LATEST NEWS
‘ಮುಸ್ಲಿಂ ದೊರೆ ಎಂಬ ಕಾರಣಕ್ಕೆ ಟಿಪ್ಪು ಇತಿಹಾಸ ತಿರುಚುವುದು ಸರಿಯಲ್ಲ’ -ಅಬ್ದುಲ್ ಮಜೀದ್
ಉಡುಪಿ: ‘ಕೊಲ್ಲೂರು ಕ್ಷೇತ್ರದ ಸಲಾಂ ಮಂಗಳಾರತಿ ರದ್ದು ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಒಂದು ಕೋಮುವಾದ ನಡೆ, ಟಿಪ್ಪು ತನ್ನ ರಾಜ್ಯಭಾರದ ಅವಧಿಯಲ್ಲಿ 150ಕ್ಕೂ ಅಧಿಕ ದೇವಸ್ಥಾನಗಳಿಗೆ ಅನುದಾನ ನೀಡಿದ್ದರು.
ಹಾಗೆಯೇ ಪೇಶ್ವೆಗಳ ದಾಳಿಯಿಂದ ಶಾರದಾಂಬ ದೇವಸ್ಥಾನವನ್ನು ಕೂಡ ರಕ್ಷಿಸಿದ್ದರು. ಮುಸ್ಲಿಂ ದೊರೆ ಎಂಬ ಕಾರಣಕ್ಕೆ ಇತಿಹಾಸ ತಿರುಚುವುದು ಸರಿಯಲ್ಲ’ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಹೇಳಿದ್ದಾರೆ.
ಈ ಬಗ್ಗೆ ಉಡುಪಿ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಟಿಪ್ಪು ಮಹಾನ್ ದೂರದೃಷ್ಟಿಯಿದ್ದ ಆಡಳಿತಗಾರ, ರಾಜಕಾರಣಿ ಹೇಗಿರಬೇಕು ಅನ್ನುವುದಕ್ಕೆ ಟಿಪ್ಪು ಸುಲ್ತಾನ್ ನಿದರ್ಶನ.
ಟಿಪ್ಪುಸುಲ್ತಾನ್ ಅಂತಹ ದೂರದೃಷ್ಟಿ ಇರುವ ರಾಜನ ಪಾಠಗಳನ್ನು ಮಕ್ಕಳಿಗೆ ಶಾಲೆಯಲ್ಲಿ ಕಳಿಸಬೇಕು.
ಒಬ್ಬ ರಾಜ ಅಂದ್ರೆ ಹೇಗೆ ಇರಬೇಕು ಅಂತಹ ತೋರಿಸಿಕೊಟ್ಟ ಮಹಾನ್ ನಾಯಕ ಅವನು. ಅವರಿದ್ದ ಕಾಲಘಟ್ಟದಲ್ಲಿ ಸುಮಾರು 3500 ಕೆರೆಗಳನ್ನು ನಿರ್ಮಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.
ಆದರೆ ಈಗಿರುವ ರಾಜ್ಯ ಸರ್ಕಾರಕ್ಕೆ ಕೆರೆಯ ಹೂಳು ತೆಗೆಯಲು ಕೂಡ ಕಷ್ಟವಾಗುತ್ತಿದೆ’ ಎಂದರು.
ರಾಜ್ಯಸರ್ಕಾರದ ನಡೆ ಕೋಮುವಾದವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಅವರು ‘ದಲಿತರಿಗೆ, ಹಿಂದುಳಿದವರಿಗೆ ಭೂಮಿ ದೊರಕಿಸಿದ ರಾಜ ಅಂದರೆ ಅದು ಟಿಪ್ಪು, ಅಂದಿನ ಕಾಲದಲ್ಲಿದ್ದ ಅನಿಷ್ಠ ಪದ್ಧತಿಯಾದ ಶೂದ್ರ ಹೆಣ್ಣು ಮಕ್ಕಳ ಸ್ತನ ತೆರಿಗೆ ತೆರವು ಮಾಡಿದ ರಾಜ ಎಂಬ ಹಿರಿಮೆಗೆ ಟಿಪ್ಪು ಸುಲ್ತಾನ್ ಪಾತ್ರರಾಗುತ್ತಾರೆ. ಮದ್ಯಪಾನ ನಿಷೇಧವನ್ನು ಮಾಡಿದ ರಾಜ.
ಟಿಪ್ಪುವಿನ ಸಾಧನೆಗಳೇ ಅತಿದೊಡ್ಡ ಇತಿಹಾಸ. ಹೀಗಿರುವಾಗ ಟಿಪ್ಪುವಿನ ಕೊಡುಗೆಗಳು ನಮ್ಮ ಶಾಲಾ ಮಕ್ಕಳಿಗೆ ತಿಳಿಯಬೇಕು. ಆದರೆ ಮುಸ್ಲಿಂ ರಾಜ ಎಂಬ ಕಾರಣಕ್ಕೆ ಬಿಜೆಪಿ ಪಠ್ಯದಿಂದ ತೆಗೆಯಲು ಹೊರಟಿದೆ’ ಎಂದು ಹೇಳಿದರು.
ಶಾಸಕ ರಘುಪತಿ ಭಟ್ಗೆ ಓಪನ್ ಚಾಲೆಂಜ್
ಮಾಧ್ಯಮದವರು ಉಡುಪಿಯಲ್ಲಿ ಅನಧಿಕೃತ ಎಂದು ಪರಿಗಣಿಸಿದ ಜಾಮೀಯಾ ಮಸೀದಿ ಕಟ್ಟಡದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಜಾಮೀಯಾ ಮಸೀದಿ ಕಟ್ಟಡ ಅನಧಿಕೃತ ಎಂದು ಅದು ಯಾವ ರೀತಿ ಹೇಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ.
ಏಕೆಂದರೆ ನಗರಸಭೆಯವರು ಇದೇ ಕಟ್ಟಡಕ್ಕೆ ‘ಲೈಸೆನ್ಸ್ ಕೊಟ್ಟಿದ್ದೀರಿ, ಟ್ಯಾಕ್ಸ್ ಕೂಡ ಪಡೆದುಕೊಂಡಿದ್ದೀರಿ.
ಎಲ್ಲವನ್ನು ಪಡೆದುಕೊಂಡು ಅದನ್ನು ಹೆಚ್ಚುವರಿ ಪೆನಾಲ್ಟಿ ಹಾಕಿಸಿ ಸಕ್ರಮ ಮಾಡುವ ಅವಕಾಶ ಪುರಸಬೆಗೆ ಇತ್ತು.
ಆದರೂ ಕೂಡ ದ್ವೇಷದ ರಾಜಕೀಯಕ್ಕೆ ಉಡುಪಿಯ ಒಂದು ಮಸೀದಿ ಬಲಿ ಮಾಡಿರುವುದು ದುರಂತ. ನಗರಸಭೆಗೆ ನಿಜವಾದ ಬದ್ಧತೆ ಇದ್ದರೆ ಈ ಮಸೀದಿ ಮಾತ್ರ ಅನಧಿಕೃತವಾಗಿರುವುದಾ ಅಥವಾ ಬೇರೆ ಕೂಡ ಇದೆಯಾ ಎಂಬ ಪ್ರಶ್ನೆಗೆ ಉತ್ತರ ನೀಡಲಿ.
ನಾನು ಉಡುಪಿ ಎಮ್ಎಲ್ಎ ರಘುಪತಿ ಭಟ್ಗೆ ಓಪನ್ ಚಾಲೆಂಜ್ ಮಾಡುತ್ತೇನೆ ಈ ಜಮೀಯಾ ಮಸೀದಿ ಬಿಟ್ಟು ಬೇರೆ ಯಾವುದೇ ಕಟ್ಟಡ ಇಲ್ಲಿ ಅನಧಿಕೃತ ಇಲ್ಲ ಎಂದು ಸಾಕ್ಷಿ ಸಮೇತ ತೋರಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಶಬರಿಮಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುವ ವಿಚಾರದ ಕುರಿತು ಮಾತನಾಡಿದ ಅವರು ‘ಶಬರಿಮಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ಮಾಡಲು ಅವಕಾಶ ಇದೆ’ ಎಂದು ಸುಪ್ರೀಂ ಕೋರ್ಟಿನ ಪಂಚಪೀಠದಿಂದ ಒಂದು ತೀರ್ಪು ಬಂದಿತ್ತು.
