Saturday, June 3, 2023

ದೆಹಲಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಗೆದ್ದರೆ ಆಮ್‌ ಆದ್ಮಿ ರಾಜಕೀಯ ತೊರೆಯಲಿದೆ: ಕೇಜ್ರಿವಾಲ್‌

ನವದೆಹಲಿ: ದಿಲ್ಲಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಆಮ್‌ ಆದ್ಮಿ ಪಕ್ಷ ರಾಜಕೀಯವನ್ನೇ ತ್ಯಜಿಸಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಸವಾಲು ಹಾಕಿದ್ದಾರೆ.


ದಿಲ್ಲಿಯ ನಗರ ಪಾಲಿಕೆ ಚುನಾವಣೆಗಳನ್ನು ಮುಂದೂಡಿರುವ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ಅರವಿಂದ್‌ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ದಿಲ್ಲಿ ನಗರ ಪಾಲಿಕೆ ಚುನಾವಣೆಗಳನ್ನು ಸರಿಯಾದ ಸಮಯಕ್ಕೆ ನಡೆಸಿ ಗೆದ್ದರೆ ನಾವು ರಾಜಕೀಯವನ್ನೇ ತೊರೆಯುತ್ತೇವೆ ಎಂದು ದಿಲ್ಲಿ ವಿಧಾನಸಭೆಯ ಹೊರಗಡೆ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಬಿಜೆಪಿ ನಾಯಕರು ನಮ್ಮದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳುತ್ತಾರೆ. ಆದರೆ, ಸಣ್ಣ ಪಕ್ಷ ಹಾಗೂ ಸಣ್ಣ ಚುನಾವಣೆಗಳಿಗೆ ಅದು ಹೆದರಿದೆ.

ಧೈರ್ಯವಿದ್ದರೆ ಸಮಯಕ್ಕೆ ಸರಿಯಾಗಿ ದಿಲ್ಲಿ ಮುನಿಸಿಫಲ್‌ ಕಾರ್ಪೋರೇಷನ್‌ಗೆ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಿ ಎಂದು ಅರವಿಂದ್‌ ಕೇಜ್ರಿವಾಲ್‌ ಸವಾಲು ಹಾಕಿದ್ದಾರೆ.

LEAVE A REPLY

Please enter your comment!
Please enter your name here

Hot Topics