; ‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
ನಾಯಕಿ ನಟಿಯಾಗಿ ಜೆರುಶಾ
ಈಗ ಪುಟಾಣಿ ಜೆರುಶಾ ಇದೀಗ ವೀರಮದಕರಿ ಸಿನೆಮಾದ ಬಳಿಕ ನಾಯಕಿ ನಟಿಯಾಗಿ ಬೆಳ್ಳಿತೆರೆಗೆ ಬರಲು ಸಿದ್ಧರಾಗಿದ್ದಾರೆ. ಹೌದು, ಮಹೇಶ್ ಬಾಬು ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಸಿನೆಮಾದಲ್ಲಿ ಮತ್ತೊಂದು ಯುವ ಪ್ರತಿಭೆಯನ್ನು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ. ಕಿರುತೆರೆ ನಟ ಸ್ಮೈಲ್ ಗುರು ರಕ್ಷಿತ್ ಹಾಗೂ ಜೆರುಶಾರವರನ್ನು ಕಾಣಿಸಲಿದ್ದಾರೆ. ಆಕಾಶ್, ಅರಸು, ಪರಮೇಶ ಪಾನ್ ವಾಲ ಸೇರಿದಂತೆ ಹಲವಾರು ಹಿಟ್ ಸಿನೆಮಾಗಳನ್ನು ನೀಡಿರುವ ಮಹೇಶ್ ಬಾಬು ಇದೀಗ ಹೊಸಮುಖಗಳೊಂದಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಿನೆಮಾ ಯಾವ ರೀತಿ ಇರಲಿದೆ ಅನ್ನೋದು ಕಾದು ನೋಡಬೇಕಿದೆ.
ಜೆರುಶಾ ಈಗಾಗಲೇ ಬಾಲ ನಟಿಯಾಗಿ ಮಿಂಚಿದ್ದಾರೆ. ಅಲ್ಲದೆ ರಂಗಭೂಮಿಯ ನಟನೆಯಲ್ಲೂ ಪಳಗಿದ್ದಾರೆ. ಇನ್ನು ಸ್ಮೈಲ್ ಗುರು ರಕ್ಷಿತ್ ಡ್ಯಾನ್ಸ್ ರಿಯಾಲಿಟಿ ಶೋ, ಕಿರುತೆರೆ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಪರಿಚತರಾಗಿದ್ದಾರೆ. ಈ ಸಿನೆಮಾಗೆ ಹೊಸ ಮುಖದ ಮತ್ತೊಂದು ನಾಯಕಿಗಾಗಿ ಹುಡುಕಾಟದಲ್ಲಿ ಇದ್ದಾರಂತೆ ನಿರ್ದೇಶಕರು.
ಸಿನೆಮಾಗೆ ಇನ್ನೂ ಟೈಟಲ್ ಫೈನಲ್ ಆಗದಿದ್ದರೂ ಮೇಲ್ನೋಟಕ್ಕೆ ಸಿನೆಮಾ ಯೂತ್ಫುಲ್ ಕಥೆಯನ್ನ ಹೊಂದಿದೆ ಎನ್ನಬಹುದು. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದು, ಚೇತನ್ ಹಾಗೂ ಅನುರಾಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಸತ್ಯ ಛಾಯಾಗ್ರಾಹಣವಿರಲಿದೆ. ಇದೇ ಮೇ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಈ ಹಿಂದೆ ನಟಿ ಜೆರುಶಾ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಕನ್ನಡ, ಮಲಯಾಳಂ ದ್ವಿಭಾಷಾ ಪ್ರಾಜೆಕ್ಟ್ ಧೂಮಮ್ನಲ್ಲಿ ನಟಿಸಿದ್ದರು. ಮಲಯಾಳಂ ನಟ ಫಹಾದ್ ಫಾಸಿಲ್ ನಟನೆಯ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು.
- DAKSHINA KANNADA7 days ago
“ಸೆಕ್ಸ್” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್..!
- FILM3 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- LATEST NEWS6 days ago
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
- FILM3 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು