ಬಜೆಟ್ 2020: ಯಾವುದು ಅಗ್ಗ, ಯಾವುದು ಏರಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ
ನವದೆಹಲಿ: ಆರ್ಥಿಕ ಹಿಂಜರಿತದಿಂದ ಕಂಗಾಲಾಗಿರುವ ಭಾರತಕ್ಕೆ ಬೂಸ್ಟ್ ನೀಡುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಈ ಬಾರಿಯ ಬಜೆಟ್ ಮಂಡಿಸುತ್ತಿದ್ದಾರೆ. ರಾಷ್ಟ್ರದ ಭದ್ರತೆ ಜೊತೆಗೆ ಪರಿಸರ ನೈರ್ಮಲ್ಯಕ್ಕೆ ಈ ಬಾರಿ ವಿಶೇಷ ಆದ್ಯತೆ ನೀಡಲಾಗಿದೆ.
ಪ್ರವಾಸೋದ್ಯಮ, ಮ್ಯೂಸಿಯಂ, ಪರಾತತ್ವ ಸ್ಥಳಗಳ ಅಭಿವೃದ್ಧಿ ಜೊತೆಗೆ ಜಮ್ಮು ಕಾಶ್ಮೀರ ಅಭಿವೃದ್ಧಿಗೂ ಭಾರೀ ಅನುದಾನಗಳನ್ನ ಮಂಡಿಸಲಾಗಿದೆ. ಅಲ್ಲದೇ ಉದ್ಯೋಗ ಹೆಚ್ಚಳದ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.. ಇನ್ನು ಕೃಷಿ, ಆರೋಗ್ಯ ಕ್ಷೇತ್ರಗಳಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಸದ್ಯ ನಡೆಯುತ್ತಿರೋ ಬಜೆಟ್ ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ಯಾವುದೇ ವಿಶೇಷ ಆಶಾದಾಯಕ ಭರವಸೆಗಳು ಸಿಕ್ಕಿಲ್ಲ ಎನ್ನುವುದು ಗಮನಾರ್ಹ..
ಬಜೆಟ್ಗೂ ಮಂಡನೆಗೂ ಮುನ್ನ ಮಾತನಾಡಿದ ವಿತ್ತ ಸಚಿವೆ, 40 ಕೋಟಿ ಜನರು ಈ ಬಾರಿ ಜಿ.ಎಸ್.ಟಿ ಪಾವತಿಸಿದ್ದಾರೆ. ಜಿ.ಎಸ್.ಟಿ ಯಿಂದ ರಿಟರ್ನ್ಸ್ ಸಲ್ಲಿಕೆ ತುಂಬಾ ಸರಳವಾಗಿದೆ ಜೊತೆಗೆ ಭಾರತ ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ ಎಂದರು. 2020 ರ ವೇಳೇಗೆ ರೈತರ ಆದಾಯವನ್ನು ದ್ವಿಗುಣ ಗೊಳಿಸುವುದಕ್ಕೆ ಕೇಂದ್ರ ಸರಕಾರ ಬದ್ದವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೃಷಿ ಅಭಿವೃದ್ದಿಗೆ 16 ಅಂಶಗಳ ಯೋಜನೆ ಮಾಡಲಾಗಿದೆ ಅಂತ ಹೇಳಿದರು. 20 ಲಕ್ಷ ರೈತರಿಗೆ ಪಂಪ್ಸೆಟ್ ವಿತರಣೆ ಮಾಡಲಾಗುತ್ತೆ. ಬರಡು ಭೂಮಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಹೆಚ್ಚಿನ ಅವಕಾಶ ನೀಡಲಾಗುವುದು ಈ ಮೂಲಕ ಅನ್ನದಾತ ವಿದ್ಯುತ್ದಾತನೂ ಆಗುತ್ತಾನೆ ಎಂದರು. ಆದಾಯ ಮತ್ತು ಖರೀದಿ ಸಾಮರ್ಥ್ಯ ವಿಸ್ತರಣೆ ಮಾಡುವ ಬಜೆಟ್ ಇದಾಗಿರುತ್ತದೆ ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11ಕ್ಕೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಿದರು.
