BELTHANGADY
ಬೆಳ್ತಂಗಡಿ : ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವೀಡಿಯೊ ವೈರಲ್ ಮಾಡುವ ಬೆದರಿಕೆ- ವಿದ್ಯಾರ್ಥಿಯಿಂದ ಆತ್ಮಹತ್ಯೆಗೆ ಯತ್ನ..!
ಬೆಳ್ತಂಗಡಿ : ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೈಯುಕ್ತಿಕ ವೀಡಿಯೋವನ್ನು ವೈರಲ್ ಮಾಡುವುದಾಗಿ ವ್ಯಕ್ತಿಯೋರ್ವನ ಬೆದರಿಸಿದ್ದರಿಂದ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಳ್ತಂಗಡಿಯ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.
ಹರ್ಷಿತ್ ರಿಗೆ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಇವರು ಚಾಟ್ ಮಾಡುತ್ತಿದ್ದಲ್ಲದೆ ವೀಡಿಯೋಕಾಲ್ ಮಾಡಿ ಮಾತನಾಡುತ್ತಿದ್ದರೆನ್ನಲಾಗಿದೆ.
ಈ ನಡುವೆ ಅಪರಿಚಿತ ತನ್ನ ಬಳಿ ನಿನ್ನ ವೈಯುಕ್ತಿಕ ವೀಡಿಯೋ ಇದೆ, ಹಣ ನೀಡದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.
ಆದರೆ ಹಣ ನೀಡಲು ಸಾಧ್ಯವಾಗದ ವಿದ್ಯಾರ್ಥಿ ಭಯಗೊಂಡು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮನೆಯವರು ಇದನ್ನು ಗಮನಿಸಿದ್ದು ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
BELTHANGADY
ಸೌದೆ ಒಡೆಯಲೂ ಬಂತು ಯಂತ್ರ… ಹೇಗಿದೆ ನೋಡಿ..!
ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ಎಲ್ಲಾ ಕೆಲಸಗಳೂ ಯಂತ್ರದ ಮೂಲಕವೇ ನಡೆಯುತ್ತಿದೆ. ಮನೆಯಲ್ಲಿ ನೆಲ ಒರಸಲು ಮಿಷಿನ್, ಅಡುಗೆ ಮಾಡಲು ಮಿಷಿನ್ ಹಾಗೆಯೇ ವಾಷಿಂಗ್ ಮಿಷಿನ್ನಲ್ಲಿ ಬಟ್ಟೆ ಒಗೆದರೂ ಅದನ್ನು ಆರಿಸಲೂ ಒಂದು ಮಿಷಿನ್ ಬಂದಿದೆ. ಹೀಗೆ ಪ್ರತಿ ಕೆಲಸಕ್ಕೂ ಜನರು ಯಂತ್ರಗಳನ್ನು ಅವಲಂಭಿಸಿದ್ದಾರೆ. ಹಿಂದೆ ಮರ ಕಡಿಯಲೂ ಜನರೇ ಬೇಕಿತ್ತು. ಆದರೆ ಆ ಜಾಗಕ್ಕೂ ಮಿಷಿನ್ ಬಂತು. ಈಗ ಕಟ್ಟಿಗೆ ಒಡೆಯಲೂ ಮಿಷಿನ್ ಬಂದಿದೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೇ ಬೇಕಾದ ಸೈಝ್ಗೆ ಕಟ್ಟಿಗೆಯನ್ನು ಒಡೆಯಲು ವಿಶೇಷ ರೀತಿಯ ಯಂತ್ರವೊಂದು ಬಂದಿದೆ. ಈಗ ಬೇಸಿಗೆಯ ಬಿಸಿ ಏರಿದೆ. ಆದರೆ ನಾಳೆಯ ದಿನ ಮಳೆ ಬರಬಹುದು. ಆಗ ಸ್ನಾನ ಮಾಡಲು ನೀರು ಕಾಯಿಸಲು, ಅಡುಗೆಗೆ ಕಟ್ಟಿಗೆಯ ಉಪಯೋಗ ಆಗುತ್ತದೆ ಎಂದು ಜನರು ಈಗಲೇ ಅದನ್ನು ಸಂಗ್ರಹಿಸಿಡುತ್ತಾರೆ. ಇನ್ನು ಬೇಸಿಗೆಯಲ್ಲಿ ಸೋಲಾರ್ ಬಿಸಿ ಆದರೂ ಮಳೆಗಾಲದಲ್ಲಿ ಅದರ ಕೆಲಸ ಕಮ್ಮಿ. ಆಗ ಜನರು ಕಟ್ಟಿಗೆಗಾಗಿಯೇ ಅವಲಂಬಿತರಾಗುತ್ತಾರೆ. ಈಗ ಸೌದೆ ಒಡೆಯುವ ಕೆಲಸ ಯಂತ್ರಗಳೇ ಮಾಡುತ್ತಿದೆ. ಈ ಯಂತ್ರ ಜನರು ಪರಿಶ್ರಮಕ್ಕೆ ಬ್ರೇಕ್ ಹಾಕಿದ್ದು, ಕಷ್ಟದ ಕೆಲಸ ಸುಲಭ ಮಾಡುತ್ತಿದೆ.
