DAKSHINA KANNADA
ಬೆಂಗ್ಳೂರಲ್ಲಿ ಕೊರಗಜ್ಜನ ಕೋಲ, ಗೂಗಲ್ ಪೇ, ಫೋನ್ ಪೇಯಲ್ಲಿ ಹರಕೆ ತೀರಿಸಿ..! ಕೋಲ ಆಯೋಜಕರಿಗೆ ಜಾಡಿಸಿದ ತುಳುವ..
ಮಂಗಳೂರು: ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಸ್ವಾಮಿ ಕೊರಗಜ್ಜನ ಹೆಸರಿನಲ್ಲಿ ಆಯೋಜಿಸಿರುವ ನೇಮೋತ್ಸವದ ಬಗ್ಗೆ ಮಂಗಳೂರಿನ ವ್ಯಕ್ತಿ ಆ ಕೋಲ ಆಯೋಜಕರಿಗೆ ಕರೆ ಮಾಡಿ ಮಾತನಾಡಿದ ಆಡಿಯೋ ಇದೀಗ ವೈರಲ್ ಆಗುತ್ತಿದೆ.
ದೂರವಾಣಿ ಕರೆಯಲ್ಲಿ ಸಂಭಾಷಣೆ
ಮಂಗಳೂರು ಯುವಕ: ಕೋಲ ಸೇವೆಯ ಬಗ್ಗೆ ವಿಚಾರಿಸಿ ಈಗ ನಾವು ಹರಕೆ ಕೊಡೋದಾದ್ರೆ ಆ ಕೋಲ ಸೇವೆಗೆ ಏನು ಕೊಡಬಹುದು..?
ಬೆಂಗಳೂರು ಮಹಿಳೆ: ಎಲೆ ಅಡಿಕೆ, ಒಂದು ಕ್ವಾಟ್ರ್ ಎಣ್ಣೆ, ಪೂಜಾ ಸಾಮಾಗ್ರಿಗಳು ತಂದು ಕೊಡಿ ಅಣ್ಣ
ಮಂಗಳೂರು ಯುವಕ: ನಾವು ಮಂಗಳೂರಿನಲ್ಲಿ ಏನಾದ್ರೂ ಹರಕೆ ಹೇಳಿಕೊಂಡರೆ ಅದನ್ನು ಬೆಂಗಳೂರಿನಲ್ಲಿ ಕೊಟ್ರೆ ಆಗುತ್ತಾ
ಬೆಂಗಳೂರು ಮಹಿಳೆ : ನಿಮ್ಮಿಷ್ಟ. ಇಲ್ಲೂ ಅಜ್ಜ ಇದ್ದಾರೆ, ಅಲ್ಲೂ ಅಜ್ಜ ಇದ್ದಾರೆ. ಎಲ್ಲಿಯೂ ಕೊಡಬಹುದು’
ಮಂಗಳೂರು ಯುವಕ: ‘ಅದು ಹೇಗೆ ಆಗುತ್ತೆ ಮೇಡಂ. ಅದರ ಮೂಲಸ್ಥಾನ ಇರೋದು ಮಂಗಳೂರಿನಲ್ಲಿ ಅಲ್ವಾ?
ಬೆಂಗಳೂರು ಮಹಿಳೆ: ಇಲ್ಲಿ ಕೂಡಾ ಅವರ ಮೂಲ ಸ್ಥಾನವೇ ಇರೋದಲ್ವಾ? ನಾವು ನಾವಾಗಿಯೇ ತಂದು ಕೂರಿಸಿರೋದು ಅಲ್ಲ ಅಲ್ವಾ..? ಅವರೇ ಬಂದು ಇಲ್ಲಿ ನೆಲೆಯಾಗಿರೋದು ಅಲ್ವಾ…
ಮಂಗಳೂರು ಯುವಕ: ಆ ಹರಕೆಯನ್ನು ಇಲ್ಲಿ ಕೊಟ್ರೆ ಆಗುತ್ತಾ
ಬೆಂಗಳೂರು ಮಹಿಳೆ: ನೀವು ಇಲ್ಲಿ ವಾಸಿಸ್ತಿದ್ದೀರಿ ಅಲ್ವಾ…? ನಿಮಗೆ ಅಲ್ಲಿ ಹರಕೆ ಕೊಡೋದಿಕ್ಕೆ ಆಗಲ್ಲ ಅಂತಾನೆ ಅಜ್ಜ ಬಂದು ಇಲ್ಲಿ ನೆಲೆಯಾಗಿರೋದು. ಅವರು ಇವತ್ತು ಇಲ್ಲಿ ಬೆಳಿಗ್ಗೆಯೇ ಬಂದು ಕೂತಿರೋದು.
ಮಂಗಳೂರು ಯುವಕ: ‘ಅಲ್ಲ ಮೇಡಂ ನಿಮಗೆ ಅವರ ಮೂಲ ಎಲ್ಲಿ ಅಂತ ಗೊತ್ತಾ?
ಬೆಂಗಳೂರು ಮಹಿಳೆ: ಕುತ್ತಾರು
ಮಂಗಳೂರು ಯುವಕ: ಹಾಗಾದ್ರೆ ಅವರು ಅಲ್ಲಿಂದಲೇ ಬಂದು ಬೆಂಗಳೂರಲ್ಲಿ ನೆಲೆಯಾಗಿರೋದ..?
ಬೆಂಗಳೂರು ಮಹಿಳೆ: ಅಲ್ಲ ಸ್ವಾಮಿ ಅವರು ಮಾಯಾ ಸ್ವರೂಪವಲ್ವಾ ಸ್ವಾಮಿ..?
ಮಂಗಳೂರು ಯುವಕ: ನಿಮಗೆ ಕೊರಗಜ್ಜನ ಬಗ್ಗೆ ಎಷ್ಟು ಗೊತ್ತಿದೆ
ಬೆಂಗಳೂರು ಮಹಿಳೆ: ನನಗೆ ಅವರ ಬಗ್ಗೆ ಎಷ್ಟು ಗೊತ್ತಿದೆ ಅನ್ನೋದು ಇಲ್ಲಿ ಮುಖ್ಯ ಅಲ್ಲ. ಅವರು ಇಲ್ಲಿ ನೆಲೆಸಲು ಕಾರಣ ಏನು ಅನ್ನೋದನ್ನು ನೀವು ತಿಳಿದುಕೊಳ್ಳಿ. ನಿಮಗೆ ಅಷ್ಟು ಕುತೂಹಲ ಇದ್ರೆ ಬರುವ ನವೆಂಬರ್ 27ಕ್ಕೆ ಇಲ್ಲಿ ಕೋಲ ಸೇವೆ ಇದೆ. ಬಂದು ನೀವೇ ಅವರಲ್ಲಿ ಎಲ್ಲಾನೂ ಕೇಳ್ಕೊಳ್ಳಿ
ಮಂಗಳೂರು ಯುವಕ: ನೀವು ಬೆಂಗಳೂರಿನಲ್ಲಿ ಕೊರಗಜ್ಜ ನೆಲೆ ನಿಂತಿದ್ದಾರೆ ಅಂತ ಹೇಳ್ತಿದ್ದೀರಲ್ವಾ? ಅದು ಹೇಗೆ
ಬೆಂಗಳೂರು ಮಹಿಳೆ: ನಾನು ಅದನ್ನು ವಿವರಿಸೋ ಅವಶ್ಯಕತೆ ಇಲ್ಲ. ನೀವೇ ಬಂದು ಕೇಳ್ಕೊಳ್ಳಿ
ಮಂಗಳೂರಿನ ಯುವಕ: ಒಂದು ವೇಳೆ ಮಂಗಳೂರಿನಲ್ಲಿ ಹೇಳಿದ ಹರಕೆ ಅಲ್ಲಿ ಬಂದು ಕೊಟ್ರೆ ಅದು ಏನಾದ್ರೂ ಸರಿಯಾಗಿಲ್ಲ ಅಂದ್ರೆ ಅದರ ಹೊಣೆ ನೀವು ತೆಗೆದುಕೊಳ್ತೀರಾ?