ಆದರೆ ಈ ತೀರ್ಪನ್ನು ವಿರೋಧಿಸಿದ ಬಿಜೆಪಿ ಸರ್ಕಾರ ಹಾಗೂ ಸಂಘ ಪರಿವಾರ ಕೇರಳದಲ್ಲಿ. ಪೊಲೀಸ್ ಸ್ಟೇಷನ್ಗೆ ಬಾಂಬು ಎಸೆದರು, ಬಸ್ಗಳನ್ನು ಸುಟ್ಟು ಹಾಕಿದ್ದರು, ಪತ್ರಕರ್ತರ ಮೇಲೆ ಕೂಡ ಹಲ್ಲೆ ಮಾಡಿದ್ದರು.
ಈ ರೀತಿ ವರ್ತನೆ ಮಾಡಿದವರು ನಮಗೆ ಕರ್ನಾಟಕದಲ್ಲಿ ಪಾಠ ಮಾಡಲು ಬರುತ್ತೀರಾ? ನಮಗೆ ಅದರ ಅಗತ್ಯವಿಲ್ಲ’ ಎಂದು ಕಿಡಿಕಾರಿದರು.
LATEST NEWS
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
ಆಂಧ್ರಪ್ರದೇಶ : ಆಲದ ಮರದ ಪೊಟರೆಯಲ್ಲಿ ಬರೋಬ್ಬರಿ 64 ಲಕ್ಷ ರೂ. ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇದು ಹೇಗೆ ಪತ್ತೆಯಾಯ್ತು? ಮಾಯಾಜಾಲನಾ? ಎಂಬ ಪ್ರನೆ ಮೂಡೋದು ಸಹಜ. ಆದ್ರೆ, ಇಲ್ಲಿ ಸಿಕ್ಕಿರೋದು ಮೇಲಿಂದ ಉದುರಿದ ದುಡ್ಡಲ್ಲ. ಬದಲಿಗೆ ಕಳವುಗೈದ ದುಡ್ಡು.
ಹೌದು, ಎಟಿಎಂಗೆ ಹಣ ತುಂಬಿಸಲು ಹೋದ ವಾಹನದಿಂದ ಹಣವನ್ನು ವ್ಯಕ್ತಿಯೊಬ್ಬ ಕಳವು ಮಾಡಿದ್ದಾನೆ. ಬಳಿಕ ಆಲದ ಮರದ ಪೊಟರೆಯಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ.
ಏನಿದು ಘಟನೆ ?
ಸಿಎಂಎಸ್ ಭದ್ರತಾ ಸಂಸ್ಥೆಯ ಸಿಬ್ಬಂದಿ ಗುರುವಾರ ಮಧ್ಯಾಹ್ನ 68 ಲಕ್ಷ ರೂಪಾಯಿಯೊಂದಿಗೆ ಒಂಗೋಲ್ ನಿಂದ ತೆರಳಿದ್ದರು. ಚಿಮಕುರ್ತಿ, ಮರ್ರಿಚೆಟ್ಲಪಾಲೆಂ, ದೊಡ್ಡಾವರಂ, ಗುಂಡ್ಲಪಲ್ಲಿ, ಮಡ್ಡಿಪಾಡು ಪ್ರದೇಶಗಳಲ್ಲಿರುವ ವಿವಿಧ ಎಟಿಎಂ ಯಂತ್ರಗಳಿಗೆ ಹಣ ತುಂಬಿಸಬೇಕಾಗಿತ್ತು.
