Connect with us

BANTWAL

ಬಾಕ್ರಬೈಲಿನ ಗತ್ತಿನ ಗುತ್ತುಮನೆಗಿದೆ 987 ವರ್ಷದ ಇತಿಹಾಸ…

Published

on

ಮಂಗಳೂರು: ಹಿಂದಿನ ಕಾಲದಲ್ಲಿ ‘ಗುತ್ತು ಮನೆ’ ಎಂದರೆ ವಿಶೇಷ ತೆರನಾದ ಗೌರವ. ಆ ಮನೆಯವರಿಗೆ ಒಂದು ತೆರನಾದ ಸ್ಥಾನಮಾನ. ಕಾಲ ಅದೆಷ್ಟೇ ಗತಿಸಿ ಹೋದರೂ ಆ ಮನೆಯ ಮೇಲಿನ ಅಭಿಮಾನ, ಮಾನ್ಯತೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೂ ಜೀವಂತವಾಗಿರುತ್ತೆ.

ಇದೀಗ ದಕ್ಷಿಣ ಕನ್ನಡ ಗಡಿಭಾಗವಾದ ಮಂಗಳೂರು ಮುಡಿಪು ವಿಟ್ಲ ಸಂಪರ್ಕಿಸುವ ಕೇರಳ ಗಡಿ ಭಾಗದ ಬಾಕ್ರಬೈಲ್ ಎಂಬಲ್ಲಿ ನಾವು ಅಂತಹುದೇ ಮನೆಯನ್ನು ಕಾಣಬಹುದಾಗಿದೆ.

ಆವಿಷ್ಕಾರಗಳು ಮುಂದುವರೆಯುತ್ತಾ ಹೋದಂತೆ ಗೃಹ ನಿರ್ಮಾಣಕ್ಕೆ ಬಳಸುವ ಸಾಧನಗಳು ಕಳಪೆ ಮಟ್ಟದ್ದೇ ಆಗಿದೆ. ಇತ್ತೀಚೆಗಂತೂ ನಿರ್ಮಿಸುವ ನೂತನ ಮನೆಗಳು ಅನೇಕ ವರ್ಷ ಬಾಳಿಕೆ ಬರುವುದು ಕಡಿಮೆ. ಆದರೆ ಅಚ್ಚರಿಯೆಂದರೆ ನಮ್ಮ ಪೂರ್ವಜರು ನಿರ್ಮಿಸಿಕೊಟ್ಟ ಇಂತಹ ಮನೆಗಳು ಇಂದಿಗೂ ಜೀವಂತವಾಗಿರುವುದು ವಿಪರ್ಯಾಸ.


ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಬ್ರಾಕ್ರಬೈಲ್ ಪ್ರದೇಶದಲ್ಲಿ ಬರುವ ಈ ಮನೆ ಬ್ರಾಕ್ರಬೈಲ್ ಚಾವಡಿ ಎಂದೇ ಗುರುತಿಸಲ್ಪಟ್ಟಿದೆ. ಮನೆಯಲ್ಲಿರುವ ಉಲ್ಲೇಖದ ಪ್ರಕಾರ ಈ ಮನೆಗೆ ಸುಮಾರು 987 ವರ್ಷಗಳೇ ಕಳೆದಿದೆ.


ಬಾಕ್ರಬೈಲು ದೇಯ್ಯಮ್ಮನ ಮಗ ಮಂಜಣ್ಣ ಆಳ್ವರು ಕಟ್ಟಿದ ಮನೆ ಎನ್ನುವ ಬರಹವನ್ನೂ ಈ ಮನೆಯ ಮುಂದಿನ ಮರದ ಪಕ್ಕಾಸಿನಲ್ಲಿ ಕೆತ್ತಲಾಗಿದ್ದು, ಹಳೆಗನ್ನಡದಲ್ಲಿ ಈ ಮಾಹಿತಿಯನ್ನು ಇಲ್ಲಿ ಬರೆಯಲಾಗಿದೆ. ಆ ಕಾಲದಲ್ಲಿ ಧರ್ಮ ಚಾವಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಮನೆಯಲ್ಲಿ 7 ಕುಟುಂಬಗಳು ವಾಸಿಸುತ್ತಿದ್ದವು.


ಸುಮಾರು 100 ಕ್ಕೂ ಮಿಕ್ಕಿದ ಜನ ಈ ಮನೆಯಲ್ಲಿದ್ದು, ಮನೆಗೆ ಸಂಬಂಧಪಟ್ಟ ದೈವಗಳ ಆರಾಧನೆಯನ್ನೂ ಮಾಡಿಕೊಂಡು ಬರಲಾಗಿದೆ. ಅಲ್ಲದೆ ಈ ಮನೆಯಲ್ಲಿ ಸತ್ಯ ಪ್ರಮಾಣ ಕಟ್ಟೆಯೂ ಇದ್ದು, ಊರಿನಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಾದರೂ, ಗ್ರಾಮದ ಜನ ಈ ಮನೆಗೆ ಬಂದು ಸತ್ಯಪ್ರಮಾಣ ಮಾಡುವ ಸಂಪ್ರದಾಯವೂ ಇತ್ತು.

ಮಲರಾಯ, ಧೂಮಾವತಿ ಬಂಟ ಮೊದಲಾದ ದೈವಗಳನ್ನು ಆರಾಧಿಸಿಕೊಂಡು ಬರುತ್ತಿರುವ ಈ ಮನೆಯಲ್ಲಿ ಇಂದಿಗೂ ಈ ದೈವಗಳ ಅಸ್ತಿತ್ವವಿದ್ದು, ಈ ಕಾರಣಕ್ಕಾಗಿ ಪ್ರತೀ ದಿನವೂ ತಪ್ಪದೆ ಈ ಮನೆಯಲ್ಲಿ ದೈವಗಳಿಗೆ ದೀಪವನ್ನು ಹಚ್ಚುವ ಕೆಲಸವೂ ನಡೆಯುತ್ತಿದೆ.


ಬಾಕ್ರಬೈಲು ಚಾವಡಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಸಂತೋಷ್ ಕುಮಾರ್ ಶೆಟ್ಟಿ ‘ಇಲ್ಲಿ ಆರಾಧಿಸಿಕೊಂಡು ಬರುತ್ತಿರುವ ದೈವಗಳಿಗೆ ಬೆಳಿಗ್ಗೆ ರಾತ್ರಿ ದೀಪ ಇಡಲಾಗುತ್ತದೆ. ಈ ಮನೆಯಲ್ಲಿ ಮೊದಲು 7 ಅಡಿಗೆ ಕೋಣೆಗಳಿತ್ತು.

ಧರ್ಮಚಾವಡಿ ಎಂದರೆ ನಿತ್ಯ ಧರ್ಮ ದಾನ ನಡೆಯುವ ಜಾಗ. ಇಲ್ಲಿಯೇ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುತ್ತಿದ್ದೆವು. ಇಲ್ಲಿ ನಾವು ಸುಳ್ಳು ಹೇಳಲು ಸಾಧ್ಯವಿಲ್ಲ. ನಮ್ಮ ಮನೆಯ ದೇವರಾಗಿರುವ ಬಾಳ ತ್ರಿಪುರ ಸುಂದರಿ. ಇಲ್ಲಿ ತ್ರಿಕಾಲ ಪೂಜೆ ನಡೆಯಬೇಕು. ಬಹಳ ಶಕ್ತಿ ದೇವಿ. ಅದೇ ಇಲ್ಲಿ ಮಲರಾಯ ದೈವವಾಗಿ ಪರಿವರ್ತನೆ ಹೊಂದಿರುವುದು’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಈ ಮನೆ ಇಡೀ ಊರನ್ನೇ ರಾಜಭಾರ ಮಾಡುತ್ತಿದ್ದ ಕಾಲವನ್ನು ಕಂಡವರೂ ಈ ಗ್ರಾಮದಲ್ಲಿದ್ದಾರೆ. ವಿಷು ಸಂಕ್ರಮಣ, ಯುಗಾದಿ, ಕೃಷ್ಣ ಜನ್ಮಾಷ್ಟಮಿ ಹೀಗೆ ಹಬ್ಬದ ಸಂದರ್ಭದಲ್ಲಿ ಈ ಮನೆಗೆ ಬಂದವರಿಗೆ ದಾನ-ಧರ್ಮಗಳನ್ನೂ ಮಾಡಲಾಗುತ್ತಿತ್ತು. ಊರಿಗೆ ಯಜಮಾನನ ಸ್ಥಾನದಲ್ಲಿದ್ದ, ಈ ಮನೆಗೆ ಇಡೀ ಊರಿನ ಜನ ವಿಧೇಯರಾಗಿದ್ದರು.