ಬೆಂಗಳೂರು ಮಹಿಳೆ : ಅಯ್ಯೋ ಅಪ್ಪಾ ಸ್ವಾಮಿ ನಿಮಗೆ ಅಜ್ಜ ಎಲ್ಲಿ ನೆಲೆ ನಿಂತಿದ್ದಾರೆ ಅಂತ ಅನಿಸುತ್ತೋ ಅಲ್ಲಿಗೇ ಹೋಗಿ ಹರಕೆ ಕೊಟ್ಕೊಳ್ಳಿ’ , ನಾನು ಈವಾಗ ಅಜ್ಜನ ಎದುರಲ್ಲಿ ನಿಂತುಕೊಂಡು ಹೇಳುತ್ತಿದ್ದೇನೆ. ಇಲ್ಲಿ ಬಂದಿರುವ ಮಹಿಮೆ ನಿಮಗೆ ಗೊತ್ತಿಲ್ಲ’
ಮಂಗಳೂರಿನ ಯುವಕ: ‘ನಿಮಗೆ ಕೊರಗಜ್ಜನ ಬಗ್ಗೆ ಏನೂ ತಿಳಿಯದೇ ಮಾತಾಡಬೇಡಿ. ಏಳು ಕೊಪ್ಪ (ಏಳು ಘಟ್ಟ ) ದಾಟಿ ಬರೋದಿಲ್ಲ ಅಂತ ಕೊರಗಜ್ಜನ ಪಾರ್ದನದಲ್ಲಿ ಬರುತ್ತದೆ. ಹಾಗಿರುವಾಗ ಬೆಂಗಳೂರು ಬರೋದು ಘಟ್ಟದಲ್ಲಿ ತಾನೇ..? ನೀವು ಕೊರಗಜ್ಜನ ಹೆಸರಿನಲ್ಲಿ ಏನು ವ್ಯವಹಾರ ಮಾಡುತ್ತಿದ್ದೀರಾ..?
ಬೆಂಗಳೂರು ಮಹಿಳೆ: ನಾನು ಅಜ್ಜನ ಮುಂದೆ ಕೂತಿದ್ದೇನೆ. ನನ್ನನ್ನು ಸಿಟ್ಟು ಮಾಡಿಕೊಳ್ಳುವಂತೆ ಮಾಡಬೇಡಿ. ನಿಮಗೆ ಅಗತ್ಯ ಇದ್ರೆ ಇಲ್ಲಿಗೆ ಬನ್ನಿ. ಆಗೋದಿಲ್ವಾ ಮಂಗಳೂರಲ್ಲೇ ಪೂಜೆ ಮಾಡ್ಕೊಳ್ಳಿ. ನಿಮಗೆ ನನ್ನ ಚಿಂತೆ ಬೇಡ. ಅಜ್ಜನ ಚಿಂತೆ ಮಾಡಿ. ನೀವು ತುಳುನಾಡಿನವರು. ನಿಮ್ಮ ಹೆಣ್ಣು ಮಕ್ಕಳನ್ನು ಬೆಂಗಳೂರಿನಾಚೆ ಮದುವೆ ಮಾಡಿಕೊಡೋದಿಲ್ಲವಾ’
ಮಂಗಳೂರು ಯುವಕ: ಹಾಗಾದ್ರೆ ಈ ಕೊರಗಜ್ಜನ ವಿಚಾರಗಳೆಲ್ಲ ನಿಮಗೆ ಮದುವೆ ರೀತಿನಾ
ಬೆಂಗಳೂರು ಮಹಿಳೆ: ಹೌದು ಅಂತ ಹೇಳಿ ಅಜ್ಜ ಇಡೀ ಪ್ರಪಂಚದಲ್ಲಿ ಎಲ್ಲಿ ಬೇಕಾದ್ರು ನೆಲೆ ನಿಲ್ಲಬಹುದು. ಅದನ್ನು ನೀವು ಹೇಗೆ ಪ್ರಶ್ನೆ ಮಾಡ್ತೀರಾ…’
ಮಂಗಳೂರು ಯುವಕ: ನಿಮಗೆ ವ್ಯಾಪಾರ ಮಾಡ್ಬೇಕಾದ್ರೆ ಬೇರೆ ರೀತೀಲಿ ಮಾಡಿ. ಈ ರೀತಿ ದೈವದ ಹೆಸರಿನಲ್ಲಿ ನಂಬಿಸಿ ಹಣ ಮಾಡೋದಿಕ್ಕೆ ಹೋಗ್ಬೇಡಿ.
