BANTWAL
ತುಳುನಾಡ ಜನಪದ ಕ್ರೀಡೆ ಕಂಬಳಕ್ಕೆ ‘ವಾಮಾಚಾರ’ದ ಕರಿಛಾಯೆ..!
ಮಂಗಳೂರು: ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳ. ಕಂಬಳ ಇಂದು ಕೇವಲ ಕ್ರೀಡೆಯಾಗಿರದೆ ಕೆಲವರ ಪ್ರತಿಷ್ಠೆಯೂ ಹೌದು. ಪ್ರೀತಿಯಿಂದ ಸಾಕುವ ಕಂಬಳ ಕೋಣಗಳು ಮಾಲೀಕನಿಗೆ ಪಂಚ ಪ್ರಾಣ ಕೂಡ ಹೌದು.
ಆದರೆ ಇದೀಗ ಕಂಬಳ ಕೋಣಗಳ ಮೇಲೂ ಕರಿಛಾಯೆ ಆವರಿಸಿದೆ. ಕಿರಾತಕರು ಅನ್ಯರ ಕೋಣಗಳು ಗೆಲ್ಲಬಾರದು ಎನ್ನುವ ಕಾರಣಕ್ಕೆ ಪದಕ ಪಡೆಯುವ ಕೋಣಗಳಿಗೆ ಮಾಟಮಂತ್ರ ಮಾಡುವ ಮೂಲಕ ಹೀನ ಕೃತ್ಯಕ್ಕೂ ಕೈ ಹಾಕುತ್ತಿದ್ದಾರೆ.
ಇಂತಹುದೇ ಒಂದು ಘಟನೆ ಕಂಬಳದ ತವರೂರು ಈ ತುಳುನಾಡಿದ ಮಣ್ಣಿನಲ್ಲಿ ನಡೆದಿದೆ ಎನ್ನಲಾಗಿದೆ. ಮಾತುಬಾರದ ಮೂಕ ಪ್ರಾಣಿಯೊಂದು ಇದೀಗ ಕಂಬಳ ಓಟದಲ್ಲಿ ಓಡಾಡುವುದು ಬಿಡಿ, ಎದ್ದು ನಿಲ್ಲಲಾಗದ ದಯನೀಯ ಸ್ಥಿತಿಗೆ ತಲುಪಿದೆ.
ಮಂಗಳೂರು ನಗರದ ಪದವು ಕಾನಡ್ಕ ಡೋಲ್ಫಿ ಡಿ ಸೋಜಾ ಮತ್ತು ಡೆರಿಕ್ ಡಿ ಸೋಜಾ ಅವರ ಮಾಲಕತ್ವದ ದೂಜೆ ಮತ್ತು ಎರ್ಮುಂಡೆ ಕಂಬಳದ ಕರೆಗೆ ಇಳಿದರೆ ಪ್ರಶಸ್ತಿ ಗ್ಯಾರಂಟಿ. ಕಂಬಳ ಗದ್ದೆಯಲ್ಲಿ ಓಡುವ ಈ ಕೋಣಗಳನ್ನು ನೋಡುವುದೇ ಒಂದು ಚೆಂದ.
ಈ ಕೋಣಗಳು ಕಂಬಳದ ಹಗ್ಗ ಓಟದ ಹಿರಿಯ ವಿಭಾಗದಲ್ಲಿ ಸಾಧನೆ ಮಾಡಿದೆ. ದೂಜ ನೇಗಿಲು ವಿಭಾಗದಲ್ಲೂ ಪ್ರಶಸ್ತಿಗಳನ್ನು ನಿರಂತರ ಬಾಚಿದೆ.
ಆದರೆ ಅದ್ಯಾರೋ ಅಸೂಯೆಯಿಂದ ಕೂಡಿದ ಕಿರಾತಕರು ಈ ಕೋಣಗಳು ಸ್ಪರ್ಧೆಯಲ್ಲಿ ಭಾವಹಿಸಬಾರದು ಎಂದು ತಮ್ಮ ನೀಚ ಬುದ್ದಿ ತೋರಿಸಿದ್ದಾರೆ.