ಬಜೆಟ್ ಹೈಲೈಟ್ಸ್:
- ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ 27,300 ಕೋಟಿ
- ಕೃಷಿ ಮತ್ತು ಅದರ ಸಹವರ್ತಿ ಚಟುವಟಿಕೆಗಳಿಗೆ 2.83 ಲಕ್ಷ ಕೋಟಿ ರೂ. ಅನುದಾನ
- 20 ಲಕ್ಷ ರೈತರಿಗೆ ಸೋಲಾರ್ ಪಂಪ್ ನೀಡಲಾಗುವುದು. ಹದಿನೈದು ಲಕ್ಷ ಮಂದಿಗೆ ಸೌರಶಕ್ತಿ ಮೂಲಕ ಸಹಾಯ ಮಾಡಲಾಗುವುದು. ಬರಡು ಭೂಮಿಯನ್ನು ಗ್ರಿಡ್ ಗೆ ಮಾರಿ, ಹಣ ಗಳಿಸಬಹುದು.
- ರೈತರಿಗಾಗಿ ಕಿಸಾನ್ ರೈಲು ಘೋಷಣೆ, ಪಿಪಿಪಿ ಮಾದರಿಯಲ್ಲಿ ನಿರ್ಮಾಣ
- ಸ್ವ ಸಹಾಯ ಗುಂಪುಗಳಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ. ಈ ಗುಂಪುಗಳನ್ನು ಧಾನ್ಯ ಲಕ್ಷ್ಮಿ ಎಂದು ಕರೆಯಲಾಗುವುದು. ನಬಾರ್ಡ್, ಮುದ್ರಾ ಯೋಜನೆಯಡಿ ನೆರವು.
- ಕೃಷಿ15 ಲಕ್ಷ ಕೋಟಿ ರೂ. ಕೃಷಿ ಸಾಲಕ್ಕಾಗಿ ನಬಾರ್ಡ್ಗೆ 15 ಲಕ್ಷ ಕೋಟಿ ರೂ. ನಬಾರ್ಡ್ ಮರುಹಣಕಾಸು ಯೋಜನೆ ವಿಸ್ತರಣೆ.
- ನೀರಿನ ಸಮಸ್ಯೆ ಇರುವ ದೇಶದ 100 ಜಿಲ್ಲೆಗಳಿಗೆ ಸಮಗ್ರ ಯೋಜನೆ.
- ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ ಆಸ್ಪತ್ರೆಗಳು.
- ಹೊಸ ಶಿಕ್ಷಣ ನೀತಿ ಜಾರಿ. ಶಿಕ್ಷಣದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಆದ್ಯತೆ. ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರು ಅನುದಾನ.
- ಭಾರತದ ಮನೆ ಮನೆಗೂ ಇಂಟರ್ ನೆಟ್ ಸೇವೆ.
- ಹಣ್ಣು, ತರಕಾರಿ ಶೇಖರಣೆಗೆ ದೇಶದಲ್ಲಿ ಜಾಲ ನಿರ್ಮಾಣ
- ಆರೋಗ್ಯ69 ಸಾವಿರ ಕೋಟಿ ರೂ. ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ. ಮೀಸಲು. ಕಳೆದ ಬಜೆಟ್ನಲ್ಲಿ 62,659 ಕೋಟಿ ಘೋಷಿಸಲಾಗಿತ್ತು.
- 112 ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಡೆಯಡಿ ಆಸ್ಪತ್ರೆ ನಿರ್ಮಾಣ. 2024ರ ವೇಳೆಗೆ ದೇಶದೆಲ್ಲೆಡೆ ಜನೌಷಧ ಕೇಂದ್ರಗಳನ್ನು ವಿಸ್ತರಿಸಲು ಬದ್ಧ.
- ಸ್ವಚ್ಛಭಾರತ್ ಯೋಜನೆಗೆ 12,300 ಕೋಟಿ ರು ಅನುದಾನ. ಜಲ ಜೀವನ್ ಮಿಷನ್ ಯೋಜನೆಗೆ 3.6 ಲಕ್ಷ ಕೋಟಿ ರು ಅನುದಾನ.
- ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣಕ್ಕೆ ನಬಾರ್ಡ್ ನಿಂದ ಹಣಕಾಸು ಯೋಜನೆ ವಿಸ್ತರಣೆ.
- ರೂ 12,300 ಕೋಟಿ ರೂ ಸ್ವಚ್ಚ ಭಾರತ ಯೋಜನೆಗೆ ಅನುದಾನ. ಕಳೆದ ಸಾಲಿನಲ್ಲಿ 10,000 ಕೋಟಿ ನೀಡಲಾಗಿತ್ತು.
- ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಇಂಧ್ರಧನುಷ್ ಯೋಜನೆ. ಜಲ್ ಜೀವನ್ ಅಭಿಯಾನ ಮತ್ತು ಒಳಚರಂಡಿ ಅಭಿಯಾನದ ಮೂಲಕ ಬಡವರ ಆರೋಗ್ಯ ಸ್ಥಿತಿ ಉತ್ತಮಗೊಳಿಸಲು ಯತ್ನ. ಆಯುಷ್ಮಾನ್ ಭಾರತ್ ಯೋಜನೆ ಅಡಿ ಇಪ್ಪತ್ತು ಸಾವಿರ ಆಸ್ಪತ್ರೆಗಳು.
- ಯುವ ಎಂಜಿನಿಯರ್ ಗಳಿಗೆ ಶೀಘ್ರದಲ್ಲಿ ಇಂಟರ್ನ್ ಷಿಪ್! ಸ್ಥಳೀಯ ನಗರ ಸಂಸ್ಥೆಗಳಿಗೆ ಅವಕಾಶ ನೀಡಲು ನಿರ್ದೇಶನ.
- 83 ಲಕ್ಷ ಕೋಟಿ ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳಿಗೆ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿಗೆ 2.83 ಲಕ್ಷ ಕೋಟಿ.
- ಮೆಡಿಕಲ್ ಕಾಲೇಜನ್ನು ಜಿಲ್ಲಾಸ್ಪತ್ರೆಗೆ ಸೇರ್ಪಡೆ.
- 2023ಕ್ಕೆ ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ ಪೂರ್ಣ 9,000 ಕಿ. ಮೀ.
- ಉಡಾನ್ ಯೋಜನೆ ಆಡಿಯಲ್ಲಿ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣ ಸೇರ್ಪಡೆ. ವಿಮಾನಗಳ ಸಂಖ್ಯೆ ದುಪ್ಪಟ್ಟು ಮಾಡಲಾಗುವುದು.
- ಪೌಷ್ಟಿಕಾಂಶ ಕಾರ್ಯಕ್ರಮಗಳಿಗೆ 35,600 ಕೋಟಿ ಮೀಸಲು.
- ಮೊಬೈಲ್ ಫೋನ್, ಸೆಮಿ ಕಂಡಕ್ಟರ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಸಲಕರಣೆಗಳ ತಯಾರಿಗೆ ಯೋಜನೆ ಪ್ರಸ್ತಾವ.
- ಸ್ವಚ್ಛ ಭಾರತ್ ಅಭಿಯಾನಕ್ಕೆ 12,300 ಕೋಟಿ ಮೀಸಲು.
- ಪ್ರವಾಸೋದ್ಯಮ ವಲಯಕ್ಕೆ 2,500 ಕೋಟಿ ಮೀಸಲು.
- ಮಕ್ಕಳ ಆರೋಗ್ಯ ಸಂರಕ್ಷಣೆಗೆ ಇಂದ್ರಧನುಷ್ ಯೋಜನೆ ವಿಸ್ತರಣೆ.
- ಪರಿಶಿಷ್ಟ ಜಾತಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ 85,000 ಕೋಟಿ ಮತ್ತು ಪರಿಶಿಷ್ಟ ಪಂಗಡಗಳಿಗೆ 53,700 ಕೋಟಿ.
ಆದಾಯ ತೆರಿಗೆ ಪಾವತಿ ಬಗ್ಗೆ
- ಮೂಲ ಆದಾಯ ತೆರಿಗೆ ಮಿತಿ 2.5 ಲಕ್ಷ ರು
- 5 ಲಕ್ಷ ರು ತನಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ.