ಈ ಮಿಷಿನ್ನ ಬೆಲೆ 2.5 ಲಕ್ಷ ರೂಪಾಯಿ. ಬೆಳ್ತಂಗಡಿ ತಾಲೂಕಿನ ಸವಣಾಲಿನ ಕೇಶವ ಗೌಡ ಎನ್ನುವವರು ಇದನ್ನು ತಮಿಳುನಾಡಿನಿಂದ ತರಿಸಿದ್ದಾರೆ. ಇದು ಪೆಟ್ರೋಲ್ ಚಾಲಿತ ಯಂತ್ರವಾಗಿದ್ದು, ಸಣ್ಣ ಕಟ್ಟಿಗೆಯಿಂದ ಹಿಡಿದು ದೊಡ್ಡ ಕಟ್ಟಿಗೆಯವರೆಗೆ ನಮಗೆ ಬೇಕಾದ ಗಾತ್ರಕ್ಕೆ ಈ ಯಂತ್ರದಲ್ಲಿ ತುಂಡು ಮಾಡಬಹುದು.
ಇದನ್ನೂ ಓದಿ : ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಭಾಗಿ!?
ಯಂತ್ರ ಚಾಲನೆಗೊಂಡಂತೆ ಚೂಪಾದ ಕೊಡಲಿಯ ಮೊನೆಯೊಂದು ಮೇಲಿನಿಂದ ಕೆಳಗೆ ಬರುತ್ತದೆ. ಇದು ಕಟ್ಟಿಗೆಯನ್ನು ಕ್ಷಣ ಮಾತ್ರದಲ್ಲಿ ಸೀಳಿ ಹಾಕುತ್ತದೆ. ಈ ಕೆಲಸಕ್ಕೆ ಇಬ್ಬರು ಇದ್ದಾರೆ.
ಜನರ ಶ್ರಮದಿಂದ ದಿನಗಟ್ಟಲೇ ಆಗುವ ಕೆಲಸ ಈ ಯಂತ್ರದ ಸಹಾಯದಿಂದ ಒಂದೆರಡು ಗಂಟೆಗಳಲ್ಲಿ ಆಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಕಟ್ಟಿಗೆ ಒಡೆಯಲು ಈಗ ಕಾರ್ಮಿಕರು ಸಿಗುತ್ತಿಲ್ಲ. ಆದ್ದರಿಂದ, ಈ ಯಂತ್ರ ಜನರ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎನ್ನುವುದು ಜನರ ಅಭಿಪ್ರಾಯ.
BELTHANGADY
ಕಾಡಾನೆ ಮುಂದೆ ರೈಡಿಂಗ್..! ಸ್ವಲ್ಪದ್ರಲ್ಲಿ ಉಳಿಯಿತು ಜೀವ..!
ಮಂಗಳೂರು : ಚಾರ್ಮಾಡಿ ಘಾಟ್ನಲ್ಲಿ ಒಂಟಿ ಸಲಗ ಓಡಾಡುತ್ತಿದ್ದು, ಎಪ್ರಿಲ್ 8 ಮದ್ಯಾಹ್ನ 12 ಸುಮಾರಿಗೆ ರಸ್ತೆಯಲ್ಲಿ ಕಾಣ ಸಿಕ್ಕಿದೆ. ಘಾಟ್ನ 9 ನೇ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಆನೆಯನ್ನು ಕಂಡ ಪ್ರಯಾಣಿಕರು ವಾಹನವನ್ನು ನಿಲ್ಲಿಸಿದ್ದಾರೆ. ಇದೇ ವೇಳೆ ಬೈಕ್ ಸವಾರನೊಬ್ಬ ಆನೆಯನ್ನು ಗಮನಿಸದೆ ಆನೆಯ ಎದುರಿನಿಂದಲೇ ಪಾಸ್ ಆಗಿದ್ದಾರೆ. ಅದೃಷ್ಟವಶಾತ್ ಬೈಕ್ ಪಾಸ್ ಆದ ಮೇಲೆ ಆನೆ ರಸ್ತೆಯಲ್ಲಿ ನಡೆದುಕೊಂಡು ಹೋಗಿದೆ.
ಆನೆ ಬಾಂಜಾರು ಮಲೆ ಕಡೆಯಿಂದ ಇಳಿದು ಬಂದಿರುವ ಸಾಧ್ಯತೆ ಇದೆ. ಇತ್ತೀಚೆಗೆ ಇದೇ ಆನೆ ಹಲವೆಡೆ ಓಡಾಡಿದ್ದು, ಕೃಷಿ ಹಾನಿ ಮಾಡಿದ್ದಾಗಿ ಜನರು ಮಾಹಿತಿ ನೀಡಿದ್ದಾರೆ. ನೀರನ್ನು ಹುಡುಕಿಕೊಂಡು ಆನೆ ಅಲೆದಾಡುತ್ತಿದೆ ಅನ್ನೋದು ಇನ್ನೊಂದಷ್ಟು ಜನರ ಅಭಿಪ್ರಾಯ. ಆದ್ರೆ ಈ ಆನೆಯಂತೂ ಕೆಲ ದಿನಗಳಿಂದ ಅಡ್ಡಾಡುತ್ತಿರುವುದಂತೂ ನಿಜ.
