Saturday, June 3, 2023

ಮನೆಯ ಮಹಡಿಯಿಂದ ಜಾರಿಬಿದ್ದು ಸಾವು

ಮಂಗಳೂರು: ಸೋಲಾರ್ ಕಂಪೆನಿಯೊಂದರಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಮನೆಯ ಮಹಡಿಯೊಂದರಿಂದ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಗರದ ಜೆಪ್ಪುವಿನಲ್ಲಿ ನಡೆದಿದೆ.
ದಿನೇಶ್‌ ಆಚಾರ್ಯ(47) ಎಂದು ಗುರುತಿಸಲಾಗಿದೆ.


ಕಳೆದ ಶನಿವಾರ ಮಧ್ಯಾಹ್ನ 3 ಗಂಟೆ ವೇಳೆ ಮಂಗಳೂರು ಜಪ್ಪುವಿನ ಮನೆಯೊಂದರ ಮಹಡಿ ಮೇಲೆ ಸೋಲಾರ್ ಪೆನೆಲ್ ಜೋಡಿಸಿ, ಏಣಿಯಲ್ಲಿ ಇಳಿಯುತ್ತಿದ್ದಂತೆ ಕಾಲು ಜಾರಿ ಕೆಳಗೆ ಬಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.

ಕೂಡಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾಘಟಕದಲ್ಲಿ ಕೋಮಾವಸ್ಥೆಯಲ್ಲಿದ್ದರು. ನಿನ್ನೆ ಸಂಜೆ ನಿಧನರಾದರು.

LEAVE A REPLY

Please enter your comment!
Please enter your name here

Hot Topics