- 5 ಲಕ್ಷ ರು ನಿಂದ 7.5 ಲಕ್ಷ ರು ತನಕ ಆದಾಯ ಉಳ್ಳವರಿಗೆ 10% ತೆರಿಗೆ.
- 5 ಲಕ್ಷ ರು ನಿಂದ1 0 ಲಕ್ಷ ರು ತನಕ ಆದಾಯ ಉಳ್ಳವರಿಗೆ 15% ತೆರಿಗೆ.
- 10 ಲಕ್ಷ ರು ನಿಂದ 12.5 ಲಕ್ಷ ರು ತನಕ ಆದಾಯ ಉಳ್ಳವರಿಗೆ 20% ತೆರಿಗೆ.
- 5 ಲಕ್ಷ ರು ನಿಂದ 15 ಲಕ್ಷ ರು ತನಕ ಆದಾಯ ಉಳ್ಳವರಿಗೆ 25% ತೆರಿಗೆ.
- 15 ಲಕ್ಷ ರು ಮೇಲ್ಪಟ್ಟ ಆದಾಯ ಉಳ್ಳವರಿಗೆ ಶೇ 30 ರಷ್ಟು ತೆರಿಗೆ
ಯಾವುದರ ಬೆಲೆ ಇಳಿಕೆಯಾಗಬಹುದು:
ಕಾರು, ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಕಡಿಮೆಯಾಗಲಿದೆ
ಡಯಾಲಿಸಿಸ್ ಯಂತ್ರದ ಬೆಲೆಯಲ್ಲಿ ಇಳಿಕೆ
ಕೃತಕ ಕಿಡ್ನಿ, ಚರ್ಮೋತ್ಪನ್ನ
ಬೇಳೆಕಾಳು, ಗೊಬ್ಬರ, ಬೀಜಗಳ ಬೆಲೆಯಲ್ಲಿ ಇಳಿಕೆ
ಯಾವುದರ ಬೆಲೆ ಹೆಚ್ಛಳವಾಗಬಹುದು
ಪೆಟ್ರೋಲ್-ಡೀಸೆಲ್
ಗೋಡಂಬಿ, ತಾಳೆ ಎಣ್ಣೆ
ಬಂಗಾರ, ಬೆಳ್ಳಿ ಆಭರಣಗಳು
ಪ್ಲಾಸ್ಟಿಕ್, ರಬ್ಬರ್ ವಸ್ತುಗಳು, ಸಿಸಿಟಿವಿ, ಚಾರ್ಜರ್, ಅಡಾಪ್ಟರ್ಗಳು
ಗ್ಲಾಸ್, ಮುದ್ರಣ ಕಾಗದದ ಬೆಲೆ ಹೆಚ್ಚಳವಾಗಬಹುದು.
11 ಗಂಟೆಗೆ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಧ್ಯಾಹ್ನ 1.50ಕ್ಕೆ ಬಜೆಟ್ ಮಂಡನೆ ಪೂರ್ಣಗೊಳಿಸಿದರು. ಸಭೆಯನ್ನು ಸ್ಪೀಕರ್ ಸೋಮವಾರಕ್ಕೆ ಮುಂದೂಡಿದರು.
LATEST NEWS
238 ಬಾರಿ ಸೋತ ಅಭ್ಯರ್ಥಿ ಮತ್ತೆ ಲೋಕಸಭಾ ಅಖಾಡಕ್ಕೆ!
ಮಂಗಳೂರು ( ಮೆಟ್ಟೂರು ) : ಚುನಾವಣೆ ಅಂದ ಮೇಲೆ ಅಭ್ಯರ್ಥಿ ಹೇಗಾದ್ರೂ ಗೆಲ್ಲಲೇ ಬೇಕು ಅಂತ ಪ್ರಯತ್ನ ಮಾಡ್ತಾನೆ. ಹಾಗಂತ ಎರಡು ಮೂರು ಸ್ಪರ್ಧೆ ಮಾಡಿ ಗೆಲುವು ಸಿಕ್ಕಿಲ್ಲಾ ಅಂದ್ರೆ ಸುಮ್ಮನೆ ಮನೇಲಿ ಕೂರ್ತಾನೆ. ಆದ್ರೆ ಅದೊಂದು ಅಭ್ಯರ್ಥಿ ಮಾತ್ರ ಚುನಾವಣೆಯಲ್ಲಿ ಬರೋಬ್ಬರಿ 238 ಬಾರಿ ಸ್ಪರ್ಧೆ ಮಾಡಿ ಸೋತರೂ ಮತ್ತೆ ಈ ಬಾರಿ ಲೋಕಸಭಾ ಚುನಾವಣ ಕಣಕ್ಕೆ ಇಳಿದಿದ್ದಾರೆ.