ಆದರೆ, ಅದೇ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಒಂಗೋಲ್ನ ಕರ್ನೂಲ್ ರಸ್ತೆಯಲ್ಲಿರುವ ಭಾರತೀಯ ಪೆಟ್ರೋಲ್ ಬಂಕ್ನಲ್ಲಿ ವಾಹನ ನಿಲ್ಲಿಸಿದ್ದಾರೆ. ಮಧ್ಯಾಹ್ನ ಆಗಿದ್ದರಿಂದ ತಾವು ತಂದಿದ್ದ ತಿಂಡಿ ತಿನ್ನಲು ಬಂಕ್ ರೂಮಿಗೆ ಹೋಗಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿದ್ದ ವಾಚ್ ಮನ್ ಬಂದು ವಾಹನದ ಬೀಗ ಮುರಿದು 64 ಲಕ್ಷ ರೂ.ಮೌಲ್ಯದ 500 ರೂ.ನೋಟುಗಳ ಬಂಡಲ್ಗಳನ್ನು ಕಳ್ಳತನ ಮಾಡಿದ್ದ.
ಅಷ್ಟರಲ್ಲಿ ಊಟ ಮುಗಿಸಿ ಹಿಂದಿರುಗಿದ ಸಿಬ್ಬಂದಿಗೆ ವಾಹನದ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಒಳಗೆ ನೋಡಿದಾಗ 100 ರೂಪಾಯಿ ನೋಟುಗಳ ಬಂಡಲ್ ಗಳು ಮಾತ್ರ ಪತ್ತೆಯಾಗಿವೆ. 500 ರೂಪಾಯಿ ನೋಟುಗಳ ಬಂಡಲ್ಗಳು ಕಾಣಿಸಲಿಲ್ಲ.
ಅವರು ತಂದಿದ್ದ 68 ಲಕ್ಷ ರೂಪಾಯಿಯಲ್ಲಿ 64 ಲಕ್ಷ ರೂ. ಕಳ್ಳತನವಾಗಿರುವುದು ಗೊತ್ತಾಗಿದೆ.
ಕೂಡಲೇ ಪೊಲೀಸರಿಗೆ ದೂರು ನೀಡಿದ ನಂತರ ಹೆಚ್ಚುವರಿ ಎಸ್ಪಿ (ಅಪರಾಧ) ಎಸ್.ವಿ.ಶ್ರೀಧರ್ ರಾವ್ ಮತ್ತು ತಾಲೂಕು ಸಿಐ ಭಕ್ತವತ್ಸಲ ರೆಡ್ಡಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ಮುಸುಕುಧಾರಿಯೊಬ್ಬ ಬೈಕ್ನಲ್ಲಿ ಬಂದು ವಾಹನದಲ್ಲಿದ್ದ ನಗದು ದೋಚಿರುವುದು ಕಂಡುಬಂದಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿ ಬಂಧನ :
ಬಂಧಿತ ಆರೋಪಿ ಮಹೇಶ್ ಎಂದು ಗುರುತಿಸಲಾಗಿದೆ. ಆತ ಈ ಹಿಂದೆ ಸಿಎಂಎಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೋಟುಗಳ ಬಂಡಲ್ಗಳ ಜೊತೆಗೆ, ಅವನು ತನ್ನ ಸ್ವಗ್ರಾಮವಾದ ಸಂತನೂತಲಪಾಡು ಮಂಡಲದ ಕಾಮೆಪಲ್ಲಿವಾರಿಪಾಲೆಂನಲ್ಲಿರುವ ತನ್ನ ಮನೆಯ ಸಮೀಪವಿರುವ ಆಲದ ಮರದ ಕಾಂಡದಲ್ಲಿ ಹಣವನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆಲದ ಮರದ ಬುಡದಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
LATEST NEWS
ಮುಂದಿನ ಮೂರು ದಿನ ಈ ಭಾಗಗಳಲ್ಲಿ ಮಳೆಯಾಗಲಿದೆ : ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು : ಬಿಸಿಲಿನ ಬೇಗೆಯ ತಣಿಸಲು ಮಳೆರಾಯ ಆಗಮಿಸಿದ್ದಾನೆ. ರಾಜ್ಯದ ಹಲವೆಡೆ ಮಳೆಯಾಗಿದೆ. ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.