ಎರಡೂ ಕೋಣಗಳು ಮಲಗಿದ್ದಲ್ಲಿಂದ ಏದ್ದೇಳಲಾಗದ ಸ್ಥಿತಿಯಲ್ಲಿದ್ದು, ಅದರಲ್ಲಿ ದೂಜೆ ಕಳೆದ ಕೆಲ ಸಮಯದಿಂದ ಮಲಗಿದಲ್ಲೇ ಇದ್ದು ಎದ್ದೇಳದ ಸ್ಥಿತಿಯಲ್ಲಿದ್ದಾನೆ. ಈ ದೃಶ್ಯ ನೋಡಿದ್ರೆ ಕರುಳು ಚುರ್ ಅನ್ನುತ್ತೆ. ಯಾರೋ ಈ ಕೋಣಕ್ಕೆ ವಾಮಾಚಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಪೂರಕ ಎಂಬಂತೆ ಕೊಟ್ಟಿಗೆಯಲ್ಲಿ ನೂಲು, ಮದ್ದು ಹುಡಿ, ತಗಡು, ಮತ್ತಿತರ ಸಾಮಗ್ರಿಗಳು ಪತ್ತೆಯಾಗಿವೆ. ಬಾಯಿಬಾರದ ಇಂತಹ ಮೂಕ ಪ್ರಾಣಿ ಸ್ಪರ್ಧೆಯಲ್ಲಿ ಭಾಗವಹಿಸಬಾರದು ಎನ್ನುವ ಒಂದೇ ಕಾರಣಕ್ಕೆ ಇದನ್ನು ಮಾಡಿದ್ದಾರೆಂದು ಕಣ್ಣೀರಿಡುತ್ತಿದ್ದಾರೆ ಮಾಲಕ ಡೋಲ್ಫಿ ಡಿ ಸೋಜಾ.
ತಮ್ಮ ಭಾಗವಹಿಸುವಿಕೆಯ 10ನೇ ವರ್ಷದ ಓಟದಲ್ಲಿ ದೂಜೆ, ಎರ್ಮುಡೆ ಕೋಣಗಳು ಭಾಗವಹಿಸಿಲ್ಲ. ಈ ಎರಡರಲ್ಲಿ ದೂಜೆ ಸದ್ಯ ಎದ್ದು ನಿಲ್ಲಲಾಗದ ಸ್ಥಿತಿಯಲ್ಲಿದೆ. ಪಶು ವೈದ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡಿದ್ದಾರೆ. ಇನ್ನೂ ಕೂಡಾ ವಾಂತಿಬೇಧಿ ನಿಂತಿಲ್ಲ.
ಸದ್ಯಕ್ಕೆ ಧರ್ಮಗುರುಗಳು ಬಂದು ಪ್ರಾರ್ಥನೆ ಮಾಡಿದ್ದು ಮಾಲೀಕರಿಗೆ ಧೈರ್ಯ ತುಂಬಿದ್ದಾರೆ. ಇದಲ್ಲದೆ ಗಂಟು, ಸೀಲು ಮತ್ತು ಮುನ್ನಾ ಎನ್ನುವ ಕೋಣಗಳು ಇವರ ಬಳಿ ಇವೆ.
ಸದ್ಯ ತಮ್ಮ ಕೋಣಗಳಿಗೆ ಆದ ಸ್ಥಿತಿ ಕಂಡು ಮಾಲಕರು ಮರುಕ ಪಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನಾವು ಕಂಬಳ ಕೂಟದಲ್ಲಿ ಇದ್ದೇವೆ. ಆದರೆ ಇದೇ ಮೊದಲ ಬಾರಿ ಈ ಸ್ಥಿತಿ ಆಗಿದೆ. ಈ ಬಗ್ಗೆ ಯಾರ ವಿರುದ್ಧವೂ ಪೊಲೀಸರಿಗೆ ದೂರು ನೀಡಿಲ್ಲ.