ಸದ್ಯ ಚಾರ್ಮಾಡಿ ಘಾಟ್ನ ತಿರುವಿನ ರಸ್ತೆಯಲ್ಲಿ ಎದುರಿನಿಂದ ಬರೋ ವಾಹನಗಳನ್ನ ಗಮನಿಸೋದೇ ಕಷ್ಟ. ಅಂತಹದ್ರಲ್ಲಿ ಆನೆಯೊಂದು ರಸ್ತೆಯ ಸೈಡ್ನಲ್ಲಿ ನಿಂತುಕೊಂಡಿರೋದನ್ನ ಯಾರೂ ಗಮನಿಸಲು ಸಾದ್ಯವಿಲ್ಲ . ಆದರೆ ಮೊದಲು ಆನೆಯನ್ನು ಕಂಡವರು ತಕ್ಷಣ ವಾಹನಗಳನ್ನು ನಿಲ್ಲಿಸಿ ಆನೆ ರಸ್ತೆ ದಾಟುವ ತನಕ ಕಾದಿದ್ದಾರೆ. ಬೈಕ್ ಸವಾರನಿಗೂ ಕೂಗಿ ಹೇಳಿದ್ರೂ ಕೇಳಿಸಿಕೊಳ್ಳದೆ ಆನೆಯ ಮುಂದೆಯೇ ಪಾಸ್ ಆಗಿ ಅಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.
BELTHANGADY
ವಿಷ ಉಣಿಸಿ ಮೂಕಪ್ರಾಣಿಗಳ ಹತ್ಯೆ*ಗೈದ ಪಾಪಿಗಳು..!!
ಬೆಳ್ತಂಗಡಿ: ಬೆಳ್ತಂಗಡಿ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಕಿಡಿಗೇಡಿಗಳು ವಿಷವಿಕ್ಕಿದ ಪರಿಣಾಮ ಸಾಕು ನಾಯಿಗಳು ಸೇರಿದಂತೆ 10ಕ್ಕಿಂತ ಅಧಿಕ ನಾಯಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಮಾ.30 ರಂದು ರಾತ್ರಿ ಯಾರೋ ಕಿಡಿಗೇಡಿಗಳು ರಸ್ತೆಯುದ್ದಕ್ಕೂ ಅಲ್ಲಲ್ಲಿ ಆಹಾರದಲ್ಲಿ ವಿಷ ಬೆರೆಸಿ ಎಸೆದು ಹೋಗಿದ್ದಾರೆ. ಆಹಾರವನ್ನು ಸೇವಿಸಿರುವ 10ಕ್ಕೂ ಅಧಿಕ ಸಾಕು ನಾಯಿಗಳು ಹಾಗೂ ಬೀದಿ ಬದಿ ನಾಯಿಗಳು ಸಾವನ್ನಪ್ಪಿವೆ.
ತಡರಾತ್ರಿ ಈಸ್ಟರ್ ಹಬ್ಬ ಮುಗಿಸಿ ಮನೆಗೆ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ, ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದಾಗ ಕೆಲ ಮನೆಗಳ ಅಂಗಳದಲ್ಲಿ ಕೂಡ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ಸಾವನ್ನಪ್ಪಿದ ನಾಯಿಗಳನ್ನು ಪಂಚಾಯತ್ ವತಿಯಿಂದ ಹೂಳುವ ವ್ಯವಸ್ಥೆ ಮಾಡಲಾಯಿತು.
- LATEST NEWS7 days ago
‘ಬಿಗ್ ಬಾಸ್’ ಮತ್ತೆ ಆರಂಭ.. ಇಲ್ಲಿದೆ ಸ್ಪರ್ಧಿಗಳ ಲಿಸ್ಟ್..!
- DAKSHINA KANNADA7 days ago
ಬತ್ತೇರಿ ಹೆಸರು ‘ಗಣಪತಿ ವೆಟ್ಟಂ’… ಟೀಕೆಗೆ ಗುರಿಯಾದ ಸುರೇಂದ್ರನ್ ಹೇಳಿಕೆ.
- LATEST NEWS7 days ago
ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೂಪರ್ ಹಿಟ್ ಧಾರಾವಾಹಿ ‘ಕೃಷ್ಣ ರುಕ್ಮಿಣಿ’ ನಟಿ
- chikkamagaluru6 days ago
ರಾಜ್ಯದ ಹಲವೆಡೆ ಮಳೆಯ ಸಿಂಚನ.. ಸಿಡಿಲಿನ ಅಬ್ಬರಕ್ಕೆ ಇಬ್ಬರ ಬ*ಲಿ..!!