FILM
ಬಾಲಿವುಡ್- ಮರಾಠಿ ಚಿತ್ರರಂಗದ ಹಿರಿಯ ನಟ ರವಿ ಪಟವರ್ಧನ್ ನಿಧನ..!
ಬಾಲಿವುಡ್- ಮರಾಠಿ ಚಿತ್ರರಂಗದ ಹಿರಿಯ ನಟ ರವಿ ಪಟವರ್ಧನ್ ನಿಧನ..!
ಮುಂಬೈ: ಮರಾಠಿ ಚಿತ್ರ ರಂಗದ ಹಿರಿಯ ನಟ ರವಿ ಪಟವರ್ಧನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು.
ಉಸಿರಾಟದ ತೊಂದರೆ ಕಾಣಿಸಿಕೊಂಡ ಅವರಿಗೆ ನಿನ್ನೆ ರಾತ್ರಿ 9.30ರ ಅವಧಿಯಲ್ಲಿ ಹೃದಯಾಘಾತ ಉಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ ಎಂದು ಪುತ್ರ ನಿರಂಜನ ಪಟವರ್ಧನ್ ಹೇಳಿದ್ದಾರೆ.
ಮರಾಠಿ ಕಾರ್ಯಕ್ರಮ ‘ಅಗ್ಗಬಾಯಿ ಸಸುಬಾಯಿ’ ಜನಪ್ರಿಯತೆ ಪಡೆದಿತ್ತು. 1980ರ ಹಿಂದಿ ಸಿನಿಮಾಗಳಾದ ‘ತೇಝಾಬ್’, ‘ಅಂಕುಶ್’ ಸೇರಿ ಸುಮಾರು 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು.
ಪ್ರತಿ ಪಾತ್ರವನ್ನು ಅವರು ಉತ್ತಮವಾಗಿ ನಿರ್ವಹಿಸುತ್ತಿದ್ದರು, ಇಂದು ನಾವು ಒಬ್ಬ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ.
ಈ ಹಿರಿಯ ವಯಸ್ಸಿನಲ್ಲೂ ಸಿನಿಮಾ ಮತ್ತು ದೂರದರ್ಶನ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.ಅವರ ಅಗಲಿಕೆಯಿಂದ ನಾಟಕ ಮತ್ತು ಚಲನಚಿತ್ರೋದ್ಯಮಕ್ಕೆ ದೊಡ್ಡ ನಷ್ಟವಾಗಿದೆ. ” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರವಿ ಪಟವರ್ಧನ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
FILM
“ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?
ನಿತ್ಯಾಮೆನನ್.. ದಕ್ಷಿಣ ಚಿತ್ರರಂಗದಲ್ಲಿ ತನ್ನ ಅಮೋಘ ಅಭಿನಯದ ಮೂಲಕ ಚಿತ್ರರಂಗದಲ್ಲಿ ಕೀರ್ತಿಯ ಪತಾಕೆಯನ್ನ ಹಾರಿಸಿರುವ ನಟಿ. ತನ್ನ ಮೋಹಕ ನೋಟ, ಹಾಗೆನೆ ನೋಡೋಕೆ ತುಂಬಾನೆ ಸಿಂಪಲ್ ಆಗಿರೋ ಇವರು ಒಂದಲ್ಲ ಒಂದು ಕಾಂಟ್ರವರ್ಸಿಗಳಿಗೆ ಒಳಗಾಗಿದ್ದರು.
ಕನ್ನಡದ ಸೆವೆನ್ ಓ ಕ್ಲಾಕ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಆ ನಂತರ ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದ ನಿತ್ಯಾ, ಮಿಷನ್ ಮಂಗಲ್ ಚಿತ್ರದ ಮೂಲಕ ಹಿಂದಿಗೂ ಪದಾರ್ಪಣೆ ಮಾಡಿದ್ದರು.
ತುಂಬಾನೇ ಬೋಲ್ಡ್ ಹುಡುಗಿ ..
ತಮ್ಮ ನೇರ ದಿಟ್ಟ ನಡವಳಿಕೆಗೆ ನಿತ್ಯಾ ಮೆನನ್ ನಂಬರ್ ವನ್ ಪ್ಲೇಸ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಅದೆಷ್ಟೋ ಬಾರಿ ತಮ್ಮ ನೇರ ನಡವಳಿಕೆಯಿಂದ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಿದ್ರು ನಿತ್ಯಾ. ಇದಕ್ಕೆ ಸಾಕ್ಷಿ ಅನ್ನುವಂತೆ ನಿತ್ಯಾ ಮೆನನ್ ಅವರನ್ನ ಹಿಂದೊಮ್ಮೆ ಮಲಯಾಳಂ ಚಿತ್ರರಂಗ ಒಂದಲ್ಲ…ಎರಡು ಬಾರಿ ಬ್ಯಾನ್ ಮಾಡಲು ಮುಂದಾಗಿತ್ತು.
ಚಿತ್ರರಂಗದಿಂದ ಬ್ಯಾನ್ ಆಗಲು ಕಾರಣವೇನು..?
ಹೌದು.. 2012ರಲ್ಲಿ ನಿತ್ಯಾ ವಿರುದ್ದ ಮಲಯಾಳಂ ಚಿತ್ರರಂಗದ ಅನೇಕ ನಿರ್ಮಾಪಕರು ಮುನಿಸಿಕೊಂಡಿದ್ದರು. ಯಾಕೆಂದರೆ ಖ್ಯಾತ ಮಲಯಾಳಂನ ನಿರ್ಮಾಪಕರೊಬ್ಬರು ಆಗ ನಿತ್ಯಾ ಅವರ ಕಾಲ್ ಶೀಟ್ ಕೇಳಿಕೊಂಡು ಅವರ ಮನೆಗೆ ಹೋಗಿದ್ದರು. ಆದರೆ ನಿತ್ಯಾ ಮಾತ್ರ ನಿರ್ಮಾಪಕರ ಮುಖ ನೋಡಲು ಕೂಡ ಮನೆಯಾಚೆ ಬರಲಿಲ್ಲ. ಬದಲಿಗೆ ಮನೆಯಲ್ಲಿಯೇ ಇದ್ದರೂ ಕೂಡ ಮ್ಯಾನೇಜರ್ ನ ಕಳಿಸಿದ್ದರು. ಕೇವಲ ಇವರೊಬ್ಬರಷ್ಟೇ ಅಲ್ಲ ಅನೇಕ ನಿರ್ಮಾಪಕರನ್ನ ನಿತ್ಯಾ ಇದೇ ರೀತಿ ನಡೆಸಿಕೊಂಡಿದ್ದಾರೆ ಎಂಬ ಮಾತು ಆಗ ಕೇಳಿ ಬಂದಿತ್ತು. ಈ ಕಾರಣಕ್ಕೆ ನಿತ್ಯಾ ಅವರ ಮೇಲೆ ನಿಷೇಧ ಹೇರುವ ಚಿಂತನೆ ನಡೆದಿತ್ತು. ಆದರೆ ಈ ಎಲ್ಲ ಬೆಳವಣಿಗೆಯ ನಂತರವೂ 2012ರಲ್ಲಿ ಅರ್ಧ ಡಜನ್ ಮಲಯಾಳಂ ಸಿನಿಮಾಗಳಲ್ಲಿ ನಿತ್ಯಾ ಕಾಣಿಸಿಕೊಂಡರು. ಅದರಲ್ಲಿ ಆ ಕಾಲಕ್ಕೆ ಎಲ್ಲರ ಗಮನ ಸೆಳದು ಸಿಕ್ಕಾಪಟ್ಟೆ ಪ್ರಶಂಸೆಯನ್ನ ಪಡೆದಿದ್ದ ಉಸ್ತಾದ್ ಹೊಟೇಲ್ ಕೂಡ ಒಂದು.
ತಮ್ಮ ನೇರನುಡಿಯ ಮಾತೇ ತನಗೆ ಮುಳುವಾಯಿತಾ…?
ಇನ್ನೂ 2019ರಲ್ಲಿಯೂ ಕೂಡ ಇಂಥಹದ್ದೇ ಬೆಳವಣಿಗೆ ನಡೆದಿತ್ತು. 2019ರಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ನಿತ್ಯಾ ಮೆನನ್ ರವರ ತಾಯಿಗೆ ಕ್ಯಾನ್ಸರ್ ಇರುವುದಾಗಿ ಸುದ್ದಿ ಬಂದಿತ್ತು. ಅದು ಮೂರನೇ ಹಂತದಲ್ಲಿಯೂ ಇತ್ತು. ಇನ್ನು ನಿತ್ಯಾರವರು ಬಹುಕಾಲದ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದ ನಿತ್ಯಾ ಮನೆಯಲ್ಲಿಯೇ ಉಳಿದರು. ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ ನಿತ್ಯಾ ಅರೆತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು.
ಮುಂದೆ ನೋಡಿ..; ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?
ಆಗ ಮಲೆಯಾಳಂ ನಿರ್ಮಾಪಕರು ನಿತ್ಯಾ ಮೆನನ್ ಅನುಮತಿಯಿಲ್ಲದೇ ದಿಢೀರನೇ ಮನೆಗೆ ಧಾವಿಸಿ ಅಪ್ ಕಮಿಂಗ್ ಸಿನಿಮಾದಲ್ಲಿ ಮಾತನಾಡುವುದಕ್ಕೆ ಮುಂದಾಗಿದ್ದರು. ಆಗ ನಿತ್ಯಾ ಈಗ ಸದ್ಯಕ್ಕೆ ನನ್ನ ಆರೋಗ್ಯ ಸರಿ ಇಲ್ಲ. ನನ್ನ ಆರೋಗ್ಯ ಸುಧಾರಿಸಿದ ಮೇಲೆ ಮಾತನಾಡೋಣ ಎಂದಿದ್ದರು. ಇಷ್ಟಕ್ಕೇ ಸಿಟ್ಟಾದ ನಿರ್ಮಾಪಕರು ಕೂಡಲೇ ಮಲಯಾಳಂನ ಹಿರಿಯ ನಿರ್ಮಾಪಕ ಜಿ.ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ಕರೆದರು. ನಿತ್ಯಾ ಮೆನನ್ ಗೆ ಅಹಂಕಾರ ಜಾಸ್ತಿ ಈ ಕ್ಷಣದಿಂದನೇ ಅವರನ್ನ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು. ಇನ್ನೂ ಇದೇ ವಿಚಾರಕ್ಕೆ ಅವತ್ತು ಪ್ರತಿಕ್ರಿಯೆ ನೀಡಿದ್ದ ನಿತ್ಯಾ ಮೆನನ್, ನನಗೆ ಅಹಂಕಾರವಿಲ್ಲ. ಅಂತಹ ಅಹಂಕಾರವಿರುವ ನಿರ್ಮಾಪಕರ ಜತೆಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ರು.
ಆದ್ರೆ ಮಳಯಾಲಂ ಚಿತ್ರದಲ್ಲಿ ಮುಂಚೂಣಿ ನಾಯಕಿಯರ ಪಟ್ಟಿಯಲ್ಲಿದ್ದ ಈಕೆ 2019 ರಿಂದ ಇಲ್ಲಿಯವರೆಗೆ ಅವರು ನಟಿಸಿರುವುದು ಕೇವಲ ಬೆರಳೆಣಿಕೆಯ ಸಿನೆಮಾ. ಹೌದು ಇವರ ನೇರ ನುಡಿ ಖಡಕ್ ಮಾತು ಇವರ ವೃತ್ತಿ ಜೀವನಕ್ಕೆ ಪೆಟ್ಟು ಬಿದ್ದಿದೆ ಅಂದ್ರೆ ತಪ್ಪಾಗಲ್ಲ.
FILM
ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತುಗಳು ಬಹಳ ಸಮಯದಿಂದ ಕೇಳಿ ಬರುತ್ತಿದೆ. ನಟಿಯರು ನಟರ ಬಗ್ಗೆ, ನಿರ್ಮಾಪಕರು, ನಿರ್ದೇಶಕರುಗಳ ಬಗ್ಗೆ ಆರೋಪಗಳನ್ನು ಮಾಡುವ ಸುದ್ದಿಗಳು ಹರಿದಾಡುತ್ತಿರುತ್ತಿವೆ. ಇದೀಗ ರಿಯಾಲಿಟಿ ಶೋ ಸರದಿ.
ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಆರೋಪ:
ಸಿನಿ ಇಂಡಸ್ಟ್ರಿಯಲ್ಲಿದ್ದ ಕಾಸ್ಟಿಂಗ್ ಕೌಚ್ ಈಗ ಟಿವಿ ರಿಯಾಲಿಟಿ ಶೋಗಳಲ್ಲೂ ನಡಿತಾ ಇದೆಯಾ ? ಇಂತಹ ಒಂದು ಆರೋಪವನ್ನು ಡ್ಯಾನ್ಸಿಂಗ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾಜಾ ‘ ಸೀಸನ್ 11 ಗೆದ್ದಿದ್ದ ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಅವರು ಆರೋಪಿಸಿದ್ದಾರೆ.
ತನ್ನ ಡ್ಯಾನ್ಸ್ ಮೂವ್ಸ್ ಮತ್ತು ಎಲ್ಲರೊಂದಿಗೆ ಬೆರೆಯುವ ಸ್ವಭಾವದಿಂದ ಮನೀಶಾ ರಾಣಿ ಜನರ ಮನ ಗೆದ್ದಿದ್ದರು. ಇತ್ತೀಚೆಗೆ ಬಿಗ್ ಬಾಸ್ ಒಟಿಟಿ ಸೀಸನ್ 2 ನಲ್ಲೂ ಕಾಣಿಸಿಕೊಂಡಿದ್ದ ಮನೀಶಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಒಂದು ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಮೋಸ ಮಾಡಿದ್ದಾಗಿ ಹೇಳಿದ್ದಾರೆ. ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಿದ್ದ ಎಂದು ಆರೋಪಿಸಿದ್ದಾರೆ.
ಬಿಗ್ ಬಾಸ್ ತಂಡದ ಸದಸ್ಯನಿಂದ ಕರೆ :
ಸಂದರ್ಶನದಲ್ಲಿ ಮಾತನಾಡಿದ ಮನೀಶಾ ರಾಣಿ, “ನಾನು ಮುಂಬೈನಲ್ಲೂ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ನಾನೂ ಸಂಪೂರ್ಣವಾಗಿ ಅದಕ್ಕೆ ಬಲಿಯಾಗದೇ ಇದ್ರೂ ಬಿಗ್ ಬಾಸ್ ತಂಡದ ಸದಸ್ಯ ಎಂದು ಹೇಳಿಕೊಂಡಿದ್ದ ವ್ಯಕ್ತಿ ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆಸಿಕೊಂಡಿದ್ದ” ಎಂದು ಹೇಳಿದ್ದಾರೆ.
“ಮನೆಗೆ ವಾಪಾಸಾಗಿದ್ದ ಸಮಯದಲ್ಲಿ ಅಡಿಷನ್ ಪ್ರಾರಂಭವಾಗಿದೆ ಎಂದು ಮುಂಬೈಗೆ ಕರೆಸಿಕೊಂಡಿದ್ದ. ಹೀಗಾಗಿ ತರಾತುರಿಯಲ್ಲಿ ನಾನು ಮುಂಬೈಗೆ ಬಂದಿದ್ದೆ. ಆದ್ರೆ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದೆ. ಅದಕ್ಕೆ ಆತನಿಗೆ ನನ್ನ ಮೇಲೆ ಕೋಪ ಬಂದಿತ್ತು” ಎಂದು ಹೇಳಿದ್ದಾರೆ.
‘ಝಲಕ್ ದಿಖ್ಲಾ ಜಾ’ ಕಾರ್ಯಕ್ರಮ ಮೂಲಕ ಸ್ಟಾರ್ ಪಟ್ಟ
ಮೂಲತಃ ಬಿಹಾರದ ನಿವಾಸಿ ಆಗಿರೋ ಮನೀಶಾ ರಾಣಿ ಅವರು ‘ಝಲಕ್ ದಿಖ್ಲಾಜಾ’ 11 ನೇ ಸೀಸನ್ ಗೆಲ್ಲುವ ಮೂಲಕ ಜನಮನ್ನಣೆ ಗಳಿಸಿದರು. ಮನೀಶಾ ರಾಣಿ ಈ ಪ್ರಶಸ್ತಿ ಗೆಲ್ಲುವುದಕ್ಕೂ ಮೊದಲು ಜೀವನದಲ್ಲಿ ಸಾಕಷ್ಟು ಸಂಘರ್ಷ ಅನುಭವಿಸಿದ್ದಾರೆ.
ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದ ಮನೀಶಾ ರಾಣಿ ಡ್ಯಾನ್ಸರ್ ಆಗಲು ಅಡ್ಡಿಯಾಗಿದ್ದೇ ಆಕೆಯ ತಂದೆ. ಹೀಗಾಗಿ 12 ನೇ ತರಗತಿಯಲ್ಲಿ ಮನೆ ಬಿಟ್ಟು ಕೊಲ್ಕತ್ತಾ ಸೇರಿದ ಮನಿಷಾ ಮದುವೆ ಸಮಾರಂಭದಲ್ಲಿ ಊಟ ಬಡಿಸುವ ಕೆಲಸ ಆರಂಭಿಸಿದ್ದರು. ಅಲ್ಲಿಂದ ಬಳಿಕ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಆರಂಭಿಸಿದ ಮನೀಶಾ ಬಳಿಕ ಅದನ್ನೂ ಬಿಟ್ಟು ಟಿಕ್ಟಾಕ್ ಮೂಲಕ ತನ್ನ ನೃತ್ಯವನ್ನು ಜನರಿಗೆ ತೋರಿಸಲು ಆರಂಭಿಸಿದರು.
ಇದನ್ನೂ ಓದಿ : ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?
ಇದು ಗುಡಿಯಾ ಹಮಾರಿ ಸಭಿ ಪೆ ಭಾರಿ ತಯಾರಕರ ಗಮನಕ್ಕೆ ಬಂದು ಆಕೆಗೆ ಅವಕಾಶ ನೀಡಿದ್ರು. ಅಲ್ಲಿಂದ ಆರಂಭವಾದ ಮನೀಷಾ ರಾಣಿ ಜರ್ನಿ ಇಂದು ಆಕೆಯನ್ನು ಟಿವಿ ಲೋಕದ ಸ್ಟಾರ್ ಆಗಿ ಮಾಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿರೋ ಮನಿಷಾ 12.5 ಮಿಲಿಯನ್ಗಿಂತಲೂ ಹೆಚ್ಚು ಜನ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
FILM
ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?
ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ವಿಚ್ಛೇದನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಓಡಾಡುತ್ತಿತ್ತು. ಸಮಂತಾ ಅಭಿಮಾನಿಗಳು ನಾಗಚೈತನ್ಯ ವಿರುದ್ಧ ಕಮೆಂಟ್ಗಳನ್ನೂ ಹಾಕ್ತಾ ಇದ್ರು. ಇದರ ಬೆನ್ನಲ್ಲೇ ನಾಗಚೈತನ್ಯ ಹಾಗೂ ಶೋಬಿತಾ ಡೇಟಿಂಗ್ ಮಾಡ್ತಿದ್ದಾರೆ ಅನ್ನೊ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ಇವರಿಬ್ಬರು ಇದನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಂತಿದ್ದಾರೆ ಶೋಭಿತಾ ಹಾಗೂ ನಾಗಚೈತನ್ಯ.
ಒಂದೇ ಕಡೆ ಫೊಟೋ ಶೂಟ್ ಮಾಡಿಕೊಂಡ್ರ ಶೋಬಿತಾ-ನಾಗಚೈತನ್ಯ!
ಇದೀಗ ಶೋಭಿತಾ ಅರಣ್ಯ ಸುತ್ತಾಟದ ಫೊಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದ್ರಲ್ಲೇನಿದೆ ವಿಶೇಷ ಅಂತ ನೀವು ಕೇಳ್ಬೋದು.. ನಾಗಚೈನ್ಯ ಕೂಡಾ ಇದೇ ರೀತಿಯ ಬ್ಯಾಕ್ಗ್ರೌಂಡ್ ಇರೋ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಇವರಿಬ್ಬರೂ ಒಂದೇ ಲೊಕೇಶನ್ನಿಂದ ಫೊಟೋ ಶೇರ್ ಮಾಡಿದ್ದಾರೆ. ಜೊತೆಯಾಗಿ ವನ್ಯ ಜೀವಿಧಾಮದಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಗಚೈತನ್ಯ ಹಾಗೂ ಶೋಭಿತಾ ಲಂಡನ್ನ ಹೋಟೆಲ್ವೊಂದರಲ್ಲಿ ಊಟಕ್ಕೆಂದು ತೆರಳಿದ್ದರು.
ಮುಂದೆ ಓದಿ..; ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
ಹೊಟೆಲ್ ಚೆಫ್ ನಾಗಚೈತನ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸೋಶೀಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಫೊಟೋ ಹಿಂದೆ ಶೋಬಿತಾ ಇರೋದು ಕಂಡು ಬಂದಿದೆ. ಇದರಿಂದ ಈಗಾಗಲೆ ಇವರಿಬ್ರು ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗೆ ಪುಷ್ಠಿನೀಡಿದಂತಾಗಿದೆ.
ಫ್ಯಾನ್ಸ್ ಏನಂದ್ರು..?
ಇನ್ನು ಇವರಿಬ್ಬರು ಜೊತೆಗಿರುವ ಫೊಟೋ ಎಲ್ಲೂ ಕಾಣ ಸಿಗಲಿಲ್ಲ. ಹಾಗಾಗಿ ಇಬ್ಬರೂ ಜೋಡಿ ಹೌದೋ ಇಲ್ಲವೋ ಅನ್ನೋದು ಇನ್ನೂ ಖಚಿತಗೊಂಡಿಲ್ಲ. ಸಮಂತಾ ಜೊತೆ ವಿಚ್ಛೇದನ ಬಳಿಕ ನಾಗಚೈನ್ಯ ಶೋಬಿತಾ ಜೊತೆ ಕ್ಲೋಸ್ ಆಗಿದ್ದಾರೆ. ಸಮಂತಾ ನಾಗಚೈತನ್ಯ ಬೇರೆ ಬೇರ ಆದರೂ ಕೂಡಾ ಫ್ಯಾನ್ಸ್ ಇವರಿಬ್ಬರನ್ನೂ ಜೋಡಿಯಾಗಿ ನೋಡಲು ಕಾಯ್ತಾ ಇದ್ದಾರೆ. ಒಂದು ವೇಳೆ ಶೋಬಿತಾ ಜೊತೆ ಚೈತನ್ಯ ಡೇಟಿಂಗ್ನಲ್ಲಿರೋದು ಪಕ್ಕಾ ಆದ್ರೆ ಫ್ಯಾನ್ಸ್ ಅಂತೂ ಸಿಟ್ಟಿಗೇಳೋದು ಗ್ಯಾರಂಟಿ.
- DAKSHINA KANNADA7 days ago
“ಸೆಕ್ಸ್” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್..!
- FILM3 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- LATEST NEWS6 days ago
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
- FILM3 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು