ಉಡುಪಿಯಲ್ಲಿ ದೋಣಿ ದುರಂತ: ಮೂವರು ಮೀನುಗಾರರು ಸಾವು, ಓರ್ವ ನಾಪತ್ತೆ..!
ಉಡುಪಿ : ಉಡುಪಿಯ ಕಿರಿಮಂಜೇಶ್ವರ ಸಮೀಪದ ಕೊಡೇರಿ ಸಮುದ್ರದಲ್ಲಿ ನಾಡದೋಣಿ ದುರಂತ ಸಂಭವಿಸಿದೆ. ಬಂಡೆಗೆ ನಾಡದೋಣಿ ಹೊಡೆದಿದ್ದು, ಈ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಓರ್ವ ಮೀನುಗಾರ ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
11 ಮಂದಿ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದು, 7 ಮಂದಿಯನ್ನು ರಕ್ಷಿಸಲಾಗಿದೆ. ಅಲೆಗಳ ತೀವ್ರತೆಗೆ ನಾಡದೋಣಿ ಬಂಡೆಗೆ ಹೊಡೆದಿದ್ದು, ಸಾಗರಶ್ರೀ ಹೆಸರಿನ ನಾಡದೋಣಿಗೆ ಸಂಪೂರ್ಣ ಹಾನಿಯಾಗಿದೆ.
ಮೀನುಗಾರಿಕೆ ನಡೆಸಿ ನಾಡದೋಣಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ದೋಣಿಯಲ್ಲಿ ೧೧ ಜನ ಮೀನುಗಾರರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅದರಲ್ಲಿ ಏಳು ಮಂದಿ ಪಾರಾಗಿ ಬಂದಿದ್ದಾರೆ, ಪಾರಾಗಿ ಬಂದವರು ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದು ಮನೆಗೆ ಹಿಂದುರುಗಿದ್ದಾರೆ.ಉಳಿದ ನಾಲ್ವರರಲ್ಲಿ ಎರಡು ಮಂದಿ ಮೀನುಗಾರರು, ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಬಲೆಯಲ್ಲಿ ಸಿಲುಕಿದವರನ್ನು ಮೇಲಕ್ಕೆ ತರಲು ಕಾರ್ಯಚರಣೆ ನಡೆಯುತ್ತಿದೆ.
ಉಳಿದ ಇಬ್ಬರಿಗಾಗಿಯೂ ಕಾರ್ಯಚರಣೆ ಮುಂದುವರಿದಿದ್ದು, ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಕಾರ್ಯಚರಣೆ ತೊಡಕಾಗುತ್ತಿದೆ ಎನ್ನಲಾಗಿದೆ.
ವೃತ್ತ ನಿರಿಕ್ಷಕ ಸುರೇಶ್ ನಾಯಕ್ ಮತ್ತು ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಅವರುಗಳ ನೇತ್ರತ್ವದಲ್ಲಿ ಕಾರ್ಯಾಚರಣೆ ಮುಂದುವೆರೆದಿದೆ.