ಬೆಂಗಳೂರು ಮಹಿಳೆ: ನೀವು ಬೆಂಗಳೂರಿಗೆ ಬಂದು ಇಲ್ಲಿಯ ಅನ್ನ ತಿಂದು ಬದುಕುತ್ತಿದ್ದೀರಾ…ನ್ಯಾಯವಾಗಿ ಮಾತಾಡಿ. ನಾವೇನು ನಿಮ್ಮ ಭಿಕ್ಷೆಯಲ್ಲಿ ಇದನ್ನೆಲ್ಲ ಮಾಡುತ್ತಿಲ್ಲ
ಮಂಗಳೂರು ಯುವಕ: ‘ಫೇಸ್ಬುಕ್ನಲ್ಲಿ ಗೂಗಲ್ಪೇ ಮಾಡಿ, ಫೋನ್ ಪೇ ಮಾಡಿ ಅಂತ ಪೋಸ್ಟ್ ಹಾಕ್ತೀರಿ ಅಲ್ವಾ…? ಅದು ಭಿಕ್ಷೆ ಕೇಳೋದಲ್ವಾ..?
ಬೆಂಗಳೂರು ಮಹಿಳೆ: ಅದನ್ನು ಅಜ್ಜನ ಹೆಸರಿನಲ್ಲಿ ಭಿಕ್ಷೆ ಅಂತ ಅನ್ಕೊಳ್ಳಿ
ಮಂಗಳೂರು ಯುವಕ: ನಿಮಗೆ ಭಿಕ್ಷೆ ಬೇಕಾದ್ರೆ ‘ಟವೆಲ್ ಹಾಕಿ ಭಿಕ್ಷೆ ಬೇಡಿ, ಇಂತಹ ನೀಚ ಕೆಲಸ ಮಾಡಬೇಡಿ
ಸುಸ್ತಾದ ಮಹಿಳೆ ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಕಾಲ್ ಕೊಟ್ಟು ಮಾತಾಡಿಸುತ್ತಾರೆ.
ಬೆಂಗಳೂರು ವ್ಯಕ್ತಿ: ನೋಡ್ರಿ ಸ್ವಾಮಿ ನಿಮಗೆ ಇಷ್ಟ ಇದ್ರೆ ಮಾಡಿ. ನಾವು ಮಾಡೋದಿಕ್ಕೆ ಅಡ್ಡಿಪಡಿಸ್ಲಿಕ್ಕೆ ಹೋಗ್ಬೇಡಿ. ಅಜ್ಜನ ಕೋಪಕ್ಕೆ ಗುರಿಯಾಗ್ತೀರಾ…
ಮಂಗಳೂರು ಯುವಕ: ನಿಮಗೆ ದೈವದ ಹೆಸರಿನಲ್ಲಿ ಇಂತಹ ಕೆಲಸ ಮಾಡ್ಲಿಕ್ಕೆ ನಾಚಿಕೆ ಆಗೋದಿಲ್ಲವಾ..? ಭಿಕ್ಷೆ ಬೇಡ್ತಿದ್ದೀರಾ…ಸಾಧ್ಯ ಆದ್ರೆ ದುಡಿದು ತಿನ್ನಿ. ಇಂತಹ ನೀಚ ಕೆಲಸ ಮಾಡ್ಬೇಡಿ
ಆಕ್ರೋಶಿತಗೊಂಡ ವ್ಯಕ್ತಿ ಅಸಂಬದ್ಧವಾಗಿ ಮಾತಾಡಿ ಕರೆಯನ್ನು ಕಟ್ ಮಾಡುತ್ತಾರೆ.
bangalore
ಮಹಿಳೆಯ ಅತಿಯಾದ ಕಾಮದಾಹ…! ದಾಹಕ್ಕೆ ಅಂತ್ಯ ಹಾಡಿದ ಯುವಕ..!
ಆಕೆ 48 ವರ್ಷ ಪ್ರಾಯದ ಮಹಿಳೆಯಾಗಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿ ಕೊಟ್ಟಿದ್ದಾಳೆ. ಬೆಂಗಳೂರಿನ ಕೊಡಿಗೆ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿದ್ದ ಆಕೆಯ ದೇಹ ನಗ್ನವಾಗಿ ಬೆಡ್ರೂಮಿನಲ್ಲಿ ಪತ್ತೆಯಾಗಿತ್ತು. ಎಪ್ರಿಲ್ 19 ರಂದು ನಡೆದಿದ್ದ ಈ ಘಟನೆಯನ್ನು ಭೇದಿಸಿದ ಪೊಲೀಸರಿಗೆ ಶಾಕ್ ಆಗುವಂತ ವಿಚಾರಗಳು ಗೊತ್ತಾಗಿದೆ.
ಕೊಡಿಗೆ ಹಳ್ಳಿಯ ಭದ್ರಪ್ಪ ಲೇಔಟ್ನಲ್ಲಿ ನಡೆದಿದ್ದ ಶೋಭಾ ಎಂಬ ಮಹಿಳೆಯ ಕೊ*ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವ ನವೀನ್ ಎಂಬ ಯುವಕನನ್ನು ಕೊಡಿಗೆ ಹಳ್ಳಿಯ ಪೊಲೀಸರು ಬಂದಿಸಿದ್ದಾರೆ. ವಿಚಾರಣೆ ವೇಳೆ ಬಾಯ್ಬಿಟ್ಟ ವಿಚಾರ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ. ಬಳಿಕ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಶೋಭಾಳ ಕಾಮದಾಹ ಬೆಳಕಿಗೆ ಬಂದಿದೆ.
ಶೋಭಾಳಿಗೆ ಇನ್ಸ್ಟಾಗ್ರಾಂ ಮೂಲಕ ಪರಿಚಿತನಾಗಿದ್ದ ನವೀನ್ ಬಳಿಕ ಸ್ನೇಹಿತನಾಗಿ, ಅದು ಪ್ರೀತಿಗೆ ತಿರುಗಿ ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧದವರೆಗೂ ಬಂದು ನಿಂತಿತ್ತು. ಮಗನ ವಯಸ್ಸಿನ ಹುಡುಗನ ಜೊತೆಯಲ್ಲಿ ನಿರಂತರ ಸೆಕ್ಸ್ ಮಾಡುತ್ತಿದ್ದ ಶೋಭಾಳ ಅತಿಯಾದ ಕಾಮಧಾಹದಿಂದ ಬೇಸತ್ತು ಆಕೆಯನ್ನು ಕೊಲೆ ಮಾಡಿದ್ದಾಗಿ ಹೇರೋಹಳ್ಳಿ ಮೂಲದ ಆರೋಪಿ ನವೀನ್ ಹೇಳಿಕೆ ನೀಡಿದ್ದಾನೆ.
ಕೊಲೆ ನಡೆದ ದಿನವೂ ಶೋಭಾ ಮನೆಗೆ ನವೀನ್ ಬಂದಿದ್ದ. ಏ.19ರಂದು ಇಬ್ಬರು ದೈಹಿಕ ಸಂರ್ಪಕವನ್ನು ಬೆಳೆಸಿದ್ದರು. ಆ ನಂತರ ಶೋಭಾ ಮತ್ತೆ ನವೀನ್ಗೆ ಸೆಕ್ಸ್ಗೆ ಒತ್ತಾಯಿಸಿದ್ದು ನಿರಾಕರಿಸಿದಾಗ ಬ್ಲ್ಯಾಕ್ಮೇಲ್ ಮಾಡಿದ್ದಾಳೆ. ಈಕೆ ಅತಿಯಾಗಿ ಸೆಕ್ಸ್ಗೆ ಒತ್ತಾಯಿಸಿದ್ದಕ್ಕೆ ಬೇಸರಗೊಂಡ ನವೀನ್ ಬೆಡ್ ರೂಮಿನಲ್ಲೇ ಆಕೆಯ ಕಥೆ ಮುಗಿಸಿದ್ದ.
48ರ ಮಹಿಳೆಗೆ ಯುವಕರ ಮೇಲೆ ಹುಚ್ಚು
48ರ ಶೋಭಾ ಕೇವಲ ನವೀನ್ ಮಾತ್ರವಲ್ಲದೇ ಅನೇಕ ಯುವಕರ ಸಹವಾಸ ಬೆಳೆಸಿದ್ದಳು. ಒಬ್ಬೊಬ್ಬ ಹುಡುಗರಿಗೂ ಒಂದೊಂದು ಹಣ್ಣಿನ ಹೆಸರಿಟ್ಟಿದ್ದು, ನವೀನ್ಗೆ ಆ್ಯಪಲ್ ಎಂದು ಹೆಸರಿಟ್ಟಿದ್ದಳಂತೆ. ಆ್ಯಪಲ್, ಆರೆಂಜ್, ಬನಾನ ಹೆಸರಿನಲ್ಲಿ ಹುಡುಗರ ಹೆಸರು ಸೇವ್ ಮಾಡಿಕೊಳ್ಳುತ್ತಿದ್ದಳು. ಆ್ಯಪ್ಗಳಲ್ಲಿಯೂ ಆ್ಯಕ್ಟಿವ್ ಆಗಿದ್ದ ಶೋಭಾ ಸುಮಾರು 20 ಕ್ಕೂ ಹೆಚ್ಚು ಹುಡುಗರನ್ನು ಖೆಡ್ಡಾಗೆ ಬೀಳಿಸಿಕೊಂಡಿದ್ದಳು. ಈಕೆ ಕರೆದಾಗ ಯುವಕರು ಏನಾದರೂ ಬಾರದೆ ಇದ್ದರೆ ಅವರ ಮನೆ ಬಳಿಯೇ ಹೋಗುತ್ತಿದ್ದಳು. ನಂತರ ಕಾರಿನ ಹಾರ್ನ್ ಜೋರಾಗಿ ಹಾಕುತ್ತಿದ್ದಳು. ಇಷ್ಟಕ್ಕೂ ಜಗ್ಗದೆ ಹೋದರೆ ಮನೆಯವರಿಗೆ ಖಾಸಗಿ ಫೋಟೊವನ್ನು ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅಷ್ಟೇ ಅಲ್ಲದೆ ಆ ಯುವಕರ ಮದುವೆಗೂ ಅಡ್ಡಿ ಪಡಿಸಿ ಮದುವೆ ನಿಲ್ಲಿಸಿದ್ದಳು.
ಕೊಲೆಯಾದ ದಿನವೂ ನವೀನ್ಗೆ ಬ್ಲಾಕ್ ಮೇಲ್ ಮಾಡಿ ಕರೆಸಿಕೊಂಡಿದ್ದಳು. ನವೀನ್ ಎಡಗೈಗೆ ಗಾಯವಾಗಿತ್ತು, ಗಾಯದ ಮೇಲೆ ಕೂತು ನೀನು ಮದುವೆ ಆಗಬಾರದು, ಹೀಗೆ ನನ್ನ ಜತೆ ಇರಬೇಕು. ಮದುವೆ ಆದರೆ ಅಲ್ಲೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತ ನವೀನ್, ಶೋಭಾಳ ಕತ್ತು ಹಿಸುಕಿ ಕೊ*ಲೆ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.
BANTWAL
ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು
ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.
ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು
ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.
DAKSHINA KANNADA
ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ ಮಾಡುವುದು ಹೀಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ. ರಾತ್ರಿಯ ಹೊತ್ತು ಚಿಕ್ಕ ಮಕ್ಕಳು ಅಪ್ಪ ಅಮ್ಮನ ಒಟ್ಟಿಗೆ ಮಲಗುತ್ತಾರೆ. ಅದೇ ರೀತಿ ಗಂಡ ಹೆಂಡತಿಯರು ಒಟ್ಟಿಗೆ ಮಲಗುವುದು ಸರ್ವೇ ಸಾಮಾನ್ಯ.
ಮದುವೆಯ ನಂತರ ಸಾಮಾನ್ಯವಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗುತ್ತಾರೆ. ಇದು ಸಮಾಜದ ಸಾಮಾನ್ಯ ನಿಯಮ ಸಹ ಹೌದು ಎನ್ನಬಹುದು. ಮದುವೆಯ ನಂತರ ಪತಿ-ಪತ್ನಿಯರ ನಡುವಿನ ಚರ್ಚೆಗಳು, ಮಾತುಗಳು ಸಾಮಾನ್ಯವಾಗಿ ಮಲಗುವ ಸಮಯದಲ್ಲೇ ಆಗುತ್ತದೆ. ಇನ್ನು ಪತಿ-ಪತ್ನಿಯರು ಪ್ರತ್ಯೇಕವಾಗಿ ಮಲಗುವುದರಿಂದಲೂ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.
ಮೊದಲಿಗೆ, ಈ ವಿಷಯದ ಬಗ್ಗೆ ಮಾಡಿದ ಎಲ್ಲಾ ಸಂಶೋಧನೆಗಳು ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಮಲಗುವುದು ತಪ್ಪಲ್ಲ ಎಂದು ತೋರಿಸುತ್ತದೆ ಮತ್ತು ಪ್ರತಿ ದಂಪತಿಗಳು ತಮ್ಮದೇ ಆದ ನಿಯಮಗಳನ್ನು ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಆದರೆ ಅನೇಕ ಬಾರಿ ಜನರು ಇಂತಹ ಮಾತುಗಳನ್ನು ಕೇಳಲು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಈ ದಂಪತಿಗಳ ಜೀವನದಲ್ಲಿ ಏನೋ ಸರಿಯಾಗಿಲ್ಲ ಎಂದು ಭಾವಿಸುತ್ತಾರೆ.
ಆದರೆ ಅಷ್ಟೇ ಅಲ್ಲ, ಕೆಲವೊಮ್ಮೆ ಬೇರೆ ಬೇರೆ ಕೋಣೆಗಳಲ್ಲಿ ದಂಪತಿಗಳಿಗೆ ಮಲಗುವುದರಿಂದ ದಂಪತಿಗಳಿಗೆನೇ ಹೆಚ್ಚು ಅನುಕೂಲಕರವಾಗಿರುತ್ತದೆ. ಸಂಶೋಧನೆಯ ಪ್ರಕಾರ ನೀವು ಪ್ರತ್ಯೇಕವಾಗಿ ಏಕೆ ಮಲಗುವುದರಿಂದ ಯಾವುದೇ ನಿದ್ರಾ ಭಂಗವನ್ನು ಉಂಟುಮಾಡುವುದಿಲ್ಲ. ಇದರಿಂದ ಸುಖಕರವಾಗಿ ನಿದ್ರೆ ಮಾಡಬಹುದು.
