Connect with us

BELTHANGADY

ಬೆಳ್ತಂಗಡಿ : ಮರೋಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ..!

Published

on

ಬೆಳ್ತಂಗಡಿ  : ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ಮರೋಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಇದರ ನೂತನ ಕಟ್ಟಡ ಕ್ಷೀರ ನಂದಿನಿಯ ಉದ್ಘಾಟನಾ ಸಮಾರಂಭ ಇಂದು ವಿಜೃಂಭಣೆಯಿಂದ ನೆರವೇರಿತು.

ನೂತನ ಕಟ್ಟಡ ಹಾಗೂ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ನೆರವೇರಿಸಿ ಶುಭ ಹಾರೈಸಿದರು ..
ಸಭಭಾವನ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ  ಕೆ. ಪಿ ಸುಚರಿತ ಶೆಟ್ಟಿಯವರು ನೆರವೇರಿಸಿ ಶುಭಹಾರೈಸಿದರು
ಕಚೇರಿ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪಾಧ್ಯಕ್ಷರಾದ  ಜಯರಾಮ್ ರೈ ನೆರವೇರಿಸಿ ಶುಭ ಹಾರೈಸಿದರು

ನಾಮ ಫಲಕ ಉದ್ಘಾಟನೆಯನ್ನು ಕಾಪು ದಿವಾಕರ ಶೆಟ್ಟಿ ನಿರ್ದೇಶಕರು ದ. ಕ ಹಾಲು ಒಕ್ಕೂಟ ಮಂಗಳೂರು, ನಿರ್ದೇಶಕರು ಕ. ಹಾ. ಮ ಬೆಂಗಳೂರು ನೆರೆವೇರಿಸಿ ಶುಭ ಹಾರೈಸಿದರು

ಪಶು ಆಹಾರ ಗೋದಾಮು ಉದ್ಘಾಟನೆ ಯನ್ನು  ನಿರಂಜನ ಬಾವಂತಬೆಟ್ಟು ನಿರ್ದೇಶಕರು ದ. ಕ ಹಾಲು ಒಕ್ಕೂಟ ನೆರೆವೇರಿಸಿ ಶುಭಹಾರೈಸಿದರು..

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಹರೀಶ್ ಪೂಂಜ ರವರು ಮಾತನಾಡಿ ಕೊರೊನಾ ದಂತಹ ಕಠಿಣ ಸಂಧರ್ಭದಲ್ಲಿಯೂ ಕೆ ಎಂ ಎಫ್ ನಂದಿನಿಯ ಕೆಲಸ ಕಾರ್ಯಗಳು ಶ್ಲಾಘನೀಯ.. ಹೈನುಗಾರರ ಬದುಕನ್ನು ಹೈರಾಣಾಗಲು ಬಿಡದೆ ಕಠಿಣ ಸಂದರ್ಭದಲ್ಲಿಯೂ ಪ್ರೋತ್ಸಾಹ ನೀಡಿ ಆತ್ಮ ಸ್ಟೈರ್ಯವನ್ನು ತುಂಬಿದೆ.. ಹಾಗೆಯೇ ನಾವೆಲ್ಲರೂ ಕೆ ಎಂ ಎಫ್ ಗೆ ಬೆಂಬಲಿಸುವ ನಿಟ್ಟಿನಲ್ಲಿ ಅದರ ಎಲ್ಲಾ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದರು..

ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ರವರು ಮಾತನಾಡಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮರೋಡಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಕ್ಷೀರ ನಂದಿನಿ ಬಹು ದೊಡ್ಡ ಮೈಲುಗಲ್ಲು… ಗ್ರಾಮದ ಮಹಿಳೆಯರ ಸ್ವವಲಂಭಿ ಕನಸಿಗೆ ಸಾಕ್ಷಾರತ ಭಾವವನ್ನು ನೀಡಿದೆ..
ಸರಕಾರದ ಭಾಗವಾಗಿ ಇಂತಹ ಸಾಧನೆಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲಾ ಜನಪ್ರತಿನಿಧಿಗಳ ಕರ್ತವ್ಯ ಇದರಲ್ಲಿ ನಮ್ಮ ವಿಶೇಷ ಸಾಧನೆ ಏನೂ ಇಲ್ಲಾ.. ಆದರೆ ಇಂತಹ ಪ್ರಯತ್ನಕ್ಕೆ ನಾಂದಿ ಹಾಡಿ ಯಶಸ್ವಿಯಾದ ಮರೋಡಿ ಗ್ರಾಮದ ಸಹಕಾರ ಸಂಘದ ಮಹಿಳೆಯರಿಗೆ ಹಾಗೂ ಗ್ರಾಮಸ್ಥರಿಗೆ ಶುಭವಾಗಲಿ ಎಂದರು.

ಸಭಾಕಾರ್ಯಕ್ರಮದಲ್ಲಿ ಶ್ರೀಮತಿ ಸವಿತಾ ಏನ್ ಶೆಟ್ಟಿ,  ಡಿ ಆಶೋಕ್, ಮರೋಡಿ ಗ್ರಾಂ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಶ್ರೀ ಜೈನ್,ತಾಲೂಕ್ ಪಂಚಾಯತ್ ಸದಸ್ಯೆ ರೂಪಲತಾ, ಪೆರಾಡಿ ಸಿ ಎ ಬ್ಯಾಂಕ್ ಅಧ್ಯಕ್ಷ  ಸತೀಶ್ ಕೆ,ಹಾಗೂ ಮ್ಯಾನೇಜರ್ ಲತಿಫ್, ಪೆರಾಡಿ ಸಿ ಎ ಬ್ಯಾಂಕ್ ನ ನಿರ್ದೇಶಕರಾದ ಧರ್ನಪ್ಪ ಪೂಜಾರಿ ,ಮರೋಡಿ ಗ್ರಾಂ ಪಂಚಾಯತ್ ಸದಸ್ಯರಾದ
ಅಶೋಕ್ ಕೋಟ್ಯಾನ್, ಶುಭರಾಜ್ ಹೆಗ್ಡೆ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ  ರಕ್ಷಿತ್ ಶಿವರಾಮ್,ಶ್ರೀಮತಿ ತ್ರಿವೇಣಿ ರಾವ್, ಡಾ. ಚಂದ್ರಶೇಖರ್ ಭಟ್, ಜಯರಾಜ್ ಕಬಾಯ್ಯ, , ಶ್ರೀಮತಿ ಸುಚಿತ್ರ,ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಮುಖರಾದ ನಾರಾಯಣ್ ಪೂಜಾರಿ ಊಚ್ಚುರು, ನಿವೃತ್ತ ಶಿಕ್ಷಕರಾದ ಪದ್ಮರಾಜ್ ಜೈನ್, ವಿಜಯ್ ಬಂಗ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು,

ಇದೇ ಸಂದರ್ಭ  ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸಹೃದಯಿಗಳನ್ನು ಸನ್ಮಾನಿಸಿದರು.

BELTHANGADY

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ

Published

on

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಯುವ ವೇದಿಕೆ ಬೆಳ್ತಂಗಡಿ ಇದರ 2023-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ವಾಣಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷರಾಗಿ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿಯಾಗಿ ಸುರೇಶ್ ಕೌಡಂಗೆ, ಕೋಶಾಧಿಕಾರಿಯಾಗಿ ರಂಜಿತ್ ಕಳೆಂಜ, ಜೊತೆ ಕಾರ್ಯದರ್ಶಿಯಾಗಿ ತೀಕ್ಷಿತ್ ಕೆ.ಕಲ್ಬೆಟ್ಟು ದಿಡುಪೆ, ಉಪಾಧ್ಯಕ್ಷರುಗಳಾಗಿ ನಿತಿನ್ ಕಲ್ಮಂಜ ಮತ್ತು ಪ್ರಶಾಂತ್ ಅಂತರ ಕಡಿರುದ್ಯಾವರ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೋದ್ ದಿಡುಪೆ, ಕಾನೂನು ಸಲಹೆಗಾರರಾಗಿ ನವೀನ್ ಬಿ.ಕೆ.ಕಲ್ಮಂಜ, ಯಶವಂತ್ ಬನಂದೂರು ಮತ್ತು ಜಯಾನಂದ ಗೌಡ ಬೆಳ್ತಂಗಡಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯಶವಂತ ಗೌಡ ಪುದುವೆಟ್ಟು, ಮಂಜುನಾಥ ಗೌಡ ಚಾರ್ಮಾಡಿ, ವಿಕ್ರಮ್ ಧರ್ಮಸ್ಥಳ, ಸತೀಶ್ ಬೆಳಾಲು, ಪ್ರಸಾದ್ ಅಡಿಮಾರ್ ಚಾರ್ಮಾಡಿ, ಹೇಮಂತ್ ಕಳಿಯ, ದಿನೇಶ್ ದೇಂತ್ಯಾರು ಕೊಯ್ಯೂರು, ಪ್ರದೀಪ್ ನಾಗಾಜೆ ನಾವೂರು, ಭರತ್ ಗೌಡ ಪುದುವೆಟ್ಟು, ನಿತೇಶ್ ಬೆಳ್ತಂಗಡಿ, ಅಕ್ಷಯ್ ಕುಮಾರ್ ಮಾಚಾರ್, ಕರುಣಾಕರ ಗೌಡ ಉಜಿರೆ, ಗಿರೀಶ್ ನಿಡ್ಲೆ ಮತ್ತು ಕಿಶಾನ್ ಗೌಡ ಸವಣಾಲು ಇವರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ತಾಲೂಕು ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು ಉಪಸ್ಥಿತರಿದ್ದರು. ಯಶವಂತ್ ಬನಂದೂರು ಸ್ವಾಗತಿಸಿದರು.ಕಾರ್ಯದರ್ಶಿ ಸುರೇಶ್ ಕೌಡಂಗೆ ವಂದಿಸಿದರು.

