ಒಂದ್ಕಾಲದ ಯಶಸ್ವಿ ಉದ್ಯಮಿ: ಈಗ ಚಹ ಅಂಗಡಿಯಲ್ಲಿ ಅಡುಗೆ ಕೆಲಸಗಾರ
ಉದ್ಯಮಿಯನ್ನು ಚಹಾ ಮಾರುವಂತೆ ಮಾಡಿದ ನೋಟು ಅಮ್ಯಾನೀಕರಣ
ದುಬೈ: ಒಂದು ಕಾಲದಲ್ಲಿ ಆತ ಯಶಸ್ವಿ ಉದ್ಯಮಿ. ತಮ್ಮ 24ನೇ ವರ್ಷದಲ್ಲೇ ಉತ್ತುಂಗಕ್ಕೇರಿದ್ದರು.
ಕೇರಳದ ತ್ರಿಶೂರ್ನಲ್ಲಿ ಎಸ್ವಿಆರ್ ಆಗ್ರೋ ಪ್ರಾಡೆಕ್ಟ್ಸ್ ಎಂಬ ನೈಸರ್ಗಿಕ ಗೊಬ್ಬರ ಉತ್ಪಾದಿಸುತ್ತಿದ್ದ ಕಂಪೆನಿ, ಸುಮಾರು 462 ಉದ್ಯೋಗಿಗಳೊಂದಿಗೆ ಲಾಭದಲ್ಲಿ ಮುನ್ನಡೆದಿತ್ತು.
ಆತ ಬೇರಾರು ಅಲ್ಲ ನಿತೇಶ್ ಸಹದೇವನ್ ಎಂಬ ಬಿಸಿ ರಕ್ತದ ಯಶಸ್ವಿ ಉದ್ಯಮಿ.
ಆದರೆ ಇದೀಗ ಕಾಲ ಬದಲಾಗಿದೆ. ಬರೋಬ್ಬರಿ ಎಂಟು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ.
ಒಂದು ಸಮಯದಲ್ಲಿ ಯಶಸ್ವಿ ಉದ್ಯಮಿ ಇದೀಗ ದುಬೈನ ಕರಾಮ ಪ್ರದೇಶದಲ್ಲಿರುವ ಮೂಸಾಕಾಂತ್ ಚಾಯಕ್ಕಡ ಎಂಬ ಚಹಾ ಅಂಗಡಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ.
2016ರ,ನ. 8ರಂದು ರಾತ್ರೋರಾತ್ರಿ ಭಾರತ ಸರ್ಕಾರ ಘೋಷಿಸಿದ ನೋಟು ಅಮಾನ್ಯ ನಿರ್ಧಾರ ಇವರ ಈ ದುರವಸ್ಥೆಗೆ ಕಾರಣ.
“ಪರೋಟಾ, ಚಹಾ ಮಾಡುವ ಜೊತೆಗೆ ರೆಸ್ಟೋರೆಂಟ್ನಲ್ಲಿ ಸಪ್ಲೈ ಮಾಡುತ್ತೇನೆ” ಎಂದವರು ಬೇಸರಪಟ್ಟುಕೊಳ್ಳುತ್ತಾರೆ.
ಖಲೀಜ್ ಟೈಮ್ಸ್ ಜೊತೆ ತಮ್ಮ ಕಥೆ-ವ್ಯಥೆಯನ್ನು ಬಿಚ್ಚಿಟ್ಟಿರುವ ಇವರು, ಸದ್ಯ ಈ ಉದ್ಯೋಗ ಸಿಕ್ಕಿದ್ದಕ್ಕಾಗಿ ತಮ್ಮ ಬಾಲ್ಯ ಸ್ನೇಹಿತನಿಗೆ ಥ್ಯಾಂಕ್ಸ್ ಹೇಳುವುದನ್ನು ಮರೆಯಲಿಲ್ಲ.
ತಾನು ಹೂಡಿಕೆ ಮಾಡಿದ ಗಲ್ಫ್ ಮೂಲದ ಹಲವು ಗ್ರಾಹಕರನ್ನು ಕಳೆದುಕೊಂಡ ಬಳಿಕ ಕೆಲವೇ ತಿಂಗಳಲ್ಲಿ ತಮಿಳುನಾಡಿನ ಪೊಲ್ಲಾಚಿಯಲ್ಲಿ ಹೊಂದಿದ್ದ ಉತ್ಪಾದನಾ ಘಟಕ ಮಾರಾಟ ಮಾಡಿ ಎಲ್ಲ ಉದ್ಯೋಗಿಗಳನ್ನು ಮನೆಗೆ ಕಳುಹಿಸಬೇಕಾಯಿತು.
ಜೊತೆಗೆ ಪಿತ್ರಾರ್ಜಿತ ಮನೆಯನ್ನೂ ಮಾರಾಟ ಮಾಡಿ, ತಂದೆಯನ್ನು ಸಮಾಧಿ ಮಾಡಿದ ಸ್ಥಳವನ್ನೂ ಮಾರಾಟ ಮಾಡಿ ವ್ಯವಹಾರಕ್ಕೆ ಪಡೆದ ಬ್ಯಾಂಕ್ ಸಾಲ ತೀರಿಸಬೇಕಾಯಿತು ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಮ್ಮ 18ನೇ ವರ್ಷಕ್ಕೇ ವ್ಯವಹಾರ ಆರಂಭಿಸಿದ ಇವರು, ತಾವು ಉತ್ಪಾದಿಸುತ್ತಿದ್ದ ಹಸಿರು ಗೊಬ್ಬರ ಎಲ್ಲೆಡೆ ಜನಪ್ರಿಯವಾಗಿತ್ತು.
ಇದರ ಲಾಭಗಳನ್ನು ಅರಿತ ಬಿಟೆಕ್ ಪದವೀಧರ, ಉದ್ಯಮಿಯಾಗಲು ಬಯಸಿದರು.
ಹ್ಯೂಮಿಕ್ ಆ್ಯಸಿಡ್, ಸಸ್ಯಶಾಸ್ತ್ರೀಯ ಪೋಷಕಾಂಶಗಳು, ಸಾಗರ ಪ್ರೊಟೀಲ್ ಮತ್ತು ಪ್ರಾಣಿಗಳ ಪ್ರೊಟೀನ್ ಹೊಂದಿದ್ದ ಈ ಗೊಬ್ಬರ ಗರಿಷ್ಠ ಇಳುವರಿಗೆ ಕಾರಣವಾಗಿತ್ತು.
500 ರೂಪಾಯಿಯ ಒಂದು ಬಾಟಲಿ 2000 ಗಿಡಗಳಿಗೆ ಸಾಕಾಗುತ್ತಿತ್ತು ಎಂದು ಹೇಳುತ್ತಾರೆ.
ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್ ಬಂದ ಕಾರಣ 2016ರಲ್ಲಿ ಇಂತಹ ಐದು ಘಟಕ ಆರಂಭಿಸಲು 3 ಕೋಟಿ ರೂ. ಸಾಲ ಪಡೆದರು.
ಹಲವು ಟನ್ಗಳನ್ನು ಖರೀದಿಸಲು ಗಲ್ಫ್ ಮೂಲದ ಗ್ರಾಹಕರು ಮುಂದೆ ಬಂದರು.
ಮುಂದಿನ 10 ವರ್ಷಗಳಲ್ಲಿ ದೊಡ್ಡ ಲಾಭ ಗಳಿಸುವ ಲೆಕ್ಕಾಚಾರದಲ್ಲಿ ಸಹದೇವನ್ ವ್ಯವಹಾರ ವಿಸ್ತರಣೆಗೆ ಮುಂದಾದರು.
2016ರ ನವೆಂಬರ್ನಲ್ಲಿ ಗ್ರಾಹಕರು ಏಕಾಏಕಿ ಹಿಂದೆ ಸರಿದರು.
ಉತ್ಪನ್ನ, ಘಟಕ ಎಲ್ಲವೂ ವ್ಯರ್ಥವಾಯಿತು. ಬ್ಯಾಂಕ್ ಸಾಲದ ಹೊರೆ ಹೆಚ್ಚಲಾರಂಭಿಸಿದಾಗ ಎಲ್ಲವನ್ನೂ ಮಾರಾಟ ಮಾಡಲು ಮುಂದಾದರು
ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ನೆರವಿಗೆ ಬಂದಿದ್ದು ಬಾಲ್ಯದ ಸ್ನೇಹಿತ, ಉದ್ಯಮಿ ಅಬ್ದುಲ್ ರಶೀದ್. ದುಬೈಗೆ ಬರುವಂತೆ ಆಹ್ವಾನ ನೀಡಿದರು.
ಆಹಾರ ಮತ್ತು ಪಾನೀಯ ಕ್ಷೇತ್ರದ ವಹಿವಾಟು ವಿಸ್ತರಣೆಗೆ ರಶೀದ್ ಮುಂದಾದರು.
“ನನ್ನ ಸ್ಥಿತಿ ನೋಡಿ ಚಹಾ ಅಂಗಡಿ ಹಾಕಿಕೊಟ್ಟರು. ರಶೀದ್ ನನ್ನ ಪಾಲಿನ ದೇವರು. ಅವರು ಇಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ.
ನಾನು ತೀರಾ ದಯನೀಯ ಸ್ಥಿತಿಯಲ್ಲಿದ್ದಾಗ ಇಲ್ಲಿಗೆ ಕರೆತಂದರು.
ಇದೀಗ ಎಲ್ಲ ಸಾಲ ತೀರಿಸಿ, ವೃದ್ಧ ತಾಯಿಗಾಗಿ ಮನೆಯನ್ನೂ ಮಾಡಿ ಕೊಟ್ಟಿದ್ದೇನೆ”. ಎಂದು ಅವರು ವಿವರಿಸುತ್ತಾರೆ.
ಸಹದೇವನ್ ತಮ್ಮ ಮೊಬೈಲ್ ಫೋನ್ನಲ್ಲಿ ರಶೀದ್ ಹೆಸರನ್ನು ದೇವರು ಎಂದು ಸೇವ್ ಮಾಡಿದ್ದಾರೆ.
ಆರು ತಿಂಗಳಲ್ಲೇ ಈ ರೆಸ್ಟೋರೆಂಟ್ ಜನಪ್ರಿಯವಾಗಿದ್ದು, ಬಿಸಿ ಚಹಾ, ತಿಂಡಿ ಮತ್ತು ಕೇರಳದ ಮಲಬಾರ್ ಖಾದ್ಯಗಳಿಗೆ ಹೆಸರುವಾಸಿಯಾಗಿದೆ.
LATEST NEWS
238 ಬಾರಿ ಸೋತ ಅಭ್ಯರ್ಥಿ ಮತ್ತೆ ಲೋಕಸಭಾ ಅಖಾಡಕ್ಕೆ!
ಮಂಗಳೂರು ( ಮೆಟ್ಟೂರು ) : ಚುನಾವಣೆ ಅಂದ ಮೇಲೆ ಅಭ್ಯರ್ಥಿ ಹೇಗಾದ್ರೂ ಗೆಲ್ಲಲೇ ಬೇಕು ಅಂತ ಪ್ರಯತ್ನ ಮಾಡ್ತಾನೆ. ಹಾಗಂತ ಎರಡು ಮೂರು ಸ್ಪರ್ಧೆ ಮಾಡಿ ಗೆಲುವು ಸಿಕ್ಕಿಲ್ಲಾ ಅಂದ್ರೆ ಸುಮ್ಮನೆ ಮನೇಲಿ ಕೂರ್ತಾನೆ. ಆದ್ರೆ ಅದೊಂದು ಅಭ್ಯರ್ಥಿ ಮಾತ್ರ ಚುನಾವಣೆಯಲ್ಲಿ ಬರೋಬ್ಬರಿ 238 ಬಾರಿ ಸ್ಪರ್ಧೆ ಮಾಡಿ ಸೋತರೂ ಮತ್ತೆ ಈ ಬಾರಿ ಲೋಕಸಭಾ ಚುನಾವಣ ಕಣಕ್ಕೆ ಇಳಿದಿದ್ದಾರೆ.
ಚುನಾವಣೆಗೆ ನಿಲ್ಲೋದೇ ಸೋಲೋದಿಕ್ಕೆ ಅನ್ನೋ ರೀತಿ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ 65 ವಯಸ್ಸಿನ ಪದ್ಮರಾಜನ್ ಎಂಬವರು ಈ ಭಾರಿ ಮತ್ತೆ ಕಣಕ್ಕಿಳಿದಿದ್ದಾರೆ.
ಚುನಾವಣೆಯಲ್ಲಿ ಭಾಗವಹಿಸುವುದು ಮುಖ್ಯ!
ತಮಿಳುನಾಡಿನ ಮೆಟ್ಟೂರು ವಿಧಾನಸಭಾ ಕ್ಷೇತ್ರದಿಂದ 1988 ರಲ್ಲಿ ಚುನಾವಣೆಯಲ್ಲಿ ಪದ್ಮರಾಜನ್ ತಮ್ಮ ಮೊದಲ ಸ್ಪರ್ಧೆ ಆರಂಭಿಸಿದ್ದಾರೆ. ಸಾಮಾನ್ಯ ಟೈರ್ ರಿಪೇರಿ ಅಂಗಡಿ ಮಾಲೀಕರಾಗಿರುವ ಕೆ. ಪದ್ಮರಾಜನ್ ಅಂದಿನಿಂದ ಇಂದಿನವರೆಗೆ ಸರಿ ಸುಮಾರು 238 ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಕಟ್ಟಿದ ಲಕ್ಷಾಂತರ ರೂಪಾಯಿ ಠೇವಣಿಯನ್ನೇ ಇವರು ಕಳೆದುಕೊಂಡಿದ್ದಾರೆ. ಆದರೆ ಅದೆಷ್ಟೇ ಸಲ ಸೋತರು.. ಠೇವಣಿ ಕಳೆದುಕೊಂಡರು ಕೂಡ ಇವರ ತಲೆ ಕೆಡಿಸಿಕೊಂಡಿಲ್ಲ.
ಎಲ್ಲಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವನ್ನು ಬಯಸುತ್ತಾರೆ. ಆದರೆ ನಾನು ಹಾಗೆ ಅಲ್ಲ ನನಗೆ ಚುನಾವಣೆಯಲ್ಲಿ ಭಾಗವಹಿಸುವುದೇ ಮುಖ್ಯ ಅಂತಾರೆ ಪದ್ಮರಾಜನ್. ಏಪ್ರಿಲ್ 19 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಂಸದೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
ಕಿಂಗ್ ಆಫ್ ದಿ ಎಲೆಕ್ಷನ್ ಬಿರುದು :
ಸ್ಥಳೀಯಾಡಳಿತದ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆಗೂ ಇವರು ಸ್ಪರ್ಧೆ ಮಾಡಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ರಾಹುಲ್ ಗಾಂಧಿ ಹೀಗೆ ಅನೇಕರ ವಿರುದ್ಧ ಇವರು ಸ್ಪರ್ಧೆ ಮಾಡಿ ಸೋತಿದ್ದಾರೆ. ಹೀಗಾಗಿ ಇವರಿಗೆ ಕಿಂಗ್ ಆಪ್ ದಿ ಎಲೆಕ್ಷನ್ ಅಂತಾನೂ ಬಿರುದು ಸಿಕ್ಕಿದೆ.
ಸೋತರೂ ಗೆಲುವು :
ನಿರಂತರ ಚುನಾವಣೆಯಲ್ಲಿ ಸೋತಿರುವ ಪದ್ಮರಾಜನ್ ಅವರು ಒಂದು ವಿಚಾರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಮೂವತ್ತೈದು ವರ್ಷಗಳಿಂದ ಸೋಲುವ ಮೂಲಕ ಈ ಗೆಲುವು ತಂದುಕೊಂಡಿದ್ದಾರೆ. ಸೋಲಿನ ಮೂಲಕವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಸೇರಿಸಿಕೊಳ್ಳುವ ಮೂಲಕ ಆ ಗೆಲುವು ಇವರಿಗೆ ಸಿಕ್ಕಿದೆ.
ಈ ಬಾರಿ ಮತ್ತೆ ಲೊಕಸಭಾ ಚುನಾವಣೆಯ ಕಣಕ್ಕಿಳಿದಿರುವ ಪದ್ಮರಾಜನ್ ಅವರು ನನಗೆ ಸೋಲಿನಲ್ಲೇ ಖುಷಿ ಇದೆ. ಹಾಗೊಂದು ವೇಳೆ ಎಲ್ಲಿಯಾದ್ರೂ ಜನ ನನ್ನನ್ನು ಗೆಲ್ಲಿಸಿದ್ರೆ ಹೃದಯಾಘಾತವಾಗಿ ಉಸಿರೇ ನಿಂತು ಹೋಗಬಹುದು ಎಂದು ತಮಾಷೆಯಾಗಿ ಹೇಳುತ್ತಾರೆ. ಹೀಗಾಗಿ ನನ್ನ ಉಸಿರು ಇರಬೇಕು ಅಂದ್ರೆ ನಾನು ಸದಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಹಾಗೂ ಸೋಲಬೇಕು ಅಂತಾರೆ.
LATEST NEWS
ಪ್ರಧಾನಿ ಕಾರಿನ ನೋಂದಣಿಯನ್ನು ವಿಸ್ತರಿಸಲು ಅಸಾಧ್ಯ ಎಂದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ; ಕಾರಣ ಏನು?
ನವದೆಹಲಿ : ಪ್ರಧಾನಿ ಕಾರಿನ ನೋಂದಣಿಯನ್ನು ವಿಸ್ತರಿಸಲು ಅಸಾಧ್ಯ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ( NGT ) ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಮೂರು ಡಿಸೇಲ್ ಕಾರುಗಳ ನೋಂದಣಿ ವಿಸ್ತರಿಸುವಂತೆ ಎಸ್ಪಿಜಿ (SPG) ಮನವಿ ಸಲ್ಲಿಸಿತ್ತು.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಹೇಳಿದ್ದೇನು?
“ಈ ಮೂರು ಕಾರುಗಳು ಸಾಮಾನ್ಯವಾಗಿ ಬಳಸಲ್ಪಡದ ವಿಶೇಷ ಉದ್ದೇಶದ ವಾಹನಗಳಾಗಿವೆ. ಈ ವಾಹನಗಳು ಹತ್ತು ವರ್ಷಗಳಲ್ಲಿ ಬಹಳ ಕಡಿಮೆ ಚಲಿಸಿವೆ ಮತ್ತು ಪ್ರಧಾನಿ ಅವರ ಭದ್ರತೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಅಗತ್ಯವಾಗಿವೆ. ಆದರೆ ಸುಪ್ರೀಂ ಕೋರ್ಟ್ 2018ರ ಅಕ್ಟೋಬರ್ 29ರಂದು ನೀಡಿದ ಆದೇಶದಂತೆ ಆ ವಾಹನಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಎನ್ಜಿಟಿ ಹೇಳಿದೆ.
ಎಸ್ಪಿಜಿ ಈ ಕಾರುಗಳಿಗೆ ಅನುಮತಿ ಕೇಳಿದ್ಯಾಕೆ?
ಈ ವಾಹನಗಳ ವಿನ್ಯಾಸ ಮತ್ತು ತಾಂತ್ರಿಕ ಹಾಗೂ ಕಾರ್ಯತಂತ್ರಗಳು ಬಹಳಷ್ಟು ವಿಶೇಷವಾಗಿದೆ. ಇಂತಹ ವಾಹನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲ. ಭದ್ರತೆಯ ದೃಷ್ಟಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿರುವ ಕಾರಣ ಈ ಕಾರುಗಳಿಗೆ ಇನ್ನೂ ಐದು ವರ್ಷಗಳ ಕಾಲ ನೊಂದಣಿಯನ್ನು ವಿಸ್ತರಿಸಿ ಎಂದು ಎಸ್ಪಿಜಿ ಕೋರಿಕೆ ಸಲ್ಲಿಸಿತ್ತು.
ದೆಹಲಿ ಎನ್ಸಿಆರ್ನಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಎನ್ಜಿಟಿ ಮತ್ತು ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಹೊರಡಿಸಿದ್ದವು. ಎನ್ಜಿಟಿ 2015ರ ಏಪ್ರಿಲ್ನಲ್ಲಿ ದೆಹಲಿ ಎನ್ಸಿಆರ್ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಎಲ್ಲ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 10 ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನವನ್ನು ನೋಂದಾಯಿಸದಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಇದನ್ನೂ ಓದಿ…238 ಬಾರಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಮತ್ತೆ ಲೋಕಸಭಾ ಅಖಾಡಕ್ಕೆ…!
2013ರಲ್ಲಿ ತಯಾರಿಸಿದ ಮತ್ತು 2014ರ ಡಿಸೆಂಬರ್ನಲ್ಲಿ ನೋಂದಾಯಿಸಲಾದ ಮೂರು ರೆನಾಲ್ಟ್ ಎಂಡಿ -5 (Renault MD-5) ವಿಶೇಷ ಶಸ್ತ್ರಸಜ್ಜಿತ ವಾಹನಗಳು 9 ವರ್ಷಗಳಲ್ಲಿ ಕ್ರಮವಾಗಿ ಸುಮಾರು 6,000 ಕಿ.ಮೀ., 9,500 ಕಿ.ಮೀ. ಮತ್ತು 15,000 ಕಿ.ಮೀ. ಕ್ರಮಿಸಿವೆ.
bengaluru
ಚುನಾವಣೆ ಗೆಲ್ಲೋಕೆ ನನ್ನ ಹೆ*ಣ ಬೀಳಿಸೋಕು ಬಿಜೆಪಿಯವ್ರು ಸಿದ್ಧರಿದ್ದಾರೆ; ಜೀವ ಬೆದರಿಕೆ ಪತ್ರ ಹಿಡಿದು ಕಿಡಿಕಾರಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸದ್ಯ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆ*ದರಿಕೆ ಪತ್ರ ಬಂದಿದೆ. ಸ್ವತ: ಈ ಬಗ್ಗೆ ಪ್ರಿಯಾಂಕ ಖರ್ಗೆ ಅವರೇ ಹೇಳಿದ್ದಾರೆ.
ಎನ್ ಕೌಂಟರ್ ಬೆ*ದರಿಕೆ:
ಭಾರತೀಯ ಜನತಾ ಪಾರ್ಟಿಯವರು ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆ*ಣ ಬೀಳಿಸಿಯಾದರೂ ಚುನಾವಣೆ ಗೆಲ್ಲುವ ಯೋಜನೆಯಲ್ಲಿದ್ದಾರೆ. ಅಲ್ಲದೆ, ತನಗೆ ಮತ್ತೊಂದು ಜೀವ ಬೆ*ದರಿಕೆ ಪತ್ರ ಬಂದಿದೆ. ಅದರಲ್ಲಿ ತನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆ*ದರಿಕೆ ಹಾಕಲಾಗಿದೆ. ಫಿನ್ಲ್ಯಾಂಡ್ನಿಂದ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಗೆ ಬಂದಿರುವ ಜೀವ ಬೆದರಿಕೆ ಪತ್ರ ಓದಿದರು.
“ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗೂ, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂ*ಟರ್ ಮಾಡುವುದು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದರು.
ಬೆದರಿಕೆ ಸಂಬಂಧ ಮಾರ್ಚ್ 13 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ. ಹೆದರಿಸುವುದು ಅಥವಾ ಬೆದರಿಸಲು ಬಂದರೆ ಅದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.