ರಾತ್ರಿಯಲ್ಲಿ ಗೊರಕೆ ಹೊಡೆಯುವುದು, ಒದೆಯುವುದು, ದೇಹದ ಉಷ್ಣತೆಯ ಬದಲಾವಣೆ ವಿಭಿನ್ನವಾಗಿರುತ್ತದೆ. ನೀವು ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗಲು ಪ್ರಯತ್ನಿಸಿದರೆ ನಿಮ್ಮ ದೇಹವು ಅರಾಮವಾಗಲು ಸಹಾಯಕವಾಗುತ್ತದೆ. ಸ್ವಲ್ಪ ಸಮಯದ ಅಂತರವು ನಿಮ್ಮ ಸಂಬಂಧವನ್ನು ಹೆಚ್ಚು ಉತ್ತಮಗೊಳಿಸುತ್ತದೆ. ನಿಮಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ.
ಜೊತೆಗೆ ಕೆಲವೊಮ್ಮೆ ದಂಪತಿಗಳ ನಡುವೆ ಮನಸ್ಥಾಪವಾದಾಗ ಈ ರೀತಿ ಕೆಲ ದಿನ ದೂರ ಮಲಗಿದರೆ ಆ ವಿರಹ ವೇದನೆಯಿಂದ ಕೋಪವೂ ತಣ್ಣಗಾಗುತ್ತದೆ. ದೈಹಿಕ ಅನ್ಯೋನ್ಯತೆ ಮತ್ತು ಭಾವನಾತ್ಮಕ ಪ್ರೀತಿಯ ಅವಶ್ಯಕತೆ ಯಾವಾಗಲೂ ಇರುತ್ತದೆ ಮತ್ತು ಆದ್ದರಿಂದ ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗುವುದು ಉತ್ತಮ. ಜೊತೆಗೆ ಕೆಲವೊಮ್ಮೆ ಜ್ವರ ರೀತಿಯ ಅನಾರೋಗ್ಯವಿದ್ದಾಗ ದೂರ ಮಲಗಿದರೆ ಒಬ್ಬರಿಂದ ಒಬ್ಬರಿಗೆ ಅದು ಹರಡುವುದಿಲ್ಲ.
ಇದನ್ನೂ ಓದಿ ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ
ಕೆಲವೊಮ್ಮೆ ದಂಪತಿಗಳಿಗೆ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಅವರ ಲೈಂಗಿಕ ಜೀವನಕ್ಕೆ ಒಳ್ಳೆಯದು ಎಂದು ಸಂಶೋಧನೆ ಸೂಚಿಸುತ್ತದೆ. ಇದರಿಂದ ದಣಿವು ಆಗುವುದು ಕಡಿಮೆ ಆಗುತ್ತದೆ. ಪರಿಣಾಮವಾಗಿ, ಲೈಂಗಿಕ ಜೀವನವನ್ನು ಸುಧಾರಿಸಬಹುದು.
- DAKSHINA KANNADA6 days ago
ಮಂಗಳೂರು : ಬೈಕ್ಗೆ ಕಾರು ಡಿಕ್ಕಿ; ಇಹಲೋಕ ತ್ಯಜಿಸಿದ ವಿದ್ಯಾರ್ಥಿ
- DAKSHINA KANNADA6 days ago
ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಂತೆ..! ಏನಿದು ಸೀರೆ ಕ್ಯಾನ್ಸರ್?
- DAKSHINA KANNADA7 days ago
ಬಿಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!
- DAKSHINA KANNADA5 days ago
“ಸೆಕ್ಸ್” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್..!