ತನ್ನ ಸ್ವಂತ ಮಕ್ಕಳಿಗಿಂತ ಜಾಸ್ತಿ ಪ್ರೀತಿಯಿಂದ ಸಾಕಿದ ಈ ಮೂಕ ಪ್ರಾಣಿಗಳಿಗೆ ಅನ್ಯಾಯ ಮಾಡಿದವರಿಗೆ ತಕ್ಕ ಶಿಕ್ಷೆ ಆಗೇ ಆಗುತ್ತದೆಎನ್ನುವುದು ಅವರ ಅಂತರಾಳದ ಮಾತು.
ದೂಜೆ ಒಂದು ವಿಶೇಷ ರೀತಿ ಕೋಣವಾಗಿದ್ದು, ಅದು ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸಿತೆಂದರೆ ಅದಕ್ಕೆ ಗೊತ್ತಾಗುತ್ತದೆ. ಬ್ಯಾಂಡು ವಾದ್ಯ ಬಾರಿಸಿದಾಗ ತನ್ನ ತಲೆ ಅಲ್ಲಾಡಿಸಿ ತನ್ನ ಖುಷಿಯನ್ನು ಮಾಲಕರಿಗೆ ವ್ಯಕ್ತಪಡಿಸುತ್ತದೆ. ಆ ಸಂಭ್ರಮವನ್ನು ನೋಡುವುದೇ ಒಂದು ಖುಶಿ ಅಂತಾರೆ ಕಂಬಳ ಪ್ರೇಮಿಗಳು.
ಕೊಟ್ಟಿಗೆಯಲ್ಲಿ ಸಿಕ್ಕಿರುವ ಸಾಮಗ್ರಿಗಳು
ಗೆಲ್ಲುವ ತಾಕತ್ತು ಇದ್ದರೆ, ಕಂಬಳ ಗದ್ದೆಯಲ್ಲಿ ಸ್ಪರ್ಧೆ ಮಾಡಿ ಗೆಲ್ಲಬೇಕು. ಅದು ಬಿಟ್ಟು ವಾಮಾಚಾರದಂತಹ ಅಡ್ಡದಾರಿ ಹಿಡಿದು ಗೆಲ್ಲುವ ಪ್ರಯತ್ನ ಮಾಡುವುದು ನಿಜವಾಗಿಯೂ ಹೇಡಿಗಳ ಲಕ್ಷಣ.
ಇಂತಹ ಹೇಡಿಗಳಿಗೆ ತುಳುನಾಡಿನ ಸತ್ಯ ಧರ್ಮದ ದೈವ ದೇವರುಗಳು ಎಂದಿಗೂ ಒಳ್ಳೆಯದು ಮಾಡಲ್ಲ. ಒಂದಲ್ಲ ಒಂದು ದಿನ ಅದಕ್ಕೆ ಪ್ರತಿಫಲ ದೇವರು ಕೊಟ್ಟೇ ಕೊಡುತ್ತಾನೆ.
ದೂಜ- ಎರ್ಮುಂಡೆ ಮತ್ತೆ ಆರೋಗ್ಯ ಪಡೆದು ಕಂಬಳ ಕೂಟದಲ್ಲಿ ತನ್ನ ಗತ್ತು ಗೈರತ್ತಿನ ಓಟ ಮಾಡಿ ಇನ್ನೂ ಹತ್ತಾರು ಪದಕಗಳನ್ನು ಬಾಚಲಿ ಎನ್ನುವುದೇ ನಮ್ಮ ಹಾರೈಕೆ.
BANTWAL
ಪುತ್ತೂರು ಜಾತ್ರೆಯಿಂದ ಹಿಂದಿರುಗುವ ವೇಳೆ ಜವರಾಯನ ಅಟ್ಟಹಾಸ; ಜೀಪ್ ಡಿಕ್ಕಿ; ಬೈಕ್ ಸವಾರ ಸಾ*ವು
ಪುತ್ತೂರು : ಜೀಪೊಂದು ಬೈಕ್ ಗೆ ಡಿ*ಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃ*ತಪಟ್ಟು, ಅವರ ಇಬ್ಬರು ಮಕ್ಕಳು ಗಂಭೀ*ರ ಗಾ*ಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯಲ್ಲಿನ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ (48) ಮೃ*ತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀ*ರ ಗಾಯಗೊಂಡಿದ್ದು, ಗಾ*ಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಅವರು ಚಲಾಯಿಸುತ್ತಿದ್ದ ಬೈಕ್ ಗೆ ಡಿ*ಕ್ಕಿಯಾಗಿತ್ತು.
ಇದನ್ನೂ ಓದಿ : ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್
ಡಿ*ಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 50 ಮೀಟರ್ ದೂರದ ತನಕ ಬೈಕನ್ನು ಜೀಪ್ ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಅವರು ಸ್ಥಳದಲ್ಲಿಯೇ ಸಾ*ವನ್ನಪ್ಪಿದ್ದಾರೆ. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BANTWAL
ಗಂಡ ಹೆಂಡತಿಗೆ ನಾಲ್ವರಿಂದ ಹಲ್ಲೆ..!!
ಬಂಟ್ವಾಳ; ಅಪಘಾತದ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ಮಾಡಿರುವ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಎ.15ರಂದು ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ ಹಲ್ಲೆಗೊಳಗಾದವರು. ಹಲ್ಲೆಗೊಳಗಾದವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಜುನಾಥ್ ಅವರು ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಇವರ ಕಾರಿಗೆ ಹರಿಯಾಣ ಮೂಲದ ಕಾರೊಂದ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ಪ್ರಶ್ನಿಸಿದಕ್ಕೆ ಅಪಘಾತ ಎಸಗಿದ ಕಾರು ಮುಂದೆ ಹೋಗಿ ಕರಿಂಗಾಣ ಕ್ರಾಸ್ ಎಂಬಲ್ಲಿ ಅಡ್ಡವಾಗಿ ಇರಿಸಿ ಮಂಜುನಾಥ್ ಹಾಗೂ ಅವರ ಪತ್ನಿ ಪೂರ್ಣಿಮಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಪೂರ್ಣಿಮಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಹಲ್ಲೆಯಿಂದ ಮಂಜುನಾಥ್ ಅವರ ಕಣ್ಣಿಗೆ ಏಟಾಗಿದ್ದು, ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದ ಕೂಡಲೇ ಸಂಚಾರ ಪೊಲೀಸರು ಭೇಟಿ ನೀಡಿ ವಾಹನವನ್ನು ಹಾಗೂ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಭಜರಂಗದಳ, ವಿಶ್ವಹಿಂದೂಪರಿಷತ್ ಕಲ್ಲಡ್ಕ ಪ್ರಖಂಡ ಖಂಡನೆ ವ್ಯಕ್ತಪಡಿಸಿದ್ದಾರೆ.
BANTWAL
ಹಿಂದೂ ಸಂಘಟನೆಯ ಮುಖಂಡನಿಗೆ ಸ್ನೇಹಿತನಿಂದಲೆ ಚೂ*ರಿ ಇರಿತ
ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತನೇ ಚೂ*ರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ಭಾನುವಾರ(ಎ.14) ರಾತ್ರಿ ನಡೆದಿದೆ.
ಹಿಂದೂ ಯುವಸೇನೆಯ ಮುಖಂಡ ಉದ್ಯಮಿಯಾಗಿರುವ ಪುಷ್ಪರಾಜ್ ಎಂಬವರಿಗೆ ಜಕ್ರಿಬೆಟ್ಟು ಎಂಬಲ್ಲಿ ಚೂ*ರಿ ಇರಿತವಾಗಿದೆ. ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ರಿಕ್ಷಾದಲ್ಲಿ ಜತೆಯಾಗಿ ತೆರಳುತ್ತಿದ್ದಾಗಲೇ ಸ್ನೇಹಿತ ರವಿ ಎಂಬಾತ ಚೂ*ರಿಯಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪುಷ್ಪರಾಜ್ ರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ರವಿ ಚೂ*ರಿ ಇರಿದು ಪರಾರಿಯಾಗಿದ್ದಾನೆ. ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.