Connect with us

    DAKSHINA KANNADA

    ಹೆಣ್ಮಕ್ಕಳು ಪದೇ ಪದೇ ತವರು ಮನೆಗೆ ಬರುತ್ತಿದ್ದರೆ ಈ ಸಮಸ್ಯೆಗಳು ಖಂಡಿತ!

    Published

    on

    ಮಂಗಳೂರು: ತಾನು ಹುಟ್ಟಿ ಬೆಳೆದ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಹೆಣ್ಣಿಗೆ ಆಗುವ ನೋವು ಅಷ್ಟಿಷ್ಟಲ್ಲ. ಆಡಿ ಬೆಳೆದ ಮನೆ, ಅಮ್ಮ ಅಪ್ಪನ ಪ್ರೀತಿ, ಅಣ್ಣ-ತಮ್ಮ, ಅಕ್ಕ-ತಂಗಿಯರ ಕಾಳಜಿ ಈ ಎಲ್ಲವನ್ನು ತೊರೆದು ಬೇರೊಂದು ಮನೆಯ ದೀಪವನ್ನು ಹಚ್ಚುವುದು ಹೆಣ್ಣಾದವಳಿಗೆ ಅನಿವಾರ್ಯ. ಆದರೆ ಹೆಣ್ಣಿನ ತವರು ತಂದು ಕೊಡುವ ಬೆಚ್ಚನೆಯ ಅನುಭವವನ್ನು ಗಂಡನ ಮನೆ ತಂದುಕೊಡುವುದಿಲ್ಲ. ತವರಿನಲ್ಲಿ ಸಿಗುವ ಬೆಚ್ಚನೆಯ ಪ್ರೀತಿ, ಕಾಳಜಿ, ಅಕ್ಕರೆ ತುಂಬಿದ ಮಾತಿಗೆ ಸರಿಸಾಟಿಯೇ ಇಲ್ಲ.

    ಆದರೆ ಪದೇ ಪದೇ ತಾಯಿ ಮನೆಗೆ ಬರುವ ಹೆಣ್ಣು ಮಕ್ಕಳಿಗೆ ಈ ಕೆಲವು ವಿಚಾರಗಳು ಗೊತ್ತಿರಲೇಬೇಕು. ಬಿಡುವು ಸಿಕ್ಕಾಗಲೆಲ್ಲಾ ತವರಿಗೆ ಹೋಗುವುದು ಒಳ್ಳೆಯದಲ್ಲ ಎನ್ನುತ್ತದೆ ಶಾಸ್ತ್ರ. ಮನೆಯ ಲಕ್ಷ್ಮಿ ಎನ್ನಲಾಗುವ ಹೆಣ್ಣು ತನ್ನ ತವರಿಗೆ ಬರುವ ಮುನ್ನ ದಿನ ಹಾಗೂ ಸಮಯ ನೋಡಬೇಕೆಂತೆ. ಕೆಟ್ಟ ಸಮಯ ಹಾಗೂ ಕೆಟ್ಟ ದಿನದಲ್ಲಿ ಹೆಣ್ಣು ತನ್ನ ತವರಿಗೆ ಬಂದರೆ ಎರಡು ಮನೆಗೂ ಸಮಸ್ಯೆಗಳಾಗುತ್ತದೆ. ಹುಟ್ಟಿದ ಮನೆ ಹಾಗೂ ಮೆಟ್ಟಿನ ಮನೆಗೂ ಶ್ರೇಯಸಲ್ಲವಂತೆ.

    ಈ ದಿನಗಳಲ್ಲಿ ತವರು ಮನೆಗೆ ಹೋಗಲೇಬೇಡಿ

    • ತಾಯಿ ಮನೆಗೆ ಅಮವಾಸ್ಯೆ ದಿನ, ಅಮವಾಸ್ಯೆಯ ಹಿಂದಿನ ಹಾಗೂ ಮುಂದಿನ ದಿನ ಹೋಗಬಾರದು. ಈ ಮೂರು ದಿನಗಳಲ್ಲಿ ತವರು ಮನೆಯಿಂದ ಗಂಡನ ಮನೆಗೂ ಬರಬಾರದು ಎನ್ನಲಾಗುತ್ತದೆ.
    • ಸೂರ್ಯ ಗ್ರಹಣ ಅಥವಾ ಚಂದ್ರ ಗ್ರಹಣವಿರುವ ದಿನ ತವರು ಮನೆಗೆ ಹೋಗಬಾರದು, ತವರಿನಿಂದ ಗಂಡನ ಮನೆಗೆ ಬರಬಾರದು. ಒಂದು ವೇಳೆ ಈ ಸಮಯದಲ್ಲಿ ಬಂದರೆ ತನ್ನ ಎರಡು ಮನೆಯಲ್ಲಿಯೂ ಆರ್ಥಿಕವಾಗಿ ಸಮಸ್ಯೆಗಳು ಉಂಟಾಗುತ್ತದೆ.
    • ಹೆಣ್ಣು ಯಾವತ್ತಿಗೂ ಗಂಡನ ಜೊತೆ ಜಗಳ ಮಾಡಿಕೊಂಡು ತಾಯಿ ಮನೆಗೆ ಹೋಗಬಾರದು. ಹೆಣ್ಣು ಹೀಗೆ ಮಾಡಿದರೆ ಸಂಸಾರದಲ್ಲಿ ಬಿರುಕು ಮೂಡಿ ಸಮಸ್ಯೆಗೂ ಕಾರಣವಾಗುತ್ತದೆ.
    Click to comment

    Leave a Reply

    Your email address will not be published. Required fields are marked *

    DAKSHINA KANNADA

    ನಿವೃತ್ತಿಗೊಂಡ ಪೊಲೀಸ್ ಅಧಿಕಾರಿಗೆ ವಿಶೇಷ ಗೌರವ..! ಪುಷ್ಪಾರ್ಚಣೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು..!

    Published

    on

    ಮೂಡುಬಿದಿರೆ: ಪೊಲೀಸ್‌ ಅಧಿಕಾರಿಯಾದವರು ದಕ್ಷತೆ, ಪ್ರಮಾಣಿಕತೆಯಿಂದ ಕೆಲಸ ಮಾಡಿದರೆ ಎಂತಹ ಗೌರವ ಸಿಗುತ್ತದೆ ಅನ್ನೋದಕ್ಕೆ ಮೂಡಬಿದಿರೆಯ ಈ ಪೊಲೀಸ್‌ ಅಧಿಕಾರಿಯೇ ಸಾಕ್ಷಿ. ಹೌದು, ಪೊಲೀಸ್‌ ಅಧಿಕಾರಿಯಾಗಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದ ಪೊಲೀಸ್ ಉಪನಿರೀಕ್ಷಕ ದಿವಾಕರ್‌ ರೈ ಅವರಿಗೆ ಸಹೋದ್ಯೋಗಿಗಳು ಪುಷ್ಪಾರ್ಚನೆಯ ಗೌರವ ಸಲ್ಲಿಸಿದ್ದಾರೆ.

