Connect with us

    chikkamagaluru

    ಶೃಂಗೇರಿ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಜಾರಿ; ಈ ಉಡುಪು ಧರಿಸಿದವರಿಗೆ ಮಾತ್ರ ಪ್ರವೇಶ

    Published

    on

    ಚಿಕ್ಕಮಗಳೂರು: ದೇಶದ ಅನೇಕ ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಅದೇ ರೀತಿ ಇದೀಗ ಶೃಂಗೇರಿ ಶಾರದಾಂಬ ದೇವಾಲಯದಲ್ಲಿಯೂ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ಪುರುಷ ಹಾಗೂ ಮಹಿಳೆಯರು ನಿರ್ದಿಷ್ಟ ಬಟ್ಟೆಗಳನ್ನು ಧರಿಸಿದರೆ ಮಾತ್ರ ಪ್ರವೇಶ ನೀಡಲಾಗುವುದು. ಆದರೆ ವಸ್ತ್ರ ಸಂಹಿತೆಯು ಒಳ ಪ್ರಕಾರಕ್ಕೆ ಮಾತ್ರ ಅನ್ವಯವಾಗಲಿದ್ದು ದೇವಸ್ಥಾನದ ಒಳ ಆವರಣಕ್ಕೆ ಯಾವುದೇ ನಿರ್ಬಂಧವಿಲ್ಲ.

    ಶ್ರೀ ಶಾರದಾ ಪೀಠದ ಒಳ ಪ್ರಾಕಾರಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಶ್ರೀಮಠ ರೂಪಿಸಿದ್ದು ಆಗಸ್ಟ್ 15ರಿಂದ ಜಾರಿಗೆ ಬರಲಿದೆ. ಪುರುಷರು ಧೋತಿ, ಶಲ್ಯ ಹಾಗೂ ಮಹಿಳೆಯರು ಸೀರೆ, ಸೆಲ್ವಾರ್‌ ಕಮೀಜ್‌, ದುಪ್ಪಟ್ಟ, ಲಂಗ ದಾವಣಿ, ಲೆಹಂಗ ಧರಿಸಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

    ಮೈಸೂರು ದಸರಾ 2024: ಈ ಬಾರಿಯೂ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಹೆಗಲಿಗೆ

    “ಅಗಸ್ಟ್ 15, 2024ನೇ ಗುರುವಾರದಿಂದ ಶ್ರೀ ಶಾರದಾಮ್ಮನವರ ದರ್ಶನಕ್ಕಾಗಿ ಬರುವ ಭಕ್ತಾದಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಲು ವಿನಂತಿಸಲಾಗಿದೆ ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟುಬಂದವರಿಗೆ ಅರ್ಧಮಂಟಪದ ಒಳಗೆ ಪ್ರವೇಶವಿರುವುದಿಲ್ಲ, ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ” ಎಂದು ಪ್ರಕಟಣೆ ಹೇಳಿದೆ. ಜಗದ್ಗುರುಗಳ ಚಾತುರ್ಮಾಸ ವ್ರತ ಚಾಲ್ತಿಯಲ್ಲಿ ಇರುವ ಮಧ್ಯೆಯೇ ಈ ವಸ್ತ್ರಸಂಹಿತೆ ನಿಯಮ ಜಾರಿಗೆ ಬರಲಿದೆ.

    Click to comment

    Leave a Reply

    Your email address will not be published. Required fields are marked *

    chikkamagaluru

    ಗನ್ ಒರೆಸುತ್ತಿದ್ದ ವೇಳೆ ಮಿಸ್‌ ಫಯರ್; ವ್ಯಕ್ತಿ ಸಾ*ವು

    Published

    on

    ಚಿಕಮಗಳೂರು: ಮನೆಯಲ್ಲಿದ್ದ ಗನ್ ಒರೆಸುತ್ತಿದ್ದ ವೇಳೆ ಮಿಸ್‌ ಫಯರ್‌ ಆಗಿ ವ್ಯಕ್ತಿಯೊಬ್ಬ ಸಾವನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಳವಾಸ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಕಳವಾಸೆ ಗ್ರಾಮದ ಅರುಣ್ (47 ವ) ಎಂದು ಹೇಳಲಾಗಿದೆ.

    ಅರುಣ್ ಎಂಬವರು ತನ್ನ ಮನೆಯ ಶೆಡ್‌ ನಲ್ಲಿದ್ದ ಗನ್‌ನನ್ನು ಶುಚಿಗೊಳಿಸುತ್ತಿದ್ದ ವೇಳೆ ಏಕಾಏಕಿ ಗುಂಡು ಹಾರಿ ಅರುಣ್‌ರವರ ಬಲಕಣ್ಣನ್ನು ಹೊಕ್ಕಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಈ ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಇದು ಆತ್ಮಹತ್ಯೆಯೋ ಅಥವಾ ಮಿಸ್ ಫಯರ್‌ ಆಗಿ ಗುಂಡು ತಗುಳಿದೆಯೋ ಅನ್ನೋದು ತನಿಖೆ ವೇಳೆ ಬಯಲಿಗೆ ಬರಬೇಕಿದೆ.

    ನಟಿಗೆ ಲೈಂಗಿಕ ಕಿರುಕುಳ ಆರೋಪ; ಮಲಯಾಳಂ ನಿರ್ದೇಶಕ ರಂಜಿತ್‌ ವಿರುದ್ದ ಎಫ್‌ಐಆರ್..!

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    chikkamagaluru

    ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸ್ಥಳದಲ್ಲೇ ಸಾ*ವು

    Published

    on

    ಚಿಕ್ಕಮಗಳೂರು/ಪುತ್ತೂರು: ಆಹಾರ ಅರಸಿ ನಾಡಿಗೆ ಬಂದ ಗಜರಾಜ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಳಗಾಮೆಯ ಆಶ್ರಯ ಎಸ್ಟೇಟ್ ಬಳಿ ನಡೆದಿದೆ. ಇಲ್ಲಿನ ಭದ್ರ ಅಭಯಾರಣ್ಯದಿಂದ ಆಹಾರ ಅರಸಿ ಬಂದ ಕಾಡಾನೆ ಬೇಲಿ ದಾಟುವ ವೇಳೆ, ಅಲ್ಲಿನ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಆನೆ ಸ್ಥಳದಲ್ಲೇ ಮೃತಪಟ್ಟಿದೆ.

    ಇನ್ನು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

    Continue Reading

    chikkamagaluru

    ಆಸ್ತಿ ವಿಚಾರಕ್ಕಾಗಿ ತಮ್ಮನನ್ನೇ ಕೊಚ್ಚಿ ಕೊ*ಲೆಗೈದ ಅಕ್ಕಂದಿರು..!!

    Published

    on

    ಚಿಕ್ಕಮಗಳೂರು:  ಚಿಕ್ಕಮಗಳೂರು ತರೀಕೆರೆಯಲ್ಲಿ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮೂವರು ಸಹೋದರಿಯರೇ ಸೇರಿ ತಮ್ಮನನ್ನು ಕೊಚ್ಚಿ ಹ*ತ್ಯೆ ಮಾಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

    ರಾಘವೇಂದ್ರ(43 ವ) ಕೊಲೇಗೀಡಾದವರು. ಮೂವರು ಅಕ್ಕಂದಿರು ಹಾಗೂ ತಮ್ಮನ ನಡುವೆ ಆಗಾಗ ಆಸ್ತಿ ವಿಚಾರಕ್ಕಾಗಿ ಜಗಳ ಉಂಟಾಗುತ್ತಿತ್ತು. ರಾಘವೇಂದ್ರ ಅವರು ಮನೆಯಲ್ಲಿದ್ದಾಗ ಮೂವರು ಅಕ್ಕಂದಿರು ಹಾಗೂ ಭಾವ ಸೇರಿಕೊಂಡು ಮೊದಲು ತಮ್ಮನ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

    ಇದ್ದಕ್ಕಿದ್ದಂತೆಯೇ ಸ್ಫೋ*ಟಗೊಂಡ ಗ್ಯಾಸ್​ ಸಿಲಿಂಡರ್.. ಕೂಲಿ ಕಾರ್ಮಿಕ ಸಾ*ವು, ಮತ್ತೋರ್ವ ಗಂಭೀ*ರ

    ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಮೃತ ರಾಘವೇಂದ್ರರವರ ಅಕ್ಕಂದಿರಾದ ಸುಮಾ, ಸುಧಾ, ರೇಣುಕಾ, ಭಾವ ಸಿದ್ದರಾಮಪ್ಪ ಅವರನ್ನು ತರಿಕೇರೆ ಪೊಲೀಸರು ಬಂಧಿಸಿದ್ದಾರೆ.

    Continue Reading

    LATEST NEWS

    Trending