ಚುನಾವಣೆಗೆ ನಿಲ್ಲೋದೇ ಸೋಲೋದಿಕ್ಕೆ ಅನ್ನೋ ರೀತಿ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ 65 ವಯಸ್ಸಿನ ಪದ್ಮರಾಜನ್ ಎಂಬವರು ಈ ಭಾರಿ ಮತ್ತೆ ಕಣಕ್ಕಿಳಿದಿದ್ದಾರೆ.
ಚುನಾವಣೆಯಲ್ಲಿ ಭಾಗವಹಿಸುವುದು ಮುಖ್ಯ!
ತಮಿಳುನಾಡಿನ ಮೆಟ್ಟೂರು ವಿಧಾನಸಭಾ ಕ್ಷೇತ್ರದಿಂದ 1988 ರಲ್ಲಿ ಚುನಾವಣೆಯಲ್ಲಿ ಪದ್ಮರಾಜನ್ ತಮ್ಮ ಮೊದಲ ಸ್ಪರ್ಧೆ ಆರಂಭಿಸಿದ್ದಾರೆ. ಸಾಮಾನ್ಯ ಟೈರ್ ರಿಪೇರಿ ಅಂಗಡಿ ಮಾಲೀಕರಾಗಿರುವ ಕೆ. ಪದ್ಮರಾಜನ್ ಅಂದಿನಿಂದ ಇಂದಿನವರೆಗೆ ಸರಿ ಸುಮಾರು 238 ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಕಟ್ಟಿದ ಲಕ್ಷಾಂತರ ರೂಪಾಯಿ ಠೇವಣಿಯನ್ನೇ ಇವರು ಕಳೆದುಕೊಂಡಿದ್ದಾರೆ. ಆದರೆ ಅದೆಷ್ಟೇ ಸಲ ಸೋತರು.. ಠೇವಣಿ ಕಳೆದುಕೊಂಡರು ಕೂಡ ಇವರ ತಲೆ ಕೆಡಿಸಿಕೊಂಡಿಲ್ಲ.
ಎಲ್ಲಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವನ್ನು ಬಯಸುತ್ತಾರೆ. ಆದರೆ ನಾನು ಹಾಗೆ ಅಲ್ಲ ನನಗೆ ಚುನಾವಣೆಯಲ್ಲಿ ಭಾಗವಹಿಸುವುದೇ ಮುಖ್ಯ ಅಂತಾರೆ ಪದ್ಮರಾಜನ್. ಏಪ್ರಿಲ್ 19 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಂಸದೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
ಕಿಂಗ್ ಆಫ್ ದಿ ಎಲೆಕ್ಷನ್ ಬಿರುದು :
ಸ್ಥಳೀಯಾಡಳಿತದ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆಗೂ ಇವರು ಸ್ಪರ್ಧೆ ಮಾಡಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ರಾಹುಲ್ ಗಾಂಧಿ ಹೀಗೆ ಅನೇಕರ ವಿರುದ್ಧ ಇವರು ಸ್ಪರ್ಧೆ ಮಾಡಿ ಸೋತಿದ್ದಾರೆ. ಹೀಗಾಗಿ ಇವರಿಗೆ ಕಿಂಗ್ ಆಪ್ ದಿ ಎಲೆಕ್ಷನ್ ಅಂತಾನೂ ಬಿರುದು ಸಿಕ್ಕಿದೆ.