Continue Reading

BELTHANGADY

ಖೋಟ ನೋಟು ಪ್ರಕರಣ: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ..!

Published

on

ಧರ್ಮಸ್ಥಳ: ಖೋಟ ನೋಟು ಪ್ರಕರಣದಲ್ಲಿ ಕಳೆದ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ ಕುಮಾ‌ರ್ ಎಂಬಾತನನ್ನು ಬೆಂಗಳೂರು ಗೊಲ್ಲಹಳ್ಳಿ ಬಸ್ಸು ತಂಗುದಾಣದ ಬಳಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಘಟನೆ ನಡೆದಿದೆ.

ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸುಮಾರು 4 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಆರೋಪಿ ಕೆಂಪೆರಾಜ್ ಎಂಬಾತನನ್ನು ಚಿಕ್ಕನಾಯಕನಹಳ್ಳಿ ತಾಲೂಕು ಮುಳಬಾಗಿಲು ಬಸ್ಸು ತಂಗುದಾಣದ ಬಳಿಯಿಂದ ಧರ್ಮಸ್ಥಳ ಠಾಣಾ ಪಿ.ಎಸ್.ಐ ಸಮರ್ಥ ಆರ್ ಗಾಣಿಗೇ‌ರ್, ಹೆಚ್ ಸಿ 607 ರಾಜೇಶ್ ಎನ್, ಪಿ.ಸಿ 2406 ವಿನಯ ಕುಮಾರ್ ರವರುಗಳ ತಂಡ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ.

Continue Reading

BELTHANGADY

ಅಯ್ಯಪ್ಪ ಸ್ವಾಮಿ ವೇಷ ಹಾಕಿಕೊಂಡು ಹಣ ವಸೂಲಿ- ಕಳ್ಳರನ್ನು ಹಿಡಿದ ಗ್ರಾಮಸ್ಥರು..!

Published

on

ಮಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಯ ವೇಷ ಹಾಕಿಕೊಂಡು ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡುತ್ತಿದ್ದ ಇಬ್ಬರು ಯುವಕರನ್ನು ಗ್ರಾಮಸ್ಥರು ಹಿಡಿದು ಪ್ರಶ್ನಿಸುತ್ತಿರುವ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ನಕಲಿ ಸ್ವಾಮಿಗಳ ಬಳಿ ಗುರುತು ಚೀಟಿ, ರಶೀದಿ ಪುಸ್ತಕ, ಫೋಟೊಗಳು, ಸರ್ಟಿಫಿಕೆಟ್‌ಗಳು. ಆಧಾರ್‌ ಕಾರ್ಡ್ ಪ್ರತಿಗಳು ಪತ್ತೆಯಾಗಿದ್ದು, ಅವೆಲ್ಲವೂ ನಕಲಿ ಎನ್ನಲಾಗಿದೆ. ಈ ಯುವಕರನ್ನು ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನಿಸಿದಾಗ ಮೂಡುಬಿದಿರೆ, ವಿಟ್ಲ, ಮಂಜೇಶ್ವರ, ಧರ್ಮಸ್ಥಳ ಮುಂತಾದ ಹೆಸರುಗಳನ್ನು ಅವರು ಹೇಳುತ್ತಾರೆ. ಸೇವಾಲಯ ಎಂಬ ಹೆಸರಿನ ಮೂಲಕ ಧನಸಹಾಯಕ್ಕೆ ಬರುವ ಈ ಸ್ವಾಮಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಯಾರೂ ಮೋಸ ಹೋಗ ಬಾರದು ಎಂದು ಗ್ರಾಮಸ್ಥರು ಮನವಿ ಮಾಡುತ್ತಿರುವುದು ಈ ವೀಡಿಯೋದಲ್ಲಿದೆ.

Continue Reading

LATEST NEWS

Trending