LATEST NEWS
2 ನೇ ಅಲೆಯಿಂದ ತತ್ತರಿಸಿದ ಬ್ರಿಟನ್ ನಲ್ಲಿ 3 ನೇ ಅಲೆ ಆರಂಭ : ಆತಂಕದಲ್ಲಿ ಬ್ರಿಟನ್ ಜನತೆ..!
ಲಂಡನ್ : ಮಹಾಮಾರಿ ಕೊರೊನಾದ ಮೊದಲನೇ, ಎರಡನೇ ಅಲೆಯಿಂದ ತತ್ತರಿಸಿದ್ದ ಬ್ರಿಟನ್ನಲ್ಲಿ ಇದೀಗ ಕೋವಿಡ್ 3ನೇ ಅಲೆಯು ಆರಂಭವಾಗಿದೆ. ಇದು ಬ್ರಿಟನ್ ಜನರನ್ನು ಆತಂಕ್ಕೀಡುಮಾಡಿದೆ.
ಕಳೆದ ಒಂದೂವರೆ ವರ್ಷದಿಂದ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ನಿರ್ಬಂಧಗಳನ್ನು ತೆಗೆದುಹಾಕಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನಿರ್ಧರಿಸಿದ ಬೆನ್ನಲ್ಲೇ ಕೊರೊನಾ 3ನೇ ಅಲೆಯ ಆತಂಕ ಆರಂಭವಾಗಿದೆ.
ಈ ಕುರಿತು ಭಾರತೀಯ ಮೂಲದ ಖ್ಯಾತ ವಿಜ್ಞಾನಿ ಪ್ರೊ.ರವಿ ಗುಪ್ತಾ ಅವರು ಬ್ರಿಟನ್ನಲ್ಲಿ ಕೋವಿಡ್ ಮೂರನೇ ಅಲೆಯು ಆರಂಭಿಕ ಹಂತದಲ್ಲಿದೆ ಎಂಬ ಸುಳಿವನ್ನು ಪ್ರಧಾನಿ ಬೋರಿಸ್ ಜಾನ್ಸನ್ಗೆ ನೀಡಿದ್ದಾರೆ.
ದೇಶದಲ್ಲಿ ಕೋವಿಡ್ ಹೊಸ ಪ್ರಕರಣಗಳು ಕಡಿಮೆಯಾಗಿದೆಯಾದರೂ ವೈರಸ್ನ B.1.617 ರೂಪಾಂತರವು ಉಲ್ಬಣಿಸುತ್ತಿದೆ ಎಂದು ಬ್ರಿಟನ್ ಮಾದ್ಯಮಗಳು ವರದಿ ಮಾಡಿವೆ.
ಬ್ರಿಟನ್ನಲ್ಲಿ ಈವರೆಗೆ 44,87,339 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇವರಲ್ಲಿ 1,27,782 ಮಂದಿ ಸಾವನ್ನಪ್ಪಿದ್ದಾರೆ. 42,89,486 ಮಂದಿ ಕೊರೊನಾ ವೈರಸ್ನಿಂದ ಚೇತರಿಸಿಕೊಂಡಿದ್ದಾರೆ.
LATEST NEWS
ಕಾಪು ಠಾಣಾ ಮಹಿಳಾ ಪೇದೆ ಆತ್ಮಹ*ತ್ಯೆ!
ಕಾಪು : ಕಾಪು ಪೊಲೀಸ್ ಠಾಣೆಯ ಮಹಿಳಾ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 29 ವರ್ಷದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡವರು. ಜ್ಯೋತಿ ಬಾಗಲಕೋಟೆ ಮೂಲದವರು.
ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದ ಅವರು ರಾತ್ರಿ ಕ್ವಾಟ್ರಸ್ ಗೆ ಮರಳಿದ್ದು ಶನಿವಾರ ಬೆಳಿಗ್ಗೆ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಜ್ಯೋತಿ ಪೊಲೀಸ್ ಕ್ವಾಟ್ರಸ್ ನಲ್ಲೇ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ…ನಿನ್ನೆ ಮಗುವಿನ ಹುಟ್ಟುಹಬ್ಬ; ಇಂದು ತಾಯಿ ಮಗು ಜೀವಾಂತ್ಯ..!
ಮೃತ ಪೊಲೀಸ್ ಸಿಬಂದಿಯ ಪತಿ ಕೆ.ಎಸ್.ಆರ್.ಟಿ.ಸಿ ಸಿಬಂದಿಯಾಗಿದ್ದು ಪತಿ ಬೆಳಿಗ್ಗೆ ಕರ್ತವ್ಯಕ್ಕೆ ಹೋಗಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಹಿ, ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
LATEST NEWS
ಮರ ಸಾಗಾಟದ ಲಾರಿಗೆ ಡಿ*ಕ್ಕಿ ಹೊಡೆದ ಕಾರು..! ಪ್ರಯಾಣಿಕರಿಗೆ ಗಂಭೀ*ರ ಗಾಯ
ಮಂಗಳೂರು: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರಿ ಎಂಬಲ್ಲಿ ಮರ ಸಾಗಾಟದ ಲಾರಿಗೆ ಕಾರು ಡಿ*ಕ್ಕಿಯಾದ ಘಟನೆ ಗುರುವಾರ(ಮಾ.28) ರಾತ್ರಿ ನಡೆದಿದೆ.
ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದಿದ್ದು ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರಕ್ಕೆ ತೊಂದರೆಯಾಗಿದೆ.
DAKSHINA KANNADA
ನಿನ್ನೆ ಮಗುವಿನ ಹುಟ್ಟುಹಬ್ಬ… ಇಂದು ತಾಯಿ ಮಗು ಜೀವಾಂತ್ಯ..!
ಮಂಗಳೂರು : ನಿನ್ನೆ (28-03-2024) ಮಗುವಿನ ಒಂದು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ ತಾಯಿ ಇಂದು ಮಗುವಿನೊಂದಿಗೆ ಜೀವಾಂತ್ಯಗೊಳಿಸಿದ್ದಾಳೆ.
ನಿನ್ನೆಯಷ್ಟೇ ಮಗುವಿನ ಹುಟ್ಟು ಹಬ್ಬ ಆಚರಿಸಿದ್ರು. ದೇರಳಕಟ್ಟೆಯ ಸೇವಾಶ್ರಮದಲ್ಲಿ ಸಿಂಪಲ್ ಅಗಿಯೇ ಸೆಲಬ್ರೇಷನ್ ಮಾಡಿಕೊಂಡಿದ್ರು. ಆದ್ರೆ ಇವತ್ತು ಅದೇನಾಯ್ತೋ ಗೊತ್ತಿಲ್ಲ. ತಾಯಿ ಮಗು ಇಬ್ರೂ ಮನೆ ಬಿಟ್ಟು ಹೋಗಿದ್ದಾರೆ. ಮನೆಯವರೋ ಇಬ್ಬರಿಗಾಗಿ ಊರಿಡಿ ಹುಡುಕಾಡಿ ಸೋಷಿಯಲ್ ಮೀಡಿಯಾದಲ್ಲೂ ಹುಡುಕಿಕೊಡಿ ಅಂತ ಕೋರಿದ್ದಾರೆ. ಆದ್ರೆ ಸಂಜೆ ವೇಳೆ ತಾಯಿ ಮಗುವಿನ ಮೃ*ತ ದೇಹ ಹರೆಕಳ ಬಳಿ ನದಿಯಲ್ಲಿ ಪತ್ತೆಯಾಗಿದೆ. ಅಡ್ಯಾರು ಪದವಿನ ಚೈತ್ರಾ ಹಾಗೂ ಮಗು ದಿಶಾಂತ್ ಇಹಲೋಕ ತ್ಯಜಿಸಿದ್ದಾರೆ. ಆದರೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಮನೆಯಲ್ಲಿ ಅಂತಹದ್ದೇನಾಯ್ತು ಅನ್ನೋದು ಮಾತ್ರ ಗೊತ್ತಾಗಿಲ್ಲ.
- DAKSHINA KANNADA4 days ago
ಖತರ್ನಾಕ್ ಲ್ಯಾಪ್ಟಾಪ್ ಕಳ್ಳಿ…! ಈಕೆ ಬ್ಯಾಂಕ್ ಉದ್ಯೋಗಿ… !
- FILM5 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಫೋಟೋ!
- DAKSHINA KANNADA5 days ago
ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ನಂಬಿಸಿ ವಂಚನೆ; ಆರೋಪಿ ರಾಜಸ್ಥಾನದ ಸದ್ದಾಂ ಗೌರಿ ಬಂಧನ
- LATEST NEWS4 days ago
ಪತಿಯ ಬೆಟ್ಟಿಂಗ್ ಚಟಕ್ಕೆ ಪತ್ನಿಯ ಜೀವಾಂತ್ಯ..! ಬಡ್ಡಿ ಧಂದೆಗೂ ಬಿತ್ತು ಬ್ರೇಕ್…!