ಸೋತರೂ ಗೆಲುವು :
ನಿರಂತರ ಚುನಾವಣೆಯಲ್ಲಿ ಸೋತಿರುವ ಪದ್ಮರಾಜನ್ ಅವರು ಒಂದು ವಿಚಾರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಮೂವತ್ತೈದು ವರ್ಷಗಳಿಂದ ಸೋಲುವ ಮೂಲಕ ಈ ಗೆಲುವು ತಂದುಕೊಂಡಿದ್ದಾರೆ. ಸೋಲಿನ ಮೂಲಕವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಸೇರಿಸಿಕೊಳ್ಳುವ ಮೂಲಕ ಆ ಗೆಲುವು ಇವರಿಗೆ ಸಿಕ್ಕಿದೆ.
ಈ ಬಾರಿ ಮತ್ತೆ ಲೊಕಸಭಾ ಚುನಾವಣೆಯ ಕಣಕ್ಕಿಳಿದಿರುವ ಪದ್ಮರಾಜನ್ ಅವರು ನನಗೆ ಸೋಲಿನಲ್ಲೇ ಖುಷಿ ಇದೆ. ಹಾಗೊಂದು ವೇಳೆ ಎಲ್ಲಿಯಾದ್ರೂ ಜನ ನನ್ನನ್ನು ಗೆಲ್ಲಿಸಿದ್ರೆ ಹೃದಯಾಘಾತವಾಗಿ ಉಸಿರೇ ನಿಂತು ಹೋಗಬಹುದು ಎಂದು ತಮಾಷೆಯಾಗಿ ಹೇಳುತ್ತಾರೆ. ಹೀಗಾಗಿ ನನ್ನ ಉಸಿರು ಇರಬೇಕು ಅಂದ್ರೆ ನಾನು ಸದಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಹಾಗೂ ಸೋಲಬೇಕು ಅಂತಾರೆ.
LATEST NEWS
ಪ್ರಧಾನಿ ಕಾರಿನ ನೋಂದಣಿಯನ್ನು ವಿಸ್ತರಿಸಲು ಅಸಾಧ್ಯ ಎಂದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ; ಕಾರಣ ಏನು?
ನವದೆಹಲಿ : ಪ್ರಧಾನಿ ಕಾರಿನ ನೋಂದಣಿಯನ್ನು ವಿಸ್ತರಿಸಲು ಅಸಾಧ್ಯ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ( NGT ) ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಮೂರು ಡಿಸೇಲ್ ಕಾರುಗಳ ನೋಂದಣಿ ವಿಸ್ತರಿಸುವಂತೆ ಎಸ್ಪಿಜಿ (SPG) ಮನವಿ ಸಲ್ಲಿಸಿತ್ತು.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಹೇಳಿದ್ದೇನು?
“ಈ ಮೂರು ಕಾರುಗಳು ಸಾಮಾನ್ಯವಾಗಿ ಬಳಸಲ್ಪಡದ ವಿಶೇಷ ಉದ್ದೇಶದ ವಾಹನಗಳಾಗಿವೆ. ಈ ವಾಹನಗಳು ಹತ್ತು ವರ್ಷಗಳಲ್ಲಿ ಬಹಳ ಕಡಿಮೆ ಚಲಿಸಿವೆ ಮತ್ತು ಪ್ರಧಾನಿ ಅವರ ಭದ್ರತೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಅಗತ್ಯವಾಗಿವೆ. ಆದರೆ ಸುಪ್ರೀಂ ಕೋರ್ಟ್ 2018ರ ಅಕ್ಟೋಬರ್ 29ರಂದು ನೀಡಿದ ಆದೇಶದಂತೆ ಆ ವಾಹನಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಎನ್ಜಿಟಿ ಹೇಳಿದೆ.
ಎಸ್ಪಿಜಿ ಈ ಕಾರುಗಳಿಗೆ ಅನುಮತಿ ಕೇಳಿದ್ಯಾಕೆ?