ಗಾಳಿ, ಮಳೆ ಮುನ್ಸೂಚನೆ :
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿರುವ ಬಗ್ಗೆ ಹವಾಮಾನ ಇಲಾಖೆ ಶುಭ ಸುದ್ದಿ ಕೊಟ್ಟಿದೆ. ರಾಯಚೂರು, ವಿಜಯನಗರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹೇಳಿದೆ.
ಹವಾಮಾನ ಇಲಾಖೆಯ ಪ್ರಕಾರ ಗಂಟೆಗೆ 30ರಿಂದ 40 ಕಿಲೋ ಮೀಟರ್ ಗಾಳಿ ಬೀಸಲಿದ್ದು ಜನ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ತಂಪೆರೆದ ಮಳೆರಾಯ :
ಗುರುವಾರ ಧಾರವಾಡದಲ್ಲಿ ಆಲಿಕಲ್ ಸಮೇತ ಮಳೆ ಸುರಿದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ಅಲ್ಲಲ್ಲಿ ಮರಗಳು ಉರುಳಿವೆ. ಮಾತ್ರವಲ್ಲದೆ ವಿಜಯನಗರದ ಹೊಸಪೇಟೆಯಲ್ಲೂ ಭಾರೀ ಮಳೆಯಾಗಿದೆ. ತೀರ್ಥಹಳ್ಳಿಯಲ್ಲೂ ಭಾರೀ ಗಾಳಿ ಮಳೆಯಾಗಿದೆ.
ಇದನ್ನೂ ಓದಿ : ಮುಂದಿನ ಮೂರು ದಿನ ಈ ಭಾಗಗಳಲ್ಲಿ ಮಳೆಯಾಗಲಿದೆ : ಹವಾಮಾನ ಇಲಾಖೆ ಮುನ್ಸೂಚನೆ
ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಕೊಪ್ಪಳ, ವಿಜಯನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು, ವಿಜಯಪುರದಲ್ಲಿ ಗಾಳಿ, ಸಿಡಿಲು-ಗುಡುಗು ಸಹಿತ ಉತ್ತಮ ಮಳೆಯಾಗಿದೆ.
LATEST NEWS
ಉಡುಪಿ : ಅಂಬಾಗಿಲಿನಲ್ಲಿ ಬೈಕ್ – ಟಿಪ್ಪರ್ ನಡುವೆ ಭೀಕರ ಅಪಘಾ*ತ; ಬೈಕ್ ಸವಾರ ಸಾ*ವು
ಉಡುಪಿ : ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ಉಡುಪಿಯ ಅಂಬಾಗಿಲಿನಲ್ಲಿ ನಡೆದಿದೆ. ಅಂಬಾಗಿಲು – ಉಡುಪಿ ಮುಖ್ಯ ರಸ್ತೆಯಲ್ಲಿ ಈ ದುರಂ*ತ ಸಂಭವಿಸಿದೆ.
ಬ್ರಹ್ಮಾವರ ಮಟಪಾಡಿ ಮೂಲದ ಪ್ರಭಾಕರ ಆಚಾರಿ ಮೃ*ತ ದುರ್ದೈವಿ. ಪ್ರಭಾಕರ ಅವರು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯರಸ್ತೆಗೆ ಬರುತ್ತಿದ್ದರು ಎನ್ನಲಾಗಿದೆ. ಅಪಘಾ*ತದ ರಭಸಕ್ಕೆ ಟಿಪ್ಪರ್ ನ ಅಡಿ ಭಾಗಕ್ಕೆ ಬೈಕ್ ಗುದ್ದಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು
ಸಹಸವಾರ ಗಂಭೀ*ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.