ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಶ್ರದ್ಧಾ ಎಂಬ ಯುವತಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೊಂದು ಲವ್ ಜಿಹಾದ್ ಎಂದು ಕೂಡಾ ಹೇಳಲಾಗುತ್ತಿದೆ. ಈ ಕಾರಣಕ್ಕೆ ಹಿಂದೂ ಹುಡುಗಿಯರು ಜಾಗೃತರಾಗಬೇಕೆನ್ನುವ ಉದ್ದೇಶದಲ್ಲಿ ಪುತ್ತೂರಿನ ವ್ಯಕ್ತಿಯೋರ್ವರು ಹಾಕಿರುವ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪುತ್ತೂರು: ಡಾ.ಎಂ.ಕೆ. ಪ್ರಸಾದ್ ರವರ ಹೆಸರಿನಲ್ಲಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಅರಣ್ಯ ಇಲಾಖೆಯ ಕಛೇರಿಯ ಬಳಿ ಕಟೌಟ್ ವೊಂದನ್ನು ಹಾಕಲಾಗಿದೆ.
“ಹಿಂದೂ ಯುವತಿ ಶ್ರದ್ದಾಳ ಹತ್ಯೆ, ದೇಹವನ್ನು 35 ತುಂಡು ಮಾಡಿದರು ಕಾರಣ ‘ಲವ್ ಜಿಹಾದ್’ ನೀವು ಇದಕ್ಕೆ ಬಲಿಯಾಗಬೇಡಿ” ಎಂದು ಆ ಕಟೌಟ್ ನಲ್ಲಿ ಬರೆಯಲಾಗಿದ್ದು, ಕೆಳಗೆ ಡಾ.ಎಂ.ಕೆ. ಪ್ರಸಾದ್ ಪುತ್ತೂರು ಎಂದು ಬರೆದು ಕಟೌಟ್ ಅಳವಡಿಸಲಾಗಿದೆ.
‘ಲವ್ ಜಿಹಾದ್’ ಗೆ ಬಲಿಯಾಗುತ್ತಿರುವ ಹಿಂದೂ ಹೆಣ್ಣು ಮಕ್ಕಳನ್ನು ಜಾಗ್ರತರಾಗುವಂತೆ ಮಾಡಲು ಕಟೌಟ್ ಅನ್ನು ಅಳವಡಿಸಲಾಗಿದೆ ಎನ್ನಲಾಗುತ್ತಿದೆ..
ಈ ಬ್ಯಾನರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.