ಈ ವಾಹನಗಳ ವಿನ್ಯಾಸ ಮತ್ತು ತಾಂತ್ರಿಕ ಹಾಗೂ ಕಾರ್ಯತಂತ್ರಗಳು ಬಹಳಷ್ಟು ವಿಶೇಷವಾಗಿದೆ. ಇಂತಹ ವಾಹನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲ. ಭದ್ರತೆಯ ದೃಷ್ಟಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿರುವ ಕಾರಣ ಈ ಕಾರುಗಳಿಗೆ ಇನ್ನೂ ಐದು ವರ್ಷಗಳ ಕಾಲ ನೊಂದಣಿಯನ್ನು ವಿಸ್ತರಿಸಿ ಎಂದು ಎಸ್ಪಿಜಿ ಕೋರಿಕೆ ಸಲ್ಲಿಸಿತ್ತು.
ದೆಹಲಿ ಎನ್ಸಿಆರ್ನಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಎನ್ಜಿಟಿ ಮತ್ತು ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಹೊರಡಿಸಿದ್ದವು. ಎನ್ಜಿಟಿ 2015ರ ಏಪ್ರಿಲ್ನಲ್ಲಿ ದೆಹಲಿ ಎನ್ಸಿಆರ್ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಎಲ್ಲ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 10 ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನವನ್ನು ನೋಂದಾಯಿಸದಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಇದನ್ನೂ ಓದಿ…238 ಬಾರಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಮತ್ತೆ ಲೋಕಸಭಾ ಅಖಾಡಕ್ಕೆ…!
2013ರಲ್ಲಿ ತಯಾರಿಸಿದ ಮತ್ತು 2014ರ ಡಿಸೆಂಬರ್ನಲ್ಲಿ ನೋಂದಾಯಿಸಲಾದ ಮೂರು ರೆನಾಲ್ಟ್ ಎಂಡಿ -5 (Renault MD-5) ವಿಶೇಷ ಶಸ್ತ್ರಸಜ್ಜಿತ ವಾಹನಗಳು 9 ವರ್ಷಗಳಲ್ಲಿ ಕ್ರಮವಾಗಿ ಸುಮಾರು 6,000 ಕಿ.ಮೀ., 9,500 ಕಿ.ಮೀ. ಮತ್ತು 15,000 ಕಿ.ಮೀ. ಕ್ರಮಿಸಿವೆ.
bengaluru
ಚುನಾವಣೆ ಗೆಲ್ಲೋಕೆ ನನ್ನ ಹೆ*ಣ ಬೀಳಿಸೋಕು ಬಿಜೆಪಿಯವ್ರು ಸಿದ್ಧರಿದ್ದಾರೆ; ಜೀವ ಬೆದರಿಕೆ ಪತ್ರ ಹಿಡಿದು ಕಿಡಿಕಾರಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸದ್ಯ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆ*ದರಿಕೆ ಪತ್ರ ಬಂದಿದೆ. ಸ್ವತ: ಈ ಬಗ್ಗೆ ಪ್ರಿಯಾಂಕ ಖರ್ಗೆ ಅವರೇ ಹೇಳಿದ್ದಾರೆ.
ಎನ್ ಕೌಂಟರ್ ಬೆ*ದರಿಕೆ:
ಭಾರತೀಯ ಜನತಾ ಪಾರ್ಟಿಯವರು ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆ*ಣ ಬೀಳಿಸಿಯಾದರೂ ಚುನಾವಣೆ ಗೆಲ್ಲುವ ಯೋಜನೆಯಲ್ಲಿದ್ದಾರೆ. ಅಲ್ಲದೆ, ತನಗೆ ಮತ್ತೊಂದು ಜೀವ ಬೆ*ದರಿಕೆ ಪತ್ರ ಬಂದಿದೆ. ಅದರಲ್ಲಿ ತನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆ*ದರಿಕೆ ಹಾಕಲಾಗಿದೆ. ಫಿನ್ಲ್ಯಾಂಡ್ನಿಂದ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಗೆ ಬಂದಿರುವ ಜೀವ ಬೆದರಿಕೆ ಪತ್ರ ಓದಿದರು.
“ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗೂ, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂ*ಟರ್ ಮಾಡುವುದು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದರು.
ಬೆದರಿಕೆ ಸಂಬಂಧ ಮಾರ್ಚ್ 13 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ. ಹೆದರಿಸುವುದು ಅಥವಾ ಬೆದರಿಸಲು ಬಂದರೆ ಅದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.