    ದಿವಾಕರ ರೈ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಮೂಡಬಿದಿರೆಯ ಪೊಲೀಸ್‌ ಠಾಣೆಯಿಂದ ಅವರು ಸೇವೆಯನ್ನು ಮುಗಿಸಿ ಮನೆಗೆ ತೆರಳುವ ವೇಳೆಯಲ್ಲಿ ಅವರು ಠಾಣೆಯಿಂದ ಪೊಲೀಸ್‌ ಜೀಪ್‌ ಏರುವವರೆಗೂ ಮೂಡಬಿದಿರೆಯ ವೃತ್ತ ನಿರೀಕ್ಷಕರಾದ ಸಂದೇಶ್‌ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪುಷ್ಪಾರ್ಚನೆಯನ್ನು ಮಾಡಿದ್ದಾರೆ. ಪೊಲೀಸ್‌ ಜೀಪ್‌ನಲ್ಲೇ ಪೊಲೀಸ್‌ ಅಧಿಕಾರಿಯಾಗಿಯೇ ದಿವಾಕರ ರೈ ಮನೆಗೆ ತೆರಳಿದ್ದಾರೆ. ಸಹೋದ್ಯೋಗಿಗಳು ನೀಡಿದ ಗೌರವಕ್ಕೆ ದಿವಾಕರ ರೈ ಅವರು ಆನಂದ ಬಾಷ್ಪ ಸುರಿಸಿದ್ದಾರೆ. ಸದಾ ಒಂದೊಲ್ಲೊಂದು ಅಪರಾಧ ಪ್ರಕರಣಗಳಿಂದಲೇ ಬ್ಯುಸಿಯಾಗಿರುತ್ತಿದ್ದ ಮೂಡಬಿದಿರೆಯ ಪೊಲೀಸ್‌ ಠಾಣೆ ಇಂದು ವಿನೂತನ ಸಂದರ್ಭಕ್ಕೆ ಸಾಕ್ಷಿಯಾಗಿತ್ತು.

    ಈ ಪುಣ್ಯಕ್ಷೇತ್ರಕ್ಕೆ ಹೋಗಲು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗಲಿದೆ..!

    Continue Reading

    DAKSHINA KANNADA

    ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಭೇಟಿ ಮಾಡಿದ ಸಂಸದ ಚೌಟ

    Published

    on

    ಮಂಗಳೂರು : ಕರಾವಳಿ ಕಂಡ ಹಿರಿಯ ಮುತ್ಸದ್ದಿ, ನೇರ ನುಡಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ತೆರಳಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಶೀರ್ವಾದ ಪಡೆದು ಪಡೆದು ವಿದ್ಯಮಾನಗಳ ಕುರಿತು ಮಾತನಾಡಿದರು.

    ಬಂಟ್ವಾಳ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಗೋವಿಂದ ಪ್ರಭು, ಜಿಲ್ಲಾ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ವೀರಪ್ಪ ಮೊಯ್ಲಿ ಪುತ್ರಿ ವಿಧಿವಶ..!

    Published

    on

    ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಪುತ್ರಿ ಹಂಸ ಮೊಯ್ಲಿ ಸಾವಿನ ಸುದ್ದಿ ತಿಳಿದು ಛತ್ತೀಸ್‌ಘಡದಲ್ಲಿದ್ದ ವೀರಪ್ಪ ಮೊಯ್ಲಿ ರಾತ್ರಿಯೇ ವಾಪಾಸ್ ಆಗಿದ್ದಾರೆ.


    ಹಂಸ ಮೊಯ್ಲಿ ಅವರು ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ಹಲವಾರು ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಿದ್ದರು. ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಸಿನಿಮಾʻ ಶೃಂಗಾರಂʼನಲ್ಲಿ ನಟಿಸಿದ್ದರು. ಇತ್ತೀಚೆಗೆ ಮಕ್ಕಳಿಗಾಗಿ ಹಿಂದಿ ನಾಟಕ, ಕ್ಯುನ್ ಕ್ಯುನ್ ಲಡ್ಕಿ, ಅದೇ ಹೆಸರಿನ ಮಹಾಶ್ವೇತಾ ದೇವಿಯವರ ಪುಸ್ತಕದಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ರವೀಂದ್ರನಾಥ ಟ್ಯಾಗೋರ್ ಅವರು ಮಕ್ಕಳಿಗಾಗಿ ಬರೆದ ಇಂಗ್ಲಿಷ್ ನಾಟಕಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದ ಅವರು ಜನಾನುರಾಗಿ ಎಂದು ಹೆಸರು ಪಡೆದುಕೊಂಡಿದ್ದರು. 46 ವರ್ಷ ಪ್ರಾಯದ ಹಂಸ ಮೊಯ್ಲಿ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡು ನಿನ್ನೆ ಸಂಜೆ ತೀವೃ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    Continue Reading

    LATEST NEWS

    Trending