ಬಾಕ್ರಬೈಲ್ ಚಾವಡಿಯ ಕಾರ್ಯಸ್ಥ ತುಕ್ರ ಅವರು ಹೇಳುವಂತೆ ‘ ಇಲ್ಲಿ ಈ ಜಾಗ ಹೆಚ್ಚಿನ ಪ್ರಾಧಾನ್ಯತೆ ಹೊಂದಿದ್ದು ಇಲ್ಲಿ ಅನೇಕ ರೀತಿಯ ಧರ್ಮ ಕಾರ್ಯಗಳು ನಡೆಯುತ್ತಿದ್ದವು. ಸತ್ಯ ಪ್ರಮಾಣ, ತಪ್ಪೊಪ್ಪಿಗೆಯ ನಿರ್ಧಾರಗಳು ಕೂಡಾ ಇಲ್ಲಿ ಆಗುತ್ತಿತ್ತು.


ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗೆ ಸಂಬಂಧಿಸಿದಂತೆ ಅತ್ಯಂತ ಹಳೆ ಕಾಲದ ಮನೆಗಳಲ್ಲಿ ಬಾಕ್ರಬೈಲ್ ಚಾವಡಿಯೂ ಒಂದಾಗಿದ್ದು, ಜಿಲ್ಲೆಯ ಯುವಜನತೆಗೆ ಈ ಮನೆ ಒಂದು ತೆರನಾದ ಇತಿಹಾಸ ಕುರುಹು ಜಾಗವಾಗಿ ಉಳಿದಿದೆ.

ತಂತ್ರಜ್ಞಾನಗಳು ಎಲ್ಲೆಡೆ ಮೇಳೈಸುತ್ತಿದ್ದರೂ ಆವಿಷ್ಕಾರದ ಸ್ಪರ್ಶ ಈ ಗುತ್ತು ಮನೆಗೆ ಆಗದಿರುವುದು ಮಾತ್ರ ಖುಷಿಯ ವಿಚಾರ.

Click to comment

Leave a Reply

Your email address will not be published. Required fields are marked *

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

BANTWAL

ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು

Published

on

ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್‌ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.


ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.

Continue Reading

BANTWAL

ಪುತ್ತೂರು ಜಾತ್ರೆಯಿಂದ ಹಿಂದಿರುಗುವ ವೇಳೆ ಜವರಾಯನ ಅಟ್ಟಹಾಸ; ಜೀಪ್ ಡಿಕ್ಕಿ; ಬೈಕ್ ಸವಾರ ಸಾ*ವು

Published

on

ಪುತ್ತೂರು : ಜೀಪೊಂದು ಬೈಕ್ ಗೆ ಡಿ*ಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃ*ತಪಟ್ಟು, ಅವರ ಇಬ್ಬರು ಮಕ್ಕಳು ಗಂಭೀ*ರ ಗಾ*ಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯಲ್ಲಿನ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ (48) ಮೃ*ತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀ*ರ ಗಾಯಗೊಂಡಿದ್ದು, ಗಾ*ಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಲೋಕೇಶ್ ಅವರು  ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಅವರು ಚಲಾಯಿಸುತ್ತಿದ್ದ ಬೈಕ್ ಗೆ ಡಿ*ಕ್ಕಿಯಾಗಿತ್ತು.

ಇದನ್ನೂ ಓದಿ : ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್

ಡಿ*ಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 50 ಮೀಟರ್ ದೂರದ ತನಕ ಬೈಕನ್ನು ಜೀಪ್‌ ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಅವರು ಸ್ಥಳದಲ್ಲಿಯೇ ಸಾ*ವನ್ನಪ್ಪಿದ್ದಾರೆ. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending